ಮೇಲುಕೋಟೆ: ಸಂಸದೆ ಸುಮಲತಾ ನಿಗದಿ ಮಾಡಿದ ದಿನ ನಾನು ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ದಾಖಲೆಗಳೊಂದಿಗೆ ಆಣೆಪ್ರಮಾಣಕ್ಕೆ ಬದ್ಧ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಸಂಸದರ ಪಂಥಾಹ್ವಾನ ಸ್ವೀಕರಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಚೆಲುವನಾರಾಯಣಸ್ವಾಮಿಗೆ ಪೂಜೆ ನೆರವೇರಿಸಿದ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿ, ಸಂಸದೆ ಚುನಾವಣಾ ದೃಷ್ಟಿಯಲ್ಲಿ ಆಧಾರ ರಹಿತವಾದ ಆರೋಪ ಮಾಡಿ ಚೆಲುವನಾರಾಯಣನ ಕ್ಷೇತ್ರದಲ್ಲಿ ಆಣೆ-ಪ್ರಮಾಣ ಮಾಡಲು ಆಹ್ವಾನಿಸಿದ್ದಾರೆ. ದಾಖಲೆಗಳೊಂದಿಗೆ ಅವರು ಮೇಲುಕೋಟೆಗೆ ಬರಲಿ ನೇರಾನೇರ ಬಹಿರಂಗವಾಗಿ ಚರ್ಚಿಸೋಣ, ಪ್ರಮಾಣ ಮಾಡೋಣ, ಸಂಸದರಿಗೆ ಒಳ್ಳೆಯ ಬುದ್ದಿಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ಅAಬರೀಶ್ ಮತ್ತು ನನ್ನ ಸಂಬಂಧ ಉತ್ತಮವಾಗಿತ್ತು. ಅವರ ಕೊನೆಯ ದೀಪಾವಳಿಯಲ್ಲಿ ನಾನೂ ಭಾಗವಹಿಸಿದ್ದೆ. ನಮ್ಮ ನಡುವಿನ ಸಂಬAಧ ಹೇಗಿತ್ತು ಎಂಬುದನ್ನು ರಾಕ್ಲೈನ್ ವೆಂಕಟೇಶ್ರನ್ನು ಕೇಳಿ ತಿಳಿದುಕೊಳ್ಳಲಿ. ಅಂಬರೀಶ್ ಗೆಲುವಿಗಾಗಿ ನಮ್ಮ ಮನೆಯ ಹಣ ಹಾಕಿ ಶ್ರಮಿಸಿದ್ದೇನೆ. ಸಮ್ಮಿಶ್ರ ಸರ್ಕಾರದ ವೇಳೆ ವಿದೇಶದಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲು ನಾನೇ ಮುಂದೆ ನಿಂತು ಶ್ರಮಿಸಿದ್ದೇನೆ ಎಂದು ಹೇಳಿದರು.
ನಿವೇಶನ ಮರಳಿಸಿದ್ದೇನೆ:
ಮುಡಾ ನಿವೇಶನ ನನಗೆ ಮಂಜೂರಾದ ತಕ್ಷಣ ಮರಳಿಸಿದ್ದೇನೆ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವಾಗ ಹಾದಿ ಬೀದಿಯಲ್ಲಿ ಚರ್ಚಿಸುವುದು ಒಳ್ಳೆಯ ಬೆಳವಣೆಗೆಯಲ.್ಲ ಈ ಸಂಬAಧ ನ್ಯಾಯಾಲಯ ನೀಡುವ ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕಾಗುತ್ತೇವೆ ಎಂದರು. ಜನಪರವಾಗಿ ಕೆಲಸ ಮಾಡುವುದನ್ನು ಮಾಜಿ ಪ್ರದಾನಿ ದೇವೇಗೌಡರಿಂದ ಕಲಿತಿದ್ದೇನೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಭ್ರಷ್ಟಾಚಾರ ಮಾಡಿದ್ದರೆ ರಾಜಕಾರಣದಲ್ಲಿ ಉಳಿಯುತ್ತಿರಲಿಲ್ಲ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಸುಮಲತಾರಿಗೆ ಮುಡಾ ನಿವೇಶನ ಪ್ರಕರಣ ನೆನಪಾಗುತ್ತದೆ. ಇದೊಂದು ದೊಡ್ಡ ಷಡ್ಯಂತ್ರ ನಿಮ್ಮ ಕುಟುಂಬಕ್ಕೆ ಮಂಜೂರಾದ ಎರಡು ನಿವೇಶನವನ್ನು ನೀವೇನು ಮಾಡಿದ್ದೀರಿ? ಸಂಸದರೆ ಮಾರಾಟ ಮಾಡಿಲ್ಲವೆ ಎಂದು ಪ್ರಶ್ನಿಸಿದ ಶಾಸಕರು, ಜಾ.ದಳ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿ ದೊಡ್ಡವರಾಗಬೇಕು ಎಂದುಕೊಂಡಿದ್ದರೆ ಈ ಮನಸ್ಥಿತಿಯಿಂದ ಹೊರಬನ್ನಿ ಎಂದರು.
ಗಾಳಿಯಲ್ಲಿ ಗುಂಡು ಹೊಡೆಯಬೇಡಿ:
ಆಣೆ ಪ್ರಮಾಣದ ಸವಾಲು ಸ್ವೀಕರಿಸಿದ ಪುಟ್ಟರಾಜು ಇಲ್ಲಸಲ್ಲದ ಆರೋಪಮಾಡಿ ಗಾಳಿಯಲ್ಲಿ ಗುಂಡುಹೊಡೆಯುವ ಕೆಲಸವನ್ನು ಸಂಸದರು ಮಾಡಬಾರದು. ದಾಖಲೆಗಳಿದ್ದರೆ ತೆಗೆದುಕೊಂಡು ಬರಲಿ, ನನ್ನದು ಭ್ರಷ್ಟಾಚಾರರಹಿತವಾದ ಪಾರದರ್ಶಕ ರಾಜಕಾರಣ. ಮನೆಯಿಂದ ದುಡ್ಡು ತಂದು ಜನಸೇವೆ ಮಾಡುತ್ತಿದ್ದೇನೆ. ನನಗೆ ಯಾವುದೇ ಕೆಟ್ಟ ಚಟಗಳಿಲ್ಲ, ಇಸ್ಪೀಟ್ ಆಡುವುದಿಲ್ಲ, ಜೂಜಾಡೋದಿಲ್ಲ. ನನಗೆ ಜನಸೇವೆ ಒಂದೇ ಗೊತ್ತಿರೋದು. ದಾಖಲೆಗಳಿದ್ದರೆ ತನ್ನಿ, ಜಿಲ್ಲೆಗೆ ದೊಡ್ಡವರು ಸಂಸದರೇ, ಹಾಗಾಗಿ ದಿನಾಂಕ ನೀವೇ ನಿಗದಿ ಮಾಡಿ ಎಂದೂ ಸವಾಲೆಸೆದರು.
ಜಿಲ್ಲೆಗೆ ಕೊಡುಗೆ ಏನು:
ಮಾತನಾಡುವ ಬದಲು ಜಿಲ್ಲೆಗೆ ಕೊಡುಗೆ ಏನು ಎಂಬದನ್ನು ಹೇಳಬೇಕು ಎಂದು ಪ್ರಶ್ನಿಸಿದ ಶಾಸಕರು, ಕೇಂದ್ರೀಯ ವಿದ್ಯಾಲಯವನ್ನು ಜಿಲ್ಲೆಗೆ ನಾನೇ ಸಮಿತಿಯಲ್ಲಿದ್ದಾಗ ಮಂಜೂರು ಮಾಡಿಸಿದ್ದೇನೆ. ಮೈಶುಗರ್ ವಿಚಾರದಲ್ಲಿ ಸಂಸದರು ಯಾರ ಪರವಾಗಿ ಓಡಾಡಿದರು, ಕೆಆರ್ಎಸ್ ಬಿರುಕು ಚರ್ಚೆ ಬಂದಾಗ ಅಕ್ರಮ ಗಣಿಗಾರಿಕೆ ನಿಲ್ಲಿಸಿದ್ದೇ ನಾನು. ಯರ್ಯಾರ ಬಂಡವಾಳ ಏನೇನು ಎಂಬುದು ಗೊತ್ತಿದೆ ಎಂದರು. ಬೆಂಗಳೂರು-ಮೈಸೂರು ಹೆದ್ದಾರಿ ಕಮಿಷನ್ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಈ ವಿಚಾರವನ್ನು ಕೇಂದ್ರ ಸಚಿವ ಗಡ್ಕರಿ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕೇಳಿದರೆ ಬೆಳಕಿಗೆ ಬರುತ್ತದೆ ಎಂದು ಹೇಳಿದರು.
ಕುಮಾರಸ್ವಾಮಿ ನಮ್ಮ ಜನಪರ ದನಿ:
ಸಂಸದೆ ಮಾತೆತ್ತಿದರೆ ಸದನದಲ್ಲಿ ಜಿಲ್ಲೆಯ ಶಾಸಕರು ಏನು ಪ್ರಶ್ನೆ ಮಾಡಿದ್ದೀರಿ ಎನ್ನುತ್ತಾರೆ. ನಮ್ಮ ನಾಯಕ ಎಚ್.ಡಿಕುಮಾರಸ್ವಾಮಿ ಎಲ್ಲರ ಪರವಾಗಿ ಸದನದಲ್ಲಿ ಮಾತನಾಡುತ್ತಾರೆ. ಜನಪರವಾಗಿ ನಿಲ್ಲತ್ತಾರೆ, ಅಧಿವೇಶನದಲ್ಲಿ ೨೨೪ ಮಂದಿ ಶಾಸಕರೂ ಮಾತನಾಡಲು ಸಾಧ್ಯವಿಲ್ಲ ಎಂಬುದನ್ನು ಸಂಸದರು ತಿಳಿದುಕೊಳ್ಳಬೇಕು ಎಂದರು.
ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…
ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…
ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…
ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…
ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…