ಮೈಸೂರು

ಮೈಸೂರು | ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಟ್ರಾಮಾ ಸೌಲಭ್ಯ : ಶಾಸಕ ದರ್ಶನ್‌ ಮನವಿಗೆ ಸ್ಪಂದಿಸಿದ ಸರ್ಕಾರ

ನಂಜನಗೂಡು : ಶಾಸಕ ದರ್ಶನ್ ದ್ರುವನಾರಾಯಣರ ಪ್ರಯತ್ನದಿಂದಾಗಿ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ ಟ್ರಾಮಾ ಸೌಲಭ್ಯ ಸಿಕ್ಕಿದೆ.

ಎರಡು ರಾಷ್ಟ್ರೀಯ ಹೆದ್ದಾರಿಗಳಿಂದಾಗಿ ಅಫಘಾಥದ ಬೀಡಾಗಿರುವ ದಕ್ಷೀಣ ಕಾಶಿ ನಂಜನಗೂಡಿಗೆ ಒಂದು ಅಫಘಾತ ತುರ್ತು ಚಿಕೀತ್ಸಾ ಘಟಕ ಟ್ರಾಮಾ ಸೆಂಟರ್ ತರುವ ಶಾಸಕ ದರ್ಶನ್ ದ್ರುವನಾರಾಯಣರ ಸತತ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಿಭಿಸಿದೆ.

ಬೆಂಗಳೂರು ನೀಲಗಿರಿ ರಸ್ತೆ ಬಾಗಲಕೋಟೆ ಬಿಳಗಿರಿ ರಂಗನ ಬೆಟ್ಟದ ರಸ್ತೆಗಳೆಂಬ ಎರಡು ಹೆದ್ದಾರಿಗಳು ಹಾದೂ ಹೊಗಿರುವ ನಂಜನಗೂಡಲ್ಲಿ ಇತ್ತೀಚಿಗೆ ರಸ್ತೆ ಅಫಘಾಥಗಳು ಹೆಚ್ಚಾಗಿದ್ದವು. ಪ್ರತಿನಿತ್ಯ ರಸ್ತೆ ಅಫಘಾತಗಳು ಕೇಳಿ ಬರುತ್ತಿದ್ದನ್ನು ತಿಳಿದ ಶಾಸಕ ದರ್ಶನ್ ದ್ರುವನಾರಾಯಣ ಅಫಘಾಥ ಕಡಿಮೆ ಮಾಡುವದರ ಜೊತೆ ಅಫಘಾತದ ಗಾಯಾಳುಗಳಿಗೆ ತುರ್ತು ಚಿಕೀತ್ಸೆ ದೊರಕಬೇಕು ಎಂದು ಆಲೋಚಿಸಿದ್ದರು. ಗಾಯಾಳುಗಳಿಗೆ ಸದ್ಯ ನಂಜನಗೂಡಲ್ಲಿ ತುರ್ತು ಚಿಕೀತ್ಸೆ ನೀಡಲು ಯಾವುದೇ ಸೌಲಭ್ಯವಿಲ್ಲದಿರುವದರಿಂದ ಅವರನ್ನು ಜಿಲ್ಲಾ ಕೇಂದ್ರ ಮೈಸೂರಿಗೆ ಕರೆದೊಯ್ಯಬೇಕಿತ್ತು. ಜಿಲ್ಲಾ ಕೇಂದ್ರಕ್ಕೆ ಹೋಗುವ ಮೊದಲೇ ಚಿಕಿತ್ಸೆ ದೊರೆಯದೇ ಅನೇಕರು ಮೃತ ಪಟ್ಟ ಘಟನೆಗಳನ್ನು ಗಮನಿಸಿದ ಶಾಸಕರು ಅಫಘಾಥದ ಬೀಡಾಗಿರುವ ತಮ್ಮ ಕ್ಷೇತ್ರದಲ್ಲೇ ಟ್ರಾಮಾ ಸೆಂಟರ್ ಘಟಕವನ್ನು ಆರಂಭಿಸಿದರೆ ಅನೇಕರ ಪ್ರಾಣ ಉಳಿಯಬಹುದು ಎಂದು ಆಲೋಚಿಸಿ ಆರೋಗ್ಯ ಇಲಾಖೆ ಹಾಗೂ ಸರ್ಕಾರದೊಂದಿಗೆ ಎರಡು ವರ್ಷಗಳಿಂದಲೂ ಪ್ರಯತ್ನಿಸುತ್ತಲೇ ಇದ್ದರು ಅವರ ಸತತ ಪರಿಶ್ರಮಕ್ಕೆ ಈಗ ಫಲಕೊಡುವ ಭರವಸೆ ವಿಧಾನ ಸಭೆಯಲ್ಲಿ ದರ್ಶನರಿಗೆ ಸಿಕ್ಕಿದೆ.

ತಮ್ಮ ಕ್ಷೇತ್ರದಲ್ಲಿ ಕಳೆದ ವರ್ಷ ೩೨೬ ಕ್ಕೂ ಹೆಚ್ಚು ರಸ್ತೆ ಅಫಘಾಥಗಳು ನಡೆದಿದ್ದು ೧೨೦ಕ್ಕೂ ಹೆಚ್ಚು ಸಾವುಗಳಾಗಿದ್ದನ್ನು ಚುಕ್ಕೆ ಪ್ರಶ್ನೆಯ ಮೂಲಕ ವಿಧಾನ ಸಭೆಯ ಮುಂದಿಟ್ಟ ಶಾಸಕರಿಗೆ ರಾಜ್ಯದ ಆರೋಗ್ಯ ಸಚಿವ ದಿನೇಶ ಗುಂಡುರಾವ ನಿಮ್ಮ ಮಾನವೀಯ ಕಳಕಳಿಯನ್ನು ಮನಗಂಡ ಸರ್ಕಾರ ನಂಜನಗೂಡೂ ಸೇರಿದಂತೆ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗೂ ಶಿಘ್ರದಲ್ಲೇ ಟ್ರಾಮಾ ಸೌಲಭ್ಯಗಳನ್ನು ನೀಡಲು ನಿರ್ಧರಿಸಿದೆ ಹಾಗೂ ಹೆಚ್ಚುವರಿಯಾಗಿ ತಾಲೂಕು ಆಸ್ಪತ್ರೆಗೆ ಟ್ರಾಮಾ ಸೌಲಭ್ಯಗಳ ಜೊತೆ ಅಂಬುಲೆನ್ಸ್ ಸಹ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ನಂಜನಗೂಡು ಶಾಸಕ ದರ್ಶನ ದ್ರುವನಾರಾಯಣರಿಂದಾಗಿ ಈಗ ಜಿಲ್ಲೆಯ ಎಲ್ಲ ತಾಲೂಕೂಗಳಿಗೂ ಟ್ರಾಮಾ ಸೌಲಭ್ಯ ದೊರೆಯು ದೊರಕಿದಂತಾಗಿದೆ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ದುಷ್ಕೃತ್ಯ ನಿಯಂತ್ರಿಸಲು ಕಾನೂನು ರೂಪಿಸಬೇಕು

ಚಾಮರಾಜನಗರ ತಾಲ್ಲೂಕಿನ ಮಸಾಣಪುರ ಗ್ರಾಮದಲ್ಲಿ ಬಾಬಾ ಸಾಹೇಬ ಡಾ.ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಘಟನೆ ನಿಜಕ್ಕೂ ತಲೆತಗ್ಗಿಸುವಂಥ ಹೇಯ ಕೃತ್ಯವಾಗಿದೆ.ಈ…

1 hour ago

ಓದುಗರ ಪತ್ರ: ಯಶಸ್ಸಿಗೆ ಮೂಲ ಅಡಿಪಾಯವೇ ಸಮಯ ಪಾಲನೆ!

‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ’ ಎಂಬ ಗಾದೆಯ ಮಾತು ನಿಜಕ್ಕೂ ಇಂದಿನ ಕಾಲಘಟ್ಟಕ್ಕೆ ಹೆಚ್ಚಾಗಿ ಅನ್ವಯಿಸುತ್ತದೆ. ಏಕೆಂದರೆ ಸಮಯ ಪಾಲನೆ…

1 hour ago

ಓದುಗರ ಪತ್ರ: ಲಂಚದ ಬಗ್ಗೆ ಮಾತೇಕೆ?

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಮಾಡಲು ಸರ್ಕಾರಿ ನೌಕರರಿಗೆ ಅಥವಾ ಅಧಿಕಾರಿಗಳಿಗೆ ೧೦ ರೂ. ಲಂಚವನ್ನು ಕೂಡ ನೀಡಬೇಡಿ ಎಂದು…

1 hour ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಮೂಳೆಗಳು ಮುರಿಯುತ್ತಿದ್ದರೂ ಬದುಕು ಕಟ್ಟಿಕೊಂಡ ರಾಧಿಕಾ

ಪಂಜುಗಂಗೊಳ್ಳಿ  ಅವಳ ಗೊಂಬೆಗಳು ದೇಶ ದೇಶಗಳಿಗೆ ಹಾರುತ್ತವೆ! ಕೊಯಂಬತ್ತೂರಿನ ಜೆ.ಎ.ರಾಧಿಕಾ ಐದು ವರ್ಷದವಳಾಗಿದ್ದಾಗ ಕಾಲ ಮೂಳೆ ಮುರಿದು, ಶಸ್ತ್ರಚಿಕಿತ್ಸೆ ನಡೆದು…

1 hour ago

ಪಣ್ಣೇದೊಡ್ಡಿ ಡೇರಿ ಆಡಳಿತ-ಹಾಲು ಉತ್ಪಾದಕರ ಮಾರಾಮಾರಿ

ಎಂ.ಆರ್.ಚಕ್ರಪಾಣಿ ಜಗಳದಿಂದಾಗಿ ಡೇರಿಗೆ ಬೀಗ: ದೂರು-ಪ್ರತಿ ದೂರು ದಾಖಲು; ಖಾಸಗಿ ಡೇರಿಗೆ ಹಾಲು ಸರಬರಾಜು ಮದ್ದೂರು: ತಾಲ್ಲೂಕಿನ ಪಣ್ಣೇದೊಡ್ಡಿ ಗ್ರಾಮದ…

2 hours ago