ಮನರಂಜನೆ

ಈ ಬಾರಿ ‘ಬಿಗ್‍ ಬಾಸ್‍’ಗೆ ಸುದೀಪ್‍ ಬದಲು ಬೇರೆಯವರ ನಿರೂಪಣೆ?

ಆಗಸ್ಟ್ ತಿಂಗಳು ಬಂತಂದೆರೆ ‘ಬಿಗ್‍ ಬಾಸ್‍’ ಕುರಿತು ಚರ್ಚೆ ಶುರುವಾಗುತ್ತದೆ. ಅಕ್ಟೋಬರ್‍ನಲ್ಲಿ ಶುರುವಾಗುವ ಕಾರ್ಯಕ್ರಮದಲ್ಲಿ ಯಾರ್ಯಾರು ಭಾಗವಹಿಸಬಹುದು, ಏನೆಲ್ಲಾ ಆಗಬಹುದು ಎಂಬ ವಿಷಯಗಳು ಎರಡು ತಿಂಗಳ ಮೊದಲೇ ಶುರುವಾಗುತ್ತದೆ. ಈ ಬಾರಿಯೂ ಚರ್ಚೆ ಶುರುವಾಗಿದ್ದು, ಆದರೆ ಕಾರ್ಯಕ್ರಮದಲ್ಲಿ ಯಾರು ಭಾಗವಹಿಸಬಹುದು ಎಂಬುದಕ್ಕಿಂತ, ಯಾರು ನಡೆಸಿಕೊಡಬಹುದು ಎಂಬ ಬಿಸಿಬಿಸಿ ಚರ್ಚೆ ಆಗುತ್ತಿದೆ.

ಕಲರ್ಸ್ ಕನ್ನಡದಲ್ಲಿ ನಡೆಯುವ ‘ಬಿಗ್‍ ಬಾಸ್‍’ ಕಾರ್ಯಕ್ರಮದಿಂದ ನಿರೂಪಕ ಸುದೀಪ್‍ ಹೊರನಡೆಯುವ ಸಾಧ್ಯತೆ ಇದೆ ಎಂಬ ಸುದ್ದಿಯೊಂದು ಕಿರುತೆರೆಯ ವಲಯದಲ್ಲಿ ಕೇಳಿಬರುತ್ತಿದೆ. ಸುದೀಪ್‍ ಬದಲು ಬೇರೆಯವರು ನಡೆಸಿಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

‘ಬಿಗ್‍ ಬಾಸ್‍’ ಕಾರ್ಯಕ್ರಮವನ್ನು ಕನ್ನಡದಲ್ಲಿ ಮೊದಲಿನಿಂದಲೂ ನಿರೂಪಿಸಿಕೊಂಡು ಬಂದವರು ಸುದೀಪ್‍. ಸತತವಾಗಿ 10 ಸೀಸನ್‍ಗಳ ಕಾಲ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಅವರು ಹೊತ್ತಿದ್ದು, ‘ಬಿಗ್‍ ಬಾಸ್‍’ನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಿರುವಾಗ, ಅವರು ಬದಲಾಗುತ್ತಿರುವುದೇಕೆ?

ಹಿಂದಿ ‘ಬಿಗ್ ಬಾಸ್‍’ ಕಾರ್ಯಕ್ರಮವನ್ನು ಹಲವು ವರ್ಷಗಳ ಕಾಲ ಸಲ್ಮಾನ್‍ ಖಾನ್‍ ನಡೆಸಿಕೊಟ್ಟಿದ್ದರು. ಈ ಬಾರಿ ಅವರ ಬೇಡಿಕೆ ಮತ್ತು ಸಂಭಾವನೆ ಹೆಚ್ಚಾಗಿದ್ದರಿಂದ, ಅವರನ್ನು ಬದಿಗಿಟ್ಟು ಆ ಜವಾಬ್ದಾರಿಯನ್ನು ಹಿರಿಯ ನಟ ಅನಿಲ್‍ ಕಪೂರ್‍ ಅವರಿಗೆ ನೀಡಲಾಗಿದೆ. ಈ ಹಿಂದೆ ಸಹ ‘ಬಿಗ್ ಬಾಸ್‍’ನಲ್ಲಿ ನಿರೂಪಕರು ಬದಲಾಗಿದ್ದಿದೆ. ಇದುವರೆಗೂ 17 ಸೀಸನ್‍ಗಳಾಗಿದ್ದು, ಸಲ್ಮಾನ್‍ ಖಾನ್‍, ಸಂಜಯ್ ದತ್‍, ಅಮಿತಾಭ್‍ ಬಚ್ಚನ್‍, ಶಿಲ್ಪಾ ಶೆಟ್ಟಿ ಮುಂತಾದವರು ನಡೆಸಿಕೊಟ್ಟಿದ್ದಾರೆ. ತೆಲುಗು ಮತ್ತು ಮರಾಠಿಯಲ್ಲೂ ಈ ಬದಲಾವಣೆಗಳಾಗಿವೆ. ಕನ್ನಡದಲ್ಲೂ ಯಾಕೆ ಅಂಥದ್ದೊಂದು ಪ್ರಯತ್ನ ಮಾಡಬಾರದು ಎಂದು ಯೋಚನೆ ನಡೆದಿದೆಯಂತೆ.

ಈ ವಿಷಯವಾಗಿ ಸುದೀಪ್‍ ಅಥವಾ ಚಾನಲ್‍ ಕಡೆಯಿಂದ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದರ ನಡುವೆಯೇ ಸುದೀಪ್ ಬದಲು ಯಾರು ಈ ಕಾರ್ಯಕ್ರಮವನ್ನು ನಡೆಸಿಕೊಡಬಹುದು ಎಂಬ ಚರ್ಚೆ ಜೋರಾಗಿ ಶುರುವಾಗಿದೆ. ಪ್ರಮುಖವಾಗಿ, ರಮೇಶ್ ‍ಅರವಿಂದ್ ಮತ್ತು ರಿಷಭ್‍ ಶೆಟ್ಟಿ ಹೆಸರುಗಳು ಕೇಳಿಬರುತ್ತಿವೆ. ರಮೇಶ್‍ ಅರವಿಂದ್‍ ಅವರ ಹೆಸರು ಓಕೆ. ಆದರೆ, ‘ಕಾಂತಾರ – ಚಾಪ್ಟರ್ 1’ ಚಿತ್ರವನ್ನು ಬಿಟ್ಟು ರಿಷಭ್ ಬರುತ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಇದರ ಜೊತೆಗೆ ಗಣೇಶ್‍ ಅವರ ಹೆಸರು ಸಹ ಪ್ರಮುಖವಾಗಿ ಕೇಳಿಬರುತ್ತಿದೆ.

ನಿಜಕ್ಕೂ ಇವರಲ್ಲಿ ಯಾರಾದರೂ ಒಬ್ಬರು ನಡೆಸಿಕೊಡುತ್ತಾರಾ? ಅಥವಾ ಸುದೀಪ್‍ ಅವರೇ ಈ ಕಾರ್ಯಕ್ರಮವನ್ನು ಮುಂದುವರೆಸುತ್ತಾರಾ? ಎಂಬುದುನ್ನು ಇನ್ನಷ್ಟೇ ಕಾದು ನೋಡಬೇಕಿದೆ.

ಭೂಮಿಕಾ

Recent Posts

ಓದುಗರ ಪತ್ರ: ಚುಟುಕು ಸಾಹಿತ್ಯ ಪ್ರಶಸ್ತಿ ಸೇರ್ಪಡೆ ಸ್ವಾಗತಾರ್ಹ

೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…

10 hours ago

ವೈಚಾರಿಕ ಕ್ರಾಂತಿಯ ವಚನಕಾರ ಹಡಪದ ಅಪ್ಪಣ್ಣ

ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…

10 hours ago

ಹವಾಮಾನ ಬದಲಾವಣೆ; ಹುಲಿಗಳಿಗೆ ಹೊಸ ಅಪಾಯ?

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…

10 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಗೌರವ್ ಶುಕ್ಲಾ ಎಂಬ ‘ಸಮವಸ್ತ್ರವಿಲ್ಲದ ಸೈನಿಕ’

‘ಸಪೋರ‍್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ  ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…

10 hours ago

ಮಲ್ಲಳ್ಳಿ ಜಲಪಾತದ ರೋಪ್‌ವೇ ಯೋಜನೆಗೆ ವೇಗ

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್‌ವೇ ಯೋಜನೆಗೆ ವೇಗ ದೊರೆತಿದೆ.…

10 hours ago

ಮೀನುಗಾರಿಕೆ ಉತ್ತೇಜನಕ್ಕೆ ಸಂಚಾರ ಮತ್ಸ್ಯ ವಾಹಿನಿ

ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…

10 hours ago