ಕನ್ನಡ ಚಿತ್ರರಂಗದಲ್ಲಿ ತಾಯಿ ಸೆಂಟಿಮೆಂಟ್ ಹಾಡುಗಳನ್ನು ಹಾಡುವುದರಲ್ಲಿ ‘ಜೋಗಿ’ ಪ್ರೇಮ್ ಜನಪ್ರಿಯರು. ‘ಬ್ರಹ್ಮ ವಿಷ್ಣು …’, ‘ಬೇಡುವೆನು ವರವನ್ನು …’ ಮುಂತಾದ ಕೆಲವು ಜನಪ್ರಿಯ ಹಾಡುಗಳನ್ನು ಹಾಡಿರುವ ಪ್ರೇಮ್, ಇದೀಗ ಬೇರೆ ತರಹದ ಹಾಡನ್ನು ಹಾಡಿದ್ದಾರೆ.
‘ಲೈಫ್ ಟುಡೇ’ ಎಂಬ ಚಿತ್ರಕ್ಕೆ ಪ್ರೇಮ್, ‘ಸಿಕ್ಕರೇ ಸಿಕ್ಕರೇ …’ ಎಂಬ ಹಾಡನ್ನು ಹಾಡಿದ್ದಾರೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರದ ತಮಿಳು ಅವತರಣಿಕೆಗೆ ಅಲ್ಲಿನ ಖ್ಯಾತ ಸಂಗೀತ ನಿರ್ದೇಶ ಜಿ.ವಿ. ಪ್ರಕಾಶ್ ಕುಮಾರ್ ಧ್ವನಿಯಾಗಿದ್ದರು. ಈಗ ಕನ್ನಡ ಅವತರಣಿಕೆಯ ‘ಸಿಕ್ಕರೆ ಸಿಕ್ಕರೆ ಒಳ್ಳೆಯ ಹುಡುಗರು ಸಿಕ್ಕರೆ …’ ಎಂಬ ಹಾಡನ್ನು ಪ್ರೇಮ್ ಹಾಡಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿದ್ದು, ರಾಮನಾರಾಯಣ್ ಸಾಹಿತ್ಯ ರಚಿಸಿದ್ದಾರೆ. ಇತ್ತೀಚೆಗೆ ಈ ಹಾಡಿನ ರೆಕಾರ್ಡಿಂಗ್ ಆಗಿದೆ.
ಇತ್ತೀಚೆಗೆ ಪ್ರೇಮ್ ಒಂದು ಹಾಡು ಹಾಡೋದಕ್ಕೆ ಐದು ಲಕ್ಷ ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬ ಸುದ್ದಿಯಾಗಿತ್ತು. ಹೀಗಿರುವಾಗಲೇ, ‘ಲೈಫ್ ಟುಡೇ’ ಚಿತ್ರಕ್ಕೆ ಪ್ರೇಮ್ ಎಷ್ಟು ಸಂಭಾವನೆ ಪಡೆದರು ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಮುಂಬೈನ ಗಾಯಕ-ಗಾಯಕಿಯರಿಗೆ ಅಷ್ಟು ದುಡ್ಡು ಕೊಡುವಾಗ, ತಮಗೇಕೆ ಕೊಡುವುದಿಲ್ಲ ಎಂದು ಪ್ರೇಮ್ ಪ್ರಶ್ನಿಸುತ್ತಾರೆ.
ಈ ಕುರಿತು ಮಾತನಾಡುವ ಅವರು, ‘ನಾನು 10ಲಕ್ಷ ಸಂಭಾವನೆ ಕೇಳುತ್ತೇನೆ. ಮುಂಬೈಯವರಿಗೆ ಕೊಡುವಾಗ, ಕನ್ನಡಿಗರಿಗೆ ಯಾಕೆ ಕೊಡಬಾರದು? ನಾನು ಹಾಡುವ ಹಾಡಿನ ಸಂಭಾವನೆ ಟ್ರಸ್ಟ್ ಸೇರುತ್ತೆ. ಅಮ್ಮನ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಸೇವೆಗೆ ಬಳಕೆಯಾಗುತ್ತದೆ’ ಎನ್ನುತ್ತಾರೆ.
ಪ್ರೇಮ್ ತಮ್ಮ ಸಂಯೋಜನೆಯ ಹಾಡನ್ನು ಹಾಡಿರುವುದು ತಮ್ಮ ಪುಣ್ಯ ಎನ್ನುವ ಶ್ರೀಧರ್ ವಿ. ಸಂಭ್ರಮ್, ‘ನಾನು ಅವರ ದೊಡ್ಡ ಅಭಿಮಾನಿ. ಅವರ ಧ್ವನಿಯಲ್ಲಿರುವ ಮುಗ್ಧತೆ ಮತ್ತು ನೋವಿನ ಗಾಢತೆ ಈ ಹಾಡಿಗೆ ಬೇಕಿತ್ತು. ಅದು ಸಿಕ್ಕಿದೆ. ಈ ಹಾಡು ದೊಡ್ಡ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ.
‘ಲೈಫ್ ಟುಡೇ’ ಚಿತ್ರವನ್ನು ಕಾಂತ ಕನ್ನಲ್ಲಿ ನಿರ್ದೇಶಿಸುತ್ತಿದ್ದು, ಪ್ರದೀಪ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಕಿರಣ್ ಆದಿತ್ಯ ನಾಯಕನಾಗಿ ಅಭಿನಯಿಸಿದ್ದು, ಲೇಖಚಂದ್ರ ನಾಯಕಿಯಾಗಿ ಅಭಿನಯಿಸಿದ್ದಾರೆ. ಮಿಕ್ಕಂತೆ ತಬಲ ನಾಣಿ, ಅಪೂರ್ವ, ಕಾಕ್ರೋಚ್ ಸುಧಿ, ಜಗ್ಗಪ್ಪ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಜವಾಹರಲಾಲ್ ಎಂಬ ಅಪಾಯಕಾರಿ ಮನುಷ್ಯ ೬ ಬಾರಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ೩ ಬಾರಿ ಸತತವಾಗಿ ದೇಶದ ಪ್ರಧಾನಿಯಾಗಿದ್ದ ಜವಾಹರಲಾಲ್…
ಮಹಾದೇಶ್ ಎಂ.ಗೌಡ ಗ್ರಾಮ ಪಂಚಾಯಿತಿಗೆ ವಾರ್ಷಿಕ ೧೨ ರಿಂದ ೧೫ ಲಕ್ಷ ರೂ.ನಷ್ಟ; ಕ್ರಮಕ್ಕೆ ಸಾರ್ವಜನಿಕರ ಆಗ್ರಹ ಹನೂರು: ತಾಲ್ಲೂಕಿನ…
ಕಾಂಗೀರ ಬೋಪಣ್ಣ ಸಮರ್ಪಕವಾಗಿ ಅನುದಾನ ಬಳಸಿಕೊಳ್ಳಲು ಸಾರ್ವಜನಿಕರ ಆಗ್ರಹ ವಿರಾಜಪೇಟೆ: ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾದರೂ…
ಎಂ.ಕೇಶವ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದ್ದ ಸಣ್ಣ ಸೇತುವೆ ಪರವೂರಿಗೆ ತೆರಳಲು ಸುಮಾರು ೧೫ ಕಿ.ಮೀ. ಬಳಸುವುದು ತಪ್ಪಿದೆ ನೂತನ ಸೇತುವೆ ನಿರ್ಮಾಣದ…
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ಹಾಗೂ ಪ್ರವಾಸಿಗರಿಗೆ ಉಪಯುಕ್ತವಾದ ಮಾಹಿತಿ ಕೊಡಲು ದಸರಾ-೨೦೨೬ರ…