ಮೈಸೂರು : ದಸರಾ ಹಬ್ಬಕ್ಕೆ ಬೊಂಬೆ ಕೂರಿಸುವ ಪದ್ಧತಿ ಸುಮಾರು 18ನೇ ಶತಮಾನದಿಂದಲೂ ಜಾರಿಯಲ್ಲಿದೆ ಎನ್ನಲಾಗಿದೆ. ನವರಾತ್ರಿ ವೇಳೆಯಲಿ ವಿವಿಧ ಪರಿಕಲ್ಪನೆಗಳನ್ನು ಇಟ್ಟುಕೊಂಡು ಬೊಂಬೆ ಕೂರಿಸುವುದು ವಾಡಿಕೆ.
ಈ ರೀತಿಯಾಗಿ 25 ವರ್ಷಗಳಿಂದಲೂ ತಮ್ಮ ಮನೆಯಲ್ಲಿ ದಸರಾ ಬೊಂಬೆ ಕೂರಿಸುತ್ತಾ ಬಂದಿರುವ ಮೈಸೂರಿನ ಟೀಕೆ ಲೇಔಟ್ ನ ಸುಮಾ ಅವರು ಈ ಬಾರಿ ಸುಮಾರು 1500ಕ್ಕೂ ಹೆಚ್ಚು ಬೊಂಬೆಗಳನ್ನು ಕೂರಿಸಿದ್ದಾರೆ.
ನಮಗೆ ಮೈಸೂರಿನ ಮಹಾರಾಜರು ದೇವರ ಸಮಾನ, ಹೀಗಾಗಿ ಮಹಾರಾಜರು ಅಂಬಾರಿ ಏರುವ ವೇಳೆಗೆ, ಕುಶಾಲು ತೋಪು ಬರುವ ವೇಳೆಗೆ ಮಹಾರಾಜರ ಶಕ್ತಿ, ಶೌರ್ಯ ಪ್ರದರ್ಶನ ಮಾಡುವ ಬೊಂಬೆಗಳನ್ನು ಕೂರಿಸುತ್ತೇವೆ.
ಮಹಾರಾಜರು ಅಂಬಾರಿಯಿಂದ ಇಡಿಯುವ ವೇಳೆಗೆ ಬೊಂಬೆಗಳನ್ನು ಮಲಗಿಸಿ ಅವರಿಗೆ ಗೌರವ ಸೂಚಿಸುತ್ತೇವೆ ಎಂದು ತಮ್ಮ ಮನೆಯ ಬೊಂಬೆಗಳ ಬಗ್ಗೆ ಹೇಳುತ್ತಾರೆ ಸುಮಾ.
ಬೊಂಬೆಗಳನ್ನು ಸಾಮಾನ್ಯವಾಗಿ 9 7 5 ಹೀಗೆ ಹಲವು ಹಂತಗಳಲ್ಲಿ ಕೂರಿಸುತ್ತಾರೆ. ಸುಮಾ ಅವರು ಈ ಬಾರಿ 9 ಹಂತಗಳಲ್ಲಿ ಬೊಂಬೆ ಕೂರಿಸಿದ್ದಾರೆ.
ಗಮನ ಸೆಳೆಯುವ ಬೊಂಬೆಗಳು :
ಅರಮನೆ, ಪೌರಾಣಿಕ ಕಥೆಗಳನ್ನು ಬಿಂಬಿಸುವ ಬೊಂಬೆಗಳು, ನವರಾತ್ರಿ ಹಬ್ಬಕ್ಕೆ ಸಂಬಂಧಿಸಿದ ಬೊಂಬೆಗಳ ಪ್ರದರ್ಶನ ಇದ್ದೇ ಇರುತ್ತದೆ. ಇದರ ಜೊತೆಗೆ ಈ ಬಾರಿ ಕೊರೋನ ವಾರಿಯರ್ಸ್, ಕೋವಿಡ್ ಸಂಬಂಧಿತ ಬೊಂಬೆಗಳು, ಪುನೀತ್ ರಾಜಕುಮಾರ್, ಸ್ವಾತಂತ್ರ್ಯ ಅಮೃತ ಮಹೋತ್ಸವದ ಬೊಂಬೆಗಳು, ಪಟ್ಟದ ರಾಜಾರಾಣಿಯ ದರ್ಬಾರ್, ಈಶ್ವರ, ಕೃಷ್ಣ ದಂತಹ ಬೊಂಬೆಗಳು ಹೈಲೈಟ್ ಎನ್ನುತ್ತಾರೆ ಸುಮಾ.
ನಂಜನಗೂಡು: ಆಳೆತ್ತರ ಬೆಳೆದು ನಿಂತಿದ್ದ ಕಬ್ಬಿನ ಬೆಳೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಐದು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಿರುಗಾಳಿ ಸಹಿತ ಮಳೆಗೆ ಹಲವಾರು ರೈತರು ಬೆಳೆದಿದ್ದ 50ಕ್ಕೂ ಹೆಚ್ಚು…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಬುಧವಾರ ಸುರಿದ ಬಿರುಗಾಳಿ ಮಳೆಗೆ ಬಾಲೆ ಬೆಳೆ ನಾಶವಾಗಿರುವ ಘಟನೆ…
ಬೆಂಗಳೂರು: ಬೌರಿಂಗ್ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಮಂದಿ ಬಲಿಯಾಗಿದ್ದ ಪ್ರಕರಣದಲ್ಲಿ ಸಂಬಂಧಪಟ್ಟ ಎಂಜಿನಿಯರ್ ಅನ್ನು ಕೂಡಲೇ ಅಮಾನತು…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿ, ಇಬ್ಬರು…
ಬೆಂಗಳೂರು: ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿನ ರಾಜಕೀಯ ಗೊಂದಲಗಳನ್ನು ಆದಷ್ಟು…