ಜಿಲ್ಲೆಗಳು

ಅಯೋಧ್ಯಾ ಎಂಬ ಪದವೇ ಸೋಲಿಲ್ಲದ್ದು ಎಂಬ ಅರ್ಥ: ಅನಂತ್‌ಕುಮಾರ್‌ ಹೆಗಡೆ!

ಬೆಂಗಳೂರು: “ಬೀಜ ಮಂತ್ರವಾಗಿದ್ದ ರಾಮ ನಾಮವು ತಾರಕ ಮಂತ್ರವಾಗಿ ಇದೀಗ “ಜೈ ಶ್ರೀರಾಮ್” ಎಂಬ ಶೌರ್ಯ ಮಂತ್ರವಾಗಿ ರಾಮಭಕ್ತರಲ್ಲಿ ಹೊಸ ಉಮೇದನ್ನು ಮೂಡಿಸಿದೆ” ಎಂದು ಉತ್ತರ ಕನ್ನಡದ ಲೋಕಸಭಾ ಸದಸ್ಯ ಅನಂತ್ ಕುಮಾರ್ ಹೆಗಡೆ ಅಭಿಪ್ರಾಯಪಟ್ಟರು.
ಜನಪ್ರಿಯ ಲೇಖಕ  ಮೈಸೂರಿನ ಎಸ್ ಉಮೇಶ್ ರಚಿಸಿರುವ “ಅಯೋಧ್ಯಾ” ಕೃತಿಯ ಮೊದಲ ಪ್ರತಿಯನ್ನು ಹಿರಿಯ ಪತ್ರಕರ್ತ ರವೀಂದ್ರ ಜೋಶಿ ಅವರಿಂದ ಸ್ವೀಕರಿಸಿ ಮಾತನಾಡಿ ಅವರು,”ಅಯೋಧ್ಯ ಎನ್ನುವ ಪದವೇ ಸೋಲು ಇರಲಾರದು ಎಂದು ಅರ್ಥ ಎಂದರು.
ಹೀಗಾಗಿ ಆಕ್ರಮಣ ನಡೆದರೂ ಕೂಡ ಅಯೋಧ್ಯೆ ಪದೇಪದೇ ಪುನರುಜ್ಜಿವನಗೊಂಡಿದೆ. ಇದೀಗ ವೈಭವದ ರಾಮ ರಾಜ್ಯ ನಿರ್ಮಾಣವಾಗಿದೆ. ರಾಮ ಎನ್ನುವ ಪದ ಈ ದೇಶದ ಅಸ್ಮಿತೆ, ಸ್ವಾಭಿಮಾನದ ಪ್ರತೀಕ ಎಂದರು.
ರಾಮನಾಮ ಇಲ್ಲಿಯ ಜನರ ಉಸಿರು. ಹೀಗಾಗಿ ಎಷ್ಟೇ ದೌರ್ಜನ್ಯ ನಡೆದರೂ ಈ ದೇಶದ ನೆಲದ ಸಂಸ್ಕೃತಿಯಿಂದ ರಾಮ ನಾಮವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ಲೇಖಕ ಉಮೇಶ್ ಮಾತನಾಡಿ “ಕಳೆದ ಎರಡು ವರ್ಷಗಳ ನಿರಂತರ ಅಧ್ಯಯನದ ಫಲಶ್ರುತಿ ನನ್ನ ಈ ಕೃತಿ. ಈ ಪುಸ್ತಕ ರಚನೆಯಲ್ಲಿ ನನಗೆ ಹಲವರ ಸಹಾಯ ದೊರೆತಿದೆ.
ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥರ ಆಶೀರ್ವಾದದಿಂದ ಪ್ರಾರಂಭಗೊಂಡ ಈ ಸಾರಸ್ವತ ಯಜ್ಞ ಹಲವರ ಸಹಾಯದಿಂದಾಗಿ ಸಾಕಾರಗೊಂಡಿರುವಂಥದ್ದು.
ರಾಮ ಜನ್ಮ ಭೂಮಿ ಟ್ರಸ್ಟ್ ನ ಗೋಪಾಲ್ ಜಿ, ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಚಂಪತ್ ರಾಯ್, ಉಚ್ಚ ನ್ಯಾಯಾಲಯದ ವಕೀಲ ಮೋಹನ್ ಪರಾಶರನ್ ಅವರ ಯೋಗದಾನ ಈ ಕೃತಿಯಲ್ಲಿದೆ.
ರಾಮ ಜನ್ಮ ಭೂಮಿಯ ಹೋರಾಟದ ಸಂಪೂರ್ಣ ಕಥನವನ್ನು ಇಲ್ಲಿ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ ಕನ್ನಡದ ಜನತೆಗೆ ಅಯೋಧ್ಯೆಯ ಹೋರಾಟ ತಲುಪಲಿ ಎಂಬ ಸದಾಶಿವದೊಂದಿಗೆ ಬರೆದಂತಹ ಕೃತಿ ಇದು.
ಓದುಗರು ಇದನ್ನ ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕು” ಎಂದು ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಧಾತ್ರಿ ಪ್ರಕಾಶನದ ಪ್ರಕಾಶಕಿ ಬೃಂದಾ ಉಮೇಶ್ “ಈ ಕೃತಿ ಕರ್ನಾಟಕದ ಎಲ್ಲ ಪುಸ್ತಕ ಮಳಿಗೆಗಳಲ್ಲೂ ಲಭ್ಯವಿದೆ” ಎಂದು ತಿಳಿಸಿದರು.
andolanait

Recent Posts

ಮಣಿಪುರದಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ಐವರು ಉಗ್ರರ ಬಂಧನ

ಇಂಫಾಲ: ಮಣಿಪುರದ ಇಂಫಾಲ ಪಶ್ಚಿಮ ಮತ್ತು ಪೂರ್ವ ಜಿಲ್ಲೆಗಳಲ್ಲಿ ಎರಡು ನಿಷೇಧಿತ ಸಂಘಟನೆಗಳಿಗೆ ಸೇರಿದ ಐದು ಉಗ್ರರನ್ನು ಭದ್ರತಾ ಪಡೆಗಳು…

2 hours ago

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಶಾಸಕ ಸಿ.ಪಿ.ಯೋಗೇಶ್ವರ್‌

ರಾಮನಗರ: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಶಾಸಕ ಸಿ.ಪಿ.ಯೋಗೇಶ್ವರ್‌ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು…

3 hours ago

ಡಿ.ಕೆ.ಶಿವಕುಮಾರ್‌ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್‌: ಬುಧವಾರ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಡಿ.ಕೆ.ಶಿವಕುಮಾರ್‌ ಅವರ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಬುಧವಾರ ರಾಜ್ಯದ ನೂತನ ಸಿಎಂ ಆಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ…

5 hours ago

ಓದುಗರ ಪತ್ರ: ಕ್ರಿಕೆಟ್ ಕ್ರೀಡಾಂಗಣಕ್ಕೆ ಡಾ.ಅಂಬೇಡ್ಕರ್ ಹೆಸರಿಡಿ

ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿ ನಿರ್ಮಾಣಗೊಳ್ಳಲಿರುವ ದೇಶದ ಎರಡನೇ ಅತಿದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ರಾಜ್ಯ ಸರ್ಕಾರದಿಂದ ಶಂಕುಸ್ಥಾಪನೆ ನೆರವೇರಿಸಲಾಗಿದೆ.…

6 hours ago

ಓದುಗರ ಪತ್ರ: ನಾಳಿನ ನೆರಳಿಗೆ ಇಂದೇ ಗಿಡ ನೆಡೋಣ

ಈ ಬಾರಿಯ ಬೇಸಿಗೆಯ ಧಗೆ ಮಧ್ಯಾಹ್ನದ ವೇಳೆ ಯಾರೂ ಹೊರಗಡೆ ಓಡಾಡದಂತೆ ಮಾಡಿದೆ. ವಾಹನ ಸವಾರರ ಸ್ಥಿತಿಯಂತೂ ಹೇಳತೀರದು. ರಸ್ತೆ…

6 hours ago

ಓದುಗರ ಪತ್ರ: ಸಿದ್ದರಾಮಯ್ಯನವರ ಆಡಳಿತ ಮಾದರಿ

ರಾಜ್ಯದಲ್ಲಿ ಅತ್ಯಂತ ಪ್ರಬಲ ನಾಯಕರಲ್ಲಿ ಸಿದ್ದರಾಮಯ್ಯನವರೂ ಕೂಡ ಒಬ್ಬರು. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದರ ಮೂಲಕ ಅವರ ಆಡಳಿತ…

6 hours ago