ಮೈಸೂರು : ಬಣ್ಣ ಬಣ್ಣಗಳ ವಿದ್ಯುತ್ ಬೆಳಕು, ಕಣ್ಮನ ಸೆಳೆಯುವ ವೇದಿಕೆ, ರಂಜಿಸಿದ ಮಲೆಯಾಳಂ ಗೀತೆ ಹಾಗೂ ಯುವ ಮನಸ್ಸುಗಳ ಕುಣಿತಗಳ ನಡುವೆ ಕೇರಳದ ‘ಥೈಕ್ಕುಡಂ ಬ್ರಿಡ್ಜ್’ ಬ್ಯಾಂಡ್ ಅಂಬಾವಿಲಾಸ ಅರಮನೆ ಮುಂಭಾಗದ ವೇದಿಕೆಯಲ್ಲಿ ಸಂಗೀತದ ಹೊಳೆಯನ್ನೇ ಹರಿಸಿತು.
೩೦ಕ್ಕೂ ಹೆಚ್ಚು ದೇಶಗಳಲ್ಲಿ ೮೦೦ಕ್ಕೂ ಹೆಚ್ಚು ಸಂಗೀತ ಪ್ರರ್ದಶಿಸಿ ಅಪಾರ ಅಭಿಮಾನಿಗಳನ್ನಿ ಪ್ರಂಪಚದ್ಯಾಂತ ಗಳಿಸಿರುವ ಥೈಕ್ಕುಡಂ ಬ್ರಿಡ್ಜ್ ಇದೇ ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಪ್ರದರ್ಶನ ನೀಡಿತು.
ಕೇರಳದ ವಿದ್ಯಾರ್ಥಿಗಳು ಬ್ಯಾಂಡ್ ವೀಕ್ಷಣೆಗೆ ಅರಮನೆ ತುಂಬಿದ್ದರು. ಎಲ್ಲರಿಗೂ ನಮಸ್ಕಾರ ದಸರಾ ಹಬ್ಬದ ಶುಭಾಶಯಗಳು ಆರ್ಥಿಕ ಶುಭಾಶಯಗಳು ಎಂದು ಕನ್ನಡದಲ್ಲೇ ಹೇಳಿ ನವರಸಂ ಗೀತೆಯನ್ನು ಬ್ಯಾಂಡ್ನ ಸದಸ್ಯರು ಪ್ರಸ್ತುತಪಡಿಸಿದರು.
ಇದನ್ನು ಓದಿ : ಮೈಸೂರಿನಲ್ಲಿ ವಿಂಟೇಜ್ ಕಾರುಗಳ ಹವಾ
ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಸಂಯೋಜನೆಯ ‘ರೆಟ್ಟ್ತ್ಯೈ ವಾಲ್ ಕುರುವಿ’ ಸಿನಿಮಾದ ‘ರಾಜರಾಜ ಸೋ ಳನ್ನ….’ ಎಂಬ ಗೀತೆಯನ್ನು ಹಾಡುತ್ತಿದ್ದಂತೆ ಯುವ ಸಮೂಹ ಹುಚ್ಚೆದ್ದು ಕುಣಿದು ಕುಪ್ಪಳಿಸಿತು.
ತೇರಿ ದಿವಾನಿ ದಿವಾನಿ… ಗೀತೆಯನ್ನು ಭಾವನಾತ್ಮಕವಾಗಿ ಹಾಡಿ ಪ್ರೇಕ್ಷಕರ ಮನಮುಟ್ಟಿದರು. ಬಳಿಕ ಶಾಸ್ತ್ರೀಯ ಆಲಾಪದೊಂದಿಗೆ ‘ಓಂಶಿವೋಂ ರುದ್ರನಾಮ….’ ಎಂಬ ಗೀತೆ ಹಾಡಿ ಭಕ್ತಿ ಸಂಚಲನ ಮೂಡಿಸಿದರು. ನಂತರ ತಮಿಳಿನ ೯೬ ಸಿನಿಮಾದ ‘ಕಾತಲೆ ಕಾತಲೆ’ ಹಾಡಡು ಯುವಸಮೂಹವನ್ನು ಬೇರೊಂದು ಲೋಕಕ್ಕೆ ಕೊಂಡ್ಯೊಯಿತು. ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯ ಹಲವಾರು ಆಲ್ಬಂ ಹಾಡುಗಳನ್ನು ಹಾಡುಗಳನ್ನು ತಮ್ಮ ವಿಶಿಷ್ಟ ರಾಕ್ ಬ್ಯಾಂಡ್ ಮ್ಯೂಸಿಕ್ ಮೂಲಕ ಹಾಡಿ ನೋಡುಗರನ್ನು ರಂಜಿಸಿದರು.
ಇದಕ್ಕೂ ಮುನ್ನ ರಘುರಾಮ್ ಮತ್ತು ತಂಡ ಕರ್ನಾಟಕ ಶಾಸ್ತ್ರಿಯ ಸಂಗೀತದ ಮೂಲಕ ಶಾಸ್ತ್ರಿಯ ಸಂಗೀತ ರಸಿಕರಿಗೆ ಸಂಗೀತ ರಸದೌತಣ ನೀಡಿದರು ಹಾಗೂ ಡಾ. ಶ್ವೇತಾ ಮಡಪ್ಪಾಡಿ ಅವರು ಜನಪದ ಶೈಲಿಯಲ್ಲಿ ಮಾದಪ್ಪನ ಜನಪದ ಗೀತೆ ಹಾಗೂ ಹಲವು ದೇವರ ಗೀತೆಗಳನ್ನು ತಮ್ಮದೇ ವಿಶಿಷ್ಟ ಶೈಲಿ ಗಾಯನದಿಂದ ಮೋಡಿ ಮಾಡಿದರು.
ಎರಡನೇ ದಿನ ಅರಮನೆ ಆವರಣದಲ್ಲಿ ಪ್ರೇಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಆಸನಗಳೆಲ್ಲ ಭರ್ತಿ ಆಗಿದ್ದು, ಸಾವಿರಾರು ಮಂದಿ ನಿಂತುಕೊಂಡೇ ಕಾರ್ಯಕ್ರಮ ವೀಕ್ಷಣೆ ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಶಿವಕುಮಾರ್, ಜಿಲ್ಲಾಕಾರಿ ಲಕ್ಷ್ಮಿಕಾಂತ್ ರೆಡ್ಡಿ ಉಪಸ್ಥಿತರಿದ್ದರು.
ಶತಮಾನದ ಹಿಂದೆ ಮೈಸೂರು ಸಂಸ್ಥಾನದ ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ಅವರು ಮೈಸೂರಿನ ಹೆಣ್ಣುಮಕ್ಕಳಿಗಾಗಿ ಸ್ಥಾಪಿಸಿದ್ದ ‘ಮಹಾರಾಣಿಯವರ ಹೊಸ ಮಾದರಿ (ಎನ್ಟಿಎಂ) ಶಾಲೆ’…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ತೋಳ ಬಂತು ತೋಳ ಕತೆಯನ್ನು ನೆನಪಿಸುವಂತಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕಾಂಗ್ರೆಸ್…
ನವೀನ್ ಡಿಸೋಜ ಮನೆಮನೆಗಳಲ್ಲಿ ಘಮಘಮಿಸಲಿದೆ ಮದ್ದುಸೊಪ್ಪಿನ ಖಾದ್ಯ; ವಿಭಿನ್ನ ಹಬ್ಬದಾಚರಣೆಗೆ ಜಿಲ್ಲೆಯಲ್ಲಿ ಸಿದ್ಧತೆ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ (ಆ.೩)ಕಕ್ಕಡ…
ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿನ ಶೌಚಾಲಯದಲ್ಲಿ ಅಶುಚಿತ್ವ ತಾಂಡವ ಮೈಸೂರು: ವಾಯುವಿಹಾರಿಗಳು ಹಾಗೂ ಕ್ರೀಡಾಸಕ್ತರ ನೆಚ್ಚಿನ ತಾಣವಾಗಿರುವ ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ…
ಕೆ.ಬಿ.ರಮೇಶನಾಯಕ ಪ್ರಗತಿಯಲ್ಲಿ ಹಿಂದೆ ಬಿದ್ದಿರುವ ಗ್ರಾಪಂಗಳನ್ನು ಹುರಿದುಂಬಿಸಲು ಜಿಪಂ ಹೊಸ ಯೋಜನೆ ಪ್ರಶಸ್ತಿಗೆ ನಾಲ್ಕು ಕಾರ್ಯಸೂಚಿಯಲ್ಲಿ ಪ್ರಗತಿ ಸಾಧಿಸಿದ ಗ್ರಾಪಂಗಳ…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…