ದೇಶ- ವಿದೇಶ

ವೃದ್ಧರ ಜೊತೆಯಾಗಲಿರುವ ಗುಡ್ ಫೆಲೋಸ್ ಸ್ಟಾರ್ಟ್‌ಪ್‌ ಕಂಪನಿಗೆ ಕೈ ಜೋಡಿಸಿದ ಟಾಟಾ

ನವದೆಹಲಿ : ರತನ್ ಟಾಟಾ ಅಂದ್ರೇನೆ ಬತ್ತದ ಉತ್ಸಾಹ, ಸಾಧನೆಗೆ ಪ್ರೇರಕ ಶಕ್ತಿ. ಹೊಸ ಉದ್ಯಮಕ್ಕೆ ಕೈ ಹಾಕುವ ಯುವಪಡೆಗೆ ಸದಾ ಪ್ರೋತ್ಸಾಹ, ಬೆಂಬಲ ನೀಡುವ ರತನ್ ಟಾಟಾ ಸದ್ಯ ಅಂಥದ್ದೇ ಒಂದು ಕಾರ್ಯ ಮಾಡಿದ್ದಾರೆ. ಇಳಿವಯಸ್ಸಿನಲ್ಲಿ ಒಂಟಿತನದಿಂದ ಬಳಲುವ ವೃದ್ಧರಿಗೆ ಜೊತೆಯಾಗುವ ವಿನೂತನ ಸ್ಟಾರ್ಟಪ್‌ ಕಂಪನಿಯಲ್ಲಿ ಸ್ವತಃ ಹಿರಿಯ ನಾಗರಿಕರಾಗಿರುವ ರತನ್ ಟಾಟಾ ಹೂಡಿಕೆ ಮಾಡೋದಾಗಿ ಘೋಷಿಸಿದ್ದಾರೆ. ಆ.16ರಂದು ಪ್ರಾರಂಭವಾದ ಮುಂಬೈ ಮೂಲದ ಗುಡ್ ಫೆಲೋಸ್ ಎಂಬ ಸ್ಟಾರ್ಟ್ ಅಪ್ ಗೆ 84 ವರ್ಷದ ಭಾರತದ ಹಿರಿಯ ಉದ್ಯಮಿ ರತನ್ ಟಾಟಾ ಬೆನ್ನಲುಬಾಗಿ ನಿಂತಿದ್ದಾರೆ.  ಈ ಆ್ಯಪ್ ನ ಸಂಸ್ಥಾಪಕ ಶಂತನು ನಾಯ್ಡು ರತನ್ ಟಾಟಾ ಅವರ ಸಹಾಯಕರಾಗಿ  2018ರಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. 30 ವರ್ಷ ವಯಸ್ಸಿನ ಶಂತನು ಕಾರ್ನೆಲ್ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆದಿದ್ದು, ಈ ವಿನೂತನ ಪ್ರಯೋಗಕ್ಕೆ ಕೈಹಾಕಿದ್ದಾರೆ. ಈ ಸ್ಟಾರ್ಟಪ್‌ ಯುವ ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತದೆ. ಅವರು ಹಿರಿಯ ನಾಗರಿಕರಿಗೆ ಮೊಮ್ಮಕ್ಕಳ ಮಾದರಿಯಲ್ಲೇ ನೆರವು ನೀಡುತ್ತಾರೆ.

ಈ ಯುವ ಜನರನ್ನು ‘ಗುಡ್ ಫೆಲೋಸ್’ ಎಂದು ಕರೆಯಲಾಗುತ್ತದೆ. ಇನ್ನು ಈ ಕಂಪನಿಯ ಸೇವೆ ಆಯ್ಕೆ ಮಾಡುವ ಹಿರಿಯ ನಾಗರಿಕರಿಗೆ  ‘ಗ್ರ್ಯಾಂಡ್ ಪಲ್’ ಎನ್ನಲಾಗುತ್ತದೆ. ಪ್ರತಿ ಗ್ರ್ಯಾಂಡ್ ಪಲ್ ಗೆ ಅವರಿಗೆ ಹೊಂದಿಕೆಯಾಗುವ ಗುಡ್ ಫೆಲೋಸ್ ಅನ್ನು ಒದಗಿಸೋದೇ ಈ ಕಂಪನಿಯ ಉದ್ದೇಶ. ‘ಜೊತೆಗಾರಿಕೆ ಅನ್ನೋದು ವಿಭಿನ್ನ ಜನರಿಗೆ ವಿಭಿನ್ನ ಸಂಗತಿಯಾಗಿದ್ದು, ಈ ಸ್ಟಾರ್ಟಪ್‌ ಅದಕ್ಕೆ ಮಹತ್ವ ನೀಡುತ್ತದೆ. ಕೆಲವರಿಗೆ ಟಿವಿ ನೋಡೋದು, ಇನ್ನೂ ಕೆಲವರಿಗೆ ಹಳೆಯ ಕಥೆಗಳನ್ನು ಹೇಳಲು ಜೊತೆಗಾರರ ಅಗತ್ಯವಿರುತ್ತದೆ. ನಾವು ಅದೆಲ್ಲವನ್ನೂ ಒದಗಿಸುತ್ತೇವೆ. ಈ ಕಂಪನಿಯಲ್ಲಿ ಟಾಟಾ ಅವರ ಹೂಡಿಕೆ ಈ ಪರಿಲ್ಪನೆಗೆ ನಾವು ನೀಡಿರುವ ಶ್ರದ್ಧೆಗೆ ಸಿಕ್ಕ ಬಹುದೊಡ್ಡ ಪ್ರೋತ್ಸಾಹದ ಮೂಲ’ ಎಂದು ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಶಂತನು ಹೇಳಿದರು.

ಈ ಸ್ಟಾರ್ಟಪ್‌  ಆ್ಯಪ್ ಮೂಲಕ ಕಾರ್ಯನಿರ್ವಹಿಸುತ್ತದೆ. ಹಿರಿಯ ನಾಗರಿಕರು ಈ ಆ್ಯಪ್ ಗೆ ಹಣ ನೀಡಿ ಚಂದಾದಾರರಾಗಬಹುದು. ಒಂದು ತಿಂಗಳು ಉಚಿತವಾಗಿ  ಈ ಸಂಸ್ಥೆಯ ಸೇವೆಗಳ ಅನುಭವ ಪಡೆಯಲು ಹಿರಿಯ ನಾಗರಿಕರಿಗೆ ಅವಕಾಶ ನೀಡಲಾಗುತ್ತದೆ. ಎರಡನೇ ತಿಂಗಳಿಂದ ಸೇವೆಗಳಿಗೆ ಶುಲ್ಕಗಳನ್ನು ವಿಧಿಸಲಾಗುತ್ತದೆ. ಚಂದಾದಾರಿಕೆ ಶುಲ್ಕ ವೈಯಕ್ತಿಕ ಯೋಜನೆ ಆಯ್ಕೆ ಆಧಾರದಲ್ಲಿ ನಿಗದಿಪಡಿಸಲಾಗುತ್ತದೆ ಎಂದು ಕಂಪನಿ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ. ಶುಲ್ಕವನ್ನು ಸಮರ್ಥಿಸಿಕೊಂಡಿರುವ ಕಂಪನಿ, ತನ್ನ ಯುವ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆ ಒದಗಿಸೋದು ಕೂಡ ಅಗತ್ಯವಾಗಿದೆ ಎಂದು ಹೇಳಿದೆ.

ಈ ವಿನೂತನ ಸ್ಟಾರ್ಟಪ್‌ ಕಂಪನಿಯಲ್ಲಿ ರತನ್ ಟಾಟಾ ಎಷ್ಟು ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿಯಿಲ್ಲ. ಆದ್ರೆ ಈ  ಸ್ಟಾರ್ಟಪ್‌ ಬಗ್ಗೆ ರತನ್ ಟಾಟಾ ಆಸಕ್ತಿ ಹೊಂದಿರೋದು ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಅವರು ಆಡಿದ ಮಾತುಗಳಲ್ಲೇ ವ್ಯಕ್ತವಾಗಿತ್ತು. ‘ಜೊತೆಗಾರರಿಗಾಗಿ ಹಂಬಲಿಸುತ್ತ ಏಕಾಂಗಿಯಾಗಿ ಸಮಯ ಕಳೆಯುವ ತನಕ ನಿಮಗೆ ಒಂಟಿತನದ ಅನುಭವ ಗೊತ್ತಾಗಿರೋದಿಲ್ಲ’ ಎಂದು ಅವರು ಹೇಳಿದ್ದರು.

ಪ್ರಾರಂಭದಲ್ಲಿ ಕಂಪನಿ ಮುಂಬೈನಲ್ಲಿ ಕಾರ್ಯನಿರ್ವಹಿಸುವ ಯೋಜನೆ ಹೊಂದಿದೆ. ಆದರೆ, ನಿಧಾನವಾಗಿ ಪುಣೆ, ಚೆನ್ನೈ ಹಾಗೂ ಬೆಂಗಳೂರಿಗೆ ತನ್ನ ಕಾರ್ಯಗಳನ್ನು ವಿಸ್ತರಿಸುವ ಗುರಿ ಹೊಂದಿದೆ. ಆಸಕ್ತರು thegoodfellows.in ಸೈನ್ ಅಪ್ ಆಗಬಹುದು ಅಥವಾ 91 8779524307 ಸಂಖ್ಯೆಗೆ ಮಿಸ್ ಕಾಲ್ ನೀಡಬಹುದು.

ಯುವಜನರು ಈ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಕೊಳ್ಳಬಹುದು. ಇವರನ್ನು ‘ಗುಡ್ ಫೆಲೋಸ್’ ಎಂದು ಕರೆಯಲಾಗುತ್ತದೆ. ಸೈಕಾಮೆಟ್ರಿ ಟೆಸ್ಟ್ ಮೂಲಕ ಅವರನ್ನು ಆಯ್ಕೆ ಮಾಡುತ್ತಾರೆ. ಇತ್ತೀಚೆಗೆ ಮುಂಬಯಿಯಲ್ಲಿ 800 ಪದವೀಧರರು ಪರೀಕ್ಷೆಗೆ ಕೂತಿದ್ದರಂತೆ, ಅವರಲ್ಲಿ ತೇರ್ಗಡೆಯಾದವರು ಕೇವಲ 20 ಮಂದಿಯಷ್ಟೇ!

andolana

Recent Posts

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ದಾವಣಗೆರೆ: ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ಭರವಸೆಯಿದ್ದು, ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ…

11 hours ago

ಕೆ.ಆರ್‌.ನಗರ: ಮಾಜಿ ಸಚಿವ ಸಾ.ರಾ. ಮಹೇಶ್ ಪುತ್ರ ಹಾಗೂ ಉದ್ಯಮಿ ಸಾ.ರಾ.ಜಯಂತ್‌ ಹುಟ್ಟುಹಬ್ಬ ಆಚರಣೆ

ಭೇರ್ಯ ಮಹೇಶ್:‌ ಕೆ.ಆರ್‌.ನಗರ ತಾಲ್ಲೂಕು ವರದಿಗಾರರು  ಕೆ.ಆರ್.ನಗರ : ಜಾತಿ ಬೇದವಿಲ್ಲದೆ ನೊಂದವರಿಗೆ ದ್ವನಿಯಾಗಿ, ಸಂಕಷ್ಟದಲ್ಲಿರುವವರುಗೆ ಆರ್ಥಿಕ ನೆರವು ನೀಡಿ,…

11 hours ago

ಮಾ.28ರಂದು ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವ: 140 ಬಸ್‌ಗಳ ಕಾರ್ಯಾಚರಣೆ

ಮಂಡ್ಯ: ಮಾರ್ಚ್.‌28ರಂದು ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ 140 ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಜಾತ್ರಾ…

12 hours ago

ಎಚ್ಚರಿಕೆ ನೀಡಿದ್ದಕ್ಕೆ ಟ್ರಂಪ್‌ ಕದನ ವಿರಾಮ ಘೋಷಣೆ: ಇರಾನ್‌ ಖಡಕ್‌ ತಿರುಗೇಟು

ಟೆಹರಾನ್: ನಾವು ನೀಡಿದ ಎಚ್ಚರಿಕೆಗೆ ತಲೆಬಾಗಿ ಅಮೇರಿಕಾ ಈಗ ಕದನ ವಿರಾಮ ಘೋಷಣೆ ಮಾಡಿದ ಎಂದು ಇರಾನ್‌ ತಿರುಗೇಟು ನೀಡಿದೆ.…

12 hours ago

ಕೃಷಿ ಹೊಂಡದಲ್ಲಿ ಈಜಲು ಹೋಗಿ ಬಾಲಕ ಸಾವು

ಮಂಡ್ಯ: ಕೃಷಿ ಹೊಂಡದಲ್ಲಿ ಈಜಲು ಹೋಗಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಂದೀಪುರ ಗ್ರಾಮದಲ್ಲಿ ನಡೆದಿದೆ.…

12 hours ago

ಕೆಪಿಎಸ್‌ಸಿ ಬದಲಿಗೆ ಕೆಇಎ ಮೂಲಕ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗೆ ನೇಮಕಾತಿ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ಕಳೆದ ವರ್ಷ ಕೃಷಿ ಇಲಾಖೆಯ ಸಮಾರು 945 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯನ್ನು…

13 hours ago