ಜಿಲ್ಲೆಗಳು

‘ಬಡತನದಿಂದ ಸಾಧನೆ ಅಸಾಧ್ಯ ಎಂಬ ಕೀಳರಿಮೆ ಬೇಡ’

ಮೈಸೂರು: ಬಡತನದಿಂದ ಸಾಧನೆ ಅಸಾಧ್ಯ ಎಂಬ ಕೀಳರಿಮೆ ಬೇಡ. ಅವಮಾನ, ಬಡತನವನ್ನು ಸಹಿಸಿಕೊಂಡು ಓದಿದವರು, ದುಡಿದವರು ಜೀವನದಲ್ಲಿ ಎತ್ತರಕ್ಕೆ ಬೆಳೆದು ಸಾಧನೆ ಮಾಡಿದ್ದಾರೆ ಎಂದು ಕ್ಲಾಸಿಕ್ ಎಜುಕೇಷನ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಎಸ್.ಉಪ್ಪಾರ್ ತಿಳಿಸಿದರು.
ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ವತಿಯಿಂದ ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ೨೭ನೇ ವಾರ್ಷಿಕ ಪ್ರತಿಭಾ ಪುರಸ್ಕಾರ, ನಿವೃತ್ತ, ಬಡ್ತಿ ಹೊಂದಿದ ಅಧಿಕಾರಿಗಳು ಹಾಗೂ ನೌಕರರು, ಸಾಧಕರು ಹಾಗೂ ಸಮಾಜ ಸೇವಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮುಖದಲ್ಲಿ ಸೌಂದರ್ಯ ಕಾಣಬೇಕೆಂದರೆ ನಾವು ಮಾಡುವ ಕೆಲಸದಲ್ಲಿ ಸೌಂದರ್ಯವಿರಬೇಕು. ಸಮಾಜ ವ್ಯಕ್ತಿಯನ್ನು ಗುರು ತಿಸುವುದು ಆತನ ಸೌಂದರ್ಯದಿಂದಲ್ಲ. ಆತನ ವ್ಯಕ್ತಿತ್ವ ಹಾಗೂ ಮಾಡುವ ಸಾಧನೆಯಿಂದ. ಆ ರೀತಿಯಾಗಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಭಗೀರಥ ಮಠದ ಪೀಠಾಧಿಪತಿ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮಳವಳ್ಳಿ ತಾಲ್ಲೂಕಿನ ಅಯ್ಯನ ಸರಗೂರು ಮಠದ ಮಹದೇವ ಸ್ವಾಮಿ, ಉಪ ಮಹಾಪೌರರಾದ ಡಾ.ರೂಪ, ಮುಡಾ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯಕುಮಾರ್, ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ಅಧ್ಯಕ್ಷ ಜವರಶೆಟ್ಟಿ, ಆದಾಯ ತೆರಿಗೆ ಇಲಾಖೆ ಉಪನಿರ್ದೇಶಕ ಲಕ್ಕಪ್ಪ ಹನುಮಣ್ಣನವರ್, ಎನ್ಷಿಯೆಂಟ್ ಸಾಲ್ಟ್ ಮೇಕರ್ಸ್‌ ಫೆಡರೇಷನ್ ಪದಾಧಿಕಾರಿ ಶ್ರೀರಾಮುಲು ಸಾಗರ, ಪ್ರೊ.ಎನ್.ಕೆ.ಇಪ್ಪಾರ್ ಕರ್, ಹರೀಶ್ ಚೌವ್ಹಾನ್ ಮಹತೋ, ಜಯಂತ್ ಸಾಗರ್, ಮುಖಂಡರಾದ ಎಸ್.ಬಸವರಾಜಪ್ಪ, ಹನುಮಂತಶೆಟ್ಟಿ, ವಿ.ಎಸ್.ವಿಷಕಂಠಯ್ಯ ಮತ್ತಿತರರು ಹಾಜರಿದ್ದರು.
ಪ್ರಶಸ್ತಿ ಪುರಸ್ಕೃತರು: ಅಂಶು ಐಸಿರಿ, ಯು.ಎಚ್.ನಿಶ್ಚಿತ, ಆರ್.ಅಭಯ್ ಕೃಷ್ಣ, ಆರ್.ಶ್ರೀವಲ್ಲಿ, ಸಿ.ನಿರೂಪಮ, ಎನ್.ವರ್ಷ, ನಂದಿನಿ, ಬಿ.ಎಲ್.ಸಿದ್ದರಾಜು, ಮಾನಸ ಅವರಿಗೆ ಶ್ರೀಭಗೀರಥ ವಿದ್ಯಾಶ್ರೀ, ಟಿ.ಕೀರ್ತಿ ಕುಮಾರ್, ಆರ್.ಲಕ್ಷ್ಮೀ ಅವರಿಗೆ ಶ್ರೀಭಗೀರಥ ಸ್ಪರ್ಧಾವಿಜೇತ ರತ್ನ, ವಿ.ವಿಕ್ರಮ್ ಯೋಗಿ ಅವರಿಗೆ ಶ್ರೀಭಗೀರಥ ಯೋಗಶ್ರೀ, ಆರ್.ಗೌತಮ್ ಅವರಿಗೆ ಶ್ರೀಭಗೀರಥ ಕಲಾರತ್ನ, ಯಶವಂತ್ ಅವರಿಗೆ ಶ್ರೀಭಗೀರಥ ಕ್ರೀಡಾರತ್ನ, ಕೆ.ಬಿ.ಯೋಗೇಶ್, ಗೋಪಾಲಶೆಟ್ಟಿ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

andolanait

Recent Posts

ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನ: ಮುದ್ದಾದ ಮರಿಗೆ ಜನ್ಮ ನೀಡಿದ ನೀರಾನೆ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…

7 hours ago

‘ಬಿಡದಿ ಟೌನ್‌ಶಿಪ್ ವಿರುದ್ಧ ಕಾನೂನು ಹೋರಾಟ’: ಕೇಂದ್ರ ಬೃಹತ್ ಕೈಗಾರಿಕಾ ಖಾತೆ ಸಚಿವ ಎಚ್‌ಡಿಕೆ ಘೋಷಣೆ

ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…

7 hours ago

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ

ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…

8 hours ago

ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…

10 hours ago

ಓದುಗರ ಪತ್ರ: ‘ಮನೆಗೊಂದು ಗ್ರಂಥಾಲಯ’ ಯೋಜನೆ ಯಶಸ್ವಿಯಾಗಲಿ

‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…

13 hours ago

ಓದುಗರ ಪತ್ರ: ವಿದ್ಯಾರ್ಥಿ ಬಸ್ ಪಾಸ್ ದೂರ ಮಿತಿ ಹೆಚ್ಚಿಸಲಿ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…

13 hours ago