ಮೈಸೂರು

ಆಸ್ಟ್ರೇಲಿಯಾದ ಪರ್ಷಿಯ ಸೀಡ್‌ಲೆಸ್ ನಿಂಬೆ ತಳಿ ಪರಿಚಯಿಸಿದ ಮೈಸೂರು ನಿವಾಸಿ: ಇದರ ವಿಶೇಷತೆ ಏನು ಗೊತ್ತಾ?

ಮೈಸೂರು: ರೈತರು ಎಂದಾಕ್ಷಣ ಆಗಿನ ಕಾಲದಿಂದಲೂ ಒಂದೇ ಬೆಳೆ ಬೆಳೆದು ಅದರ ಲಾಭ ನಷ್ಟಗಳನ್ನು ನೋಡುತ್ತಾ ಬರುತ್ತಾ ಇರುವುದು ಸಾಮಾನ್ಯ. ಆದರೆ ಮೈಸೂರು ಜಿಲ್ಲೆಯ ಓರ್ವ ನಿವಾಸಿಯು ಆಸ್ಟ್ರೇಲಿಯದ ಪರ್ಷಿಯ ಸೀಡ್‌ಲೆಸ್ ನಿಂಬೆ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಪಡವ ಕೋಟೆ ಗ್ರಾಮದಲ್ಲಿ ಆಂಧ್ರಪ್ರದೇಶದಿಂದ ಬಂದ ರಾಮಕೃಷ್ಣ ಎಂಬ ವ್ಯಕ್ತಿಯು ಕಳೆದ 24 ವರ್ಷಗಳ ಹಿಂದೆ 40 ಎಕರೆ ಜಮೀನನ್ನು ಒಂದೇ ಸ್ಥಳದಲ್ಲಿ ಖರೀದಿ ಮಾಡಿದ್ದರು. ಇಲ್ಲಿಗೆ ಆಸ್ಟ್ರೇಲಿಯಾದಿಂದ ನಿಂಬೆ ಗಿಡವನ್ನು ತಂದು ಅಪಾರ ಆದಾಯ ಗಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಬಿಎಸ್‌ಸ್ಸಿ ಗೋಲ್ಡ್ ಮೆಡಲಿಸ್ಟ್‌ ಆಗಿರುವ ರಾಮಕೃಷ್ಣ ಅವರು, ಆರ್ಟಿಕಲ್ಚರ್ ಡಿಪಾರ್ಟ್ಮೆಂಟ್ ಅಲ್ಲಿ ಆರ್ಟಿಕಲ್ಚರ್ ಆಫೀಸರ್ ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಇವರಿಗೆ ಕೃಷಿಯ ಮೇಲೆ ಆಸಕ್ತಿ ಹೊಂದಿ ಮೈಸೂರಿನ ವಾತಾವರಣವನ್ನು ಇಷ್ಟಪಟ್ಟು ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಪಡವಕೋಟೆ ಗ್ರಾಮದಲ್ಲಿ 40 ಎಕರೆ ಜಮೀನು ಖರೀದಿ ಮಾಡುತ್ತಾರೆ. ನಂತರ ಎಂಎಸ್ಸಿ ಆರ್ಟಿಕಲ್ಚರ್ ಸಂಬಂಧಪಟ್ಟಂತೆ ಆಸ್ಟ್ರೇಲಿಯಾದಲ್ಲಿ ಸಹ ಅಭ್ಯಾಸವನ್ನು ಸಹ ಮಾಡುತ್ತಾ, ಅಲ್ಲಿಯ ತಳಿಯಾದ ಪರ್ಷಿಯ ಸೀಡ್ ಲೆಸ್ ನಿಂಬೆ ತಳಿಯನ್ನು ಆಸ್ಟ್ರೇಲಿಯಾ ಮೂಲಕ ಭಾರತಕ್ಕೆ ಗಿಡಗಳನ್ನು ಭಾರತಕ್ಕೆ ತಂದು ಜಮೀನಿಗೆ ಹಾಕುತ್ತಾರೆ.

ಈ ತಿಳಿಯ ವಿಶೇಷವೆಂದರೆ ಇದು 365 ದಿನಗಳ ಕಾಲ ಸಹ ನಿಂಬೆಹಣ್ಣನ್ನು ಬಿಡುತ್ತದೆ. ಆದ್ದರಿಂದ ಇವರು ಸುಮಾರು ಏಳು ಸಾವಿರಕ್ಕೂ ಹೆಚ್ಚು ಗಿಡಗಳನ್ನು ತೋಟದಲ್ಲಿ ಹಾಕಿದ್ದಾರೆ. ಈ ನಿಂಬೆಹಣ್ಣಿ ಬೆಲೆ ಒಂದು ಕೆಜಿ ಸುಮಾರು 70 ರಿಂದ 150 ರೂಪಾಯಿವರೆಗೂ ಮಾರಾಟವಾಗುತ್ತದೆ. ಈ ಗಿಡ ನೆಟ್ಟ ಒಂದು ವರ್ಷಕ್ಕೆ ಫಲ ನೀಡಲು ಪ್ರಾರಂಭವಾಗುತ್ತದೆ. ಒಂದು ಎಕರೆಗೆ ಖರ್ಚು ಕಳೆದು 5 ರಿಂದ 6 ಲಕ್ಷಕ್ಕೂ ಹೆಚ್ಚಿನ ಆದಾಯ ಸಿಗಲಿದೆ.

ಇನ್ನು ವಿಶೇಷವೆಂದರೆ ಈ ನಿಂಬೆಯಲ್ಲಿ ಬೀಜ ಇರುವುದಿಲ್ಲ. ನಮ್ಮಲ್ಲಿ ಬೆಳೆಯುವ ನಿಂಬೆ ಹಣ್ಣಿನ ರಸಕ್ಕಿಂತ ಮೂರು ಪಟ್ಟು ಹೆಚ್ಚು ರಸ ಇರುತ್ತದೆ ಹಾಗೂ ಕಹಿ ಅಂಶ ತುಂಬಾ ಕಡಿಮೆ ಇರುತ್ತದೆ.

ಇನ್ನು ರಾಮಕೃಷ್ಣ ಅವರು ನಿಂಬೆಹಣ್ಣಿನಲ್ಲಿ ಹೆಚ್ಚಿನ ಇಳುವರಿ ಪಡೆಯಲು ಅವರು ತಯಾರಿಸಿಕೊಳ್ಳುವ ಜೀವಾಮೃತವೇ ಕಾರಣ ಎನ್ನಲಾಗುತ್ತಿದೆ. ಜೀವಾಮೃತದಿಂದಲೇ ಅತೀ ಹೆಚ್ಚು ಇಳುವರಿ ಪಡೆಯುತ್ತಿದ್ದು, ಈ ಬಗ್ಗೆ ಇತರ ರೈತರಿಗೂ ಮಾಹಿತಿ ನೀಡುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಭ್ರಷ್ಟಾಚಾರ ಬಗ್ಗು ಬಡಿಯಲು ಸಿಎಂ ಮುಂದಾಗುವರೇ?

ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಾಯುಕ್ತರು ಆಗಾಗ್ಗೆ ದಾಳಿ ನಡೆಸುವುದು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಈಗಿನ ಪತ್ರಿಕಾ ವರದಿಗಳ ಪ್ರಕಾರ, ಮೂರೂವರೆ ವರ್ಷಗಳಲ್ಲಿ…

8 hours ago

ಓದುಗರ ಪತ್ರ: ಸದ್ದು ಮಾಡದ ತುಪ್ಪ, ಬೆಣ್ಣೆ ಬೆಲೆ ಏರಿಕೆ!

ನಂದಿನಿ ಉತ್ಪನ್ನಗಳಾದ, ತುಪ್ಪ ಕೆ.ಜಿಗೆ ರೂ.೧೫ ಮತ್ತು ಬೆಣ್ಣೆ ಕೆ.ಜಿಗೆ ರೂ.೫೦ ಅನ್ನು ಇದೇ ತಿಂಗಳ ೨೪ ರಿಂದಲೇ ಗ್ರಾಹಕರಿಗೆ…

8 hours ago

ಓದುಗರ ಪತ್ರ: ಬರ…ಅಬ್ಬರ !

ಬರ...ಅಬ್ಬರ ! ಬರ ಬರ ಬರ್ಬರ ಮಳೆ ಇಲ್ಲ; ಬೆಳೆ ಇಲ್ಲ ಬರಡಾಯಿತಲ್ಲ ಬದುಕೆಲ್ಲ ಜನ-ಜನುವಾರುಗಳ ಬದುಕೀಗ ಅಕ್ಷರಶಃ ಬರ್ಬರ…

8 hours ago

ಓದುಗರ ಪತ್ರ: ಪರೀಕ್ಷಾ ವ್ಯವಸ್ಥೆ ಸಮಗ್ರ ಸುಧಾರಣೆ ಅತ್ಯಗತ್ಯ

ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಉನ್ನತ ಅಧಿಕಾರ ಕಾರ್ಯಪಡೆ ರಚಿಸಿರುವುದು ಅತ್ಯಂತ ಸಮಯೋಚಿತ ಕ್ರಮವಾಗಿದೆ. ಪ್ರತಿವರ್ಷ…

8 hours ago

ಆರ್‌ಟಿಇ; ಮಕ್ಕಳು ಅವಕಾಶ ವಂಚಿತರಾಗಬಾರದು

ಶಾಂತರಾಜು ಬಸ್ತೀಪುರ ಬಜೆಟ್ ಘೋಷಣೆಯಂತೆ ಪ್ರೌಢಶಾಲೆಗೂ ವಿಸ್ತರಣೆಯಾಗಲಿ ಬಡತನ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ…

8 hours ago

ಕೋವಿಡ್: ಕೊಡಗು ಜಿಲ್ಲೆಯಲ್ಲಿಯೂ ಅಗತ್ಯ ಕಟ್ಟೆಚ್ಚರ

ನವೀನ್ ಡಿಸೋಜ ಮಡಿಕೇರಿ: ಕೋವಿಡ್-೧೯ ಸೋಂಕಿನ ಪ್ರಕರಣಗಳು ಮತ್ತೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಅಗತ್ಯ…

8 hours ago