ಮೈಸೂರು

ಬಿಂದಿಗೆ ಹೊತ್ತು ಓಡಿದ ನಾರಿಯರು, ಗೊಬ್ಬರಮೂಟೆ ಹೊತ್ತು ಓಡಿದ ಪುರುಷರು

ರೈತ ದಸರಾ ಕ್ರೀಡಾಕೂಟದಲ್ಲಿ ಕೃಷಿಕರ ಸಂಭ್ರಮದ ಹೊನಲು

ಮೈಸೂರು: ನೀರಿನ ಬಿಂದಿಗೆ ಹೊತ್ತು ಎದ್ನೋ,ಬಿದ್ನೋ ಅಂಥ ಓಡಿದ ನಾರಿಯರು. ಹೆಣ್ಮಕ್ಕಳಿಗಿಂತ ತಾವೇನೂ ಕಮ್ಮಿ ಇಲ್ಲವೆನ್ನುವಂತೆ ಗೋಣಿಚೀಲದ ಗೊಬ್ಬರ ಮೂಟೆ ಹೊತ್ತು ಓಡಿದ ಪುರುಷರು. ಕೆಸರುಗದ್ದೆ ಓಟದಲ್ಲಿ ಎದ್ದು ಬಿದ್ದು ಗುರಿ ತಲುಪಿದ ರೈತರು.. ನೀರು ತುಂಬಿದ ಬಿಂದಿಗೆ ಹೊತ್ತು ಓಡಿದ ಮಹಿಳಾ ರೈತರು !.. ಇದು ಮೈಸೂರು ದಸರಾ ಮಹೋತ್ಸವ ಅಂಗವಾಗಿ ರೈತದಸರಾ ಪ್ರಯುಕ್ತ ಶನಿವಾರ ನಡೆದ ಕ್ರೀಡಾಕೂಟದಲ್ಲಿ ಕಂಡು ಬಂದ ವಿಶೇಷತೆಗಳು. ಹಲವು ದಿನದಿಂದ ತಮ್ಮ ಗದ್ದೆ,ಜಮೀನಿನಲ್ಲಿ ವ್ಯವಸಾಯದಲ್ಲಿ ನಿರತರಾಗಿದ್ದ ರೈತರು-ರೈತ ಮಹಿಳೆಯರು ಎಲ್ಲ ಕೆಲಸವನ್ನು ಬದಿಗೊತ್ತಿ ನಾಡಹಬ್ಬ ದಸರಾ ಕ್ರೀಡಾಕೂಟದ ಸಂಭ್ರಮದಲ್ಲಿ ಭಾಗವಹಿಸಿ ಮಿಂಚಿದರು.

ಬಿಂದಿಗೆ ಹೊತ್ತರು: ನಗರದ ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನದಲ್ಲಿ ಹಲವಾರು ಸ್ಪರ್ಧೆಗಳು ನಡೆಯಿತು. ಸಮಯಕ್ಕೆ ಸರಿಯಾಗಿ ಮನೆಯಿಂದ ಠಾಕುಠೀಕಾಗಿ ಬಂದಿದ್ದ ಮಹಿಳೆಯರು ಓವಲ್ ಮೈದಾನಕ್ಕೆ ಬಂದರು. ಬಳಿಕ ಸ್ಪರ್ಧೆಗೆ ಥೇಟ್ ಹಳ್ಳಿ ಹೆಣ್ಣುಮಕ್ಕಳಂತೆ ಸಜ್ಜಾದರು. ಬಳಿಕ ನೀರಿನ ಬಿಂದಿಗೆ ಹೊತ್ತುಕೊಂಡು ನಿಗಧಿತ ಗುರಿ ತಲುಪಲು ಪೈಪೋಟಿ ನೀಡಿದರೆ, ಸುತ್ತಲೂ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ತಲೆ ಮೇಲೆ ಬಿಂದಿಗೆಯನ್ನು ಹೊತ್ತು ಸರಾಗವಾಗಿ ಬೇಗ ಗುರಿ ತಲುಪಿ ಪ್ರಥಮ,ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡರೆ, ಹಲವರು ಸುಸ್ತಾಗಿ ನಿಂತಿದ್ದು ಕಾಣಿಸಿತು. ಇದೇ ರೀತಿ ಲೆಮನ್ ಅಂಡ್ ಸ್ಪೂನ್ ಸ್ಪರ್ಧೆಯಲ್ಲೂ ಮಹಿಳೆಯರು ಖುಷಿಯಿಂದಲೇ ಪಾಲ್ಗೊಂಡಿದ್ದರು. ನಗರ ಪ್ರದೇಶದ ಹೆಣ್ಣು ಮಕ್ಕಳಿಗಿಂತ ತಾವೇನೂ ಕಮ್ಮಿ ಎನ್ನುವುದನ್ನು ಸ್ಪರ್ಧೆ ಉತ್ಸಾಹದ ಮೂಲಕವೇ ತೋರಿಸಿಕೊಟ್ಟರು. ಬಾಯಲ್ಲಿ ಚಮಚ ಇಟ್ಟುಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.

ಎದ್ದುಬಿದ್ದು ಓಡೋಡಿದರು: ಇನ್ನೂ ೫೦ಕೆಜಿ ತೂಕದ ಗೊಬ್ಬರ ಮೂಟೆ ಹೊತ್ತುವ ಸ್ಪರ್ಧೆ ಬಹಳ ರೋಮಾಂಚನಕಾರಿಯಾಗಿತ್ತು. ಹಳ್ಳಿಯಲ್ಲಿ ಕ್ವಿಂಟಾಲ್ ಚೀಲ ಹೊತ್ತುವ ಅಭ್ಯಾಸ ಇದ್ದರೂ ಪಟ್ಟಣದಲ್ಲಿ ಓಡುವ ಸ್ವಭಾವ ಕಡಿಮೆಯಿರುತ್ತದೆ. ಹೀಗಿದ್ದರೂ ಸುಡುವ ಬಿಸಿಲಲ್ಲೂ ಹೆಗಲ ಮೇಲೆ ಗೊಬ್ಬರದ ಮೂಟೆಯನ್ನು ೧೦೦ ಮೀಟರ್ ಹೊತ್ತು ಓಡಿದರು. ಮೂಟೆ ಹೊತ್ತು ಓಡಿ ಬರುವ ರಭಸಕ್ಕೆ ಎಲ್ಲಾದರೂ ಜಾರಿಬಿದ್ದರೆ ಎನ್ನುವ ಕಾರಣಕ್ಕಾಗಿ ಕೆಲವರು ತಡೆದುಕೊಳ್ಳಲು ಸಜ್ಜಾಗಿದ್ದರು.ಆದರೆ, ಕೆಲವರು ನಿಧಾನವಾಗಿ ಓಡಿದರೆ, ಹಲವರು ಮೂಟೆ ಹೊತ್ತು ನಿಗಧಿತ ಗುರಿ ತಲುಪಿ ಸೈ ಎನ್ನಿಸಿಕೊಂಡರು. ಇನ್ನು ಗೋಣಿಚೀಲದ ಒಳಗೆ ಕಾಲಿಟ್ಟು ಓಡುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ರೈತರು ಗೆಲುವಿಗಾಗಿ ಎಲ್ಲ ಶ್ರಮ ಹಾಕಿ ಓಡುವ ಭರದಲ್ಲಿ ಕೆಲವರು ಆಯತಪ್ಪಿ ಬಿದ್ದರೆ,ಹಲವರು ತಮ್ಮ ಜಾಣತನದಿಂದಲೇ ಗುರಿ ತಲುಪಿ ಬಹುಮಾನ ತಮ್ಮದಾಗಿಸಿಕೊಂಡರು. ಇದೇ ರೀತಿ ಪುರುಷರಿಗೆ ಮೂರು ಕಾಲಿನ ಓಟ,ಗುಂಡು ಮಹಿಳಾ ರೈತರಿಗೆ ಚಮಚದಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಓಡುವ ಸ್ಪರ್ಧೆಯು ಎಲ್ಲರು ಕೂತುಹಲದಿಂದ ನೋಡುವಂತೆ ಮಾಡಿತು. ಪುರುಷರ ಮೂರು ಕಾಲಿನ ಓಟದ ಸ್ಪರ್ಧೆ ನೋಡುಗರ ಗಮನ ಸೆಳೆದರೆ, ಮಹಿಳೆಯರ ಒಂಟಿ ಕಾಲಿನ ಓಟದ ವೇಳೆ ಸುತ್ತುವರಿದಿದ್ದವರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

 

 

andolana

Recent Posts

ಓದುಗರ ಪತ್ರ: ಭ್ರಷ್ಟಾಚಾರ ಬಗ್ಗು ಬಡಿಯಲು ಸಿಎಂ ಮುಂದಾಗುವರೇ?

ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಾಯುಕ್ತರು ಆಗಾಗ್ಗೆ ದಾಳಿ ನಡೆಸುವುದು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಈಗಿನ ಪತ್ರಿಕಾ ವರದಿಗಳ ಪ್ರಕಾರ, ಮೂರೂವರೆ ವರ್ಷಗಳಲ್ಲಿ…

7 hours ago

ಓದುಗರ ಪತ್ರ: ಸದ್ದು ಮಾಡದ ತುಪ್ಪ, ಬೆಣ್ಣೆ ಬೆಲೆ ಏರಿಕೆ!

ನಂದಿನಿ ಉತ್ಪನ್ನಗಳಾದ, ತುಪ್ಪ ಕೆ.ಜಿಗೆ ರೂ.೧೫ ಮತ್ತು ಬೆಣ್ಣೆ ಕೆ.ಜಿಗೆ ರೂ.೫೦ ಅನ್ನು ಇದೇ ತಿಂಗಳ ೨೪ ರಿಂದಲೇ ಗ್ರಾಹಕರಿಗೆ…

7 hours ago

ಓದುಗರ ಪತ್ರ: ಬರ…ಅಬ್ಬರ !

ಬರ...ಅಬ್ಬರ ! ಬರ ಬರ ಬರ್ಬರ ಮಳೆ ಇಲ್ಲ; ಬೆಳೆ ಇಲ್ಲ ಬರಡಾಯಿತಲ್ಲ ಬದುಕೆಲ್ಲ ಜನ-ಜನುವಾರುಗಳ ಬದುಕೀಗ ಅಕ್ಷರಶಃ ಬರ್ಬರ…

7 hours ago

ಓದುಗರ ಪತ್ರ: ಪರೀಕ್ಷಾ ವ್ಯವಸ್ಥೆ ಸಮಗ್ರ ಸುಧಾರಣೆ ಅತ್ಯಗತ್ಯ

ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಉನ್ನತ ಅಧಿಕಾರ ಕಾರ್ಯಪಡೆ ರಚಿಸಿರುವುದು ಅತ್ಯಂತ ಸಮಯೋಚಿತ ಕ್ರಮವಾಗಿದೆ. ಪ್ರತಿವರ್ಷ…

7 hours ago

ಆರ್‌ಟಿಇ; ಮಕ್ಕಳು ಅವಕಾಶ ವಂಚಿತರಾಗಬಾರದು

ಶಾಂತರಾಜು ಬಸ್ತೀಪುರ ಬಜೆಟ್ ಘೋಷಣೆಯಂತೆ ಪ್ರೌಢಶಾಲೆಗೂ ವಿಸ್ತರಣೆಯಾಗಲಿ ಬಡತನ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ…

7 hours ago

ಕೋವಿಡ್: ಕೊಡಗು ಜಿಲ್ಲೆಯಲ್ಲಿಯೂ ಅಗತ್ಯ ಕಟ್ಟೆಚ್ಚರ

ನವೀನ್ ಡಿಸೋಜ ಮಡಿಕೇರಿ: ಕೋವಿಡ್-೧೯ ಸೋಂಕಿನ ಪ್ರಕರಣಗಳು ಮತ್ತೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಅಗತ್ಯ…

7 hours ago