ಮೈಸೂರು : ದಸರಾ ಹಬ್ಬಕ್ಕೆ ಬೊಂಬೆ ಕೂರಿಸುವ ಪದ್ಧತಿ ಸುಮಾರು 18ನೇ ಶತಮಾನದಿಂದಲೂ ಜಾರಿಯಲ್ಲಿದೆ ಎನ್ನಲಾಗಿದೆ. ನವರಾತ್ರಿ ವೇಳೆಯಲಿ ವಿವಿಧ ಪರಿಕಲ್ಪನೆಗಳನ್ನು ಇಟ್ಟುಕೊಂಡು ಬೊಂಬೆ ಕೂರಿಸುವುದು ವಾಡಿಕೆ.
ಈ ರೀತಿಯಾಗಿ 25 ವರ್ಷಗಳಿಂದಲೂ ತಮ್ಮ ಮನೆಯಲ್ಲಿ ದಸರಾ ಬೊಂಬೆ ಕೂರಿಸುತ್ತಾ ಬಂದಿರುವ ಮೈಸೂರಿನ ಟೀಕೆ ಲೇಔಟ್ ನ ಸುಮಾ ಅವರು ಈ ಬಾರಿ ಸುಮಾರು 1500ಕ್ಕೂ ಹೆಚ್ಚು ಬೊಂಬೆಗಳನ್ನು ಕೂರಿಸಿದ್ದಾರೆ.
ನಮಗೆ ಮೈಸೂರಿನ ಮಹಾರಾಜರು ದೇವರ ಸಮಾನ, ಹೀಗಾಗಿ ಮಹಾರಾಜರು ಅಂಬಾರಿ ಏರುವ ವೇಳೆಗೆ, ಕುಶಾಲು ತೋಪು ಬರುವ ವೇಳೆಗೆ ಮಹಾರಾಜರ ಶಕ್ತಿ, ಶೌರ್ಯ ಪ್ರದರ್ಶನ ಮಾಡುವ ಬೊಂಬೆಗಳನ್ನು ಕೂರಿಸುತ್ತೇವೆ.
ಮಹಾರಾಜರು ಅಂಬಾರಿಯಿಂದ ಇಡಿಯುವ ವೇಳೆಗೆ ಬೊಂಬೆಗಳನ್ನು ಮಲಗಿಸಿ ಅವರಿಗೆ ಗೌರವ ಸೂಚಿಸುತ್ತೇವೆ ಎಂದು ತಮ್ಮ ಮನೆಯ ಬೊಂಬೆಗಳ ಬಗ್ಗೆ ಹೇಳುತ್ತಾರೆ ಸುಮಾ.
ಬೊಂಬೆಗಳನ್ನು ಸಾಮಾನ್ಯವಾಗಿ 9 7 5 ಹೀಗೆ ಹಲವು ಹಂತಗಳಲ್ಲಿ ಕೂರಿಸುತ್ತಾರೆ. ಸುಮಾ ಅವರು ಈ ಬಾರಿ 9 ಹಂತಗಳಲ್ಲಿ ಬೊಂಬೆ ಕೂರಿಸಿದ್ದಾರೆ.
ಗಮನ ಸೆಳೆಯುವ ಬೊಂಬೆಗಳು :
ಅರಮನೆ, ಪೌರಾಣಿಕ ಕಥೆಗಳನ್ನು ಬಿಂಬಿಸುವ ಬೊಂಬೆಗಳು, ನವರಾತ್ರಿ ಹಬ್ಬಕ್ಕೆ ಸಂಬಂಧಿಸಿದ ಬೊಂಬೆಗಳ ಪ್ರದರ್ಶನ ಇದ್ದೇ ಇರುತ್ತದೆ. ಇದರ ಜೊತೆಗೆ ಈ ಬಾರಿ ಕೊರೋನ ವಾರಿಯರ್ಸ್, ಕೋವಿಡ್ ಸಂಬಂಧಿತ ಬೊಂಬೆಗಳು, ಪುನೀತ್ ರಾಜಕುಮಾರ್, ಸ್ವಾತಂತ್ರ್ಯ ಅಮೃತ ಮಹೋತ್ಸವದ ಬೊಂಬೆಗಳು, ಪಟ್ಟದ ರಾಜಾರಾಣಿಯ ದರ್ಬಾರ್, ಈಶ್ವರ, ಕೃಷ್ಣ ದಂತಹ ಬೊಂಬೆಗಳು ಹೈಲೈಟ್ ಎನ್ನುತ್ತಾರೆ ಸುಮಾ.
ಶತಮಾನದ ಹಿಂದೆ ಮೈಸೂರು ಸಂಸ್ಥಾನದ ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ಅವರು ಮೈಸೂರಿನ ಹೆಣ್ಣುಮಕ್ಕಳಿಗಾಗಿ ಸ್ಥಾಪಿಸಿದ್ದ ‘ಮಹಾರಾಣಿಯವರ ಹೊಸ ಮಾದರಿ (ಎನ್ಟಿಎಂ) ಶಾಲೆ’…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ತೋಳ ಬಂತು ತೋಳ ಕತೆಯನ್ನು ನೆನಪಿಸುವಂತಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕಾಂಗ್ರೆಸ್…
ನವೀನ್ ಡಿಸೋಜ ಮನೆಮನೆಗಳಲ್ಲಿ ಘಮಘಮಿಸಲಿದೆ ಮದ್ದುಸೊಪ್ಪಿನ ಖಾದ್ಯ; ವಿಭಿನ್ನ ಹಬ್ಬದಾಚರಣೆಗೆ ಜಿಲ್ಲೆಯಲ್ಲಿ ಸಿದ್ಧತೆ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ (ಆ.೩)ಕಕ್ಕಡ…
ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿನ ಶೌಚಾಲಯದಲ್ಲಿ ಅಶುಚಿತ್ವ ತಾಂಡವ ಮೈಸೂರು: ವಾಯುವಿಹಾರಿಗಳು ಹಾಗೂ ಕ್ರೀಡಾಸಕ್ತರ ನೆಚ್ಚಿನ ತಾಣವಾಗಿರುವ ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ…
ಕೆ.ಬಿ.ರಮೇಶನಾಯಕ ಪ್ರಗತಿಯಲ್ಲಿ ಹಿಂದೆ ಬಿದ್ದಿರುವ ಗ್ರಾಪಂಗಳನ್ನು ಹುರಿದುಂಬಿಸಲು ಜಿಪಂ ಹೊಸ ಯೋಜನೆ ಪ್ರಶಸ್ತಿಗೆ ನಾಲ್ಕು ಕಾರ್ಯಸೂಚಿಯಲ್ಲಿ ಪ್ರಗತಿ ಸಾಧಿಸಿದ ಗ್ರಾಪಂಗಳ…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…