ಜಿಲ್ಲೆಗಳು

ನಂಜನಗೂಡು : ಮಗನ ಸಾವಿಗೆ ನ್ಯಾಯ ಕೋರಿ ದಂಪತಿ ಪ್ರತಿಭಟನೆ

ನಂಜನಗೂಡು :  ಎರಡು ವರ್ಷಗಳ ಹಿಂದೆ ರಸ್ತೆ ಅಫಘಾತದಲ್ಲಿ ಮೃತನಾದ ಮಗನ ಸಾವಿಗೆ ಕಾರಣನಾದ ಆರೋಪಿಯನ್ನು ಈವರೆಗೂ ಬಂಧಿಸಿಲ್ಲ ಎಂದು ಆರೋಪಿಸಿ ಇಲ್ಲಿನ ಪುರಸಭೆಯ ಮಾಜಿ ಸದಸ್ಯರಾದ, ಬಿಜೆಪಿ ಮುಖಂಡರಾದ ಮಹೇಶ್ ಕುಮಾರ್ ಹಾಗೂ ಸುಧಾ ಮಹೇಶ್ ಕುಮಾರ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಪಾನಮತ್ತನಾಗಿ ಕಾರು ಚಲಾಯಿಸಿ ತಮ್ಮ ಮಗನ ಬೈಕಿಗೆ ಹಿಂಬದಿಯಿಂದ ಗುದ್ದಿ ಅಪಘಾತವೆಸಗಿದ ದಿಲೀಪ ಜೈನ್ ಎಂಬಾತನನ್ನು ಬಂಧಿಸಿ ಮಗನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಗೋವಿಂದರಾಜು ಆರೋಪಿಯನ್ನು ಪತ್ತೆಹಚ್ಚಲು ಇಲಾಖೆ ಈವರೆಗೆ ಕೈಗೊಂಡಿದ್ದ ಕ್ರಮಗಳನ್ನು ವಿವರಿಸಿದರು. ಆದರೆ, ವಾಹನಗಳೇ ಓಡಾಡದ ಕೊರೊನಾ ಸಮಯದಲ್ಲಿ ಆರೋಪಿ ಇಲ್ಲಿಂದ ಪರಾರಿಯಾಗಲು ಯಾರು ಕಾರಣ? ಆತ ಪರಾರಿಯಾದ ತಿಂಗಳಲ್ಲಿ ಆತನ ಕುಟುಂಬವೇ ತವರಿಗೆ ತೆರಳಿದೆ. ಆತನನ್ನು ಬಂಧಿಸಲು ಇಲಾಖೆ ಬದ್ಧವಾಗಿದೆಯೇ ಎಂದು ದಂಪತಿ ಪ್ರಶ್ನಿಸಿದರು. ನಂತರ ಎಎಸ್‌ಪಿ ನಂದಿನಿ ಮತ್ತು ಮುಖಂಡ ಯು.ಎನ್.ಪದ್ಮನಾಭರಾವ್ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸಲು ಯತ್ನಿಸಿದರು. 1 ತಿಂಗಳಲ್ಲಿ ಆರೋಪಿಯನ್ನು ಹೆಡೆಮುರಿ ಕಟ್ಟಿ ತರುವುದಾಗಿ ನಂದಿನಿಯವರು ನೀಡಿದ ಭರವಸೆ ಮೇರೆಗೆ ಪ್ರತಿಭಟನೆಯನ್ನು ಮಹೇಶ ಕುಮಾರ್ ದಂಪತಿ ವಾಪಸ್ ಪಡೆದರು.

ಪ್ರತಿಭಟನೆಗೆ ಪುರಸಭೆಯ ಮಾಜಿ ಸದಸ್ಯರಾದ ಬಿಜೆಪಿಯ ಮಂಗಳ(ಗಜಾ), ಕೆ.ಜಿ.ಆನಂದ, ಹಾಲಿ ಸದಸ್ಯ ಸತ್ಯನಾರಾಯಣ ಕದಂ, ಪ್ರದೀಪ, ನಂಜನಗೂಡು ವಕೀಲರ ಸಂಘದ ಅಧ್ಯಕ್ಷ ಸುರೇಶ, ಮುರಳಿ, ನಾಗರಾಜು, ಉಮೇಶ (ಮೋದಿ) ಮಂಜುನಾಥ, ಗೋಪಿ ಇತರರು ಭಾಗಿಯಾಗಿದ್ದರು.

 

 

andolanait

Recent Posts

ಓದುಗರ ಪತ್ರ: ಕಠಿಣ ಕ್ರಮ ಅಗತ್ಯ

ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್‌ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…

8 hours ago

ಓದುಗರ ಪತ್ರ: ಕಸ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಅಗತ್ಯ

ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…

8 hours ago

ಕೇಂದ್ರ ಸರ್ಕಾರದ ಮೇಲೆ ಜೆನ್ ಝೀ ಚಳುವಳಿಯ ತೂಗುಗತ್ತಿ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…

8 hours ago

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

11 hours ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

11 hours ago

ಅಳಿಯ ಅಲ್ಲ, ಮಗಳ ಗಂಡ!

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…

11 hours ago