ನಂಜನಗೂಡು: ಮೈಕ್ರೋ ಫೈನಾನ್ಸ್ ಹಾವಳಿಯ ದುಂಡಾವರ್ತನೆಗೆ ಸಿಲುಕಿ ತಾಲ್ಲೂಕಿನ ಮಲ್ಕುಂಡಿ ಗ್ರಾಮದ ಕೃಷ್ಣಮೂರ್ತಿ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆಯಲ್ಲಿ ಐದು ಹಣಕಾಸು ಸಂಸ್ಥೆಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೃಷ್ಣಮೂರ್ತಿ ಧರ್ಮಸ್ಥಳ ಸೀಶಕ್ತಿ ಸ್ವಸಹಾಯ ಸಂಘ, ಉಜ್ಜೀವನ್, ಬಿಎಸ್ಎಸ್, ಗ್ರಾಮೀಣ ಕೂಟ, ಐಡಿಎಫ್ಎಸ್ ಸೇರಿದಂತೆ ಐದು ಸಂಸ್ಥೆಗಳಿಂದ ಅನೇಕ ಬಾರಿ ಸಾಲ ಪಡೆದು ಮರುಪಾವತಿ ಸಹ ಮಾಡಿದ್ದ ಎನ್ನಲಾಗಿದೆ.
ಈ ಸಂಸ್ಥೆಯ ಸಾಲ ಪಾವತಿಸಲು ಇನ್ನೊಂದು ಸಂಸ್ಥೆಯಿಂದ ಹೆಚ್ಚು ಸಾಲ ಪಡೆಯುತ್ತಲೇ ಕೃಷ್ಣಮೂರ್ತಿ ಎಲ್ಲ ಹಣಕಾಸು ಸಂಸ್ಥೆಗಳ ನಂಬಿಕೆ ಗಳಿಸಿಕೊಂಡು ಮೈಯೆಲ್ಲಾ ಸಾಲ ಮಾಡಿಕೊಂಡಿದ್ದು ಈಗ ಎಲ್ಲೂ ಸಾಲ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ. ಆತನಿಗೆ ಪೈಪೋಟಿಯ ಮೇಲೆ ಸಾಲ ನೀಡಿದ ಧರ್ಮಸ್ಥಳ ಸೀಶಕ್ತಿ ಸ್ವಸಹಾಯ ಸಂಘ, ಉಜ್ಜೀವನ್, ಬಿಎಸ್ಎಸ್, ಗ್ರಾಮೀಣ ಕೂಟ, ಐಡಿಎ-ಎಸ್ ಈ ಐದೂ ಸಂಸ್ಥೆಗಳ ಮೇಲೆ ಕೃಷ್ಣಮೂರ್ತಿ ಕುಟುಂಬ ದೂರು ನೀಡಿದ್ದು ಪೊಲೀಸರು ಆ ಐದು ಸಂಸ್ಥೆಗಳವರನ್ನು ಸೋಮವಾರ ಸಂಜೆ ಠಾಣೆಗೆ ಕರೆಸಿ ವಿಚಾರಣೆ ಆರಂಭಿಸಿದ್ದಾರೆ ಎಂದು ಡಿವೈಎಸ್ಪಿ ರಘು ತಿಳಿಸಿದ್ದಾರೆ.
ಈ ಪ್ರಕರಣದಿಂದಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಎಫ್ಐಆರ್ ಹಾಕಿದ ಮೊದಲ ತಾಲ್ಲೂಕು ನಂಜನಗೂಡು ಆಗಿದೆ.
ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್ಗಳು ಈಗ ಇನ್ಸ್ಟಾಗ್ರಾಂ…
ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…
ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…
ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…
ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…