ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 19 ಮಂಗಳವಾರ 2022

ಜನಾಕ್ರೋಶಕ್ಕೆ ಮಣಿದ ಸರ್ಕಾರ

ಸರ್ಕಾರಿ ಕಚೇರಿಗಳಲ್ಲಿ ಫೋಟೋ ತೆಗೆಯುವುದು ಹಾಗೂ ವಿಡಿಯೋ ಚಿತ್ರೀಕರಣ ನಿರ್ಬಂಧಿಸಿ ಹೊರಡಿಸಿದ್ದ ಆದೇಶವನ್ನು ವಿರೋಧ ಪಕ್ಷಗಳ ಮತ್ತು ಸಂಘ-ಸಂಸ್ಥೆಗಳ ಟೀಕೆ ಹಾಗೂ ಜನಕ್ರೋಶಕ್ಕೆ ಮಣಿದು ಸರ್ಕಾರ ಮಧ್ಯರಾತ್ರಿ ಹಿಂಪಡೆದಿದೆ. ಭ್ರಷ್ಟಾಚಾರ ತಾಂಡವಾಡುತ್ತಿರುವ ಸಂದರ್ಭದಲ್ಲಿ ಈ ಆದೇಶವು ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಸರ್ಕಾರವೇ ಕುಮಕ್ಕು ನೀಡುವಂತಿತ್ತು ಎಂಬ ಸಂಶಯ ಎಲ್ಲರಲ್ಲಿ ಮನೆ ಮಾಡಿತ್ತು. ಇದನ್ನರಿತ್ತ ಮುಖ್ಯಮಂತ್ರಿಗಳು ಆದೇಶ ವಾಪಾಸ್ ಪಡೆದಿರುವುದು ಉತ್ತಮ ನಿರ್ಧಾರ.

-ಸಿದ್ದರಾಜು ಕೆ.ಎಸ್. ಮೈಸೂರು.


ರಾಜಕಾರಣಿಗಳು ಪಾಠ ಕಲಿಯಲಿ

ವಿರೋಧ ಪಕ್ಷದ ನಾಯಕ ರಾದ ಶ್ರೀ ಸಿದ್ದರಾಮಯ್ಯ ನವರು ತಮ್ಮ ವಿಧಾನಸಭಾ ಕ್ಷೇತ್ರದ ಕೆರೂರಿನಲ್ಲಿ ನಡೆದ ಒಂದು ಗಲಭೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡುತ್ತಿರುವವರ ಯೋಗಕ್ಷೇಮ ವಿಚಾರಿಸಿ, ಚಿಕಿತ್ಸೆಗಾಗಿ ಧನ ಸಹಾಯ ಮಾಡಿದ್ದನ್ನು, ಗಾಯಾಳುಗಳು ಮತ್ತು ಅವರ ಕುಟುಂಬದ ವರು ನಿರಾಕರಿಸಿದ ಘಟನೆ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ರಾಜಕೀಯ ನೇತಾರರು ತಮ್ಮ ಕ್ಷೇತ್ರದಲ್ಲಿ ಯಾವುದಾದರು ಗಲಾಟೆಯಾಗಿ ಹೊಡೆದಾಟಗಳಾದರೆ, ಆ ಗಲಾಟೆಯ ಮೂಲ ಹುಡುಕಿ ಅದನ್ನು ಶಾಶ್ವತವಾಗಿ ನಿವಾರಣೆ ಮಾಡುವುದನ್ನು ಬಿಟ್ಟು, ಒಂದಿಷ್ಟು ಹಣವನ್ನು ಅಂಥಹವರ ಕೈಯಲ್ಲಿಟ್ಟು ಮಾಧ್ಯಮಗಳಲ್ಲಿ ಪ್ರಚಾರ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಕೆರೂರಿನಲ್ಲಿ ಸಿದ್ದರಾಮಯ್ಯ ನವರಿಗೆ ಆದ ಮುಖಭಂಗದಿಂದಲಾದರೂ ರಾಜಕೀಯ ನೇತಾರರು ಪಾಠ ಕಲಿಯಬೇಕು. ಎಲ್ಲವನ್ನೂ ದುಡ್ಡಿನಿಂದ ಅಳೆಯದೆ ಮಾನವೀಯವಾಗಿ ವರ್ತಿಸುವುದನ್ನು ಕಲಿಯಬೇಕು ಎಂಬುದಕ್ಕೆ ಕೆರೂರು ಘಟನೆ ನಾಂದಿ ಹಾಡಿದೆ ಎಂದರೆ ತಪ್ಪಾಗಲಾರದು.

-ಬ್ಯಾಂಕ್ ಶಿವಕುಮಾರ್, ಜೆ.ಪಿ.ನಗರ,ಮೈಸೂರು.


ಸಮಿತಿ ಏಕೆ? ಸಚಿವರೇ ಸಾಕು!

ಸರಕಾರವೇ ನೇಮಕ ಮಾಡಿದ ತಜ್ಞರ ಸಮಿತಿ ಶ್ರಮವಹಿಸಿ ಸಿದ್ಧಮಾಡಿ ಕೊಟ್ಟ ವರದಿಯನ್ನು ಜನಪ್ರತಿನಿಧಿಗಳು ರದ್ದುಮಾಡಿಸುತ್ತಾರೆ. ತಜ್ಞರ ವರದಿಯ ಮೌಲ್ಯ ಮಾಪನ ಮಾಡುವುದು ತಜ್ಞರಲ್ಲ, ರಾಜಕಾರಣಿಗಳು! ಖ್ಯಾತ ಪರಿಸರ ತಜ್ಞ ಕಸ್ತೂರಿ ರಂಗನ್ ಸಮಿತಿ ನೀಡಿದ ಶಿಫಾರಸ್ಸು ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳ ಉಳಿವಿಗೂ, ಜೀವ ಪರಿಸರ ಹಾಗೂ ಮಾನವರ ಉಳಿವಿಗೂ ತೀರಾ ಅಗತ್ಯವಿದೆ. ಆದರೆ ಅದು ರಾಜಕಾರಣಿಗಳಿಗೆ ಬೇಡ. ತಜ್ಞರ ವರದಿ ಒಪ್ಪಿ ಪರಿಸರ ಉಳಿದರೆ ಮಲೆನಾಡಿನ ಜನರಿಗೆ ತೊಂದರೆಯಾಗುತ್ತದೆ ಎಂಬ ನೆಪ ಒಡ್ಡಿ ಗೃಹ ಸಚಿವರು ರದ್ದು ಮಾಡಿಸಲು ಮುಂದಾಗಿದ್ದಾರೆಂದು ವರದಿಯಾಗಿದೆ. ವಿಜ್ಞಾನಿಗಳಿಗೆ ಅವಮಾನವಾದರೂ ಸರಿ ಸಚಿವರನ್ನು ಸಿಎಂ ಬಿಡುವಂತಿಲ್ಲ. ಬಹುಶ: ಸರಕಾರ ಉಳಿವುದೇ ಮುಖ್ಯವಿರಬಹುದು. ಹೀಗಾಗುವುದಾದರೆ ಇನ್ನು ಮುಂದೆ ಪರಿಣಿತರ ಅಭಿಪ್ರಾಯಗಳಿಗೆ ಬದಲು ಆಯಾ ಶಾಸಕರು ಸಚಿವರನ್ನೇ ಕೇಳಿ ಬೇಕಾದದ್ದು ಮಾಡಿಕೊಳ್ಳಬಹುದು. ಪರಿಸರ ಹಾಳಾದರೂ ತಜ್ಞರ ಸಮಿತಿಯ ಖರ್ಚಾದರೂ ಬೊಕ್ಕಸಕ್ಕೆ ಉಳಿದಂತಾಗುತ್ತದೆಯಲ್ಲವೇ.

ಡಾ. ಟಿ. ಗೋವಿಂದರಾಜು, ಬೆಂಗಳೂರು .


ತೆರಿಗೆ ಹೇರಿಕೆ ಖಂಡನೀಯ

ಕೇಂದ್ರ ಸರ್ಕಾರ ಆಹಾರ ಪದಾರ್ಥಗಳು ಹಾಗೂ ಮೊಸರು ಮಜ್ಜಿಗೆಗಳ ಮೇಲೆ ತೆರಿಗೆ ಹೇರಿರುವುದು ಖಂಡನೀಯ. ದೇಶದ ಜನರು ಮೊದಲೇ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ. ಪ್ಯಾಕ್ ಮಾಡಲಾದ ಬ್ರಾಂಡೆಂಡ್ ಮತ್ತು ಬ್ರಾಂಡೆಡ್ ಅಲ್ಲ ಆಹಾರ ಪದಾರ್ಥಗಳ ಮೇಲೆ ಶೇ.೫ರಷ್ಟು ತೆರಿಗೆ ಹೇರಿರುವುದು ಸಮರ್ಥನೀಯವಲ್ಲ.

-ನಿತಿನ್ ಹೆಚ್ ಸಿ, ಮಹಾರಾಜ ಕಾಲೇಜು, ಮೈಸೂರು.

andolanait

Recent Posts

ಎಕ್ಸ್ ಬಿಟ್ಟು ಇನ್‌ಸ್ಟಾ ಹಿಡಿದ ರಾಜಕಾರಣ : ಮೋದಿಗೆ ಜೆನ್-ಝೀ ಕಾಟ

ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…

6 hours ago

ಓದುಗರ ಪತ್ರ: ಕಠಿಣ ಕ್ರಮ ಅಗತ್ಯ

ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್‌ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…

14 hours ago

ಓದುಗರ ಪತ್ರ: ಕಸ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಅಗತ್ಯ

ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…

14 hours ago

ಕೇಂದ್ರ ಸರ್ಕಾರದ ಮೇಲೆ ಜೆನ್ ಝೀ ಚಳುವಳಿಯ ತೂಗುಗತ್ತಿ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…

14 hours ago

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

17 hours ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

17 hours ago