ಮನರಂಜನೆ

15 ವರ್ಷಗಳಲ್ಲೇ ಅತೀ ಕಡಿಮೆ ಗಳಿಕೆ; ಅಕ್ಷಯ್ ಹೊಸ ದಾಖಲೆ

ಬಾಲಿವುಡ್‍ ನಟ ಅಕ್ಷಯ್‍ ಕುಮಾರ್‍ ಹೊಸ ದಾಖಲೆ ಬರೆದಿದ್ದಾರೆ. ಇತ್ತೀಚೆಗೆ ಅವರ ಚಿತ್ರವೊಂದು ಬಿಡುಗಡೆಯಾಗಿದ್ದು, ಕಳೆದ 15 ವರ್ಷದಲ್ಲೇ ಅವರ ವೃತ್ತಿ ಜೀವನದಲ್ಲಿ ಅತ್ಯಂತ ಕಡಿಮೆ ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಮೊನ್ನೆ ಶುಕ್ರವಾರ (ಜುಲೈ 12) ಅಕ್ಷಯ್‍ ಕುಮಾರ್‍ ಅಭಿನಯದ ‘ಸರ್ಫಿರಾ’ ಚಿತ್ರವು ಜಗತ್ತಿನಾದ್ಯಂತ ಬಿಡುಗಡೆ ಯಾಗಿದೆ. ಈ ಚಿತ್ರವು ತಮಿಳಿನ ‘ಸೂರರೈ ಪೊಟ್ರು’ ಚಿತ್ರದ ರೀಮೇಕ್‍ ಆಗಿದ್ದು, ತಮಿಳು ಚಿತ್ರ ದೊಡ್ಡ ಹಿಟ್‍ ಆಗುವುದರ ಜೊತೆಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಾಕಷ್ಟು ಪ್ರಶಂಸೆಯನ್ನೂ ತನ್ನದಾಗಿಸಿಕೊಂಡಿತ್ತು. ಆದರೆ, ಹಿಂದಿ ರೀಮೇಕ್‍ ಚಿತ್ರವು ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಸೋತಿದೆ.

ಸರ್ಫಿರಾ ಚಿತ್ರವನ್ನು ಮೂಲ ಚಿತ್ರವನ್ನು ನಿರ್ದೇಶಿಸಿದ್‍ದ ಸುಧಾ ಕೊಂಗರಾ ಚಿತ್ರ ನಿರ್ದೇಶಿಸಿದ್ದು, ಅರುಣ್‍ ಭಾಟಿಯಾ, ಸೂರ್ಯ, ಜ್ಯೋತಿಕಾ ಮುಂತಾದವರು ಚಿತ್ರವನ್ನು ನಿರ್ಮಿಸಿದ್ದಾರೆ. ಅಕ್ಷಯ್‍ ಕುಮಾರ್‍ ಒಡೆತನದ ಕೇಪ್‍ ಆಫ್‍ ಗುಡ್‍ ಫಿಲಂಸ್‍ ಸಹ ಈ ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಅಕ್ಷಯ್‍ ಕುಮಾರ್ ಅಭಿನಯದ ಎಲ್ಲಾ ಚಿತ್ರಗಳ ನಿರ್ಮಾಣದಲ್ಲೂ ಈ ಸಂಸ್ಥೆ ತೊಡಗಿಸಿಕೊಳ್ಳುವ ಹಾಗೆ ಈ ಚಿತ್ರದಲ್ಲೂ ತೊಡಗಿಸಿಕೊಂಡಿದೆ.

ಈ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ? ಜಗತ್ತಿನಾದ್ಯಂತ ಬಿಡುಗಡೆಯಾದ ಈ ಚಿತ್ರವು ಕೇವಲ 2.40 ಕೋಟಿ ರೂ ಗಳಿಸುವುದರಲ್ಲಿ ಯಶಸ್ವಿಯಾಗಿದೆ. ಈ ಹಿಂದೆ, ಅಂದರೆ 15 ವರ್ಷಗಳ ಹಿಂದೆ ಅಕ್ಷಯ್‍ ಅಭಿನಯದ ‘ತಸ್ವೀರ್‍’ ಚಿತ್ರವು ಮೊದಲ ದಿನ ಕೇವಲ 1.4 ಕೋಟಿ ರೂ ಗಳಿಸಿತ್ತು. ಆಗಿನ ಕಾಲ ಬೇರೆ, ಈಗಿನ ಕಾಲ ಬೇರೆ. ಆ ಚಿತ್ರದ ನಂತರ ಅಕ್ಷಯ್‍ ಅಭಿನಯದ ಹಲವು ಚಿತ್ರಗಳು ಯಶಸ್ವಿಯಾಗುವುದರ ಜೊತೆಗ 100 ಕೋಟಿ ರೂ. ಗಳಿಕೆ ಮಾಡಿದೆ. ಐದು ವರ್ಷಗಳ ಹಿಂದೆ ಅಕ್ಷಯ್‍ ಅಭಿನಯದ ನಾಲ್ಕು ಚಿತ್ರಗಳು 200 ಕೋಟಿ ರೂ ಗಳಿಕೆ ಮಾಡಿತ್ತು. ಆ ನಂತರ ಕ್ರಮೇಣ ಅವರ ಚಿತ್ರಗಳು ಸೋಲ ತೊಡಗಿದವು. ಕೆಲವು ಚಿತ್ರಗಳು 100 ಕೋಟಿ ರೂ. ಕ್ಲಬ್‍ ಸೇರುವುದು ಕಷ್ಟವಾಯಿತು.

ಅಕ್ಷಯ್ ಅಭಿನಯದ ಹಿಂದಿನ ಚಿತ್ರ ‘ಬಡೇ ಮಿಯಾ ಚೋಟೇ ಮಿಯಾ’ ಚಿತ್ರವನ್ನು 350 ಕೋಟಿ ರೂ ಬಜೆಟ್‍ನಲ್ಲಿ ನಿರ್ಮಿಸಲಾಗಿತ್ತು. ಆದರೆ, ಚಿತ್ರವು ಅಂತಿಮವಾಗಿ 102.16 ಕೋಟಿ ರೂ ಸಂಗ್ರಹಿಸುವಲ್ಲಿ ಯಶಸ್ವಿಯಾಯಿತು. ಇನ್ನು, ‘ಸರ್ಫಿರಾ’ ಚಿತ್ರವು 80 ಕೋಟಿ ರೂ ಬಜೆಟ್‍ನಲ್ಲಿ ನಿರ್ಮಾನವಾದ ಚಿತ್ರವಾಗಿದ್ದು, ಮೊದಲ ದಿನ ಕೇವಲ 2.40 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ. ಹೀಗೆ ಮುಂದುವರೆದರೆ, ಚಿತ್ರ 10 ಕೋಟಿ ರೂ. ಸಹ ಸಂಗ್ರಹಿಸುತ್ತದೋ, ಇಲ್ಲವೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಭೂಮಿಕಾ

Recent Posts

ರಾಮಕೃಷ್ಣ ಆಶ್ರಮದವರು ಕೊಟ್ಟ ಮಾತು ಉಳಿಸಿಕೊಳ್ಳಬೇಕಿತ್ತು

ಶತಮಾನದ ಹಿಂದೆ ಮೈಸೂರು ಸಂಸ್ಥಾನದ ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ಅವರು ಮೈಸೂರಿನ ಹೆಣ್ಣುಮಕ್ಕಳಿಗಾಗಿ ಸ್ಥಾಪಿಸಿದ್ದ ‘ಮಹಾರಾಣಿಯವರ ಹೊಸ ಮಾದರಿ (ಎನ್‌ಟಿಎಂ) ಶಾಲೆ’…

50 mins ago

ಅರವತ್ತು ದಿನಗಳು ಕಳೆಯಿತು…ಫಲದ ನಿರೀಕ್ಷೆಯಲ್ಲಿ!

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ತೋಳ ಬಂತು ತೋಳ ಕತೆಯನ್ನು ನೆನಪಿಸುವಂತಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕಾಂಗ್ರೆಸ್…

53 mins ago

ಇಂದು ಕೊಡಗು ಜಿಲ್ಲೆಯಲ್ಲಿ ಕಕ್ಕಡ 18ರ ಸಂಭ್ರಮ

ನವೀನ್ ಡಿಸೋಜ ಮನೆಮನೆಗಳಲ್ಲಿ ಘಮಘಮಿಸಲಿದೆ ಮದ್ದುಸೊಪ್ಪಿನ ಖಾದ್ಯ; ವಿಭಿನ್ನ ಹಬ್ಬದಾಚರಣೆಗೆ ಜಿಲ್ಲೆಯಲ್ಲಿ ಸಿದ್ಧತೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ (ಆ.೩)ಕಕ್ಕಡ…

59 mins ago

ಸಾರ್ವಜನಿಕರ ಶೌಚಾಲಯಕ್ಕೆ ಬೇಕಿದೆ ಚಿಕಿತ್ಸೆ!

ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿನ ಶೌಚಾಲಯದಲ್ಲಿ ಅಶುಚಿತ್ವ ತಾಂಡವ ಮೈಸೂರು: ವಾಯುವಿಹಾರಿಗಳು ಹಾಗೂ ಕ್ರೀಡಾಸಕ್ತರ ನೆಚ್ಚಿನ ತಾಣವಾಗಿರುವ ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ…

1 hour ago

ಗ್ರಾಪಂಗಳ ಅತ್ಯುತ್ತಮ ಕೆಲಸಕ್ಕೆ ಉತ್ತಮ ಪ್ರಶಸ್ತಿ

ಕೆ.ಬಿ.ರಮೇಶನಾಯಕ ಪ್ರಗತಿಯಲ್ಲಿ ಹಿಂದೆ ಬಿದ್ದಿರುವ ಗ್ರಾಪಂಗಳನ್ನು ಹುರಿದುಂಬಿಸಲು ಜಿಪಂ ಹೊಸ ಯೋಜನೆ ಪ್ರಶಸ್ತಿಗೆ ನಾಲ್ಕು ಕಾರ್ಯಸೂಚಿಯಲ್ಲಿ ಪ್ರಗತಿ ಸಾಧಿಸಿದ ಗ್ರಾಪಂಗಳ…

1 hour ago

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

1 day ago