ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು.
ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ ಕೃಷ್ಣ ನೇತ್ರತ್ವದಲ್ಲಿ ಪೊಲಿಸರ ಸಹಾಯದೊಂದಿಗೆ ರಂಗಕ್ಕಿಳಿದ ದೇವಾಲಯದ ಸಿಬ್ಬಂದಿಗಳು ಶನಿವಾರ ಬೆಳಗಿನಿಂದಲೇ ಈ ತೆರವುಕಾರ್ಯವನ್ನು ಆರಂಭಿಸಿದರು.
ದೇವಾಲಯದ ಆವರಣ ಸ್ನಾನಘಟ್ಟದ ರಸ್ತೆ ಸೇರಿದಂತೆ ಬೇಕಾ ಬಿಟ್ಟಿಯಾಗಿ ಇಡಲಾಗಿದ್ದ ಎಲ್ಲ ಅಂಗಡಿಗಳನ್ನೂ ಇಂದು ತೆರವು ಗೊಳಿಸಲಾಗಿದ್ದು ನಾಳೆಯೂ ತೆರವು ಮುಂದುವರಿಯುವದು ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ಇದೇ ರೀತಿ ಇದೇ ಜಾಗದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು.
ಅದಾದ ಕೆಲವು ದಿನಗಳ ನಂತರ ಒಬ್ಬರ ಮೇಲೋಬ್ಬರು ಪೈಪೋಟಿಗೆ ಬಿದ್ದವರಂತೆ ಸಾಕಷ್ಠು ಅಂಗಡಿಗಳು ರಾತ್ರಿ ಬೇಳಗಾಗುವದರೊಳಗೆ ತಲೆ ಎತ್ತಿ ಅನಧಿಕೃತವಾಗಿ ಇಲ್ಲಿ ವ್ಯಾಪಾರ ಮಾಡುತ್ತಿದ್ದವು. ಈ ಅಂಗಡಿಗಳಿಂದಾಗಿ ದೇವಾಲಯಕ್ಕೆ ಆಗಮಿಸುವವರಿಗೆ ಕಿರಿಕಿರಿಯಾಗುವ ದೂರುಗಳು ಫುಂಖಾನು ಫುಂಖವಾಗಿ ಬಂದರೂ ದೇವಾಲಯದ ಆಡಳಿತ ಮಾತ್ರಕಣ್ಣಿದ್ದು ಕುರಡನಂತೆ ವರ್ತಿಸುತ್ತಿತ್ತು. ಕಳೆದ ವಾರ ಶಾಸಕ ದರ್ಶನ್ದ್ರುವನಾರಾಯಣ ಇಲ್ಲಿಗೆ ಭೇಟಿ ನೀಡಿದಾಗ ಈ ದೂರುಗಳನ್ನು ಪರಿಶಿಲಿಸಿ ಭಕ್ತಾದಿಗಳಿಗೆ ತೊಂದರೆಯಾಗುತ್ತಿರುವ ಅನಧಿಕೃತ ವ್ಯಾಪಾರ ಹಾಗೂ ಅಂಗಡಿಗಳ ಕುರಿತಂತೆ ಕಿಡಿಕಾರಿದ್ದರು ಅದಾದ ಒಂದೇ ವಾರದಲ್ಲಿ ಅಂಗಡಿಗಳ ತೆರವು ಕಾರ್ಯ ಆರಂಭವಾಗಿದೆ.
ಅಂಗಡಿಗಳ ತೆರವು ನಂಜನಗೂಡಿನ ಪಾಲಿಗೆ ಕಣ್ಣುಮುಚ್ಚಾಲೆಯಾಟ ಎಂದವರು ಇಲ್ಲಿನ ಸಾರ್ವಜನಿಕರು . ಕಳೆದ ತಿಂಗಳು ನಂಜನಗೂಡಿನ ರಾಷ್ರö್ಠಪತಿರಸ್ತೆ ಮಹಾತ್ಮಾಗಾಂಧಿ ಶತಾಬ್ದಿರಸ್ತೆ, ನೆಹರು ವೃತ್ತ ,ಅಂಗಡಿ ಬೀದಿಗಳ ಫುಟ್ ಪಾತ್ ಗಳ ವತ್ತುವರಿತೆರವಾಗಿತ್ತು. ಆಗ ತೆರವಾದ ಅಂಗಡಿಗಳೂ ಈಗ ಮತ್ತೇ ಪೈಪೋಟಿಗೆ ಬಿದ್ದವರಂತೆ ಪಾದಚಾರಿ ಮಾರ್ಗವನ್ನು ವತ್ತುವರಿ ಮಾಡಿಯಥಾ ಸ್ಥಾನದಲ್ಲಿತಮ್ಮ ವ್ಯಾಪಾರ ಮುಂದುವರಿಸಿದ್ದು ನಂಜನಗೂಡಿನ ವತ್ತುವರಿ ತೆರವು ಎಂದರೆ ಅಧಿಕಾರಿಗಳು ಹಾಗೂ ವ್ಯಾಪಾರಿಗಳ ಪಾಲಿಗೆ ಕಣ್ಣುಮಚ್ಚಾಲೆ ಆಟದಂತಾಗಿದೆ ಎಂದ ಯೋಗೀಶ ಈ ವತ್ತುವರಿ ಹಾಗಾಗದಿರಲಿ ಮತ್ತೇ ಇಲ್ಲಿ ಅನಧಿಕೃತ ವ್ಯಾಪಾರ ಆರಂಭವಾಗದಿರಲಿ ಎಂದರು.
ಶತಮಾನದ ಹಿಂದೆ ಮೈಸೂರು ಸಂಸ್ಥಾನದ ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ಅವರು ಮೈಸೂರಿನ ಹೆಣ್ಣುಮಕ್ಕಳಿಗಾಗಿ ಸ್ಥಾಪಿಸಿದ್ದ ‘ಮಹಾರಾಣಿಯವರ ಹೊಸ ಮಾದರಿ (ಎನ್ಟಿಎಂ) ಶಾಲೆ’…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ತೋಳ ಬಂತು ತೋಳ ಕತೆಯನ್ನು ನೆನಪಿಸುವಂತಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕಾಂಗ್ರೆಸ್…
ನವೀನ್ ಡಿಸೋಜ ಮನೆಮನೆಗಳಲ್ಲಿ ಘಮಘಮಿಸಲಿದೆ ಮದ್ದುಸೊಪ್ಪಿನ ಖಾದ್ಯ; ವಿಭಿನ್ನ ಹಬ್ಬದಾಚರಣೆಗೆ ಜಿಲ್ಲೆಯಲ್ಲಿ ಸಿದ್ಧತೆ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ (ಆ.೩)ಕಕ್ಕಡ…
ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿನ ಶೌಚಾಲಯದಲ್ಲಿ ಅಶುಚಿತ್ವ ತಾಂಡವ ಮೈಸೂರು: ವಾಯುವಿಹಾರಿಗಳು ಹಾಗೂ ಕ್ರೀಡಾಸಕ್ತರ ನೆಚ್ಚಿನ ತಾಣವಾಗಿರುವ ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ…
ಕೆ.ಬಿ.ರಮೇಶನಾಯಕ ಪ್ರಗತಿಯಲ್ಲಿ ಹಿಂದೆ ಬಿದ್ದಿರುವ ಗ್ರಾಪಂಗಳನ್ನು ಹುರಿದುಂಬಿಸಲು ಜಿಪಂ ಹೊಸ ಯೋಜನೆ ಪ್ರಶಸ್ತಿಗೆ ನಾಲ್ಕು ಕಾರ್ಯಸೂಚಿಯಲ್ಲಿ ಪ್ರಗತಿ ಸಾಧಿಸಿದ ಗ್ರಾಪಂಗಳ…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…