ಜಿಲ್ಲೆಗಳು

ಮೂಲ ಸೌಕರ್ಯಗಳ ಕೊರತೆಯಿಂದ ಗಬ್ಬೆದ್ದು ನಾರುತ್ತಿದೆ ಸಂತೆ ಮಾರುಕಟ್ಟೆ

ಸಿದ್ದಾಪುರ: ಪ್ರತಿ ಶನಿವಾರ ಮತ್ತು ಭಾನುವಾರದಂದು ಸಿದ್ದಾಪುರದಲ್ಲಿ ದೊಡ್ಡ ಸಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ ಸುತ್ತಮುತ್ತಲಿನ ತೋಟಕಾರ್ಮಿಕರು ರೈತರು ವ್ಯಾಪಾರಸ್ಥರು ಇಲ್ಲಿ ವ್ಯಾಪಾರ ವಹಿವಾಟಿಗಾಗಿ ಆಗಮಿಸುತ್ತಾರೆ .
ಮಾಲ್ದರೆ,ಚೆನ್ನಯ್ಯನಕೋಟೆ,ಪಾಲಿಬೆಟ್ಟ ಅಮ್ಮತ್ತಿ,ಇಂಜಿಲಗೆರೆ ,ಚೆಟ್ಟಳ್ಳಿ,ನೆಲ್ಯಾಹುದಿಕೇರಿ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ವ್ಯಾಪಾರಸ್ಥರು ಕಾರ್ಮಿಕರು ಈ ಸಂತ ಮಾರುಕಟ್ಟೆಗೆ ಬರುತ್ತಾರೆ ಆದರೆ ಇಲ್ಲಿ ಅವ್ಯವಸ್ಥೆ ಹೇಳುತ್ತಿರದು ಸಿದ್ದಾಪುರ ಗ್ರಾಮದಲ್ಲಿ ಗ್ರಾಮದ ಸುತ್ತಮುತ್ತಲಿನ ಕಸ ಮತ್ತು ತ್ಯಾಜ್ಯಗಳನ್ನು ಇಲ್ಲಿನ ಮಾರುಕಟ್ಟೆಯ ಆವರಣದಲ್ಲಿ ಶೇಖರಿಸುವುದರಿಂದ ದಿನಸಿ ,ತರಕಾರಿ ಖರೀದಿಯೊಂದಿಗೆ ರೋಗಾಣುಗಳನ್ನು ಕೊಂಡಯುವ ಸ್ಥಿತಿ ನಿರ್ಮಾಣವಾಗಿದೆ.

ಸಾವಿರಾರು ಸಂಖ್ಯೆಯಲ್ಲಿ ವ್ಯಾಪಾರಸ್ಥರು,ಗ್ರಾಹಕರು ಬರುವ ಮಾರುಕಟ್ಟೆ ಯಲ್ಲಿ ಅರ್ದಭಾಗದಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸಿರುವುದರಿಂದ ಜಾಗದ ಸಮಸ್ಯೆಯಿಂದಾಗಿ ಬೀದಿಬದಿಯಲ್ಲಿಯೆ ವ್ಯಾಪಾರ ವಹಿವಾಟು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ನಾಮಕಾವಸ್ಥೆಯ ರೈತಸಂತೆ :-ರೈತರು ತಾವು ಬೆಳೆದ ಹಣ್ಣು,ತರಕಾರಿ, ಹಾಗೂ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಶಾಸಕರು ರೈತ ಸಂತೆಗೆ ಮಾರುಕಟ್ಟೆಯಲ್ಲೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಲಾಗಿದೆ ಯಾದರು ಇಂದು ಅದು ಗ್ರಾಮದ ಕಸ ವಿಲೇವಾರಿಯಿಂದಾಗಿ ಸದುಪಯೋಗ ಗೊಳ್ಳದೆ ಇದೆ.

ಕಸತುಂಬುವ ಗೊಡಾನ್ ಗಳು :-ಕುರಿ ಕೋಳಿ,ಮಾಂಸಗಳ ಮಳಿಗೆಗಳಿಗೆ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ ,ಲೈಸನ್ಸ್ ನೀಡುವ ಮೂಲಕ ವರ್ತಕರು ಸ್ವಂತ ಕಟ್ಟಡಗಳಲ್ಲೆ ವ್ಯಾಪರ ನಡೆಸುವುದರಿಂದ ಸುಮಾರು 13 ಲಕ್ಷದ ವೆಚ್ಚದಲ್ಲಿ ನಿರ್ಮಿಸಿದ ಕೋಳಿ ಮತ್ತು ಕುರಿ ಮಾಂಸ ಮಳಿಗೆಗಳು ಇಂದು ತ್ಯಾಜ್ಯ ಸಂಗ್ರಹ ಗೋಡನ್ಗಳಾಗಿ ಪರಿವರ್ತನೆಗೊಂಡಿದೆ.ಇದರಿಂದಾಗಿ ಸಿದ್ದಾಪುರ ಪಟ್ಟಣದಲ್ಲಿ ಕೋಳಿ,ಕುರಿ ಮಾಂಸದ ದರವು ಗಗನಕ್ಕೆ ಏರಿದೆ.


ಸಾಂಕ್ರಾಮಿಕ ರೋಗದ ಭೀತಿ:- 50ಮೀಟರ್ ಅಂತರದಲ್ಲೆ ಸರಕಾರಿ ಪ್ರಾಥಮಿಕ ಶಾಲಾ ವಠಾರವಿದ್ದುಮಕ್ಕಳಿಗೆ ಸಾಂಕ್ರಾಮಿಕ ರೋಗದ ಭೀತಿಯಿಂದಲೇ ಬರಬೇಕಾಗಿದೆ.

andolanait

Recent Posts

ನಂಜನಗೂಡು | ಹಾಡಹಗಲೇ ಸ್ಕೂಟಿಯಲ್ಲಿದ್ದ ಹಣ ಕಳವು

ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…

9 hours ago

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಜಾಗತಿಕ ಸ್ಪರ್ಶ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…

11 hours ago

ಇಂದಿನಿಂದ ಮೂರು ದಿನ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು: ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ…

14 hours ago

ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ: ನಾಡದೇವಿಗೆ ಮಹಾಲಕ್ಷ್ಮೀ ಅಲಂಕಾರ

ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಹಾಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಇಡೀ…

18 hours ago

ಓದುಗರ ಪತ್ರ: ದಸರಾದಲ್ಲಿ ಕಂಬಳಕ್ಕೆ ಹಠವೇಕೆ?

ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ…

21 hours ago

ಓದುಗರ ಪತ್ರ: ದೇವಿಯ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು…

21 hours ago