ಜಿಲ್ಲೆಗಳು

ವರುಣ ನಾಲೆ ಮೇಲ್ಸೇತುವೆಯಲ್ಲಿ ನೀರು ಸೋರಿಕೆ

ಮೈಸೂರು-ನಂಜನಗೂಡು ಗೆಜ್ಜಗಳ್ಳಿ ಬಳಿಯ ನಾಲೆಯಲ್ಲಿ ನೀರು ಪೋಲು: ಅಧಿಕಾರಿಗಳ ನಿರ್ಲಕ್ಷ್ಯ
ಮೈಸೂರು: ಮೈಸೂರು-ನಂಜನಗೂಡು ರಸ್ತೆಯ ಗೆಜ್ಜಗಳ್ಳಿ ಬಳಿಯ ವರುಣ ನಾಲೆ ಮೇಲ್ಸೇತುವೆಯಲ್ಲಿ(ಅಕ್ವಡೆಟ್) ನೀರು ಸೋರಿಕೆಯಾಗುತ್ತಿದ್ದು, ಇದರಿಂದ ಅನಗತ್ಯವಾಗಿ ನೀರು ಪೋಲಾಗುತ್ತಿದೆ.
ಪ್ರತಿವರ್ಷ ನೀರು ಬಿಟ್ಟ ಸಮಯದಲ್ಲಿ ಹೀಗೆ ಸೋರಿಕೆಯಾಗುವುದು ಮಾಮೂಲಿಯಂತಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸರಿಪಡಿಸದೆ ಕಂಡೂ ಕಾಣದಂತೆ ಇದ್ದಾರೆ. ಅಧಿಕಾರಿಗಳ ಈ ವರ್ತನೆಯ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟು ೧೨೬ ಕಿ.ಮೀ. ಉದ್ದದ ನಾಲೆ ಕೆಆರ್‌ಎಸ್‌ನಿಂದ ಆರಂಭವಾಗಿ ಬೆಂಗಳೂರು-ಮೈಸೂರು ರಸ್ತೆಯ ಸಿದ್ದಲಿಂಗಪುರ ಹಾಗೂ ಮೈಸೂರು-ನಂಜನಗೂಡು ರಸ್ತೆಯ ಗೆಜ್ಜಗಳ್ಳಿ ಮಾರ್ಗವಾಗಿದ್ದು, ೧.೮ ಕಿ.ಮೀ. ನಾಲೆಯೂ ಮೇಲ್ಸೇತುವೇ ಮಾದರಿಯಲ್ಲಿದೆ. ಸದ್ಯ ಮೈಸೂರು-ನಂಜನಗೂಡು ರಸ್ತೆಯ ಗೆಜ್ಜಗಳ್ಳಿ ಬಳಿಯ ನಾಲೆಯ ಜಾಯಿಂಟ್‌ನಿಂದ ಜೂನ್‌ನಲ್ಲಿ ಸೋರಲಾರಂಭಿಸಿರುವ ನೀರು ಇನ್ನು ಸೋರಿಕೆಯಾಗುತ್ತಲೆ ಇದೆ.
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಈ ನೀರಾವರಿ ಯೋಜನೆ ಮಾಡಲಾಯಿತು. ನಂತರ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾದಾಗ ನಾಲೆ ಮೇಲ್ಸೇತುವೆಯನ್ನು ಮಾಡಲಾಯಿತು. ಈ ವೇಳೆ ಎಚ್.ಕೆ.ಪಾಟೀಲರು ನೀರಾವರಿ ಮಂತ್ರಿಯಾಗಿದ್ದರು. ಈ ನಾಲೆ ಮೇಲ್ಸೇತುವೆಯಾಗಿ ಸುಮಾರು ೨೦ ವರ್ಷಗಳೇ ಕಳೆದಿದ್ದು, ನಿರಂತರವಾಗಿ ನೀರು ಹರಿಯುವ ಕಾರಣ ನಾಲೆಯ ಜಾಯಿಂಟ್‌ಗಳಿಗೆ ಅಳವಡಿಸಿರುವ ಕೊಂಡಿಗಳು ಹಾಳಾಗಿವೆ. ಹೀಗೆ ಬಹುತೇಕ ಕಡೆಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು, ಗೆಜ್ಜಗಳ್ಳಿ ಬಳಿಯ ಮೇಲ್ಸೇತುವೆಯಲ್ಲಿ ಭಾರೀ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಆದರೆ, ಇದನ್ನು ಸರಿಪಡಿಸುವ ಕೆಲಸ ಸರಿಯಾಗಿ ಆಗಿಲ್ಲ.
ನೀರು ಬಿಟ್ಟಾಗೆಲ್ಲ ಸೋರಿಕೆ: ನಾನು ಸುಮಾರು ಎರಡು ವರ್ಷಗಳಿಂದ ನೋಡುತ್ತಿದ್ದೇನೆ. ನೀರು ಬಿಟ್ಟಾಗೆಲ್ಲ ನೀರು ಸೋರಿಕೆಯಾಗುತ್ತಿದೆ. ಜಲ ಜೀವನ್ ಮಿಷನ್ ಯೋಜನೆ ಜಾರಿಗೆ ತಂದು ನೀರಿನ ಮಿತ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಸರ್ಕಾರಗಳಿಗೆ ಹೀಗೆ ನೀರು ಪೋಲಾಗುವುದು ಕಾಣುವುದಿಲ್ಲವೇ? ಶೀಘ್ರ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಹವ್ಯಾಸಿ ಹವಮಾನ ಪರಿವೀಕ್ಷಕ ರವಿಕೀರ್ತಿ.


ವಾಹನಗಳು ಸಂಚಾರ ಮಾಡುವ ಕಾರಣ ಒತ್ತಡದಿಂದ ಸ್ವಲ್ಪ ಶೇಕ್ ಆಗುತ್ತದೆ. ಹೀಗಾಗಿ ಅಲ್ಲಿನ ಜಾಯಿಂಟ್‌ಗೆ ಅಳವಡಿಸಿರುವ ಕೊಂಡಿಯ ರಬ್ಬರ್ ಸಡಿಲವಾಗಿ ಈ ಜಾಗದಲ್ಲಿ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ. ಕಳೆದ ವರ್ಷವೂ ದುರಸ್ತಿ ಮಾಡಲಾಗಿತ್ತು. ಡಿಸೆಂಬರ್‌ಗೆ ನೀರು ನಿಲ್ಲಿಸಿದ ನಂತರ ಇದನ್ನು ಸರಿಪಡಿಸಲಾಗುವುದು.
-ಎಂ.ಎಸ್.ಜಸ್ವಂತ್, ಎಇಇ, ವರುಣ ವಿಭಾಗ.

andolanait

Recent Posts

ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ನಿಧನ

ಚೆನ್ನೈ: ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ಇಂದು ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕೆಲ…

21 mins ago

ನೆಹರು ದಾಖಲೆ ಮುರಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ ನಡೆಸಿದ ಪ್ರಧಾನಿ ಎಂಬ ಹೊಸ…

27 mins ago

ಓದುಗರ ಪತ್ರ: ಗೃಹ ಸಚಿವರೇ ಇತ್ತಲೂ ಗಮನಹರಿಸಿ

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಮತ್ತು ದ್ವೇಷ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಗೃಹಮಂತ್ರಿ ಪ್ರಿಯಾಂಕ್…

2 hours ago

ಓದುಗರ ಪತ್ರ: ಹೀಗೇಕೆ ಭಾವಿಸಬಾರದು?

ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ತಪ್ಪಿದ್ದು ಕರ್ನಾಟಕದ ಜನರಿಗೆ ಮಾಡಿದ ಅವಮಾನ ಎಂದು ಭಾವಿಸಿ ತಪ್ಪು ತಿಳಿಯುವುದಕ್ಕಿಂತ... ಇಳಿ ವಯಸ್ಸಿನಲ್ಲಿರುವ ದೇವೇಗೌಡರು…

2 hours ago

ಓದುಗರ ಪತ್ರ: ಎಲ್ಲ ಇಲಾಖಾ ಪರೀಕ್ಷೆಗಳ ಹೊಣೆಯನ್ನು ಕೆಇಎಗೆ ನೀಡಲಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ೨೦೨೪-೨೦೨೫ ರಲ್ಲಿ ಸುಮಾರು ೨೫ ಕ್ಕೂ ಹೆಚ್ಚು ಪರೀಕ್ಷೆಗಳನ್ನು ಆಯೋಜಿಸಿ ೨೬ ಲಕ್ಷಕ್ಕೂ ಹೆಚ್ಚು…

2 hours ago

ಓದುಗರ ಪತ್ರ: ಬಂಡಿಪಾಳ್ಯದಲ್ಲಿ ಅಗತ್ಯ ಶೌಚಾಲಯಗಳನ್ನು ನಿರ್ಮಿಸಿ

ಮೈಸೂರಿನ ಬಂಡಿಪಾಳ್ಯದ ಎಪಿಎಂಸಿಗೆ ದಿನಸಿ ಸಾಮಾನುಗಳನ್ನು ಖರೀದಿಸಲು ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು, ಸಣ್ಣಪ್ರಮಾಣದ ಅಂಗಡಿಗಳನ್ನು ಹೊಂದಿರುವ ವ್ಯಾಪಾರಿಗಳು, ಶುಭಸಮಾರಂಭ…

2 hours ago