ಎಡಿಟೋರಿಯಲ್

ತಾನು ಕೂಲಿ ಮಾಡುತ್ತಿದ್ದ ಹೊಲದಲ್ಲೇ ಶಾಲೆ ಕಟ್ಟಿದ ಹೇರ್ ಟ್ರಾನ್ಸ್‌ಪ್ಲಾಂಟ್ ಸರ್ಜನ್

 

  ಳೆದ ತಿಂಗಳು ಒಡಿಶಾದ ಭುವನೇಶ್ವರದಿಂದ 160 ಕಿ.ಮೀದೂರದಲ್ಲಿರುವ ಬೆರುನಾಪಾಡಿ ಎಂಬ ಕುಗ್ರಾಮವೊಂದರಲ್ಲಿ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ‘ಉತ್ಕಲ್ ಗೌರವ್ ಇಂಟರ್‌ನ್ಯಾಷನಲ್ ಸ್ಕೂಲ್’ ಎಂಬ ಒಂದು ಶಿಕ್ಷಣ ಸಂಸ್ಥೆಯನ್ನು ಉದ್ಘಾಟಿಸಿದರುಗ್ರಾಮೀಣ ಮಕ್ಕಳಿಗೆ ಉಚಿತವಾಗಿ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ಹತ್ತು ಕೋಟಿ ರೂಪಾಯಿ ಖರ್ಚಿನಲ್ಲಿ ಇದನ್ನು ನಿರ್ಮಿಸಿದವರು 43 ವರ್ಷ ಪ್ರಾಯದ ಡಾ.ಪ್ರದೀಪ್ ಸೇಥಿ (ಕಪ್ಪು ಬಟ್ಟೆಯಲ್ಲಿರುವವರುಎಂಬ ಅಂತಾರಾಷ್ಟ್ರೀಯ ಖ್ಯಾತಿಯ ಹೇರ್ ಟಾನ್ಸ್ ಪ್ಲಾಂಟ್ ಸರ್ಜನ್ಈ ಸಂದರ್ಭದ ವಿಶೇಷವೇನೆಂದರೆ, ‘ಉತ್ಕಲ್ ಗೌರವ್ ಇಂಟರ್‌ನ್ಯಾಷನಲ್ ಸ್ಕೂಲ್’ ಸಂಸ್ಥೆ ತಲೆ ಎತ್ತಿ ನಿಂತಿರುವ ಜಾಗ 2020ರ ತನಕ ಒಂದು ಹೊಲವಾಗಿತ್ತು ಮತ್ತು ಪ್ರದೀಪ್ ಸೇಥಿ ಆ ಕೃಷಿ ಜಮೀನಿನಲ್ಲಿ ಒಬ್ಬ ಕೂಲಿಯಾಳಾಗಿ ದುಡಿಯುತ್ತಿದ್ದರುಅಂದು ಕೃಷಿಕೂಲಿಯಾಗಿದ್ದ ಪ್ರದೀಪ್ ಸೇಥಿ ಇಂದು ಒಬ್ಬ ಅಂತಾರಾಷ್ಟ್ರೀಯ ಹೇರ್ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಆಗಿ ಬೆಳೆದುದು ಒಂದು ಸಿನಿಮೀಯ ಕಥೆ.

ಒಂದು ಬಡ ಕುಟುಂಬದಲ್ಲಿ ಹುಟ್ಟಿದ ಪ್ರದೀಪ್ ಸೇಥಿ ಸಂಸಾರ ನಡೆಸಲು ತನ್ನ ಹೆತ್ತವರಿಗೆ ನೆರವಾಗಲು ದಿನಗೂಲಿಯಾಗಿ ಹೊಲಗಳಲ್ಲಿ ದುಡಿಯುತ್ತಿದ್ದರುಆದರೆಹಾಗೆ ದುಡಿಯುತ್ತಿದ್ದಾಗ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಂಡುನವೋದಯ ಶಾಲೆಯಲ್ಲಿ ಪ್ರವೇಶ ಪಡೆದರುಅಲ್ಲಿ ಸೀನಿಯರ್ ಸೆಕೆಂಡರಿ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕ ಪಡೆದುಒಡಿಶಾದ ಸಂಬಲಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದರುಮುಂದೆದೆಹಲಿಯಲ್ಲಿ ‘ಆಲ್ ಇಂಡಿಯಾ ಮೆಡಿಕಲ್ ಸೈನ್ಸ್’ನಲ್ಲಿ ಡೆರ್ಮಟಾಲಾಜಿ (ಚರ್ಮಶಾಸ್ತ್ರ)ಯಲ್ಲಿ ಪದವಿ ಪಡೆದರುಬಡತನದಲ್ಲೂ ಪ್ರದೀಪ್ ಸೇಥಿ ಶೈಕ್ಷಣಿಕವಾಗಿ ಉನ್ನತ ವ್ಯಾಸಂಗ ಮಾಡಲು ಸಾಧ್ಯವಾದುದು ವಿವಿಧ ಟ್ರಸ್ಟ್‌ಗಳು ನೀಡಿದ ಸ್ಕಾಲರ್‌ಶಿಪ್ ಹಾಗೂ ದಾನಿಗಳು ನೀಡಿದ ಆರ್ಥಿಕ ಸಹಾಯದಿಂದ.

ಪ್ರದೀಪ್ ಸೇಥಿ ಶಿಕ್ಷಣ ಮುಗಿಸಿದ ನಂತರ ಕೆಲ ಸಮಯದವರೆಗೂ ಉದ್ಯೋಗ ಸಿಗದ ಕಾರಣ, 2008ರಲ್ಲಿ ಹೃಷಿಕೇಶಕ್ಕೆ ಬಂದು ಅಲ್ಲಿ ತನ್ನ ಕ್ಲಿನಿಕ್ ತೆರೆದು ಪ್ರಾಕ್ಟಿಸ್ ಶುರು ಮಾಡಿದರುಅದು ಅವರಿಗೆ ವೃತ್ತಿಯಲ್ಲಿ ಬಹು ದೊಡ್ಡ ಅವಕಾಶ ಸಿಗಲು ಕಾರಣವಾಯಿತಲ್ಲದೆಅವರ ಬದುಕಿನ ಉದ್ದೇಶವೇ ಬದಲಾಗುವಂತೆ ಮಾಡಿತುಅಲ್ಲಿ ಕ್ಲಿನಿಕ್ ತೆರೆದ ಕೆಲವೇ ವರ್ಷಗಳಲ್ಲಿ ಅವರು ತಮ್ಮ ಪತ್ನಿಯ ಸಹಭಾಗಿತ್ವದಲ್ಲಿ ‘ಯೂಜಿನಿಕ್ಸ್ ಹೇರ್ ಸೈನ್ಸ್’ ಎಂಬ ಹೆಸರಿನ ಹೇರ್ ಟ್ರಾನ್ಸ್‌ಪ್ಲಾಂಟ್ ಚೈನನ್ನು ಶುರು ಮಾಡಿದರುಇಂದು ದೇಶದಾದ್ಯಂತ ಏಳು ಶಾಖೆಗಳನ್ನು ಹೊಂದಿರುವ ಯೂಜಿನಿಕ್ಸ್ ಹೇರ್ ಸೈನ್ಸ್ ಸಾವಿರಾರು ಜನರಿಗೆ ಹೇರ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆ ಕೊಡಿಸಿದೆಅವರು ಚಿಕಿತ್ಸೆ ಕೊಟ್ಟ ಗ್ರಾಹಕರಲ್ಲಿ ಜನಪ್ರಿಯ ಸಿನಿಮಾ ತಾರೆಯರುಸಂಗೀತಗಾರರುಕ್ರೀಡಾಪಟುಗಳುಉದ್ಯಮಿಗಳು ಹಾಗೂ ಇತರ ಕ್ಷೇತ್ರಗಳ ವಿಐಪಿಗಳು ಸೇರಿದ್ದಾರೆ.

ಡಾ.ಪ್ರದೀಪ್ ಸೇಥಿಯವರ ವೃತ್ತಿ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಹೃಷಿಕೇಶವು ಅವರೊಳಗೆ ಸುಪ್ತವಾಗಿದ್ದ ಆಧ್ಯಾತ್ಮಿಕ ಚೇತನವನ್ನು ಕ್ರಿಯಾಶೀಲಗೊಳಿಸುವಲ್ಲೂ ಪ್ರಧಾನ ಪಾತ್ರ ವಹಿಸಿತುಅದರಲ್ಲೂಸ್ವಾಮಿ ಪರಮಹಂಸ ಯೋಗಾನಂದರ ಬೋಧನೆಗಳು ಅವರನ್ನು ಬಹಳವಾಗಿ ಪ್ರಭಾವಿಸಿದ್ದವುಈ ಭೂಮಿ ಮೇಲಿನ ಎಲ್ಲವೂ ಒಂದು ಇನ್ನೊಂದರ ಭಾಗವಾಗಿದೆ ಎಂಬ ಪರಮಹಂಸ ಯೋಗಾನಂದರ ಮಾತು ಮತ್ತುಇತರರ ಸೇವೆ ಮಾಡುವ ಪ್ರಾಮುಖ್ಯತೆ ಬಗ್ಗೆ ಅವರ ಬೋಧನೆಗಳು ಪ್ರದೀಪ್ ಸೇಥಿಯವರ ಮೇಲೆ ಅಗಾಧ ಪರಿಣಾಮ ಬೀರಿದವುಯೋಗಾನಂದರ ‘ಆನ್ ಆಟೊಬಯಾಗ್ರಫಿ ಆಫ್ ಎ ಯೋಗಿ’ ಎಂಬ ಪುಸ್ತಕ ಪ್ರದೀಪ್ ಸೇಥಿಯವರ ಖಾಯಂ ಸಂಗಾತಿಯಾಯಿತುಇಂದಿಗೂ ಅವರು ಆ ಪುಸ್ತಕವನ್ನು ಇತರರಿಗೆ ಕಾಣಿಕೆಯಾಗಿ ಕೊಡುತ್ತಿರುತ್ತಾರೆಆ ಪುಸ್ತಕ ಅವರಿಗೆ ಹಲವು ಸ್ನೇಹಿತರನ್ನು ಸಂಪಾದಿಸಿ ಕೊಟ್ಟಿತುತಾನು ಉತ್ತಮವಾದ ಶಿಕ್ಷಣ ಪಡೆದು ಈ ಮಟ್ಟಕ್ಕೆ ಬೆಳೆಯಲು ಗುರುತು ಪರಿಚಯವಿಲ್ಲದ ಹಲವು ಚಾರಿಟೆಬಲ್ ಟ್ರಸ್ಟ್‌ಗಳುಸಹೃದಯಿ ವ್ಯಕ್ತಿಗಳು ನೀಡಿದ ಸಹಕಾರವೇ ಕಾರಣ ಎಂದು ಬಗೆದ ಪ್ರದೀಪ್ ಸೇಥಿತಾನು ಸಮಾಜದಿಂದ ಪಡೆದುದರ ಹತ್ತು ಪಟ್ಟನ್ನು ಸಮಾಜಕ್ಕೆ ವಾಪಸು ನೀಡಲು ನಿಶ್ಚಯಿಸುತ್ತಾರೆ.

ಡಾ.ಪ್ರದೀಪ್ ಸೇಥಿಯವರಿಂದ ಹೇರ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆ ಮಾಡಿಸಿಕೊಂಡ ಅನೇಕ ವಿಐಪಿ ಗ್ರಾಹಕರು ಅವರ ಸ್ನೇಹಿತರಾಗಿ ಬದಲಾಗಿದ್ದರುಪ್ರದೀಪ್ ಸೇಥಿಯವರು ಅವರಲ್ಲಿ ತನ್ನ ಆಲೋಚನೆಯನ್ನು ಹಂಚಿಕೊಂಡಾಗ ಅವರುಗಳು ತಮ್ಮಿಂದಾದ ದೇಣಿಗೆ ನೀಡಲು ಮುಂದಾದರುಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಆದಾರ್ ಪೂನಾವಾಲಾ ಒಂದು ಕೋಟಿ ರೂಪಾಯಿ ನೀಡಿದರುಝೀ ಟಿವಿಯ ಪುನೀತ್ ಗೊಯೆಂಕಾ 4.60 ಕೋಟಿ ರೂಕೊಟ್ಟರುಬಜಾಜ್ ಕಂಪೆನಿಯ ರಾಜೀವ ಬಜಾಜ್ 3 ಕೋಟಿ ರೂಕೊಟ್ಟರುಅವರಲ್ಲದೆ ಪ್ರದೀಪ್ ಸೇಥಿಯವರ ಗ್ರಾಹಕ ಪಟ್ಟಿಯಲ್ಲಿರುವ ಅನೇಕ ಖ್ಯಾತ ಕ್ರಿಕೆಟಿಗರುಸಿನಿಮಾ ತಾರೆಯರು ಅವರಿಗೆ ಆರ್ಥಿಕ ನೆರವು ನೀಡಿದರುಅವರೆಲ್ಲರ ಸಹಾಯದಿಂದ ಪ್ರದೀಪ್ ಸೇಥಿ ಹಿಂದೆ ತಾನು ಜೀವನ ನಿರ್ವಹಣೆಗೆ ಕೃಷಿ ಕೂಲಿ ಕೆಲಸ ಮಾಡುತ್ತಿದ್ದ ಅದೇ ಹೊಲದಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ‘ಉತ್ಕಲ್ ಗೌರವ್ ಇಂಟರ್‌ನ್ಯಾಷನಲ್ ಸ್ಕೂಲ್’ ಕಟ್ಟಡ ಕಟ್ಟಿ ನಿಲ್ಲಿಸಿದರು.

 

ಉತ್ಕಲ್ ಗೌರವ್ ಇಂಟರ್‌ನ್ಯಾಷನಲ್ ಸ್ಕೂಲ್’ನ ಉದ್ಘಾಟನೆಯ ಸಮಯದಲ್ಲಿ ಡಾ.ಪ್ರದೀಪ್ ಸೇಥಿಯವರು ಮುಂದಿನ ಐದು ವರ್ಷಗಳಲ್ಲಿ ಒಂದು ನೂರು ಕೋಟಿ ರೂಪಾಯಿ ಸಂಗ್ರಹಿಸಿ ತನ್ನ ಆ ಶಾಲೆಗೆ ಅಂತಿಮ ರೂಪ ಕೊಡುವುದಾಗಿ ಘೋಷಿಸಿದ್ದಾರೆಅವರ ಸ್ನೇಹಿತರಾಗಿರುವ ಆಕ್ಸ್ ಫರ್ಡ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯಗಳ ಕೆಲವು ಪ್ರೊಫೆಸರ್‌ಗಳು ಈಗಾಗಲೇ ‘ಉತ್ಕಲ್ ಗೌರವ್ ಇಂಟರ್‌ನ್ಯಾಷನಲ್ ಸ್ಕೂಲ್’ನ ಮಕ್ಕಳಿಗೆ ಆನ್‌ಲೈನ್ ಕ್ಲಾಸುಗಳನ್ನು ತೆಗೆದುಕೊಳ್ಳುತ್ತಿದ್ದಾರೆಮುಂದಿನ ದಿನಗಳಲ್ಲಿ ಅಮೆರಿಕಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮೊದಲಾದ ದೇಶಗಳಿಂದ ಶಿಕ್ಷಕರು ಇಲ್ಲಿಗೇ ಬಂದು ಕಲಿಸಲು ಬೇಕಾದ ವ್ಯವಸ್ಥೆಗಳನ್ನು ನಿರ್ಮಿಸುತ್ತಿದ್ದಾರೆಇಲ್ಲಿ ಕಲಿಯುವ ಗ್ರಾಮೀಣ ಮಕ್ಕಳನ್ನು ವಿದೇಶಗಳಿಗೆ ಕರೆದುಕೊಂಡು ಹೋಗಿ ಅವರಿಗೆ ಜಾಗತಿಕ ಮಟ್ಟದ ತಿಳಿವಳಿಕೆ ಲಭಿಸಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ

andolanait

Recent Posts

ಓದುಗರ ಪತ್ರ: ನೇರಳೆ ತಳಿ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಲಿ

ನೇರಳೆ ಹಣ್ಣಿನ ಬೀಜಗಳ ಔಷಧಿಯ ಗುಣಗಳನ್ನು ಪರಿಗಣಿಸಿ ಸರ್ಕಾರವು ಇವುಗಳ ಸಂರಕ್ಷಣೆ ಮತ್ತು ಮೌಲ್ಯವರ್ಧನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ತೋಟಗಾರಿಕಾ…

1 hour ago

ಓದುಗರ ಪತ್ರ: ಪರಸಯ್ಯನ ಹುಂಡಿ ಸರ್ಕಲ್‌ನಲ್ಲಿ ಬಸ್ ನಿಲುಗಡೆಯಿಂದ ತೊಂದರೆ

ಮೈಸೂರಿನ ರಿಂಗ್ ರಸ್ತೆ ಪರಸಯ್ಯನ ಹುಂಡಿ ಸರ್ಕಲ್‌ನಲ್ಲಿ ಪ್ರತಿನಿತ್ಯ ಸಾರಿಗೆ ನಿಗಮದ ಬಸ್‌ಗಳನ್ನು ನಿಲುಗಡೆ ಮಾಡುವುದರಿಂದ ಪ್ರತಿನಿತ್ಯ ಟ್ರಾಫಿಕ್ ಜಾಮ್…

1 hour ago

ಓದುಗರ ಪತ್ರ: ಆದ್ಯತೆಗಳ ಪಟ್ಟಿಯಲ್ಲಿ ಶಿಕ್ಷಣ ಎಲ್ಲಿದೆ?

ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶಾಲೆಗಳು ಮತ್ತೆ ಬಾಗಿಲು ತೆರೆದಿವೆ. ಹೊಸ ಕನಸುಗಳೊಂದಿಗೆ ಮಕ್ಕಳು ತರಗತಿಗಳತ್ತ ಹೆಜ್ಜೆ ಇಟ್ಟಿದ್ದಾರೆ. ನೂತನ…

1 hour ago

ಕೊಡಗಿನಲ್ಲಿ ಹೆಚ್‌ಪಿವಿ ಲಸಿಕೆ ಪಡೆಯಲು ಹಿಂದೇಟು

ನವೀನ್ ಡಿಸೋಜ ಜಿಲ್ಲೆಯಲ್ಲಿ ಶೇ.೩೦.೮೫ರಷ್ಟು ಮಂದಿಗೆ ಮಾತ್ರ ಲಸಿಕೆ; ಗರ್ಭಕಂಠ ಕ್ಯಾನ್ಸರ್ ತಡೆಯಲು ಲಸಿಕೆ ಕಡ್ಡಾಯ: ಆರೋಗ್ಯ ಇಲಾಖೆ ಮನವಿ…

4 hours ago

ರಾಷ್ಟ್ರೀಯ ಕೆಟಲ್‌ಬಾಲ್ ಟೂರ್ನಿಯಲ್ಲಿ ಮಿಂಚಿದ ಪ್ರತಿಭೆಗಳು

ಹೇಮಂತ್‌ಕುಮಾರ್ ೧೦ ಚಿನ್ನ, ೬ ಬೆಳ್ಳಿ, ೩ ಕಂಚಿನ ಪದಕಗಳನ್ನು ಬಾಚಿದ ಆಕ್ಸ್‌ಫರ್ಡ್ ಅಕಾಡೆಮಿ ಮಂಡ್ಯ: ಪರಿಶ್ರಮವಿದ್ದೆಡೆ ಸಾಧನೆ ಸಾಧ್ಯ ಎಂಬುದಕ್ಕೆ ಶ್ರೀರಂಗಪಟ್ಟಣ…

4 hours ago

ಮುಸುಕಿನ ಜೋಳಕ್ಕೆ ರೋಗ ಬಾಧೆ; ಸಂಕಷ್ಟಕ್ಕೆ ಸಿಲುಕಿದ ರೈತರು

ಮಂಜು ಕೋಟೆ ಕೋಟೆ: ಔಷಧ ಸಿಂಪಡಿಸಿದ ಬಿತ್ತನೆ ಬೀಜ ವಿತರಿಸಿದರೂ ಪ್ರಯೋಜನವಾಗದೆ ಲಕ್ಷಾಂತರ ರೂ. ನಷ್ಟ  ಎಚ್.ಡಿ.ಕೋಟೆ: ಸಾವಿರಾರು ಎಕರೆಯಲ್ಲಿ…

4 hours ago