ಜಿಲ್ಲೆಗಳು

‘ಯಾವ ತಾಯಿಗೂ ಇಂತಹ ಸ್ಥಿತಿ ಬರಬಾರದು…’

ಮುರುಘಾ ಶ್ರೀ ಲೈಂಗಿಕ ದೌರ್ಜನ್ಯ ಎಸಗಿರುವ ಬಾಲಕಿಯರ ತಾಯಿಯ ನೋವಿನ ನುಡಿ

ಮೈಸೂರು: ಅದೊಂದು ಮನಕಲಕುವ ಸನ್ನಿವೇಶ… ಮುಗ್ಧವಾಗಿ, ಆಟ- ಪಾಠಗಳಲ್ಲಿ ತಲ್ಲೀನವಾಗಿದ್ದ ನನ್ನ ಅಪ್ರಾಪ್ತ ಮಗಳನ್ನು ಸ್ವಾಮೀಜಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ವಿಚಾರ ಗೊತ್ತಾದರೂ ಕೂಡ ಅಸಹಾಯಕಳಾಗಿದ್ದೆ . ಯಾವ ತಾಯಿಗೂ ಇಂತಹ ಸ್ಥೀತಿ ಬರಬಾರದು ಎಂದು ಗದ್ಗದಿತ ಕಂಠದಿಂದ ಆ ಮಹಿಳೆ ಹೇಳುತ್ತಿದ್ದರೆ, ಕೇಳುತ್ತಿದ್ದವರು ಸಂತೈಸಲು ಪದಗಳಿಲ್ಲದೆ, ಮೌನವಾಗಿಯೇ ಆಕೆಯ ನೋವಿಗೆ ಮಮ್ಮಲ ಮರುಗಿದರು.

ಜನರ ಬಡತನವನ್ನೇ ಬಂಡವಾಳ ಮಾಡಿಕೊಂಡಿದ್ದ  ಸ್ವಾಮೀಜಿ ನನ್ನ ಮಕ್ಕಳಂತೆ ಇತರೆ ಮಕ್ಕಳನ್ನೂ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂಬ ಸತ್ಯ ಅಲ್ಲಿರುವವರಿಗೆ ಗೊತ್ತಿತ್ತು. ಆದರೂ ಕೂಡ ಆ ಪೋಷಕರೆಲ್ಲರೂ ಮೌನಕ್ಕೆ ಶರಣಾಗಿದ್ದುದು ದುರಂತ ಎಂದು ಆಕೆ ಆಕ್ರೋಶದಿಂದ ನುಡಿದರು.

ಹಲವಾರು ವರ್ಷಗಳಿಂದ ಮಠದಲ್ಲಿ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ದುಷ್ಕೃತ್ಯ ನಿರಂತರವಾಗಿತ್ತು. ಸ್ವಾಮೀಜಿಯು ವಸತಿ ನಿಲಯದಲ್ಲಿದ್ದ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಅನೇಕ ಮಕ್ಕಳು ನನ್ನ ಬಳಿ ನೋವು ತೋಡಿಕೊಂಡಿದ್ದರು. ಪ್ರಭಾವಿಯಾದ ಸ್ವಾಮೀಜಿ ವಿರುದ್ಧ ಮಾತನಾಡುವ ಧೈರ್ಯ ನನಗಿರಲಿಲ್ಲ . ಅದೊಂದು ದಿನ ನನ್ನ ಬಳಿಗೆ ಬಂದ ಮಗಳು ಅಳುತ್ತಲೇ ನಡೆಯುತ್ತಿರುವ ವಿಚಾರ ಹೇಳಿದ್ದಳು. ಸ್ವಾಮೀಜಿ ನನ್ನನ್ನು ಮಧ್ಯಾಹ್ನದ ವೇಳೆೆಯೇ ಅವರ ಕೊಠಡಿಗೆ ಕರೆಸಿಕೊಳ್ಳುತ್ತಾರೆ. ನನಗೆ ಇನ್ನಿಲ್ಲದ ಹಿಂಸೆ ನೀಡುತ್ತಾರೆ. ನನಗೆ ಹಾಸ್ಟೆನಲ್ಲಿ ಇರಲು ಇಷ್ಟವಿಲ್ಲ ಎಂದು ಹೇಳಿದಳು. ಆದರೂ ಅಸಹಾಯಕಳಾದ ನಾನು,  ಮಗಳನ್ನು ಮತ್ತೆ ಹಾಸ್ಟಲ್‌ಗೆ ಕಳುಹಿಸಿದೆ ಎಂದಾಗ ಧ್ವನಿಯಲ್ಲಿ ದುಃಖ ಚಾಚಿಕೊಂಡಿತ್ತು.

ಇದೀಗ ಸತ್ಯವನ್ನು ಹೇಳಿರುವ ನನಗೆ ಅಲ್ಲಿನವರು ತೊಂದರೆ ಉಂಟುವಾಡಬಹುದು. ಹೀಗಾಗಿ ಸರ್ಕಾರ ನನ್ನ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ವಸತಿ ವ್ಯವಸ್ಥೆಯನ್ನು ಮಾಡಿಕೊಡಬೇಕು. ನನಗೆ ಸೂಕ್ತ ರಕ್ಷಣೆಯನ್ನು ನೀಡಬೇಕು. ನನಗೆ ಒಂದು ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದರು.

ಮಠದಲ್ಲಿರುವ ಮಗು ಯಾರದ್ದು? 

ಇಂತಹುದೊಂದು ಪ್ರಶ್ನೆ ಇದೀಗ ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಮುರಘಾ ಮಠದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗುವೊಂದಿರುವ ಬಗ್ಗೆ ಒಡನಾಡಿಯ ಪರಶು ಅವರಿಗೆ ಮಾಹಿತಿ ದೊರಕಿದೆ. ಮಗುವಿನ ತಂದೆ ಯಾರೂ ಎಂಬುದು ಮಠದ ಎಲ್ಲರಿಗೂ ಗೊತ್ತಿದೆ ಎಂದು ಕೆಲವರು ವಾಹಿತಿ ನೀಡಿದ್ದಾರೆ.

ಈ ಸಂಬಂಧ ಮಗುವಿನ ಮಗ್ಗೆ ವಾಹಿತಿ ಪಡೆಯುವ ಉದ್ದೇಶದಿಂದ ಪರಶು ಅವರು ನ್ಯಾಯಾಲಯದ ಗಮನಕ್ಕೆ ಈ ವಿಚಾರವನ್ನು ತಂದಿದ್ದಾರೆ. ಇದೀಗ ಮಠಕ್ಕೆ ತೆರಳಿರುವ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಮಗುವನ್ನು ಕರೆತಂದಿದ್ದಾರೆ.

‘ಸಿಬಿಐ ತನಿಖೆಯಾಗಲಿ’

ಈ ಪ್ರಕರಣದ ಸಂಬಂದ ಮಾತನಾಡಿದ ಒಡನಾಡಿ ಸಂಸ್ಥೆಯ ನಿರ್ದೇಶಕರಲ್ಲೊಬ್ಬರಾದ ಪರಶುರಾಮ್ ಅವರು, ಇದೊಂದು ದೊಡ್ಡ ಪ್ರಕರಣವಾಗಿದೆ.  ಸ್ವಾಮೀಜಿಯು ಕನಿಷ್ಠ ಮೂವತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

andolana

Recent Posts

ನೀಟ್‌ ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ರದ್ದು: ಸೆ.5ರ ಪ್ರತಿಭಟನೆ ಹಿಂಪಡೆದ ಸಿಜೆಪಿ

ನವದೆಹಲಿ: ಸೆಪ್ಟೆಂಬರ್‌ 5ರಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯನ್ನು ಹಿಂಪಡೆಯಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸುಪ್ರೀಂ ಕೋರ್ಟ್‌ಗೆ…

12 hours ago

ನೀಟ್‌ ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ರದ್ದು

ನವದೆಹಲಿ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದೆ. ಜುಲೈನಲ್ಲಿ…

13 hours ago

ನೇಪಾಳ ಪ್ರವಾಹ | ಮೃತರ ಸಂಖ್ಯೆ 939ಕ್ಕೆ ಏರಿಕೆ, ಇನ್ನೂ ಸುಮಾರು 4,000 ಜನ ಕಣ್ಮರೆ

ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ ಮುಂದುವರಿದಿದ್ದು, ಮೃತರ ಸಂಖ್ಯೆ 939ಕ್ಕೆ ಏರಿಕೆಯಾಗಿದೆ. ಇನ್ನೂ ಸುಮಾರು 4 ಸಾವಿರ ಜನರು…

14 hours ago

ಮಡಿಕೇರಿ: ಕೆರೆಗೆ ಹಾರಿ ತಾಯಿ ಮಗಳು ಆತ್ಮಹತ್ಯೆ

ಮಡಿಕೇರಿ: ತಲಕಾವೇರಿ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ತಾಯಿ ಮತ್ತು ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.…

15 hours ago

ಮಡಿಕೇರಿ: ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ!

ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ ಆತಂಕ ಮೂಡಿಸಿದೆ. ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾಮದ ಪೊಲಮಾನಿ…

15 hours ago

ಓದುಗರ ಪತ್ರ: ನೀರು ಸೋರಿಕೆ ತಡೆಗಟ್ಟಿ

ಮೈಸೂರಿನ ಚಾಮರಾಜ ಮೊಹದ ಸೋನಾರ್ ಬೀದಿಯಲ್ಲಿ ಸಾರ್ವಜನಿಕ ನಲ್ಲಿಗೆ ಸಂಪರ್ಕ ಕಲ್ಪಿಸುವ ಪೈಪ್ ಪಡೆದುಹೋಗಿದ್ದು, ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.…

22 hours ago