ಎಡಿಟೋರಿಯಲ್

ಇದು ನಮ್ಮ ಬೊಂಬೆ ಮನೆ : ದಸರಾ ಮೆರುಗು ಹೆಚ್ಚಿಸುವ ಮನೆ ಮನೆ ಬೊಂಬೆ

ಮೈಸೂರು :  ದಸರಾ ಹಬ್ಬಕ್ಕೆ ಬೊಂಬೆ ಕೂರಿಸುವ ಪದ್ಧತಿ ಸುಮಾರು 18ನೇ ಶತಮಾನದಿಂದಲೂ ಜಾರಿಯಲ್ಲಿದೆ ಎನ್ನಲಾಗಿದೆ. ನವರಾತ್ರಿ ವೇಳೆಯಲಿ ವಿವಿಧ ಪರಿಕಲ್ಪನೆಗಳನ್ನು ಇಟ್ಟುಕೊಂಡು ಬೊಂಬೆ ಕೂರಿಸುವುದು ವಾಡಿಕೆ.

ಈ ರೀತಿಯಾಗಿ 25 ವರ್ಷಗಳಿಂದಲೂ ತಮ್ಮ ಮನೆಯಲ್ಲಿ ದಸರಾ ಬೊಂಬೆ ಕೂರಿಸುತ್ತಾ ಬಂದಿರುವ ಮೈಸೂರಿನ ಟೀಕೆ ಲೇಔಟ್ ನ ಸುಮಾ ಅವರು ಈ ಬಾರಿ ಸುಮಾರು 1500ಕ್ಕೂ ಹೆಚ್ಚು ಬೊಂಬೆಗಳನ್ನು ಕೂರಿಸಿದ್ದಾರೆ.

ನಮಗೆ ಮೈಸೂರಿನ ಮಹಾರಾಜರು ದೇವರ ಸಮಾನ, ಹೀಗಾಗಿ ಮಹಾರಾಜರು ಅಂಬಾರಿ ಏರುವ ವೇಳೆಗೆ, ಕುಶಾಲು ತೋಪು ಬರುವ ವೇಳೆಗೆ ಮಹಾರಾಜರ ಶಕ್ತಿ, ಶೌರ್ಯ ಪ್ರದರ್ಶನ ಮಾಡುವ ಬೊಂಬೆಗಳನ್ನು ಕೂರಿಸುತ್ತೇವೆ.

ಮಹಾರಾಜರು ಅಂಬಾರಿಯಿಂದ ಇಡಿಯುವ ವೇಳೆಗೆ ಬೊಂಬೆಗಳನ್ನು ಮಲಗಿಸಿ ಅವರಿಗೆ ಗೌರವ ಸೂಚಿಸುತ್ತೇವೆ ಎಂದು ತಮ್ಮ ಮನೆಯ ಬೊಂಬೆಗಳ ಬಗ್ಗೆ ಹೇಳುತ್ತಾರೆ ಸುಮಾ.

 

ಬೊಂಬೆಗಳನ್ನು ಸಾಮಾನ್ಯವಾಗಿ 9 7 5 ಹೀಗೆ ಹಲವು ಹಂತಗಳಲ್ಲಿ ಕೂರಿಸುತ್ತಾರೆ. ಸುಮಾ ಅವರು ಈ ಬಾರಿ 9 ಹಂತಗಳಲ್ಲಿ ಬೊಂಬೆ ಕೂರಿಸಿದ್ದಾರೆ.

ಗಮನ ಸೆಳೆಯುವ ಬೊಂಬೆಗಳು : 

ಅರಮನೆ, ಪೌರಾಣಿಕ ಕಥೆಗಳನ್ನು ಬಿಂಬಿಸುವ ಬೊಂಬೆಗಳು, ನವರಾತ್ರಿ ಹಬ್ಬಕ್ಕೆ ಸಂಬಂಧಿಸಿದ ಬೊಂಬೆಗಳ ಪ್ರದರ್ಶನ ಇದ್ದೇ ಇರುತ್ತದೆ. ಇದರ ಜೊತೆಗೆ ಈ ಬಾರಿ ಕೊರೋನ ವಾರಿಯರ್ಸ್, ಕೋವಿಡ್ ಸಂಬಂಧಿತ ಬೊಂಬೆಗಳು, ಪುನೀತ್ ರಾಜಕುಮಾರ್, ಸ್ವಾತಂತ್ರ್ಯ ಅಮೃತ ಮಹೋತ್ಸವದ ಬೊಂಬೆಗಳು, ಪಟ್ಟದ ರಾಜಾರಾಣಿಯ ದರ್ಬಾರ್, ಈಶ್ವರ, ಕೃಷ್ಣ ದಂತಹ ಬೊಂಬೆಗಳು ಹೈಲೈಟ್ ಎನ್ನುತ್ತಾರೆ ಸುಮಾ.

 

andolanait

Recent Posts

ಯಾಲಕ್ಕೂರು, ಸುತ್ತಲಿನ ಗ್ರಾಮಗಳಿಗೆ ಬಂತು ಸಾರಿಗೆ ಬಸ್ಸು!

ಚಾಮರಾಜನಗರ: ತಾಲ್ಲೂಕಿನ ಯಾಲಕ್ಕೂರು ಹಾಗೂ ಸುತ್ತಮುತ್ತಲಿನ ಆರು ಗ್ರಾಮಗಳಿಗೆ ಸಾರಿಗೆ ಬಸ್ಸೇ ಇಲ್ಲ ಎಂದು ‘ಆಂದೋಲನ ಪತ್ರಿಕೆ’ಯಲ್ಲಿ ಈಚೆಗೆ ಪ್ರಕಟವಾಗಿದ್ದ…

2 hours ago

ಓದುಗರ ಪತ್ರ: ಬಿಸಿಲಲ್ಲೋ ಅಣ್ಣಾ..!

ಬಿಸಿಲಲ್ಲೋ ಅಣ್ಣ ಇದು ಬರಿ ಬಿಸಿಲಲ್ಲೋ ! ಯಾರು ಹೆಸರಿಟ್ಟರೋ? ಇದಕ್ಕೆ ‘ನಿಲ್ಲೋ ಎಲ್ಲೋ’ ನಿಂತಲ್ಲಿ ನಿಲ್ಲಲು, ಕುಂತಲ್ಲಿ ಕೂರಲು…

2 hours ago

ಓದುಗರ ಪತ್ರ: ಸರ್ಕಾರಿ ಶಾಲೆಗಳ ಅಭಿವೃದ್ಧಿ ಸ್ವಾಗತಾರ್ಹ

ರಾಜ್ಯದ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳ ಬಲವರ್ಧನೆಗೆ ಸರ್ಕಾರ ಮುಂದಾಗಿರುವುದು ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಸಂಗತಿ. ಮೂಲಸೌಕರ್ಯದ…

2 hours ago

ಓದುಗರ ಪತ್ರ: ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವ ಇಂಟರ್ನಲ್ಸ್ ಅಂಕಗಳು

ಮಕ್ಕಳು ಬೋರ್ಡ್ ಪರೀಕ್ಷೆಗಳಲ್ಲಿ ಅಂಕಗಳನ್ನು ತೆಗೆಯುವ ಅರ್ಹತೆ ಇದ್ದರೂ, ಇಂಟರ್ನಲ್ಸ್ ಮಾರ್ಕ್ಸ್(ಆಂತರಿಕ ಅಂಕ) ಎಂಬ ಭೂತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ…

2 hours ago

ನಾವಿಕನೇ ಇಲ್ಲದ ಕೊಡಗು ಪ್ರವಾಸೋದ್ಯಮ ಇಲಾಖೆ..!

ಪುನೀತ್ ಮಡಿಕೇರಿ ಇಲಾಖೆಯಲ್ಲಿ ಸಿಬ್ಬಂದಿ ನೇಮಕಕ್ಕೆ ಪ್ರವಾಸೋದ್ಯಮಿಗಳ ಆಗ್ರಹ  ಮಡಿಕೇರಿ: ಕೊಡಗಿನಲ್ಲಿ ಪ್ರವಾಸೋದ್ಯಮ ಇಲಾಖೆಯನ್ನು ಮುನ್ನಡೆಸಲು ನಾವಿಕನೇ ಇಲ್ಲದಾಗಿದ್ದು, ಕಳೆದ ಒಂದು ವರ್ಷದಿಂದ…

2 hours ago