ವಿಕಿಪೀಡಿಯಾ ಸಹಸಂಸ್ಥಾಪಕರಾದ ಜಿಮ್ಮಿ ವೇಲ್ಸ್ ಅವರು ಚಾಟ್ ಜಿಪಿಟಿ ಬಗ್ಗೆ ಮಾತನಾಡಿದ್ದು, ಚಾಟ್ ಜಿಪಿಟಿ ಬಹಳ ಕೆಟ್ಟದ್ದು, ಇದರಿಂದ ಜ್ಞಾನ ನಾಶವಾಗುತ್ತದೆ ಎಂದು ವಿಕಿಪೀಡಿಯಾ ಸಹಸಂಸ್ಥಾಪಕ ಅಭಿಪ್ರಾಯಪಟ್ಟಿದ್ದಾರೆ.
ಪೋರ್ಚುಗಲ್ನಲ್ಲಿ ಆಯೋಜಿಸಲಾಗಿದ್ದ ವೆಬ್ ಶೃಂಗಸಭೆ 2023ರಲ್ಲಿ ಚಾಟ್ ಜಿಪಿಟಿ ಬಗ್ಗೆ ಮಾತನಾಡಿದ ಅವರು ಇಂತಹ ಕೃತಕ ಬುದ್ಧಮತ್ತೆಯ ಮಿತಿಗಳ ಬಗ್ಗೆ ವಿವರಿಸಿದ್ದಾರೆ, “ಚಾಟ್ ಜಿಪಿಟಿ ಆರಂಬದಲ್ಲಿ ಬಳಸಲು ಉತ್ತಮವೆನಿಸುತ್ತದೆ. ಬಳಸಲು ಆರಂಭಿಸಿದ ನಂತರ ಅದು ಕೆಟ್ಟದ್ದು ಎನಿಸಿಬಿಡುತ್ತದೆ, ಇದರಿಂದ ಸಂಶೋಧನಾ ಮನೊಭಾವ ಕುಂಠಿತಗೊಂಡಿದೆ, ಈ ಸಭೆಯಲ್ಲಿರುವ ಪ್ರತಿಯೊಬ್ಬರಿಗೂ ಇದರ ಬಗ್ಗೆ ಅರಿವಿದೆ” ಎಂದಿದ್ದಾರೆ.
ಜನರೇಟಿವ್ ಎಐ ಕಂಪನಿಗಳು ಸರಿಯಾದ ಕ್ರಮದಲ್ಲಿ ಪರಿಶೀಲನೆ ನಡೆಸಿ, ಅರ್ಹವಾಗಿ ಪರವಾನಗಿ ಪಡೆಯುತ್ತಿದ್ದಾರೆಯೇ ಎಂಬ ಆಕ್ಸಿಯೋನ್ನ ಹಿರಿಯ ಪತ್ರಕರ್ತರ ಪ್ರಶ್ನೆಗೆ, ” ಹೊಸ ತಂತ್ರಜ್ಞಾನಗಳು ಒಮ್ಮೆ ಬಂದು, ಅವುಗಳನ್ನು ನಾವು ಅಳವಡಿಸಿಕೊಂಡರೆ ಅದು ಸೋಮಾರಿತನವನ್ನು ಸೂಚಿಸುವ ಎಚ್ಚರಿಕೆಯನ್ನು ನೀಡುತ್ತದೆ. ಎಐಯ ಪರಿಶೀಲನೆಯು ಮುಂದಿನ ನವೀನ ತಂತ್ರಜ್ಞಾನಗಳ ಎಚ್ಚರಿಕೆಯ ಭಾಗವಾಗಿದೆ ಎಂದು ವೇಲ್ಸ್ ಹೇಳಿದ್ದಾರೆ.
ಚಾಟ್ ಜಿಪಿಟಿಯನ್ನು ಹೆಚ್ಚು ಜವಾಬ್ದಾರಿಯುತವಾಗಿ ಮತ್ತು ವಾಸ್ತವಿಕವಾಗಿ ನಾವು ನೋಡಬೇಕಿದೆ. ಇದರಿಂದ ಡೇಟಾವನ್ನು ಹೆಚ್ಚು ಫಿಲ್ಟರ್ ಮಾಡಿದರೇ ಅದು ಸಾಮಾಜಿಕ ಮಾಧ್ಯಮದಂತಹ ಕಡಿಮೆ ಗುಣಮಟ್ಟದ ಮೂಲಗಳನ್ನು ತಪ್ಪಿಸಿ, ವಿವಿಧ ಕ್ಷೇತ್ರಗಳಿಗೆ ಹಾನಿಯನ್ನುಂಟು ಮಾಡಲಿದೆ ಎಂದು ಅವರು ಭಾವಿಸಿದ್ದಾರೆ.
ಏನಿದು ಚಾಟ್ ಜಿಪಿಟಿ?
ಇದೊಂದು ನವೀನ ತಂತ್ರಜ್ಞಾನವಾಗಿದೆ. ನಮಗೆ ಬೇಕಾದ ಸಮಗ್ರ ಮಾಹಿತಿಯ ಬಗ್ಗೆ ಒಂದು ಸಾಲಿನಲ್ಲಿ ಬರೆದರೆ ಚಾಟ್ ಜಿಪಿಟಿ ನಾವು ಕೇಳಿದಷ್ಟು ಪದಮಿತಿಯಲ್ಲಿ ಮಾಹಿತಿ ನೀಡಲಿದೆ. ಇದು ಅತಿ ನಿಖರವಾಗಿದ್ದು, ಇದನ್ನು ಬಳಸುವ ಮೂಲ ಉದ್ದೇಶವೇ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳುವುದಾಗಿದೆ. ಆದರೆ ಇದು ಜನರ ಜ್ಞಾನ ಸಂಪಾದನೆಗೆ ನೇರವಾಗಿಯೇ ಪೆಟ್ಟು ನೀಡುತ್ತಿದೆ.
ಮೈಸೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ…
ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ…
ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…
ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…
ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…