ಜಿಲ್ಲೆಗಳು

ಕುಂದು ಕೊರತೆ ಆಲಿಸಿದ ಜೆಡಿಎಸ್ ಮುಖಂಡ ಎಂಆರ್ ಮಂಜುನಾಥ್

ಹನೂರು : ಪಟ್ಟಣದ ಜಾ. ದಳ ಕಚೇರಿಯಲ್ಲಿ ಜಾ.ದಳ ಮುಖಂಡ ಎಂಆರ್ ಮಂಜುನಾಥ್ ಸಾರ್ವಜನಿಕರು ಹಾಗೂ ಕಾರ್ಯಕರ್ತರ ಕುಂದು ಕೊರತೆ ಆಲಿಸಿದರು.

ಕೌದಳ್ಳಿ,ರಾಮಾಪುರ, ಮ, ಬೆಟ್ಟ, ಬಂಡಳ್ಳಿ ಧನಗೆರೆ,ಪಿಜಿ ಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದಂತಹ ಸಾರ್ವಜನಿಕರು ಹಾಗೂ ಕಾರ್ಯಕರ್ತರು ತಮ್ಮ ಕಷ್ಟಗಳನ್ನು ಜೆಡಿಎಸ್ ಮುಖಂಡ ಎಮ್ ಆರ್ ಮಂಜುನಾಥ್ ರವರ ಜೊತೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಂಜುನಾಥ್ ಆಪರೇಷನ್ ರೋಗಿಗಳಿಗೆ ಸ್ಥಳದಲ್ಲಿ ವೈಯಕ್ತಿಕ ಸಹಾಯ ಮಾಡಿದರು. ಉಳಿದ ರೋಗಿಗಳನ್ನು ಬೆಂಗಳೂರಿಗೆ ಕರೆತರುವಂತೆ ತಮ್ಮ ಆಪ್ತ ಸಹಾಯಕರಿಗೆ ಸೂಚನೆ ನೀಡಿ ತಮ್ಮ ಆರೋಗ್ಯದ ಕಡೆ ಒತ್ತು ನೀಡುವಂತೆ ಸಲಹೆ ನೀಡಿದರು.

ಇನ್ನು ಹತ್ತಕ್ಕೂ ಹೆಚ್ಚು ಮಕ್ಕಳ ವಿದ್ಯಾಭ್ಯಾಸಕ್ಕೆ ವೈಯಕ್ತಿಕ ಧನ ಸಹಾಯ ಮಾಡಿದರು. ಒಟ್ಟಾರೆ ಬಂದಿದ್ದಂತಹ ಕಾರ್ಯಕರ್ತರಿಗೆ ತಮ್ಮ ಕೈಲಾದ ಮಟ್ಟಿಗೆ ಸ್ಪಂದಿಸಿದ ಜೆಡಿಎಸ್ ಎಂ ಆರ್ ಮಂಜುನಾಥ್ ರವರ ಕಾರ್ಯವೈಖರಿಯನ್ನು ನೆರೆದಿದ್ದವರು ಪ್ರಶಂಶಿಸಿದರು.

andolanait

Recent Posts

ದಿ ಕೇರಳ ಸ್ಟೋರಿ-2 : ಸತ್ಯ V/S ಅಜೆಂಡಾ..!

ವಿವಾದಾಸ್ಪದ ‘ದಿ ಕೇರಳ ಸ್ಟೋರಿ-೨ ಗೋಸ್ ಬಿಯಾಂಡ್’ ಚಲನಚಿತ್ರ ಪ್ರದರ್ಶನಕ್ಕೆ ಕೇರಳದ ಹೈಕೋರ್ಟ್‌ನ ವಿಭಾಗೀಯ ಪೀಠ ಶುಕ್ರವಾರ ಹಸಿರು ನಿಶಾನೆ…

3 seconds ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಕಾವೇರುತ್ತಿರುವ ತಮಿಳುನಾಡು ವಿಧಾನಸಭೆ ಚುನಾವಣೆ

ತಮಿಳುನಾಡಿನಲ್ಲಿ ಬೇಸಿಗೆಯ ಸುಡು ಬಿಸಿಲಿಸಿನ ನಡುವೆ ವಿಧಾನಸಭೆಯ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಚುನಾವಣೆಯು ಏಪ್ರಿಲ್ ಕೊನೆಯ ವಾರದೊಳಗೆ…

7 mins ago

ರಂಜಾನ್ ಅಂದರೆ ಹಬ್ಬವಲ್ಲ ; ಹಬ್ಬದ ಮೊದಲಿನ ಉಪವಾಸ

ಖದೀಜಾ ಉಮೈರಾ ರಂಜಾನಿಗೆ ಒಂದು ಹಬ್ಬದ ಗುಣವಿದೆ. ಹಾಗಾಗಿ ನಮಗೆಲ್ಲಾ ಅದು ಹಬ್ಬದಂತೆ ಭಾಸವಾಗುವುದು ಸಹಜ. ಇದು ಇಸ್ಲಾಮಿಕ್ ಕ್ಯಾಲೆಂಡರಿನ…

13 mins ago

ಡಾ.ಬೃಂದಾ ಸುಹಾಸ್ ಸೈಕ್ಲಿಂಗ್ ಧ್ಯಾನ

ಅಕ್ಷತಾ ಸೈಕ್ಲಿಂಗ್‌ನಲ್ಲಿ ‘ಸೂಪರ್ ರಾಂಡೋನಿಯರ್’ ಬಿರುದಾಂಕಿತ ಮೈಸೂರಿನ ಮೊದಲ ಮಹಿಳೆ ಡಾ.ಬೃಂದಾ ಗೋಧಿ. ಡಾ.ಬೃಂದಾ ಮೈಸೂರಿನ ಜೆಎಸ್‌ಎಸ್ ದಂತ ವೈದ್ಯಕೀಯ…

17 mins ago

ಕ್ಷೀಣವಾಗುತ್ತಿರುವ ಟ್ರಿಣ್ ಟ್ರಿಣ್ ಸದ್ದು

ಚಂದ್ರಶೇಖರ್ ಮೂರ್ತಿ ಕೆ.ಎಸ್. ಮೈಸೂರಿಗರಿಗೆ ಬೇಡವಾದರೇ ಈ ಹಸಿರು ಸುಂದರಿಯರು ಸಾಂಸ್ಕ ತಿಕ ಪರಂಪರೆ ಹೊಂದಿರುವ ಮೈಸೂರಿ ನಲ್ಲಿ ಪರಿಸರ…

22 mins ago

ವೀರನಪುರ ಬಳಿ ಟಿಪ್ಪರ್ ಪಲ್ಟಿ: ಚಾಲಕ ಸಾವು

ಚಾಮರಾಜನಗರ: ತಾಲ್ಲೂಕಿನ ವೀರನಪುರ ಸಮೀಪವಿರುವ ಕರಿಕಲ್ಲು ಕ್ವಾರಿಯೊಂದರಲ್ಲಿ ಟಿಪ್ಪರ್ ಮಗುಚಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.…

11 hours ago