ವಿಜ್ಞಾನ ತಂತ್ರಜ್ಞಾನ

ಪತ್ರಕರ್ತರ ಖಾತೆಗಳನ್ನು ರದ್ದು ಮಾಡಿದ ಬೆನ್ನಲ್ಲೇ, ‘ಕೂ’ ಆ್ಯಪ್‌ನ ಖಾತೆ ರದ್ದು ಮಾಡಿದ ಟ್ವಿಟರ್!

ವಾಷಿಂಗ್ಟನ್‌: ದಿಗ್ಗಜ ಮಾಧ್ಯಮ ಸಂಸ್ಥೆಗಳ ಪತ್ರಕರ್ತರ ಖಾತೆಗಳನ್ನು ರದ್ದು ಮಾಡಿದ ಬೆನ್ನಲ್ಲೇ ಇದೀಗ, ಭಾರತದ ಮೈಕ್ರೋಬ್ಲಾಗಿಂಗ್ ಸೈಟ್‌ ‘ಕೂ‘ ಆ್ಯಪ್‌ನ ಖಾತೆಯನ್ನು ಟ್ವಿಟರ್‌ ಅಮಾನತು ಮಾಡಿದೆ.

ಬಳಕೆದಾರರ ಸಮಸ್ಯೆಗಳನ್ನು ಆಲಿಸಲು ಟ್ವಿಟರ್‌ನಲ್ಲಿದ್ದ ‘ಕೂ‘ ಆ್ಯಪ್‌ನ @kooeminence ಎನ್ನುವ ಖಾತೆಯನ್ನು ಶುಕ್ರವಾರ ರದ್ದು ಮಾಡಲಾಗಿದೆ.

ಟ್ವಿಟರ್‌ನ ಈ ವರ್ತನೆಗೆ ಕೂ ಆ್ಯಪ್‌ನ ಸಹ ಸಂಸ್ಥಾಪಕ ಮಾಯಾಂಕ್‌ ಬಿದವಟ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನನಗೆ ಮರೆತು ಹೋಗಿತ್ತು. ಇನ್ನೂ ಇದೆ. ಮಸ್ಟೋಡೋನ್ (ಟ್ವಿಟರ್‌ನ ಪ್ರತಿಸ್ಪರ್ಧಿ) ಲಿಂಕ್‌ಗಳು ಸುರಕ್ಷಿತವಲ್ಲ ಎಂದು ಅದರ ಖಾತೆಯನ್ನು ನಿಷ್ಕ್ರೀಯಗೊಳಿಸಲಾಯ್ತು. ಇದೀಗ ಕೂ ನ ಖಾತೆಯನ್ನು ರದ್ದು ಮಾಡಲಾಗಿದೆ. ನಿಜವಾಗಿಯೂ ನಿಮಗೆ ಎಷ್ಟು ನಿಯಂತ್ರಣ ಬೇಕು?‘ ಎಂದು ಪ್ರಶ್ನೆ ಮಾಡಿದ್ದಾರೆ.

ಕೂ ಆ್ಯಪ್‌ ಬಳಸಲು ಉದ್ದೇಶಿಸುವ ವಿಐಪಿಗಳು, ಸೆಲೆಬ್ರೆಟಿಗಳು ತಮಗೆ ಏನಾದರೂ ಗೊಂದಲು ಇದ್ದರೆ, ಪರಿಹರಿಸಿಕೊಳ್ಳಲು ಈ ಖಾತೆಯನ್ನು ಕೆಲ ದಿನಗಳ ಹಿಂದಷ್ಟೇ ತೆರಯಲಾಗಿತ್ತು.

ಸಂಭಾಷಣೆಗೆ ಇದ್ದ ವೇದಿಕೆಯನ್ನು ಟ್ವಿಟರ್ ರಾತ್ರೋ ರಾತ್ರಿ ಕೊಂದು ಹಾಕಿದೆ ಎಂದು ಮಾಯಾಂಕ್ ಕಿಡಿ ಕಾರಿದ್ದಾರೆ. ಅಲ್ಲದೇ ಹಿಂದಿನ ವಾರ ಟ್ವಿಟರ್‌ ಮಾಡಿದ ಕೆಲವು ಕೆಲಸಗಳು ಸರಿ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 

andolanait

Share
Published by
andolanait

Recent Posts

ಕಾವೇರಿ ನದಿಗಿಳಿದ ನಾಗಲ್ಯಾಂಡ್ ಮೂಲದ ಇಬ್ಬರು ಯುವಕರು ನಾಪತ್ತೆ

ಕುಶಾಲನಗರ: ಕಾವೇರಿ ನದಿಗೆ ಇಳಿದ ನಾಗಲ್ಯಾಂಡ್ ಮೂಲದ ಇಬ್ಬರು ಯುವಕರು ನಾಪತ್ತೆಯಾಗಿರುವ ಘಟನೆ ಕುಶಾಲನಗರ ರಸೂಲ್ ಲೇಔಟ್ ಬಳಿ ಬುಧವಾರ…

7 hours ago

ಪಾಕ್‌ನಿಂದ ಆಫ್ಗಾನಿಸ್ತಾನದ ಮೇಲೆ ವಾಯು ದಾಳಿ ; 13 ಮಂದಿ ಸಾವು; 14 ಮಂದಿಗೆ ಗಾಯ

ಕಾಬೂಲ್ : ಪಾಕಿಸ್ತಾನವು ಬುಧವಾರ ನಡೆಸಿದ ಹೊಸ ವಾಯುದಾಳಿಗಳಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನ ತಿಳಿಸಿದೆ. ಪಾಕ್…

9 hours ago

ಭಾರತಿರಾಜ್‌ ಅಂತಿಮ ದರ್ಶನ ಪಡೆದ ರಜನಿ, ಕಮಲ್‌, ಸಿ.ಎಂ.ವಿಜಯ್‌

ಚೆನ್ನೈ : ತಮಿಳಿನ ಖ್ಯಾತ ನಿರ್ದೇಶಕ, ಪದ್ಮಶ್ರೀ ಭಾರತಿರಾಜ್ ನಿಧನಕ್ಕೆ ಹೆಸರಾಂತ ನಟರು ಕಂಬನಿ ಮಿಡಿದಿದ್ದಾರೆ. ಅವರ ಅಂತಿಮ ದರ್ಶನಕ್ಕೆ…

12 hours ago

ಎಚ್.ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನಕ್ಕೆ ದಲಿತ ಸಂಘಟನೆಗಳ ಆಗ್ರಹ

ವರುಣ : ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡಬೇಕು ಎಂದು ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಲಿತ ಸಂಘಟನೆಗಳ…

12 hours ago

ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಬಿಟ್ಟು ಬೇರೇನೂ ಮಾಡಲಿಲ್ಲ ಸಿದ್ದರಾಮಯ್ಯ: ಟೀಕೆ

ಮೈಸೂರು : ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಕೇಂದ್ರ ಸರ್ಕಾರದೊಂದಿಗೆ ಸೌಹಾರ್ದದಿಂದ ಸಂಪರ್ಕ ಸಾಧಿಸಿ ರಾಜ್ಯದ ಅಭಿವೃದ್ಧಿ…

12 hours ago

ರಾಜ್ಯಸಭಾ ಸ್ಥಾನ ಕೇಳಿಲ್ಲ, ಚರ್ಚೆಯೂ ನಡೆಸಿಲ್ಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು: ರಾಜ್ಯಸಭಾ ಸ್ಥಾನಕ್ಕೆ ಟಿಕೆಟ್‌ ತಪ್ಪಿದೆ ಎಂಬ ಕಾರಣದಿಂದ ನನ್ನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸಂಬಂಧ…

15 hours ago