ಜಿಲ್ಲೆಗಳು

ಪ್ರವಾಸಿಗರು ಕಂಡ ದಸರಾ

ಮೈಸೂರೇ ಸ್ವರ್ಗ

ಮೈಸೂರು ನನ್ನ ನೆಚ್ಚಿನ ಜಾಗ. ನನ್ನ ವಿದ್ಯಾಭಾಸ್ಯ ಇಲ್ಲಿಯೇ ಆಗಿದ್ದು, ಇಲ್ಲಿ ನೆನಪು, ಭಾವನೆಗಳು ಸಾಕಷ್ಟಿವೆ. ಹಾಗಾಗಿ, ಪ್ರತಿ ವರ್ಷ ದಸರಾ ಸಮಯಕ್ಕೆ ಇಲ್ಲಿಗೆ ಬಂದು ಒಂದಷ್ಟು ಮೈಸೂರು ಸುತ್ತಲಿನ ತಾಣಗಳಿಗೆ ಭೇಟಿ ನೀಡುವುದು, ದಸರಾ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುವುದು ಎಂದರೆ ನನಗೆ ಬಲುಪ್ರಿಯ. ದಸರಾ ಎಂದರೇ ಕೇವಲ ಜಂಬೂ ಸವಾರಿ ಎಂಬ ಬಗ್ಗೆ ಅನೇಕರು ಮಾತನಾಡುತ್ತಾರೆ. ನನಗೆ ಇಲ್ಲಿನ ಬಣ್ಣ ಬಣ್ಣದ ದೀಪಾಲಾಂಕಾರದ ನಡುವೆ ಸಂಚಾರ ಮಾಡುವುದೆಂದರೆ ಎಲ್ಲಿಲ್ಲದ ಆಸೆ. ಮೈಸೂರೇ ಸ್ವರ್ಗ.

ಜಯಪ್ರಧ, ಖಾಸಗಿ ಕಂಪೆನಿ ಉದ್ಯೋಗಿ, ಬೆಂಗಳೂರು

————————

ಜಂಬೂ ಸವಾರಿ ನೋಡುವುದೇ ಧನ್ಯತೆ

ಮೈಸೂರು ದಸರಾ, ಜಂಬೂ ಸವಾರಿ ಇಲ್ಲಿನ ಇತಿಹಾಸ, ವೈಭವದ ಬಗ್ಗೆ ಸಾಕಷ್ಟು ಕೇಳಿದ್ದೆ. ಆದರೆ, ಪ್ರತ್ಯಕ್ಷವಾಗಿ ನೋಡುವ, ಸುತ್ತಾಡುವ ಅವಕಾಶಗಳು ಸಿಕ್ಕಿದ್ದು ಕಡಿಮೆಯೇ, ನಾನು ಮೈಸೂರಿನ ಹುಡುಗಿಯನ್ನು ಮದುವೆಯಾದ ನಂತರ ಪ್ರತಿ ವರ್ಷ ದಸರಾ ದಿನಗಳನ್ನು ಇಲ್ಲಿ ಕಳೆಯುತ್ತಾ ಆನಂದಿಸುತ್ತೇನೆ. ಸಾಧ್ಯವಾದಷ್ಟು ಎಲ್ಲ ಕಾರ್ಯಕ್ರಮಗಳನ್ನು ಮತ್ತು ಸ್ಥಳಗಳನ್ನು ನೋಡಲು ಸಮಯ ಮಾಡಿಕೊಳ್ಳುತ್ತೇನೆ. ಆನೆಗಳು ಚಾಮುಂಡೇಶ್ವರಿಯ ವಿಗ್ರಹವನ್ನು ಹೊತ್ತು ಸಾಗುವುದನ್ನು ನೋಡುವುದೇ ಧನ್ಯತೆ.

ಪ್ರಭ್ಜೋತ್ ಸಿಂಗ್, ಖಾಸಗಿ ಕಂಪೆನಿ ನೌಕರ, ಅಮೃತಸರ್, ಪಂಜಾಬ್

andolanait

Recent Posts

ಗ್ಯಾರಂಟಿ ಪರಿಷ್ಕರಣೆ; ಅರ್ಹರಿಗೆ ಅನ್ಯಾಯ ಆಗಬಾರದು

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ್ದರು. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ,…

23 mins ago

ರಾಜ್ಯ ರಾಜಕಾರಣದ ಬೆಳವಣಿಗೆಯ ಲಾಭ ಪಡೆಯಲು ಬಿಜೆಪಿ-ಜಾ.ದಳ ಮಿತ್ರಕೂಟ ಯತ್ನ

ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ  ಮುಂಬರುವ ವಿಧಾನಸಭಾ ಚುನಾವಣೆಗೆ ತಂತಮ್ಮ ಪಕ್ಷದ ವೈಯಕ್ತಿಕ ಬಲ ಹೆಚ್ಚಿಸಿಕೊಳ್ಳಲೂ ಕೂಡ ತಂತ್ರ ರಾಜ್ಯ ಕಾಂಗ್ರೆಸ್‌ನ…

26 mins ago

ಕೊಡಗಿನ ಮಲ್ಲಳ್ಳಿ ಫಾಲ್ಸ್‌ನಲ್ಲಿ ಅಭದ್ರತೆ

ಲಕ್ಷ್ಮೀಕಾಂತ್ ಕೊಮಾರಪ್ಪ ಎಚ್ಚರಿಕೆ ಫಲಕ, ಕಾವಲು ಸಿಬ್ಬಂದಿ ಇಲ್ಲ; ಪ್ರವಾಸಿಗರಿಗೆ ಇಲ್ಲಿಲ್ಲ ರಕ್ಷಣೆ ಸೋಮವಾರಪೇಟೆ: ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ…

33 mins ago

ಮುಚ್ಚುವ ಆತಂಕದಲ್ಲಿ ಶತಮಾನ ಕಂಡ ಶಾಲೆ

ಮಂಜು ಕೋಟೆ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮಾದರಿ ಶಾಲೆ; ಮಕ್ಕಳ ದಾಖಲಾತಿಯೇ ಇಲ್ಲದೆ ೧, ೨ನೇ ತರಗತಿಗಳು…

39 mins ago

ಸರ್ಕಾರಿ ಕಚೇರಿ; ಮೂಲ ಸೌಕರ್ಯಗಳಿಗೆ ಗೋರಿ!

ಪ್ರಶಾಂತ್ ಎಸ್. ಮೈಸೂರು : ಇಲ್ಲಿ ಕುಡಿಯಲು ನೀರಿಲ್ಲ... ಕುಳಿತುಕೊಳ್ಳಲು ಕುರ್ಚಿ ಇಲ್ಲ... ನಿಸರ್ಗ ಕರೆಗೆ ತುರ್ತಾದರೆ ಪರಿಸ್ಥಿತಿ ಏನೋ…

46 mins ago