ಮೈಸೂರು: ಇಲವಾಲದ ಸಮೃದ್ಧಿ ಬಡಾವಣೆಯಲ್ಲಿ ಬೌದ್ಧ ಉಪಾಸಕರಾದ ಕೆ.ಎಂ.ವಿನೋದ ಮತ್ತು ಎಚ್.ಸಿ.ರಾಜೇಶ್ ಅವರ ನಿವೇಶನದಲ್ಲಿ ಧಮ್ಮದೀಪ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಅಶೋಕಪುರಂನ ಬೌದ್ಧವಿಹಾರದ ಭಂತೆ ಡಾ.ಕಲ್ಯಾಣಸಿರಿ ಅವರ ಸಾನಿಧ್ಯದಲ್ಲಿ ಬುದ್ಧವಂದನೆಯೊಂದಿಗೆ ಧಮ್ಮೋಪದೇಶ ನಡೆಯಿತು.
ಬಳಿಕ ಮಾತನಾಡಿದವ ಭಂತೇಜಿ ಕಲ್ಯಾಣಿಸಿರಿ ಅವರು, ಬುದ್ಧತತ್ವ ಮಾನವತ್ವದ ಪ್ರತಿರೂಪವಾಗಿದ್ದು ಲೋಕದ ಜೀವರಾಶಿಗಳ ಹಿತ ಮತ್ತು ಸುಖಕ್ಕಾಗಿ ಹಾತೊರೆಯುತ್ತದೆ. ಜಾತಿಕೊಳಕುಗಳಿಂದ ಮತಿಗೆಟ್ಟ ಸಮಾಜದಲ್ಲಿ ಜೀವಜೀವಗಳ ನಡುವೆ ಸಮತೆ, ಮಮತೆಯ ಸಂಪ್ರೀತಿ ಹರಿಸಿ ಸರ್ವರೂ ಸಾಮರಸ್ಯದಿಂದ ಬದುಕುವ ನೈತಿಕ ಸಂಸ್ಕಾರವನ್ನು ಕಲಿಸುತ್ತದೆ ಎಂದು ಹೇಳಿದರು.
ಕಣ್ಣಿಗೆ ಕಾಣದ ಸ್ವರ್ಗ-ನರಕಗಳ ಚಿಂತೆಯಲ್ಲಿ ಮೌಡ್ಯಾಲೋಚನೆಗಳಿಗೆ ತುತ್ತಾಗಿರುವ ಮಾನವನಿಗೆ ತಮ್ಮ ನಡತೆಯಿಂದ ಸನ್ಮಾರ್ಗವನ್ನೂ ಸಾಧಿಸಬಹುದು ಎಂದು ಬುದ್ಧರು ತೋರಿಸಿದ್ದಾರೆ. ಹೀಗಾಗಿ ಪಂಚಶೀಲ, ಅಷ್ಟಾಂಗಮಾರ್ಗ ಮತ್ತು ದಶಪಾರಮಿಗಳನ್ನು ಅನುಸರಿಸುವುದರ ಮುಲಕ ಭೂವಾಸಿಗಳಾದ ನಾವು ಇಲ್ಲಿಯೇ ಈ ಜೀವನದಲ್ಲಿಯೇ ಸ್ವರ್ಗಸುಖವನ್ನು ಅನುಭವಿಸಬಹುದಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಾಳಮ್ಮ, ಪಾರ್ವತಮ್ಮ, ಚಿಕ್ಕದಾಸಯ್ಯ, ಮಾಯಣ್ಣ, ಎಚ್.ಆರ್.ಯಶಿಕ, ಎಚ್.ಆರ್.ಪ್ರಬುದ್ಧ ಸಾತ್ವಿಕ್, ಗೋವಿಂದರಾಜ್, ರಮೇಶ್, ಕೆ.ಲೋಕೇಶ್, ನಟೇಶ್, ಲೇಖಕಿ ಸುಮ ಪಂಚವಳ್ಳಿ, ಎಂ.ಎಸ್.ಮಂಜು, ಪೋಲಿಸ್ ಇಲಾಖೆಯ ವಸಂತಕುಮಾರ್, ಜ್ಯೋತಿಷ್ ಮೂರ್ತಿ, ಸೋಯಬ್ ರಜಾಕ್, ಲೋಕೇಶ್ ಎಂ. ಮೊದಲಾದವರು ಉಪಸ್ಥಿತರಿದ್ದರು.
ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…
ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…
ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…
ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…
ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…