ಎಡಿಟೋರಿಯಲ್

ಇದು ನಮ್ಮ ಬೊಂಬೆ ಮನೆ : ದಸರಾ ಮೆರುಗು ಹೆಚ್ಚಿಸುವ ಮನೆ ಮನೆ ಬೊಂಬೆ

ಮೈಸೂರು :  ದಸರಾ ಹಬ್ಬಕ್ಕೆ ಬೊಂಬೆ ಕೂರಿಸುವ ಪದ್ಧತಿ ಸುಮಾರು 18ನೇ ಶತಮಾನದಿಂದಲೂ ಜಾರಿಯಲ್ಲಿದೆ ಎನ್ನಲಾಗಿದೆ. ನವರಾತ್ರಿ ವೇಳೆಯಲಿ ವಿವಿಧ ಪರಿಕಲ್ಪನೆಗಳನ್ನು ಇಟ್ಟುಕೊಂಡು ಬೊಂಬೆ ಕೂರಿಸುವುದು ವಾಡಿಕೆ.

ಈ ರೀತಿಯಾಗಿ 25 ವರ್ಷಗಳಿಂದಲೂ ತಮ್ಮ ಮನೆಯಲ್ಲಿ ದಸರಾ ಬೊಂಬೆ ಕೂರಿಸುತ್ತಾ ಬಂದಿರುವ ಮೈಸೂರಿನ ಟೀಕೆ ಲೇಔಟ್ ನ ಸುಮಾ ಅವರು ಈ ಬಾರಿ ಸುಮಾರು 1500ಕ್ಕೂ ಹೆಚ್ಚು ಬೊಂಬೆಗಳನ್ನು ಕೂರಿಸಿದ್ದಾರೆ.

ನಮಗೆ ಮೈಸೂರಿನ ಮಹಾರಾಜರು ದೇವರ ಸಮಾನ, ಹೀಗಾಗಿ ಮಹಾರಾಜರು ಅಂಬಾರಿ ಏರುವ ವೇಳೆಗೆ, ಕುಶಾಲು ತೋಪು ಬರುವ ವೇಳೆಗೆ ಮಹಾರಾಜರ ಶಕ್ತಿ, ಶೌರ್ಯ ಪ್ರದರ್ಶನ ಮಾಡುವ ಬೊಂಬೆಗಳನ್ನು ಕೂರಿಸುತ್ತೇವೆ.

ಮಹಾರಾಜರು ಅಂಬಾರಿಯಿಂದ ಇಡಿಯುವ ವೇಳೆಗೆ ಬೊಂಬೆಗಳನ್ನು ಮಲಗಿಸಿ ಅವರಿಗೆ ಗೌರವ ಸೂಚಿಸುತ್ತೇವೆ ಎಂದು ತಮ್ಮ ಮನೆಯ ಬೊಂಬೆಗಳ ಬಗ್ಗೆ ಹೇಳುತ್ತಾರೆ ಸುಮಾ.

 

ಬೊಂಬೆಗಳನ್ನು ಸಾಮಾನ್ಯವಾಗಿ 9 7 5 ಹೀಗೆ ಹಲವು ಹಂತಗಳಲ್ಲಿ ಕೂರಿಸುತ್ತಾರೆ. ಸುಮಾ ಅವರು ಈ ಬಾರಿ 9 ಹಂತಗಳಲ್ಲಿ ಬೊಂಬೆ ಕೂರಿಸಿದ್ದಾರೆ.

ಗಮನ ಸೆಳೆಯುವ ಬೊಂಬೆಗಳು : 

ಅರಮನೆ, ಪೌರಾಣಿಕ ಕಥೆಗಳನ್ನು ಬಿಂಬಿಸುವ ಬೊಂಬೆಗಳು, ನವರಾತ್ರಿ ಹಬ್ಬಕ್ಕೆ ಸಂಬಂಧಿಸಿದ ಬೊಂಬೆಗಳ ಪ್ರದರ್ಶನ ಇದ್ದೇ ಇರುತ್ತದೆ. ಇದರ ಜೊತೆಗೆ ಈ ಬಾರಿ ಕೊರೋನ ವಾರಿಯರ್ಸ್, ಕೋವಿಡ್ ಸಂಬಂಧಿತ ಬೊಂಬೆಗಳು, ಪುನೀತ್ ರಾಜಕುಮಾರ್, ಸ್ವಾತಂತ್ರ್ಯ ಅಮೃತ ಮಹೋತ್ಸವದ ಬೊಂಬೆಗಳು, ಪಟ್ಟದ ರಾಜಾರಾಣಿಯ ದರ್ಬಾರ್, ಈಶ್ವರ, ಕೃಷ್ಣ ದಂತಹ ಬೊಂಬೆಗಳು ಹೈಲೈಟ್ ಎನ್ನುತ್ತಾರೆ ಸುಮಾ.

 

andolanait

Recent Posts

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

19 mins ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

51 mins ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

1 hour ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

1 hour ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

1 hour ago

ಮಹಾಪಂಚ್ ಕಾರ್ಟೂನ್‌

ಮಹಾಪಂಚ್ ಕಾರ್ಟೂನ್‌ | ಸೆಪ್ಟಂಬರ್‌ 18 ಶುಕ್ರವಾರ

2 hours ago