ಮನರಂಜನೆ

ಹಾಲಿವುಡ್‌ ನಿರ್ಮಾಪಕ ಜಾನ್‌ ಲ್ಯಾಂಡೊ ನಿಧನ

ವಾಷಿಂಗ್ಟನ್‌: ಹಾಲಿವುಡ್‌ನಲ್ಲಿ ಅವತಾರ್‌, ಟೈಟಾನಿಕ್‌ ನಂತಹ ಬ್ಲಾಕ್‌ ಬಾಸ್ಟರ್‌ ಸಿನಿಮಾಗಳಿಗೆ ನಿರೂಪಕರಾಗಿದ್ದ ಜಾನ್‌ ಲ್ಯಾಂಡೊ ಅವರು ಶನಿವಾರ (ಜುಲೈ. 6) ನಿಧನರಾಗಿದ್ದಾರೆ.

ಜುಲೈ 23, 1960ರಂದು ನ್ಯೂಯಾರ್ಕ್‌ನಲ್ಲಿ ಜನಿಸಿದ ಇವರು 1980ರಲ್ಲಿ ಪ್ರೋಡಕ್ಷನ್ ಮ್ಯಾನೇಜರ್‌ ಆಗಿ ವೃತ್ತಿ ಪ್ರಾರಂಭಿಸಿದ ಅವರು ನಂತರ ಟೈಟಾನಿಕ್‌, ಅವತಾರ್‌ ನಂತಹ ಜನಪ್ರಿಯ ಚಿತ್ರಗಳ ನಿರ್ಮಿಸಿ ಜನಮನ ಗೆದ್ದಿದ್ದರು.

ಡಿಸ್ನಿ ಎಂಟರ್‌ಡಟೈನ್‌ಮೆಂಟ್‌ ಸಹ ಅಧ್ಯಕ್ಷ ಅಲನ್‌ ಬರ್ಗ್‌ಮನ್‌ ಅವರು ನಿರ್ಮಾಪಕ ಲ್ಯಾಂಡೊ ನಿಧನ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಲ್ಯಾಂಡೊ ಅವರ ನಿರ್ಮಾಣದಲ್ಲಿ 1997ರಲ್ಲಿ ಮೂಡಿಬಂದ ಟೈಟಾನಿಕ್‌ ಚಿತ್ರ ಬರೋಬ್ಬರಿ 11 ಆಸ್ಕರ್‌ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು. 2009ರಲ್ಲಿ ಮೂಡಬಂದ ಅವತಾರ್‌ ಚಿತ್ರ ಪ್ರಪಂಚದಾದ್ಯಂತ ಸಿನಿ ರಸಿಕರನ್ನು ರಂಜಿಸಿ ಮನಗೆದ್ದಿತ್ತು. ಅವತಾರ್‌ ಚತ್ರದ ಸೀಕ್ವೆಲ್‌ ಅವತಾರ್‌ ದಿ ವೇ ಆಫ್‌ ವಾಟರ್‌ ಚಿತ್ರ ಇತ್ತೀಚೆಗೆ ತೆರೆಕಂಡು ಭರ್ಜರಿ ಕಲೆಕ್ಷನ್‌ ಮಾಡಿತ್ತು.

ಇನ್ನು ಲ್ಯಾಂಡೊ ನಿಧನದ ಬಗ್ಗೆ ಅವತಾರ್‌ ಅಕೌಂಟ್‌ನಿಂದ ಅಧಿಕೃತ ಮಾಹಿತಿ ಬಂದಿದ್ದು, ಜಿಮ್‌ ಕ್ಯಾಮರೋನ್‌ ಅವರು ಲ್ಯಾಂಡೊ ನಿಧನಕ್ಕೆ ಕಂಬನಿ ಮಿಡಿದ್ದಾರೆ. ಈ ಸಂಬಂಧ ಫೋಟೋ ಒಂದನ್ನು ಹಂಚಿಕೊಂಡು ಟ್ವೀಟ್‌ ಮಾಡಿದ್ದು, “ನಮ್ಮ ಸ್ನೇಹಿತ ಮತ್ತು ನಾಯಕ ಜಾನ್ ಲ್ಯಾಂಡೊ ಅವರ ನಷ್ಟದಿಂದ ಅವತಾರ್ ಕುಟುಂಬವು ದುಃಖಿತವಾಗಿದೆ. ಅವರ ವಿವೇಕಯುತ ಹಾಸ್ಯ, ವೈಯಕ್ತಿಕ ಕಾಂತೀಯತೆ, ಉತ್ಸಾಹದ ಮಹಾನ್ ಉದಾರತೆ ಮತ್ತು ಉಗ್ರತೆಯು ನಮ್ಮ ಅವತಾರ್ ಸಮೂಹವನ್ನು ಸುಮಾರು ಎರಡು ದಶಕಗಳವರೆಗೆ ಹಿಡಿದಿಟ್ಟುಕೊಂಡಿತ್ತು.

ಅವರು ಉತ್ತಮ ಚಲನಚಿತ್ರಗಳನ್ನು ನಿರ್ಮಿಸಿದರು. ಅವರು ನಮಗೆಲ್ಲರಿಗೂ ಪ್ರತಿದಿನವೂ ನಮ್ಮ ಅತ್ಯುತ್ತಮವಾದದ್ದನ್ನು ತರಲು ಸ್ಫೂರ್ತಿ ನೀಡಿದರು. ನಾನು ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಮತ್ತು 31 ವರ್ಷಗಳ ನನ್ನ ಹತ್ತಿರದ ಸಹಯೋಗಿ. ನನ್ನ ಒಂದು ಭಾಗವು ಹರಿದುಹೋಗಿದೆ” ಎಂದು ಜಿಮ್ ಕ್ಯಾಮೆರಾನ್ ಬರೆದುಕೊಂಡಿದ್ದಾರೆ.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿಗಳ ವರ್ಗಾವಣೆ

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಸಿದ್ದರಾಮಯ್ಯ ಅವರು ತಮ್ಮ ವಿದಾಯದ ಕೊನೇ ಕ್ಷಣದಲ್ಲೂ ಮಹತ್ವದ ಕ್ರಮ ಕೈಗೊಂಡಿದ್ದು,…

8 hours ago

ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ರಾಜ್ಯ ರಾಜಕೀಯದಲ್ಲೇ ಮುಂದುವರಿಯುತ್ತೇನೆ : ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು : ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಿಎಂ…

11 hours ago

ಹೈಕಮಾಂಡ್‌ ಸೂಚನೆಯಂತೆ ರಾಜೀನಾಮೆ : ಸಿದ್ದರಾಮಯ್ಯ ಸುದ್ದಿಗೋಷ್ಠಿಯ ಹೈಲೆಟ್ಸ್‌

ಬೆಂಗಳೂರು : ಹೈಕಮಾಂಡ್‌ ಸೂಚನೆಯಂತೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ…

12 hours ago

ಯಾರೇ ಸಿಎಂ ಆದರೂ ಕರ್ನಾಟಕ ಅಭಿವೃದ್ಧಿಯಾಗಲ್ಲ: ವಿಜಯೇಂದ್ರ

ಕೊಪ್ಪಳ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ವಿಚಾರ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ…

13 hours ago

ಅಧಿಕಾರ ಬದಲಾವಣೆ ಎನ್ನುವುದು ಹೈಕಮಾಂಡ್ ನಿರ್ಧಾರ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಅಧಿಕಾರ ಬದಲಾವಣೆ ಎನ್ನುವುದು ಹೈಕಮಾಂಡ್‌ ನಿರ್ಧಾರ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ…

14 hours ago

ಮುಂದೆಯೂ ಇದೇ ರೀತಿ ಸಹಕಾರ ನೀಡಿ: ಮಂತ್ರಿಗಳಿಗೆ ಡಿಸಿಎಂ ಡಿಕೆಶಿ ಮನವಿ

ಬೆಂಗಳೂರು: ಬ್ರೇಕ್‌ಫಾಸ್ಟ್‌ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಂತ್ರಿಗಳ ಜೊತೆ ಸಹಕಾರವನ್ನು ಕೇಳಿದ್ದಾರೆ. ಸಿಎಂ ಹುದ್ದೆಗೆ ಇಂದು ಸಿದ್ದರಾಮಯ್ಯ ರಾಜೀನಾಮೆ…

16 hours ago