ಜಿಲ್ಲೆಗಳು

ಮೂಲ ಸೌಕರ್ಯಗಳ ಕೊರತೆಯಿಂದ ಗಬ್ಬೆದ್ದು ನಾರುತ್ತಿದೆ ಸಂತೆ ಮಾರುಕಟ್ಟೆ

ಸಿದ್ದಾಪುರ: ಪ್ರತಿ ಶನಿವಾರ ಮತ್ತು ಭಾನುವಾರದಂದು ಸಿದ್ದಾಪುರದಲ್ಲಿ ದೊಡ್ಡ ಸಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ ಸುತ್ತಮುತ್ತಲಿನ ತೋಟಕಾರ್ಮಿಕರು ರೈತರು ವ್ಯಾಪಾರಸ್ಥರು ಇಲ್ಲಿ ವ್ಯಾಪಾರ ವಹಿವಾಟಿಗಾಗಿ ಆಗಮಿಸುತ್ತಾರೆ .
ಮಾಲ್ದರೆ,ಚೆನ್ನಯ್ಯನಕೋಟೆ,ಪಾಲಿಬೆಟ್ಟ ಅಮ್ಮತ್ತಿ,ಇಂಜಿಲಗೆರೆ ,ಚೆಟ್ಟಳ್ಳಿ,ನೆಲ್ಯಾಹುದಿಕೇರಿ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ವ್ಯಾಪಾರಸ್ಥರು ಕಾರ್ಮಿಕರು ಈ ಸಂತ ಮಾರುಕಟ್ಟೆಗೆ ಬರುತ್ತಾರೆ ಆದರೆ ಇಲ್ಲಿ ಅವ್ಯವಸ್ಥೆ ಹೇಳುತ್ತಿರದು ಸಿದ್ದಾಪುರ ಗ್ರಾಮದಲ್ಲಿ ಗ್ರಾಮದ ಸುತ್ತಮುತ್ತಲಿನ ಕಸ ಮತ್ತು ತ್ಯಾಜ್ಯಗಳನ್ನು ಇಲ್ಲಿನ ಮಾರುಕಟ್ಟೆಯ ಆವರಣದಲ್ಲಿ ಶೇಖರಿಸುವುದರಿಂದ ದಿನಸಿ ,ತರಕಾರಿ ಖರೀದಿಯೊಂದಿಗೆ ರೋಗಾಣುಗಳನ್ನು ಕೊಂಡಯುವ ಸ್ಥಿತಿ ನಿರ್ಮಾಣವಾಗಿದೆ.

ಸಾವಿರಾರು ಸಂಖ್ಯೆಯಲ್ಲಿ ವ್ಯಾಪಾರಸ್ಥರು,ಗ್ರಾಹಕರು ಬರುವ ಮಾರುಕಟ್ಟೆ ಯಲ್ಲಿ ಅರ್ದಭಾಗದಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸಿರುವುದರಿಂದ ಜಾಗದ ಸಮಸ್ಯೆಯಿಂದಾಗಿ ಬೀದಿಬದಿಯಲ್ಲಿಯೆ ವ್ಯಾಪಾರ ವಹಿವಾಟು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ನಾಮಕಾವಸ್ಥೆಯ ರೈತಸಂತೆ :-ರೈತರು ತಾವು ಬೆಳೆದ ಹಣ್ಣು,ತರಕಾರಿ, ಹಾಗೂ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಶಾಸಕರು ರೈತ ಸಂತೆಗೆ ಮಾರುಕಟ್ಟೆಯಲ್ಲೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಲಾಗಿದೆ ಯಾದರು ಇಂದು ಅದು ಗ್ರಾಮದ ಕಸ ವಿಲೇವಾರಿಯಿಂದಾಗಿ ಸದುಪಯೋಗ ಗೊಳ್ಳದೆ ಇದೆ.

ಕಸತುಂಬುವ ಗೊಡಾನ್ ಗಳು :-ಕುರಿ ಕೋಳಿ,ಮಾಂಸಗಳ ಮಳಿಗೆಗಳಿಗೆ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ ,ಲೈಸನ್ಸ್ ನೀಡುವ ಮೂಲಕ ವರ್ತಕರು ಸ್ವಂತ ಕಟ್ಟಡಗಳಲ್ಲೆ ವ್ಯಾಪರ ನಡೆಸುವುದರಿಂದ ಸುಮಾರು 13 ಲಕ್ಷದ ವೆಚ್ಚದಲ್ಲಿ ನಿರ್ಮಿಸಿದ ಕೋಳಿ ಮತ್ತು ಕುರಿ ಮಾಂಸ ಮಳಿಗೆಗಳು ಇಂದು ತ್ಯಾಜ್ಯ ಸಂಗ್ರಹ ಗೋಡನ್ಗಳಾಗಿ ಪರಿವರ್ತನೆಗೊಂಡಿದೆ.ಇದರಿಂದಾಗಿ ಸಿದ್ದಾಪುರ ಪಟ್ಟಣದಲ್ಲಿ ಕೋಳಿ,ಕುರಿ ಮಾಂಸದ ದರವು ಗಗನಕ್ಕೆ ಏರಿದೆ.


ಸಾಂಕ್ರಾಮಿಕ ರೋಗದ ಭೀತಿ:- 50ಮೀಟರ್ ಅಂತರದಲ್ಲೆ ಸರಕಾರಿ ಪ್ರಾಥಮಿಕ ಶಾಲಾ ವಠಾರವಿದ್ದುಮಕ್ಕಳಿಗೆ ಸಾಂಕ್ರಾಮಿಕ ರೋಗದ ಭೀತಿಯಿಂದಲೇ ಬರಬೇಕಾಗಿದೆ.

andolanait

Recent Posts

ಎಬೋಲಾಗೆ 136 ಮಂದಿ ಬಲಿ: WHO ಕಳವಳ

ಕಾಂಗೋ: ಆಫ್ರಿಕಾದ ಕಾಂಗೋದಲ್ಲಿ ಎಬೋಲಾ ಮಾರಣಾಂತಿಕ ಸೋಂಕಿನಿಂದ ಉಂಟಾದ ಸಾವಿನ ಸಂಖ್ಯೆ 136ಕ್ಕೆ ಏರಿದೆ. ಈ ಬಗ್ಗೆ ವಿಶ್ವ ಆರೋಗ್ಯ…

38 mins ago

ಅರಬ್ಬೀ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೇ.25ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ…

55 mins ago

ಶೃಂಗೇರಿ ಅಂಚೆ ಮತ ಮರು ಎಣಿಕೆ ಪ್ರಕರಣ: ಯಥಾಸ್ಥಿತಿ ಮುಂದುವರಿಸಲು ಸುಪ್ರೀಂ ಸೂಚನೆ

ನವದೆಹಲಿ: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಸಂಬಂಧ ಸುಪ್ರಿಂಕೋರ್ಟ್ ಮುಂದಿನ ಅರ್ಜಿ ವಿಚಾರಣೆಯನ್ನು…

1 hour ago

ಪುಲ್ವಾಮಾ ದಾಳಿಯ ಮಾಸ್ಟರ್‌ ಮೈಂಡ್‌ ಹಮ್ಜಾ ಬುರ್ಹಾನ್‌ ಹತ್ಯೆ

ಇಸ್ಲಾಮಾಬಾದ್:‌ 2019ರ ಪುಲ್ವಾಮಾ ಉಗ್ರರ ದಾಳಿಯ ಮಾಸ್ಟರ್‌ ಮೈಂಡ್‌ ಹಮ್ಜಾ ಬುರ್ಹಾನ್‌ನನ್ನು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ…

1 hour ago

ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಕಡಿತ ಮಾಡಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆಯನ್ನು ಕಡಿತ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು,…

2 hours ago

ಧಾರ್ಮಿಕ ಪ್ರದೇಶದ ಪುಣ್ಯಭೂಮಿ ಚಾಮರಾಜನಗರ: ಡಿಸಿಎಂ ಡಿ.ಕೆ.ಶಿವಕುಮಾರ್‌

ಚಾಮರಾಜನಗರ: ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬುದು ಸುಳ್ಳು. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಈ…

2 hours ago