ಮೈಸೂರು

ಡಿಸಿಎಂ ʻಡಿಕೆಶಿʼ ವಿರುದ್ಧ ʻಎಚ್‌ಡಿಕೆʼ ವಾಗ್ದಾಳಿ

ಮೈಸೂರು: ಯಡಿಯೂರಪ್ಪ ಹಾಗೂ ನನ್ನ ಟಾಕ್‌ವಾರ್‌ ರಾಜಕೀಯವಾದದ್ದು, ನನ್ನ ಮತ್ತು ಬಿಎಸ್‌ ಯಡಿಯೂರಪ್ಪ ವಿರುದ್ಧ ಬಿರುಕು ಮೂಡಿಸಲು ನಿನ್ನೆ ಇದೇ ಸ್ಥಳದಲ್ಲಿ ಹಳೆ ವಿಡಿಯೋ ತುಣುಕು ಬಿಡಿಗಡೆ ಮಾಡಿ ನಕ್ಕಿದ್ದೀರ. ಮಿಸ್ಟರ್‌ ಶಿವಕುಮಾರ್‌ ಇದು ಹೀಗೆ ಇರಲ್ಲ, ಅಧಿಕಾರವೂ ಕೂಡ ಶಾಶ್ವತವಲ್ಲಿ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ದ ಡೈರೆಕ್ಟ್‌ ಹಿಟ್‌ ಮಾಡಿದರು.

ಯಡಿಯೂರಪ್ಪ ನನಗೆ ನಾಗರಹಾವು ಎಂದಿದ್ದರು ನಿಜ. ಮಿಸ್ಟರ್‌ ಶಿವಕುಮಾರ್‌ ನಿನ್ನ ಪಾಲಿಗೆ ನಾನು ನಾಗರಹಾವು ಎಂದು ತಮ್ಮ ಭಾಷಣದ ಮಧ್ಯೆಯೆ ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ನಾಯಕರ ವಿಡಿಯೋ ತುಣುಕು ಬಿಡುಗಡೆ ಮಾಡಿದರು.

ನನ್ನ ಅಧ್ಯಕ್ಷತೆಯಲ್ಲಿ 136 ಸೀಟು ಗೆದ್ದಿದೆ ಅಂತೇಳಿದ್ದಾರೆ. ನಿಮ್ಮದೆ ಅಧ್ಯಕ್ಷತೆಯಲ್ಲಿ ಮತ್ತೇಕೆ ಲೋಕಸಭೆ ಚುನಾವಣೆಯಲ್ಲಿ 28 ರಲ್ಲಿ 9 ಸ್ಥಾನ ಬಂತು. ಎಲ್ಲವೂ ನನಗೆ ಗೊತ್ತಿದೆ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ಪರವಾಗಿ ಬಂಡೆಯಾಗಿ ನಿಂತಿದ್ದಾರಂತೆ, ಇದೇ ಮಾತನ್ನು ಈ ಹಿಂದೆ ನನಗೂ ಡಿಕೆ ಶಿವಕುಮಾರ್‌ ಹೇಳಿದ್ರು, ಆ ಬಂಡೆ ನಂಬಿದಕ್ಕೆ ನನ್ನ ತಲೆ ಮೇಲೆಯೇ ಬಂಡೆ ಬಿತ್ತು. ಇದೀಗ, ಆ ಬಂಡೆ ಸಿದ್ದರಾಮಯ್ಯರ ಪರವಾಗಿ ಇದೆಯಂತೆ, ಅವರ ಕಥೆ ಮುಗಿತು ಅನ್ಕೋಳಿ, ಬಂಡೆ ಸಿದ್ದರಾಮಯ್ಯ ಮೇಲೆ ಬಿದ್ದರೆ ಅವರ ಪರಿಸ್ಥಿತಿ ಏನಾಗಲಿದೆ ಎನ್ನುವುದು ಗೊತ್ತಿದೆ ಎಂದು ಡಿಕೆಶಿಗೆ ತಿರುಗೇಟು ನೀಡಿದರು.

ಸಿಡಿ ಶಿವು ಕಥೆ ಬೇರೆ, ಬೆಂಗಳೂರಲ್ಲಿ ಜೇಡರಹಳ್ಳಿ ಎಂತ ಇದೆ ಅಲ್ಲಿ ಬೇರೆ ಕಥೆ ಇದೆ. ಕೊತ್ವಾಲ್‌ ಅತ್ರ ಜೀವನ ಮಾಡ್ಕೊಂಡು ಇದ್ದೊರಿಗೆ ದೇವೇಗೌಡರ ಕುಟುಂಬದ ಆಸ್ತಿ ವಿವರಬೇಕಾ..?ಎಂದು ಗುಡುಗಿದರು.

ನಾನು ರಾಜಕೀಯ  ಶುರುಮಾಡಿದಾಗ ನಿಖಿಲ್‌ ಹುಟ್ಟಿರಲಿಲ್ಲ ಎಂದಿದ್ದಿರಾ, ಹೆಚ್‌ಡಿ ದೇವೇಗೌಡರು ಕಾವೇರಿ ವಿಚಾರಕ್ಕಾಗಿ ಹೋರಾಟ ಶುರು ಮಾಡಿದಾಗ ನೀವು ಹುಟ್ಟಿದ್ರ ಎಂದು ತಮ್ಮ ಭಾಷಣದ ಬುಹುತೇಕ ಸಮಯ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ದ ವಾಗ್ದಾಳಿ ನಡೆಸಿದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ: ಚುಟುಕು ಸಾಹಿತ್ಯ ಪ್ರಶಸ್ತಿ ಸೇರ್ಪಡೆ ಸ್ವಾಗತಾರ್ಹ

೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…

23 hours ago

ವೈಚಾರಿಕ ಕ್ರಾಂತಿಯ ವಚನಕಾರ ಹಡಪದ ಅಪ್ಪಣ್ಣ

ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…

23 hours ago

ಹವಾಮಾನ ಬದಲಾವಣೆ; ಹುಲಿಗಳಿಗೆ ಹೊಸ ಅಪಾಯ?

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…

24 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಗೌರವ್ ಶುಕ್ಲಾ ಎಂಬ ‘ಸಮವಸ್ತ್ರವಿಲ್ಲದ ಸೈನಿಕ’

‘ಸಪೋರ‍್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ  ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…

24 hours ago

ಮಲ್ಲಳ್ಳಿ ಜಲಪಾತದ ರೋಪ್‌ವೇ ಯೋಜನೆಗೆ ವೇಗ

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್‌ವೇ ಯೋಜನೆಗೆ ವೇಗ ದೊರೆತಿದೆ.…

24 hours ago