ಎಚ್. ಡಿ. ಕೋಟೆ: ಪತ್ರಿಕಾ ರಂಗದಲ್ಲಿ ಮಾನವೀಯ ಗುಣಗಳೊಂದಿಗೆ ನೊಂದವರಿಗೆ ಬೆನ್ನೆಲುಬಾಗಿ, ಸಮಾಜದ ಏಳಿಗೆಗೆ ನಿರಂತರವಾಗಿ, ರಾಜ್ಯ ಮಟ್ಟದ ಪತ್ರಿಕೆಗೆ ಸರಿ ಸಮಾನವಾಗಿ ‘ಆಂದೋಲನ’ ದಿನಪತ್ರಿಕೆ ಕೆಲಸ ನಿರ್ವಹಿಸುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ಆಡಳಿತ ಭವನದಲ್ಲಿ ‘ಆಂದೋಲನ’ ದಿನಪತ್ರಿಕೆಯ ೫೨ನೇ ವರ್ಷದ ವಾರ್ಷಿಕೋತ್ಸವದ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ಆಂದೋಲನ’ವೆಂದರೆ ಅದೊಂದು ಕ್ರಾಂತಿ. ‘ಆಂದೋಲನ’ ಪತ್ರಿಕೆಯ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅವರಿಂದ ಈಗಿನ ಸಂಪಾದಕರಾದ ರವಿ ಕೋಟಿ, ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿಯವರು ಪತ್ರಿಕೆ ಮುಖಾಂತರ ಸಮಾಜದ ಭ್ರಷ್ಟಾಚಾರ, ಜಾತೀಯತೆ, ಅಸ್ಪೃಶ್ಯತೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ರೈತರ, ಯೋಧರ, ಬಡವರ, ದಲಿತರ, ಗಿರಿಜನರ, ಶೋಷಿತ ವರ್ಗದವರ ಪರವಾಗಿ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು. ಪತ್ರಿಕೆಯ ತಾಲ್ಲೂಕು ವರದಿಗಾರ ಮಂಜು ಕೋಟೆ, ಅನಿಲ್ ಅಂತರಸಂತೆ, ದಾಸೇಗೌಡ, ಹಂಪಾಪುರ ನಾಗೇಶ, ಮುಖಂಡರಾದ ಸತೀಶ್ ಗೌಡ, ನಾಗನಹಳ್ಳಿ ಪ್ರದೀಪ, ರಾಜು ವಿಶ್ವಕರ್ಮ, ಗಣೇಶಚಾರ್ ಪರಶಿವಮೂರ್ತಿ, ಶಿವಮಲ್ಲಪ್ಪ, ತಹಸಿಲ್ದಾರ್ ಶ್ರೀನಿವಾಸ್, ರುಕಿಯ ಬೇಗಂ, ಸಣ್ಣರಾಮಪ್ಪ, ಮಹೇಶ್, ತಾಪಂ ಇಒ ಧರಣೇಶ್, ಸುಷ್ಮಾ, ಸಿಪಿಐ ಶಬ್ಬೀರ್ ಹುಸೇನ್, ಈರೇಗೌಡ, ಚಿಕ್ಕವೀರ ನಾಯಕ, ನರಸಿಂಹಮೂರ್ತಿ, ಐಡಿಯಾ ವೆಂಕಟೇಶ್, ಮಿಲ್ ನಾಗರಾಜು, ಶಂಭುಲಿಂಗ ನಾಯಕ, ಇತರರು ಹಾಜರಿದ್ದರು.
ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ಮಂಡ್ಯ:ಪತ್ನಿಯನ್ನು ಕೊಲೆಗೈದಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ ೨ನೇ ಅಪರ ಜಿಲ್ಲಾ…
ಜಾಗೃತಿ ಉಳುಮೆಗೆ ಮಳೆಯಿಲ್ಲದೆ ಕುಲುಮೆಯಾಗಿದೆ ಇಳೆ ಹೆಚ್ಚಿದ ತಾಪಮಾನ ಬದಲಾವಣೆಯ ಹವಾಮಾನಕೆ ದೇಹದ ಆಂತರಿಕ ತಂಪು ವಿಫಲ ಅದಕೆ ಹೆಚ್ಚುತ್ತಿದೆ…
ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ಶಿಕ್ಷಣ ಇಲಾಖೆ ನಿಷೇಧ ಹೇರಿರುವುದು ಸ್ವಾಗತಾರ್ಹ. ಇಂದಿನ ಶೇ.೮೦ರಷ್ಟು ಸಿನಿಮಾ ಹಾಡುಗಳು ದ್ವಂದ್ವಾರ್ಥ ಹಾಗೂ…
ಮೈಸೂರು ರೈಲ್ವೆ ನಿಲ್ದಾಣದ ಟಿಕೆಟ್ ಕಾಯ್ದಿರಿಸುವ ವಿಭಾಗದಲ್ಲಿ ಫ್ಯಾನ್ ಹಾಗೂ ಎಸಿ ಯಾವುದೂ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಟಿಕೆಟ್ ಮುಂಗಡವಾಗಿ…
ಜೀವನ ನಿರ್ವಹಣೆಗಾಗಿ ಪ್ರತಿಯೊಬ್ಬರೂ ಉದ್ಯೋಗ ಮಾಡುವುದು ಅನಿವಾರ್ಯವಾಗಿದೆ. ಅಸಂಘಟಿತ ಕಾರ್ಮಿ ಕರು ಅದರಲ್ಲೂ ಮುಖ್ಯವಾಗಿ ಕಟ್ಟಡ ನಿರ್ಮಾಣ, ಎಲೆಕ್ಟ್ರಿಕ್ ಕೆಲಸ,…
ಚಿತ್ರಮಂದಿರಗಳಿಂದ ಪ್ರೇಕ್ಷಕರನ್ನು ಅಟ್ಟುತ್ತಿರುವ ಪ್ರದರ್ಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ತಮಿಳುನಾಡು ಸರ್ಕಾರಕ್ಕೆ ಕಳೆದ ವರ್ಷ ತಮಿಳುನಾಡಿನ ಹೈಕೋರ್ಟ್ ಆದೇಶ…