ಮೈಸೂರು

ಬಿಂದಿಗೆ ಹೊತ್ತು ಓಡಿದ ನಾರಿಯರು, ಗೊಬ್ಬರಮೂಟೆ ಹೊತ್ತು ಓಡಿದ ಪುರುಷರು

ರೈತ ದಸರಾ ಕ್ರೀಡಾಕೂಟದಲ್ಲಿ ಕೃಷಿಕರ ಸಂಭ್ರಮದ ಹೊನಲು

ಮೈಸೂರು: ನೀರಿನ ಬಿಂದಿಗೆ ಹೊತ್ತು ಎದ್ನೋ,ಬಿದ್ನೋ ಅಂಥ ಓಡಿದ ನಾರಿಯರು. ಹೆಣ್ಮಕ್ಕಳಿಗಿಂತ ತಾವೇನೂ ಕಮ್ಮಿ ಇಲ್ಲವೆನ್ನುವಂತೆ ಗೋಣಿಚೀಲದ ಗೊಬ್ಬರ ಮೂಟೆ ಹೊತ್ತು ಓಡಿದ ಪುರುಷರು. ಕೆಸರುಗದ್ದೆ ಓಟದಲ್ಲಿ ಎದ್ದು ಬಿದ್ದು ಗುರಿ ತಲುಪಿದ ರೈತರು.. ನೀರು ತುಂಬಿದ ಬಿಂದಿಗೆ ಹೊತ್ತು ಓಡಿದ ಮಹಿಳಾ ರೈತರು !.. ಇದು ಮೈಸೂರು ದಸರಾ ಮಹೋತ್ಸವ ಅಂಗವಾಗಿ ರೈತದಸರಾ ಪ್ರಯುಕ್ತ ಶನಿವಾರ ನಡೆದ ಕ್ರೀಡಾಕೂಟದಲ್ಲಿ ಕಂಡು ಬಂದ ವಿಶೇಷತೆಗಳು. ಹಲವು ದಿನದಿಂದ ತಮ್ಮ ಗದ್ದೆ,ಜಮೀನಿನಲ್ಲಿ ವ್ಯವಸಾಯದಲ್ಲಿ ನಿರತರಾಗಿದ್ದ ರೈತರು-ರೈತ ಮಹಿಳೆಯರು ಎಲ್ಲ ಕೆಲಸವನ್ನು ಬದಿಗೊತ್ತಿ ನಾಡಹಬ್ಬ ದಸರಾ ಕ್ರೀಡಾಕೂಟದ ಸಂಭ್ರಮದಲ್ಲಿ ಭಾಗವಹಿಸಿ ಮಿಂಚಿದರು.

ಬಿಂದಿಗೆ ಹೊತ್ತರು: ನಗರದ ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನದಲ್ಲಿ ಹಲವಾರು ಸ್ಪರ್ಧೆಗಳು ನಡೆಯಿತು. ಸಮಯಕ್ಕೆ ಸರಿಯಾಗಿ ಮನೆಯಿಂದ ಠಾಕುಠೀಕಾಗಿ ಬಂದಿದ್ದ ಮಹಿಳೆಯರು ಓವಲ್ ಮೈದಾನಕ್ಕೆ ಬಂದರು. ಬಳಿಕ ಸ್ಪರ್ಧೆಗೆ ಥೇಟ್ ಹಳ್ಳಿ ಹೆಣ್ಣುಮಕ್ಕಳಂತೆ ಸಜ್ಜಾದರು. ಬಳಿಕ ನೀರಿನ ಬಿಂದಿಗೆ ಹೊತ್ತುಕೊಂಡು ನಿಗಧಿತ ಗುರಿ ತಲುಪಲು ಪೈಪೋಟಿ ನೀಡಿದರೆ, ಸುತ್ತಲೂ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ತಲೆ ಮೇಲೆ ಬಿಂದಿಗೆಯನ್ನು ಹೊತ್ತು ಸರಾಗವಾಗಿ ಬೇಗ ಗುರಿ ತಲುಪಿ ಪ್ರಥಮ,ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡರೆ, ಹಲವರು ಸುಸ್ತಾಗಿ ನಿಂತಿದ್ದು ಕಾಣಿಸಿತು. ಇದೇ ರೀತಿ ಲೆಮನ್ ಅಂಡ್ ಸ್ಪೂನ್ ಸ್ಪರ್ಧೆಯಲ್ಲೂ ಮಹಿಳೆಯರು ಖುಷಿಯಿಂದಲೇ ಪಾಲ್ಗೊಂಡಿದ್ದರು. ನಗರ ಪ್ರದೇಶದ ಹೆಣ್ಣು ಮಕ್ಕಳಿಗಿಂತ ತಾವೇನೂ ಕಮ್ಮಿ ಎನ್ನುವುದನ್ನು ಸ್ಪರ್ಧೆ ಉತ್ಸಾಹದ ಮೂಲಕವೇ ತೋರಿಸಿಕೊಟ್ಟರು. ಬಾಯಲ್ಲಿ ಚಮಚ ಇಟ್ಟುಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.

ಎದ್ದುಬಿದ್ದು ಓಡೋಡಿದರು: ಇನ್ನೂ ೫೦ಕೆಜಿ ತೂಕದ ಗೊಬ್ಬರ ಮೂಟೆ ಹೊತ್ತುವ ಸ್ಪರ್ಧೆ ಬಹಳ ರೋಮಾಂಚನಕಾರಿಯಾಗಿತ್ತು. ಹಳ್ಳಿಯಲ್ಲಿ ಕ್ವಿಂಟಾಲ್ ಚೀಲ ಹೊತ್ತುವ ಅಭ್ಯಾಸ ಇದ್ದರೂ ಪಟ್ಟಣದಲ್ಲಿ ಓಡುವ ಸ್ವಭಾವ ಕಡಿಮೆಯಿರುತ್ತದೆ. ಹೀಗಿದ್ದರೂ ಸುಡುವ ಬಿಸಿಲಲ್ಲೂ ಹೆಗಲ ಮೇಲೆ ಗೊಬ್ಬರದ ಮೂಟೆಯನ್ನು ೧೦೦ ಮೀಟರ್ ಹೊತ್ತು ಓಡಿದರು. ಮೂಟೆ ಹೊತ್ತು ಓಡಿ ಬರುವ ರಭಸಕ್ಕೆ ಎಲ್ಲಾದರೂ ಜಾರಿಬಿದ್ದರೆ ಎನ್ನುವ ಕಾರಣಕ್ಕಾಗಿ ಕೆಲವರು ತಡೆದುಕೊಳ್ಳಲು ಸಜ್ಜಾಗಿದ್ದರು.ಆದರೆ, ಕೆಲವರು ನಿಧಾನವಾಗಿ ಓಡಿದರೆ, ಹಲವರು ಮೂಟೆ ಹೊತ್ತು ನಿಗಧಿತ ಗುರಿ ತಲುಪಿ ಸೈ ಎನ್ನಿಸಿಕೊಂಡರು. ಇನ್ನು ಗೋಣಿಚೀಲದ ಒಳಗೆ ಕಾಲಿಟ್ಟು ಓಡುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ರೈತರು ಗೆಲುವಿಗಾಗಿ ಎಲ್ಲ ಶ್ರಮ ಹಾಕಿ ಓಡುವ ಭರದಲ್ಲಿ ಕೆಲವರು ಆಯತಪ್ಪಿ ಬಿದ್ದರೆ,ಹಲವರು ತಮ್ಮ ಜಾಣತನದಿಂದಲೇ ಗುರಿ ತಲುಪಿ ಬಹುಮಾನ ತಮ್ಮದಾಗಿಸಿಕೊಂಡರು. ಇದೇ ರೀತಿ ಪುರುಷರಿಗೆ ಮೂರು ಕಾಲಿನ ಓಟ,ಗುಂಡು ಮಹಿಳಾ ರೈತರಿಗೆ ಚಮಚದಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಓಡುವ ಸ್ಪರ್ಧೆಯು ಎಲ್ಲರು ಕೂತುಹಲದಿಂದ ನೋಡುವಂತೆ ಮಾಡಿತು. ಪುರುಷರ ಮೂರು ಕಾಲಿನ ಓಟದ ಸ್ಪರ್ಧೆ ನೋಡುಗರ ಗಮನ ಸೆಳೆದರೆ, ಮಹಿಳೆಯರ ಒಂಟಿ ಕಾಲಿನ ಓಟದ ವೇಳೆ ಸುತ್ತುವರಿದಿದ್ದವರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

 

 

andolana

Recent Posts

ಮೂಕಾಂಬಿಕೆ ದರ್ಶನ ಪಡೆದ ಸಿಎಂ ವಿಜಯ್

ಬೆಳ್ಳಿ ಖಡ್ಗ, ದೇವಿಗೆ ರೇಷ್ಮೆ ಸೀರೆ ಅರ್ಪಿಸಿ ವಿಶೇಷ ಪೂಜೆ, ಪ್ರಾರ್ಥನೆ ಉಡುಪಿ : ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್…

8 hours ago

ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳ ಇಲ್ಲ

ಹಿಂದಿನ ವರ್ಷದ ಶುಲ್ಕವೇ ಈ ವರ್ಷಕ್ಕೂ ಅನ್ವಯ   ಬೆಂಗಳೂರು :  ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ, ದಂತ ವೈದ್ಯಕೀಯ,…

10 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ | ಪ್ರೇಕ್ಷಕ ಚಿತ್ರಮಂದಿರದಿಂದ ವಿಮುಖನಾಗುತ್ತಿದ್ದಾನೆಯೇ?

ಸಾಮಾಜಿಕ ತಾಣಗಳಲ್ಲಿ, ನವ ಮಾಧ್ಯಮಗಳಲ್ಲಿ ಅವರವರ ಭಾವಕ್ಕೆ ಅವರವರ ಅನುಭವಕ್ಕೆ ತಕ್ಕಂತೆ ಜಿಜ್ಞಾಸೆ ನಡೆದಿದೆ. ಚಿತ್ರಮಂದಿರಗಳಿಂದ ಪ್ರೇಕ್ಷಕ ದೂರವಾಗುತ್ತಿದ್ದಾನೆ; ಅವನನ್ನು…

14 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 12 ಶುಕ್ರವಾರ

17 hours ago

ಮಳವಳ್ಳಿ | ಚಿರತೆ ಪ್ರತ್ಯಕ್ಷ ; ಆತಂಕ

ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮಕ್ಕೆ ಹೊಂದುಕೊಂಡಂತೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ. ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪವೇ…

1 day ago

ಎಚ್.ಸಿ.ಮಹದೇವಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ

ಬೆಂಗಳೂರು : ಕರ್ನಾಟಕದ ಪ್ರಭಾವಿ ದಲಿತ ಸಮುದಾಯದ ನಾಯಕ ಹಾಗೂ ಮಾಜಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ…

1 day ago