ಮೈಸೂರು

ಮೈಸೂರು | ಧಮ್ಮದೀಪ ; ಧಮ್ಮೋಪದೇಶ ನೀಡಿದ ಭಂತೆ ಕಲ್ಯಾಣಸಿರಿ

ಮೈಸೂರು: ಇಲವಾಲದ ಸಮೃದ್ಧಿ ಬಡಾವಣೆಯಲ್ಲಿ ಬೌದ್ಧ ಉಪಾಸಕರಾದ ಕೆ.ಎಂ.ವಿನೋದ ಮತ್ತು ಎಚ್.ಸಿ.ರಾಜೇಶ್ ಅವರ ನಿವೇಶನದಲ್ಲಿ ಧಮ್ಮದೀಪ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಅಶೋಕಪುರಂನ ಬೌದ್ಧವಿಹಾರದ ಭಂತೆ ಡಾ.ಕಲ್ಯಾಣಸಿರಿ ಅವರ ಸಾನಿಧ್ಯದಲ್ಲಿ ಬುದ್ಧವಂದನೆಯೊಂದಿಗೆ ಧಮ್ಮೋಪದೇಶ ನಡೆಯಿತು.

ಬಳಿಕ ಮಾತನಾಡಿದವ ಭಂತೇಜಿ ಕಲ್ಯಾಣಿಸಿರಿ ಅವರು, ಬುದ್ಧತತ್ವ ಮಾನವತ್ವದ ಪ್ರತಿರೂಪವಾಗಿದ್ದು ಲೋಕದ ಜೀವರಾಶಿಗಳ ಹಿತ ಮತ್ತು ಸುಖಕ್ಕಾಗಿ ಹಾತೊರೆಯುತ್ತದೆ. ಜಾತಿಕೊಳಕುಗಳಿಂದ ಮತಿಗೆಟ್ಟ ಸಮಾಜದಲ್ಲಿ ಜೀವಜೀವಗಳ ನಡುವೆ ಸಮತೆ, ಮಮತೆಯ ಸಂಪ್ರೀತಿ ಹರಿಸಿ ಸರ್ವರೂ ಸಾಮರಸ್ಯದಿಂದ ಬದುಕುವ ನೈತಿಕ ಸಂಸ್ಕಾರವನ್ನು ಕಲಿಸುತ್ತದೆ ಎಂದು ಹೇಳಿದರು.

ಕಣ್ಣಿಗೆ ಕಾಣದ ಸ್ವರ್ಗ-ನರಕಗಳ ಚಿಂತೆಯಲ್ಲಿ ಮೌಡ್ಯಾಲೋಚನೆಗಳಿಗೆ ತುತ್ತಾಗಿರುವ ಮಾನವನಿಗೆ ತಮ್ಮ ನಡತೆಯಿಂದ ಸನ್ಮಾರ್ಗವನ್ನೂ ಸಾಧಿಸಬಹುದು ಎಂದು ಬುದ್ಧರು ತೋರಿಸಿದ್ದಾರೆ. ಹೀಗಾಗಿ ಪಂಚಶೀಲ, ಅಷ್ಟಾಂಗಮಾರ್ಗ ಮತ್ತು ದಶಪಾರಮಿಗಳನ್ನು ಅನುಸರಿಸುವುದರ ಮುಲಕ ಭೂವಾಸಿಗಳಾದ ನಾವು ಇಲ್ಲಿಯೇ ಈ ಜೀವನದಲ್ಲಿಯೇ ಸ್ವರ್ಗಸುಖವನ್ನು ಅನುಭವಿಸಬಹುದಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕಾಳಮ್ಮ, ಪಾರ್ವತಮ್ಮ, ಚಿಕ್ಕದಾಸಯ್ಯ, ಮಾಯಣ್ಣ, ಎಚ್.ಆರ್.ಯಶಿಕ, ಎಚ್.ಆರ್.ಪ್ರಬುದ್ಧ ಸಾತ್ವಿಕ್, ಗೋವಿಂದರಾಜ್, ರಮೇಶ್, ಕೆ.ಲೋಕೇಶ್, ನಟೇಶ್, ಲೇಖಕಿ ಸುಮ ಪಂಚವಳ್ಳಿ, ಎಂ.ಎಸ್.ಮಂಜು, ಪೋಲಿಸ್ ಇಲಾಖೆಯ ವಸಂತಕುಮಾರ್, ಜ್ಯೋತಿಷ್ ಮೂರ್ತಿ, ಸೋಯಬ್ ರಜಾಕ್, ಲೋಕೇಶ್ ಎಂ. ಮೊದಲಾದವರು ಉಪಸ್ಥಿತರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ರಾಮಕೃಷ್ಣ ಆಶ್ರಮದವರು ಕೊಟ್ಟ ಮಾತು ಉಳಿಸಿಕೊಳ್ಳಬೇಕಿತ್ತು

ಶತಮಾನದ ಹಿಂದೆ ಮೈಸೂರು ಸಂಸ್ಥಾನದ ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ಅವರು ಮೈಸೂರಿನ ಹೆಣ್ಣುಮಕ್ಕಳಿಗಾಗಿ ಸ್ಥಾಪಿಸಿದ್ದ ‘ಮಹಾರಾಣಿಯವರ ಹೊಸ ಮಾದರಿ (ಎನ್‌ಟಿಎಂ) ಶಾಲೆ’…

8 hours ago

ಅರವತ್ತು ದಿನಗಳು ಕಳೆಯಿತು…ಫಲದ ನಿರೀಕ್ಷೆಯಲ್ಲಿ!

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ತೋಳ ಬಂತು ತೋಳ ಕತೆಯನ್ನು ನೆನಪಿಸುವಂತಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕಾಂಗ್ರೆಸ್…

8 hours ago

ಇಂದು ಕೊಡಗು ಜಿಲ್ಲೆಯಲ್ಲಿ ಕಕ್ಕಡ 18ರ ಸಂಭ್ರಮ

ನವೀನ್ ಡಿಸೋಜ ಮನೆಮನೆಗಳಲ್ಲಿ ಘಮಘಮಿಸಲಿದೆ ಮದ್ದುಸೊಪ್ಪಿನ ಖಾದ್ಯ; ವಿಭಿನ್ನ ಹಬ್ಬದಾಚರಣೆಗೆ ಜಿಲ್ಲೆಯಲ್ಲಿ ಸಿದ್ಧತೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ (ಆ.೩)ಕಕ್ಕಡ…

8 hours ago

ಸಾರ್ವಜನಿಕರ ಶೌಚಾಲಯಕ್ಕೆ ಬೇಕಿದೆ ಚಿಕಿತ್ಸೆ!

ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿನ ಶೌಚಾಲಯದಲ್ಲಿ ಅಶುಚಿತ್ವ ತಾಂಡವ ಮೈಸೂರು: ವಾಯುವಿಹಾರಿಗಳು ಹಾಗೂ ಕ್ರೀಡಾಸಕ್ತರ ನೆಚ್ಚಿನ ತಾಣವಾಗಿರುವ ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ…

8 hours ago

ಗ್ರಾಪಂಗಳ ಅತ್ಯುತ್ತಮ ಕೆಲಸಕ್ಕೆ ಉತ್ತಮ ಪ್ರಶಸ್ತಿ

ಕೆ.ಬಿ.ರಮೇಶನಾಯಕ ಪ್ರಗತಿಯಲ್ಲಿ ಹಿಂದೆ ಬಿದ್ದಿರುವ ಗ್ರಾಪಂಗಳನ್ನು ಹುರಿದುಂಬಿಸಲು ಜಿಪಂ ಹೊಸ ಯೋಜನೆ ಪ್ರಶಸ್ತಿಗೆ ನಾಲ್ಕು ಕಾರ್ಯಸೂಚಿಯಲ್ಲಿ ಪ್ರಗತಿ ಸಾಧಿಸಿದ ಗ್ರಾಪಂಗಳ…

9 hours ago

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

1 day ago