ಮೈಸೂರು

ಮೈಸೂರು ಜಿಪಂಗೆ 46 ಸದಸ್ಯ ಸ್ಥಾನಗಳು ನಿಗದಿ

ಕಳೆದ ಬಾರಿಗಿಂತ 4 ಕ್ಷೇತ್ರ ಹೆಚ್ಚಳ, ನಂಜನಗೂಡು ತಾಲ್ಲೂಕಿನಲ್ಲಿ 9 ಕ್ಷೇತ್ರಗಳು

ಮೈಸೂರು: ಅವಧಿ ಮುಗಿದು ವರ್ಷವೇ ಕಳೆದರೂ ಜಿಪಂ, ತಾಪಂ ಚುನಾವಣೆ ನಡೆಸಲು ವಿಳಂಬ ನೀತಿ ಅನುಸರಿಸಿದ್ದ ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದ ಬಳಿಕ ಕೊನೆಗೂ ಎಚ್ಚೆತ್ತ ಸರ್ಕಾರ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಜಿಪಂ ಸದಸ್ಯರ ಸಂಖ್ಯೆ ಹಾಗೂ ಕ್ಷೇತ್ರಗಳ ಗಡಿಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.
ಮೈಸೂರು ಜಿಲ್ಲೆಯಲ್ಲಿ 46 ಏಕ ಸದಸ್ಯ ಸ್ಥಾನಗಳು ನಿಗದಿಯಾಗಿ ದೆ. ಕಳೆದ ಬಾರಿ 42 ಸದಸ್ಯ ಸ್ಥಾನಗಳನ್ನು ಹೊಂದಿದ್ದ ಮೈಸೂರು ಜಿಲ್ಲೆಯಲ್ಲಿ 46 ಕ್ಷೇತ್ರಗಳು ನಿಗದಿಯಾಗಿ ನಾಲ್ಕು ಹೆಚ್ಚುವರಿ ಕ್ಷೇತ್ರಗಳು ರಚನೆಯಾಗಿವೆ. ಸರಗೂರು-2, ಕೃಷ್ಣರಾಜ ನಗರ-3, ಸಾಲಿಗ್ರಾಮ-4, ಹೆಗ್ಗಡದೇವನ ಕೋಟೆ-4, ಪಿರಿಯಾಪಟ್ಟಣ-6, ಹುಣಸೂರು-6, ಮೈಸೂರು-6, ತಿ.ನರಸೀಪುರ-6, ನಂಜನಗೂಡು ತಾಲ್ಲೂಕಿನಲ್ಲಿ 9 ಸದಸ್ಯ ಸ್ಥಾನಗಳು ರಚನೆಯಾಗಿದ್ದು, ಸಣ್ಣಪುಟ್ಟ ವ್ಯತ್ಯಾಸ ಸರಿಪಡಿಸಿ ಅಧಿಸೂಚನೆ ಪ್ರಕಟಿಸಲಾಗಿದೆ.

ಮೈಸೂರು ತಾಲ್ಲೂಕು: ಇಲವಾಲ, ಜಯಪುರ, ಉದ್ಭೂರು, ವರುಣ, ಸಿದ್ದಲಿಂಗಪುರ, ಹಾರೋಹಳ್ಳಿ(ಮೆಲ್ಲಹಳ್ಳಿ).
ತಿ.ನರಸೀಪುರ ತಾಲ್ಲೂಕು: ತುರಗನೂರು, ಸೋಮನಾಥಪುರ, ಸೋಸಲೆ, ತಲಕಾಡು, ಮೂಗೂರು, ಗರ್ಗೇಶ್ವರಿ.
ನಂಜನಗೂಡು ತಾಲ್ಲೂಕು: ಹುರಾ, ಹುಲ್ಲಹಳ್ಳಿ, ಹೆಗ್ಗಡಹಳ್ಳಿ, ಕಳಲೆ, ಬದನವಾಳು, ದೊಡ್ಡ ಕವಲಂದೆ, ತಗಡೂರು, ಹದಿನಾರು, ತಾಂಡವಪುರ.

ಹುಣಸೂರು ತಾಲ್ಲೂಕು: ಗಾವಡಗೆರೆ, ಬನ್ನಿಕುಪ್ಪೆ, ಬಿಳಿಕೆರೆ, ಧರ್ಮಾಪುರ, ಹನಗೋಡು, ಚಿಲ್ಕುಂದ.                                   ಕೆ.ಆರ್.ನಗರ ತಾಲ್ಲೂಕು: ಗಂಧನಹಳ್ಳಿ, ತಿಪ್ಪೂರು, ಹೆಬ್ಬಾಳು. ಸಾಲಿಗ್ರಾಮ ತಾಲ್ಲೂಕು: ತಂದ್ರೆ, ಮಿರ್ಲೆ, ಸಾಲಿಗ್ರಾಮ, ಹಳಯೂರು. ಪಿರಿಯಾಪಟ್ಟಣ ತಾಲ್ಲೂಕು: ಹಲಗನಹಳ್ಳಿ, ಬೆಟ್ಟದಪುರ, ರಾವಂದೂರು, ಕಂಪಲಾಪುರ, ಆಲನಹಳ್ಳಿ, ಕೊಪ್ಪ.
ಎಚ್.ಡಿ.ಕೋಟೆ ತಾಲ್ಲೂಕು: ಹಂಪಾಪುರ, ಹೈರಿಗೆ, ಅಣ್ಣೂರು, ಅಂತರಸಂತೆ.
ಸರಗೂರು ತಾಲ್ಲೂಕು: ಮುಳ್ಳೂರು, ಸರಗೂರು.

andolana

Recent Posts

ಭಾರತಿರಾಜ್‌ ಅಂತಿಮ ದರ್ಶನ ಪಡೆದ ರಜನಿ, ಕಮಲ್‌, ಸಿ.ಎಂ.ವಿಜಯ್‌

ಚೆನ್ನೈ : ತಮಿಳಿನ ಖ್ಯಾತ ನಿರ್ದೇಶಕ, ಪದ್ಮಶ್ರೀ ಭಾರತಿರಾಜ್ ನಿಧನಕ್ಕೆ ಹೆಸರಾಂತ ನಟರು ಕಂಬನಿ ಮಿಡಿದಿದ್ದಾರೆ. ಅವರ ಅಂತಿಮ ದರ್ಶನಕ್ಕೆ…

22 mins ago

ಎಚ್.ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನಕ್ಕೆ ದಲಿತ ಸಂಘಟನೆಗಳ ಆಗ್ರಹ

ವರುಣ : ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡಬೇಕು ಎಂದು ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಲಿತ ಸಂಘಟನೆಗಳ…

30 mins ago

ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಬಿಟ್ಟು ಬೇರೇನೂ ಮಾಡಲಿಲ್ಲ ಸಿದ್ದರಾಮಯ್ಯ: ಟೀಕೆ

ಮೈಸೂರು : ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಕೇಂದ್ರ ಸರ್ಕಾರದೊಂದಿಗೆ ಸೌಹಾರ್ದದಿಂದ ಸಂಪರ್ಕ ಸಾಧಿಸಿ ರಾಜ್ಯದ ಅಭಿವೃದ್ಧಿ…

44 mins ago

ರಾಜ್ಯಸಭಾ ಸ್ಥಾನ ಕೇಳಿಲ್ಲ, ಚರ್ಚೆಯೂ ನಡೆಸಿಲ್ಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು: ರಾಜ್ಯಸಭಾ ಸ್ಥಾನಕ್ಕೆ ಟಿಕೆಟ್‌ ತಪ್ಪಿದೆ ಎಂಬ ಕಾರಣದಿಂದ ನನ್ನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸಂಬಂಧ…

4 hours ago

ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ನಿಧನ

ಚೆನ್ನೈ: ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ಇಂದು ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕೆಲ…

7 hours ago

ನೆಹರು ದಾಖಲೆ ಮುರಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ ನಡೆಸಿದ ಪ್ರಧಾನಿ ಎಂಬ ಹೊಸ…

7 hours ago