ಮೈಸೂರು

ಮೈಸೂರು ಜಿಪಂಗೆ 46 ಸದಸ್ಯ ಸ್ಥಾನಗಳು ನಿಗದಿ

ಕಳೆದ ಬಾರಿಗಿಂತ 4 ಕ್ಷೇತ್ರ ಹೆಚ್ಚಳ, ನಂಜನಗೂಡು ತಾಲ್ಲೂಕಿನಲ್ಲಿ 9 ಕ್ಷೇತ್ರಗಳು

ಮೈಸೂರು: ಅವಧಿ ಮುಗಿದು ವರ್ಷವೇ ಕಳೆದರೂ ಜಿಪಂ, ತಾಪಂ ಚುನಾವಣೆ ನಡೆಸಲು ವಿಳಂಬ ನೀತಿ ಅನುಸರಿಸಿದ್ದ ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದ ಬಳಿಕ ಕೊನೆಗೂ ಎಚ್ಚೆತ್ತ ಸರ್ಕಾರ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಜಿಪಂ ಸದಸ್ಯರ ಸಂಖ್ಯೆ ಹಾಗೂ ಕ್ಷೇತ್ರಗಳ ಗಡಿಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.
ಮೈಸೂರು ಜಿಲ್ಲೆಯಲ್ಲಿ 46 ಏಕ ಸದಸ್ಯ ಸ್ಥಾನಗಳು ನಿಗದಿಯಾಗಿ ದೆ. ಕಳೆದ ಬಾರಿ 42 ಸದಸ್ಯ ಸ್ಥಾನಗಳನ್ನು ಹೊಂದಿದ್ದ ಮೈಸೂರು ಜಿಲ್ಲೆಯಲ್ಲಿ 46 ಕ್ಷೇತ್ರಗಳು ನಿಗದಿಯಾಗಿ ನಾಲ್ಕು ಹೆಚ್ಚುವರಿ ಕ್ಷೇತ್ರಗಳು ರಚನೆಯಾಗಿವೆ. ಸರಗೂರು-2, ಕೃಷ್ಣರಾಜ ನಗರ-3, ಸಾಲಿಗ್ರಾಮ-4, ಹೆಗ್ಗಡದೇವನ ಕೋಟೆ-4, ಪಿರಿಯಾಪಟ್ಟಣ-6, ಹುಣಸೂರು-6, ಮೈಸೂರು-6, ತಿ.ನರಸೀಪುರ-6, ನಂಜನಗೂಡು ತಾಲ್ಲೂಕಿನಲ್ಲಿ 9 ಸದಸ್ಯ ಸ್ಥಾನಗಳು ರಚನೆಯಾಗಿದ್ದು, ಸಣ್ಣಪುಟ್ಟ ವ್ಯತ್ಯಾಸ ಸರಿಪಡಿಸಿ ಅಧಿಸೂಚನೆ ಪ್ರಕಟಿಸಲಾಗಿದೆ.

ಮೈಸೂರು ತಾಲ್ಲೂಕು: ಇಲವಾಲ, ಜಯಪುರ, ಉದ್ಭೂರು, ವರುಣ, ಸಿದ್ದಲಿಂಗಪುರ, ಹಾರೋಹಳ್ಳಿ(ಮೆಲ್ಲಹಳ್ಳಿ).
ತಿ.ನರಸೀಪುರ ತಾಲ್ಲೂಕು: ತುರಗನೂರು, ಸೋಮನಾಥಪುರ, ಸೋಸಲೆ, ತಲಕಾಡು, ಮೂಗೂರು, ಗರ್ಗೇಶ್ವರಿ.
ನಂಜನಗೂಡು ತಾಲ್ಲೂಕು: ಹುರಾ, ಹುಲ್ಲಹಳ್ಳಿ, ಹೆಗ್ಗಡಹಳ್ಳಿ, ಕಳಲೆ, ಬದನವಾಳು, ದೊಡ್ಡ ಕವಲಂದೆ, ತಗಡೂರು, ಹದಿನಾರು, ತಾಂಡವಪುರ.

ಹುಣಸೂರು ತಾಲ್ಲೂಕು: ಗಾವಡಗೆರೆ, ಬನ್ನಿಕುಪ್ಪೆ, ಬಿಳಿಕೆರೆ, ಧರ್ಮಾಪುರ, ಹನಗೋಡು, ಚಿಲ್ಕುಂದ.                                   ಕೆ.ಆರ್.ನಗರ ತಾಲ್ಲೂಕು: ಗಂಧನಹಳ್ಳಿ, ತಿಪ್ಪೂರು, ಹೆಬ್ಬಾಳು. ಸಾಲಿಗ್ರಾಮ ತಾಲ್ಲೂಕು: ತಂದ್ರೆ, ಮಿರ್ಲೆ, ಸಾಲಿಗ್ರಾಮ, ಹಳಯೂರು. ಪಿರಿಯಾಪಟ್ಟಣ ತಾಲ್ಲೂಕು: ಹಲಗನಹಳ್ಳಿ, ಬೆಟ್ಟದಪುರ, ರಾವಂದೂರು, ಕಂಪಲಾಪುರ, ಆಲನಹಳ್ಳಿ, ಕೊಪ್ಪ.
ಎಚ್.ಡಿ.ಕೋಟೆ ತಾಲ್ಲೂಕು: ಹಂಪಾಪುರ, ಹೈರಿಗೆ, ಅಣ್ಣೂರು, ಅಂತರಸಂತೆ.
ಸರಗೂರು ತಾಲ್ಲೂಕು: ಮುಳ್ಳೂರು, ಸರಗೂರು.

andolana

Recent Posts

ಪ್ರಧಾನ್‌ ರಾಜೀನಾಮೆ : ವಾಂಗ್ಚುಕ್‌ ಫಸ್ಟ್‌ ರಿಯಾಕ್ಷನ್‌

ನವದೆಹಲಿ : ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಕುರಿತು ಹೋರಾಟಗಾರ ಸೋನಮ್‌ ವಾಂಗ್ಚುಕ್‌ ಮೊದಲ ಪ್ರತಿಕ್ರಿಯೆ…

5 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 25 ಶನಿವಾರ  

13 hours ago

ನೋಟ-ಪ್ರತಿನೋಟ | ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಸರಿಯೇ? ತಪ್ಪೇ?

ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಪ್ರಥಮವಾಗಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಂಬಳಕ್ಕಾಗಿ ಮೈಸೂರಿನಲ್ಲಿ ಸ್ಥಳ ನಿಗದಿಪಡಿಸಿದ್ದು, ಸಿದ್ಧತೆ…

13 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಗೆ ಅಜ್ಜಿ ಒಡವೆ ನೀಡಿದ ಪ್ರಸಂಗ…

ನನ್ನ ಅಜ್ಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಗಾಂಧಿ ಹಕ್ಕಿಯ ಹಾಗೆ ಇದ್ದರು ಮತ್ತು ನಿರುಪದ್ರವಿ ಎಂದು. ಗಾಂಽಯ ಕಾಲದಲ್ಲಿ…

13 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ಉಡುಪು ಯಾಕೆ ಬದಲಾಯಿತು?

  ಡಾ.ಪ್ರಮೀಳಾದೇವಿ ಬಿ.ಕೆ. ಮಹಾತ್ಮಗಾಂಧಿ ಇಂಗ್ಲೆಂಡಿನಲ್ಲಿದ್ದಾಗಲೂ, ಅಲ್ಲಿಂದ ಹಿಂತಿರುಗಿದಾಗ, ಮತ್ತು ಆರಂಭದ ದಿನಗಳಲ್ಲಿ ಅವರು ಎಲ್ಲಾ ವಿದ್ಯಾವಂತರಂತೆ ಬೆಲೆಬಾಳುವ ಸೂಟುಬೂಟು…

13 hours ago

ಗಾಂಧಿ ಅಭಿಯಾನ ಅರಿವಿನ ಯಾನ ; ಸಜ್ಜನನಾದ ಆಂಗ್ಲನಾಗುವ ಪ್ರಯತ್ನ

ಶಾಕಾಹಾರದಲ್ಲಿ ದಿನದಿನಕ್ಕೂ ನನ್ನ ನಂಬಿಕೆ ಹೆಚ್ಚುತ್ತಲೇ ಹೋಯಿತು. ಸಾಲ್ಟ್‌ರ ಗ್ರಂಥದ ವ್ಯಾಸಂಗದಿಂದ, ಆಹಾರದ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಭ್ಯಾಸ ಮಾಡಲು…

14 hours ago