ಮೈಸೂರೇ ಸ್ವರ್ಗ
ಮೈಸೂರು ನನ್ನ ನೆಚ್ಚಿನ ಜಾಗ. ನನ್ನ ವಿದ್ಯಾಭಾಸ್ಯ ಇಲ್ಲಿಯೇ ಆಗಿದ್ದು, ಇಲ್ಲಿ ನೆನಪು, ಭಾವನೆಗಳು ಸಾಕಷ್ಟಿವೆ. ಹಾಗಾಗಿ, ಪ್ರತಿ ವರ್ಷ ದಸರಾ ಸಮಯಕ್ಕೆ ಇಲ್ಲಿಗೆ ಬಂದು ಒಂದಷ್ಟು ಮೈಸೂರು ಸುತ್ತಲಿನ ತಾಣಗಳಿಗೆ ಭೇಟಿ ನೀಡುವುದು, ದಸರಾ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುವುದು ಎಂದರೆ ನನಗೆ ಬಲುಪ್ರಿಯ. ದಸರಾ ಎಂದರೇ ಕೇವಲ ಜಂಬೂ ಸವಾರಿ ಎಂಬ ಬಗ್ಗೆ ಅನೇಕರು ಮಾತನಾಡುತ್ತಾರೆ. ನನಗೆ ಇಲ್ಲಿನ ಬಣ್ಣ ಬಣ್ಣದ ದೀಪಾಲಾಂಕಾರದ ನಡುವೆ ಸಂಚಾರ ಮಾಡುವುದೆಂದರೆ ಎಲ್ಲಿಲ್ಲದ ಆಸೆ. ಮೈಸೂರೇ ಸ್ವರ್ಗ.
–ಜಯಪ್ರಧ, ಖಾಸಗಿ ಕಂಪೆನಿ ಉದ್ಯೋಗಿ, ಬೆಂಗಳೂರು
————————
ಜಂಬೂ ಸವಾರಿ ನೋಡುವುದೇ ಧನ್ಯತೆ
ಮೈಸೂರು ದಸರಾ, ಜಂಬೂ ಸವಾರಿ ಇಲ್ಲಿನ ಇತಿಹಾಸ, ವೈಭವದ ಬಗ್ಗೆ ಸಾಕಷ್ಟು ಕೇಳಿದ್ದೆ. ಆದರೆ, ಪ್ರತ್ಯಕ್ಷವಾಗಿ ನೋಡುವ, ಸುತ್ತಾಡುವ ಅವಕಾಶಗಳು ಸಿಕ್ಕಿದ್ದು ಕಡಿಮೆಯೇ, ನಾನು ಮೈಸೂರಿನ ಹುಡುಗಿಯನ್ನು ಮದುವೆಯಾದ ನಂತರ ಪ್ರತಿ ವರ್ಷ ದಸರಾ ದಿನಗಳನ್ನು ಇಲ್ಲಿ ಕಳೆಯುತ್ತಾ ಆನಂದಿಸುತ್ತೇನೆ. ಸಾಧ್ಯವಾದಷ್ಟು ಎಲ್ಲ ಕಾರ್ಯಕ್ರಮಗಳನ್ನು ಮತ್ತು ಸ್ಥಳಗಳನ್ನು ನೋಡಲು ಸಮಯ ಮಾಡಿಕೊಳ್ಳುತ್ತೇನೆ. ಆನೆಗಳು ಚಾಮುಂಡೇಶ್ವರಿಯ ವಿಗ್ರಹವನ್ನು ಹೊತ್ತು ಸಾಗುವುದನ್ನು ನೋಡುವುದೇ ಧನ್ಯತೆ.
–ಪ್ರಭ್ಜೋತ್ ಸಿಂಗ್, ಖಾಸಗಿ ಕಂಪೆನಿ ನೌಕರ, ಅಮೃತಸರ್, ಪಂಜಾಬ್
ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…
ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…
ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…
ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…
ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…