ಶ್ರೀಹರಿಕೋಟಾ : ಪಿಎಸ್ಎಲ್ವಿ ರಾಕೆಟ್ ಮೂಲಕ ಭೂಮಿಯ ಚಿತ್ರಣ ನೀಡುವ ಉಪಗ್ರಹದ ಉಡಾವಣೆಗೆ 7 ಗಂಟೆಗಳ ಕ್ಷಣಗಣನೆ ಪ್ರಾರಂಭವಾಗಿದೆ.
ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್ನಿಂದ ಮೇ.18 ರಂದು ಬೆಳಿಗ್ಗೆ 5.59 ಕ್ಕೆ ರಾಕೆಟ್ ಮೂಲಕ ಉಪಗ್ರಹ ಉಡಾವಣೆ ನಡೆಯಲಿದೆ. ಇದು 101 ನೇ ಕಾರ್ಯಾಚರಣೆಯಾಗಿದೆ ಎಂದು ಬೆಂಗಳೂರಿನಲ್ಲಿರುವ ಇಸ್ರೋ ಪ್ರಧಾನ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವುದೇ ಹವಾಮಾನ ಪರಿಸ್ಥಿತಿಯಲೂ ಕೂಡ ಭೂಮಿಯ ಮೇಲಿರುವ ವಸ್ತುಗಳನ್ನು ನಿಕರವಾಗಿ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿಯುವ ಸಾಮಥ್ರ್ಯವನ್ನು ಹೊಂದಿರುವ ಭೂ ವೀಕ್ಷಣಾ ಉಪಗ್ರಹವನ್ನು (ಇಓಎಸ್-09) ನಭಕ್ಕೆ ಹಾರಿಸಲಾಗುತ್ತಿದೆ.
ಕೃಷಿ, ಅರಣ್ಯ ಮೇಲ್ವಿಚಾರಣೆ, ವಿಪತ್ತು ನಿರ್ವಹಣೆ, ನಗರ ಯೋಜನೆ ಮತ್ತು ರಾಷ್ಟ್ರೀಯ ಭದ್ರತೆಯಂತಹ ಅನ್ವಯಿಕೆಗಳಿಗೆ ಉಪಗ್ರಹದ ಸುತ್ತ-ಇಮೇಜಿಂಗ್ ಅತ್ಯಗತ್ಯ.
ಸುಮಾರು 1,696.24 ಕೆಜಿ ತೂಕವಿರುವ ಉಪಗ್ರಹವು ಭೂ ವೀಕ್ಷಣಾ ಉಪಗ್ರಹಗಳ ಸಮೂಹವನ್ನು ಸೇರಲಿದೆ, ಇದು ದೇಶದ ವಿಶಾಲ ಪ್ರದೇಶದಾದ್ಯಂತ ವಿಸ್ತೃತ ನೈಜ-ಸಮಯದ ವ್ಯಾಪ್ತಿಯ ಅಗತ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
ಇಓಎದ್-09 ಈಗಾಗಲೆ ಕಾರ್ಯನಿರ್ವಹಿಸಿಸುತ್ತಿರುವ (ಆರ್ಐಎಸ್ಐಟಿ -1ಬಿ )ಉಪಗ್ರಹದ ಅನುಸರಣೆಯಾಗಿದ್ದು, ಇದು ಇದೇ ರೀತಿಯ ಸಂರಚನೆಯನ್ನು ಹೊಂದಿದೆ. ಸರಣಿ ಉಪಗ್ರಹಗಳಿಂದ ಡೇಟಾವನ್ನು ಪೂರಕಗೊಳಿಸುತ್ತದೆ.
ಉಡಾವಣೆಯಾಗಿ 17 ನಿಮಿಷಗಳ ಪ್ರಯಾಣದ ನಂತರ, ರಾಕೆಟ್ ಉಪಗ್ರಹವನ್ನು ಸೂರ್ಯ ಸಿಂಕ್ರೊನಸ್ ಪೋಲಾರ್ ಆರ್ಬಿಟ್ಗೆ ಇರಿಸುವ ನಿರೀಕ್ಷೆಯಿದೆ. ಉಪಗ್ರಹವು ಅಪೇಕ್ಷಿತ ಕಕ್ಷೆಯಲ್ಲಿ ಬೇರ್ಪಟ್ಟ ನಂತರ, ವಿಜ್ಞಾನಿಗಳು ಕಕ್ಷೆಯ ಎತ್ತರವನ್ನು ಕಡಿಮೆ ಮಾಡಲಾಗುತ್ತದೆ .ಪ್ರಸ್ತುತ ಉಪಗ್ರಹ ಜೀವಿತಾವಧಿ 5 ವರ್ಷಗಳು ಎಂದು ಇಸ್ರೋ ತಿಳಿಸಿದೆ.
ಬೆಂಗಳೂರು: ಕರ್ನಾಟಕದವರಿಗೆ, ವೋಟ್ ಇದ್ದವರಿಗೆ ಮಾತ್ರ ನಾವು ಗ್ಯಾರಂಟಿ ಕೊಡುತ್ತೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ…
ಬೆಂಗಳೂರು: ರಾಮನಗರ ಶಾಸಕ ಇಕ್ಬಾಲ್ ಹುಸೇನ್ಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಕ್ಬಾಲ್ ಹುಸೇನ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ…
ಬೆಂಗಳೂರು: ಲಂಕೇಶ್ ಪತ್ರಿಕೆಯ ಸಂಪಾದಕರಾಗಿದ್ದ ಖ್ಯಾತ ಪತ್ರಕರ್ತ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರು ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ತಮ್ಮ…
ಮುಂಬೈ: ಪಿಕ್ ಅಪ್ ವಾಹನವೊಂದು ರಸ್ತೆ ಬದಿಯ ತೆರೆದ ಬಾವಿಗೆ ಬಿದ್ದ ಪರಿಣಾಮ ನಾಲ್ವರು ಮಹಿಳೆಯರು ಹಾಗೂ ನಾಲ್ವರು ಮಕ್ಕಳು…
೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ್ದರು. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ,…
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಮುಂಬರುವ ವಿಧಾನಸಭಾ ಚುನಾವಣೆಗೆ ತಂತಮ್ಮ ಪಕ್ಷದ ವೈಯಕ್ತಿಕ ಬಲ ಹೆಚ್ಚಿಸಿಕೊಳ್ಳಲೂ ಕೂಡ ತಂತ್ರ ರಾಜ್ಯ ಕಾಂಗ್ರೆಸ್ನ…