ಮೈಸೂರು

ಮೈಸೂರು | ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಟ್ರಾಮಾ ಸೌಲಭ್ಯ : ಶಾಸಕ ದರ್ಶನ್‌ ಮನವಿಗೆ ಸ್ಪಂದಿಸಿದ ಸರ್ಕಾರ

ನಂಜನಗೂಡು : ಶಾಸಕ ದರ್ಶನ್ ದ್ರುವನಾರಾಯಣರ ಪ್ರಯತ್ನದಿಂದಾಗಿ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ ಟ್ರಾಮಾ ಸೌಲಭ್ಯ ಸಿಕ್ಕಿದೆ.

ಎರಡು ರಾಷ್ಟ್ರೀಯ ಹೆದ್ದಾರಿಗಳಿಂದಾಗಿ ಅಫಘಾಥದ ಬೀಡಾಗಿರುವ ದಕ್ಷೀಣ ಕಾಶಿ ನಂಜನಗೂಡಿಗೆ ಒಂದು ಅಫಘಾತ ತುರ್ತು ಚಿಕೀತ್ಸಾ ಘಟಕ ಟ್ರಾಮಾ ಸೆಂಟರ್ ತರುವ ಶಾಸಕ ದರ್ಶನ್ ದ್ರುವನಾರಾಯಣರ ಸತತ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಿಭಿಸಿದೆ.

ಬೆಂಗಳೂರು ನೀಲಗಿರಿ ರಸ್ತೆ ಬಾಗಲಕೋಟೆ ಬಿಳಗಿರಿ ರಂಗನ ಬೆಟ್ಟದ ರಸ್ತೆಗಳೆಂಬ ಎರಡು ಹೆದ್ದಾರಿಗಳು ಹಾದೂ ಹೊಗಿರುವ ನಂಜನಗೂಡಲ್ಲಿ ಇತ್ತೀಚಿಗೆ ರಸ್ತೆ ಅಫಘಾಥಗಳು ಹೆಚ್ಚಾಗಿದ್ದವು. ಪ್ರತಿನಿತ್ಯ ರಸ್ತೆ ಅಫಘಾತಗಳು ಕೇಳಿ ಬರುತ್ತಿದ್ದನ್ನು ತಿಳಿದ ಶಾಸಕ ದರ್ಶನ್ ದ್ರುವನಾರಾಯಣ ಅಫಘಾಥ ಕಡಿಮೆ ಮಾಡುವದರ ಜೊತೆ ಅಫಘಾತದ ಗಾಯಾಳುಗಳಿಗೆ ತುರ್ತು ಚಿಕೀತ್ಸೆ ದೊರಕಬೇಕು ಎಂದು ಆಲೋಚಿಸಿದ್ದರು. ಗಾಯಾಳುಗಳಿಗೆ ಸದ್ಯ ನಂಜನಗೂಡಲ್ಲಿ ತುರ್ತು ಚಿಕೀತ್ಸೆ ನೀಡಲು ಯಾವುದೇ ಸೌಲಭ್ಯವಿಲ್ಲದಿರುವದರಿಂದ ಅವರನ್ನು ಜಿಲ್ಲಾ ಕೇಂದ್ರ ಮೈಸೂರಿಗೆ ಕರೆದೊಯ್ಯಬೇಕಿತ್ತು. ಜಿಲ್ಲಾ ಕೇಂದ್ರಕ್ಕೆ ಹೋಗುವ ಮೊದಲೇ ಚಿಕಿತ್ಸೆ ದೊರೆಯದೇ ಅನೇಕರು ಮೃತ ಪಟ್ಟ ಘಟನೆಗಳನ್ನು ಗಮನಿಸಿದ ಶಾಸಕರು ಅಫಘಾಥದ ಬೀಡಾಗಿರುವ ತಮ್ಮ ಕ್ಷೇತ್ರದಲ್ಲೇ ಟ್ರಾಮಾ ಸೆಂಟರ್ ಘಟಕವನ್ನು ಆರಂಭಿಸಿದರೆ ಅನೇಕರ ಪ್ರಾಣ ಉಳಿಯಬಹುದು ಎಂದು ಆಲೋಚಿಸಿ ಆರೋಗ್ಯ ಇಲಾಖೆ ಹಾಗೂ ಸರ್ಕಾರದೊಂದಿಗೆ ಎರಡು ವರ್ಷಗಳಿಂದಲೂ ಪ್ರಯತ್ನಿಸುತ್ತಲೇ ಇದ್ದರು ಅವರ ಸತತ ಪರಿಶ್ರಮಕ್ಕೆ ಈಗ ಫಲಕೊಡುವ ಭರವಸೆ ವಿಧಾನ ಸಭೆಯಲ್ಲಿ ದರ್ಶನರಿಗೆ ಸಿಕ್ಕಿದೆ.

ತಮ್ಮ ಕ್ಷೇತ್ರದಲ್ಲಿ ಕಳೆದ ವರ್ಷ ೩೨೬ ಕ್ಕೂ ಹೆಚ್ಚು ರಸ್ತೆ ಅಫಘಾಥಗಳು ನಡೆದಿದ್ದು ೧೨೦ಕ್ಕೂ ಹೆಚ್ಚು ಸಾವುಗಳಾಗಿದ್ದನ್ನು ಚುಕ್ಕೆ ಪ್ರಶ್ನೆಯ ಮೂಲಕ ವಿಧಾನ ಸಭೆಯ ಮುಂದಿಟ್ಟ ಶಾಸಕರಿಗೆ ರಾಜ್ಯದ ಆರೋಗ್ಯ ಸಚಿವ ದಿನೇಶ ಗುಂಡುರಾವ ನಿಮ್ಮ ಮಾನವೀಯ ಕಳಕಳಿಯನ್ನು ಮನಗಂಡ ಸರ್ಕಾರ ನಂಜನಗೂಡೂ ಸೇರಿದಂತೆ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗೂ ಶಿಘ್ರದಲ್ಲೇ ಟ್ರಾಮಾ ಸೌಲಭ್ಯಗಳನ್ನು ನೀಡಲು ನಿರ್ಧರಿಸಿದೆ ಹಾಗೂ ಹೆಚ್ಚುವರಿಯಾಗಿ ತಾಲೂಕು ಆಸ್ಪತ್ರೆಗೆ ಟ್ರಾಮಾ ಸೌಲಭ್ಯಗಳ ಜೊತೆ ಅಂಬುಲೆನ್ಸ್ ಸಹ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ನಂಜನಗೂಡು ಶಾಸಕ ದರ್ಶನ ದ್ರುವನಾರಾಯಣರಿಂದಾಗಿ ಈಗ ಜಿಲ್ಲೆಯ ಎಲ್ಲ ತಾಲೂಕೂಗಳಿಗೂ ಟ್ರಾಮಾ ಸೌಲಭ್ಯ ದೊರೆಯು ದೊರಕಿದಂತಾಗಿದೆ

ಆಂದೋಲನ ಡೆಸ್ಕ್

Recent Posts

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

10 hours ago

ಓದುಗರ ಪತ್ರ: ಎಲ್‌ಇಡಿ ಪರದೆ ಮೂಲಕ ಚಾಮುಂಡಿ ದರ್ಶನ ಮಾಡಿಸಿ

ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ…

10 hours ago

ಓದುಗರ ಪತ್ರ: ಪಾಲಿಕೆ ಆಯುಕ್ತರಾದ ಎಂ.ಕೆ. ಸವಿತಾ ನಡೆ ಶ್ಲಾಘನೀಯ

ಈ ಬಾರಿಯ ಸ್ವಾತಂತ್ರೋತ್ಸವದ ಅಂಗವಾಗಿ ೮೦ ತ್ಯಾಜ್ಯ ಹಾಕುವ ತಾಣಗಳನ್ನು ಗುರುತಿಸಿ, ಸ್ವಾತಂತ್ರೋತ್ಸವ ಸ್ವಚ್ಛತಾ ಅಭಿಯಾನ ೨೦೨೬ರ ಪ್ರಯುಕ್ತ ೮೦…

10 hours ago

ಓದುಗರ ಪತ್ರ: ಏನೇ ಓದಿದ್ದರೂ ಬೇಕು ಪಿಸಿ ಹುದ್ದೆ !

ರಾಜ್ಯದಲ್ಲಿ ೩,೭೦೦ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುzಗಳಿಗೆ, ೩ ಲಕ್ಷದ ೭೭ ಸಾವಿರ ಅಭ್ಯರ್ಥಿಗಳು ಇದೇ ಭಾನುವಾರ ಲಿಖಿತ ಪರೀಕ್ಷೆ…

10 hours ago

ರವಿಯ ನೋಡ ಹೋಗಿ ಶಶಿಯ ಕಂಡುಬಂದೆ

ಭಾರತಿ ಬಿ ವಿ ವ್ಯಾಲಿ ಆಫ್ ಮಾನ್ಯುಮೆಂಟ್ಸ್‌ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ…

10 hours ago

ಕಾರ್ಗಿಲ್ ಕಾಲದ ಸುಬೇದಾರ್ ಹೈದರ್ ಮೈಸೂರಿನಲ್ಲಿದ್ದಾರೆ

ಅಕ್ಷತಾ ಹೈದರ್ ಅವರ ಮುತ್ತಾತ ಎಂ.ಬುಡಾನ್ ಬೇಗ್ ಮೈಸೂರಿನ ಮಹಾರಾಜರ ಪದಾತಿ ದಳದಲ್ಲಿ ಸುಬೇ ದಾರ್ ಮೇಜರ್ ಆಗಿ ಕರ್ತವ್ಯ…

10 hours ago