ಮೈಸೂರು

ಬಹೂರೂಪಿ | ಜಾನಪದ ಉತ್ಸವಕ್ಕೆ ಚಾಲನೆ

ಮೈಸೂರು : ಸಂಕ್ರಾಂತಿ ಹೊಸ್ತಿಲಲ್ಲಿ ಮೈಸೂರಿನಲ್ಲಿ ನಡೆಯುವ ಕಲಾ ಹಬ್ಬವಾದ ಬಹುರೂಪಿ ನಾಟಕೋತ್ಸವವಕ್ಕೆ ಮುನ್ನುಡಿ ಬರೆದು ‘ಜಾನಪದ ಉತ್ಸವ’ ರಂಗಾಯಣದಲ್ಲಿ ನಡೆಯುತ್ತಿರುವ 25 ನೇ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಮೆರುಗೊಳಿಸಿತು.

ನಗರದ ಕಲಾಮಂದಿರ ಕಿಂದರಿಜೋಗಿ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೌದ್ಧ ಬಿಕ್ಕುಗಳ ವೇಷಧಾರಿಗಳು ದೀಪ ಹಿಡಿದು ವೇದಿಕೆ ಮೇಲೆ ಆಗಮಿಸಿದರು. ಮಣಿಪುರಿ ಸಂಗೀತ ವಾದ್ಯಾವಾದ ಶಯಾಶ್ ನುಡಿಸುವ ಮೂಲಕ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ದುರ್ಗಾದಾಸ್ ಜಾನಪದ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಬಹುರೂಪಿಗೆ ಅಟಿಗಲ್ಲು ಹಾಕಲಾಯಿತು. ಉದ್ಘಾಟನಾ ಉದ್ಘಾಟನ ನುಡಿಗಳನ್ನಾಡಿದ ಅವರು, ಸಮಾಜದಲ್ಲಿ ನೆಮ್ಮದಿ, ಸಮಾನತೆ ಬದುಕು ನಡೆಸಲು ರಂಗಚಟುವಟಿಕೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಲ್ಲಿ ಈ ಬಾರಿಯ ಬಹುರೂಪಿ ನಡೆಯುತ್ತಿರುವುದು ನಿಜಕ್ಕೂ ಖುಷಿಯ ವಿಚಾರ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಸ್ವಾತಂತ್ರ್ಯದ ಪೂರ್ವದಲ್ಲಿ ಸಮಾಜದಲ್ಲಿ ಸಮಾನತೆ ಇರಲಿಲ್ಲ. ಜಾತಿ, ವರ್ಣದ ಹೆಸರಿನಲ್ಲಿ ತಾರತಮ್ಯ ನಡೆಸಲಾಗುತ್ತಿತ್ತು. ದಿನಕೂಲಿಗಳು, ಕೆಳವರ್ಗದವರು, ಕರಕುಶಲಕರ್ಮಿಗಳ ಬದುಕು ಶೋಚನೀಯವಾಗಿತ್ತು. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ರಚನೆ ಮಾಡಿದಾಗ ಸರ್ವರಿಗೂ ಸಮಾನತೆ ಬದುಕು ದೊರೆಯಿತು. ಸೌದಾರ್ಹತೆಯಿಂದ ಬೆರೆತು ಹಕ್ಕುಗಳನ್ನು ಪ್ರತಿಯೊಬ್ಬರು ಪಡೆಯುವಂತಾಯಿತು. ಭಾರತದ ಸಂವಿಧಾನ ಕಾನೂನು ಗ್ರಂಥವಾಗಿ ಜಗತ್ತಿನಲ್ಲೇ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಸಿನಿಮಾದಲ್ಲಿ ಶೇ.70ರಷ್ಟು ಕಮರ್ಶಿಯಲ್ ಅಂಶ ಇರುತ್ತದೆ. ಆದರೆ, ರಂಗಭೂಮಿ ಕೇವಲ ಮನರಂಜನೆಯ ಭಾಗವಲ್ಲ. ಅದರಲ್ಲಿ ಸಾಮಾಜಿಕ ಬದ್ಧತೆ ಅಡಗಿದೆ. ಜಾನಪದ ತಾಯಿ ಬೇರು. ಈ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಿಗೆ ಅವಕಾಶ ನೀಡಿರುವುದು ಖುಷಿಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.

ಅಪರ ಜಿಲ್ಲಾಕಾರಿ ಡಾ. ಪಿ. ಶಿವರಾಜ್ ಮಾತನಾಡಿ, ಪ್ರತಿವರ್ಷ ವಿನೂತನ ಆಶಯದಲ್ಲಿ ಬಹುರೂಪಿ ನಡೆಯುತ್ತಿದೆ. ಈ ಬಾರಿ ಅಂಬೇಡ್ಕರ್ ಆಶಯದಲ್ಲಿ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ. ಜಗತ್ತು ಅಂಬೇಡ್ಕರ್ ಅವರ ಹೆಸರನ್ನು ಎಂದೂ ಮರೆಯುವುದಿಲ್ಲ ಎಂದರು.

ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ಕಲಾವಿದೆ ಡಾ.ಗೀತಾ ಸಿದ್ಧಿ, ರಂಗಸಮಾಜದ ಸದಸ್ಯ ಶಶಿಧರ್ ಭಾರಿಘಾಟ್, ಕನ್ನಡ ಮತ್ತು ಸಂಸ್ಕ ತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಸಂಚಾಲಕಿ ಗೀತಾ ಮೋಂಟಡ್ಕ ಸೇರಿದಂತೆ ಇತರರು ಹಾಜರಿದ್ದರು.

ಜನಪದ ಉತ್ಸವದ ಸಂಭ್ರಮ

ಜನಪದ ಉತ್ಸವದಲ್ಲಿ ರಂಗಾಸಕ್ತರ ಸಂಭ್ರಮದೊಂದಿಗೆ ಜನಪದ ಕಲೆಯೂ ಮೇಳೈಸಿತು. ಇದೇ ವೇಳೆ ಮೈಸೂರಿನ ಅರುಣೋಧಯ ತಂಡದ ವಿಶೇಷಚೇತನ ಮಕ್ಕಳ ಕಂಸಾಳೆ ಪ್ರದರ್ಶನ ಗಮನ ಸೆಳೆಯಿತು. ಬಾಗಲಕೋಟೆಯ ಬಯಲಾಟ ‘ಕೃಷ್ಣಾರ್ಜುನ ಕಾಳಗ’ ಜನಮನಸೂರೆಗೊಳಿಸಿತು. ಪಿರಿಯಾಪಟ್ಟಣದ ಅರೇಹಳ್ಳಿ ಗ್ರಾಮದ ತಂಡದವರು ನಡೆಸಿಕೊಟ್ಟ ವಾದ್ಯಸಂಗೀತ ವಿಶೇಷವಾಗಿತ್ತು. ಜಾನಪದ ಕಲಾ ತಂಡಗಳು, ವೇಶಧಾರಿಗಳಾಗಿ, ಕಂಸಾಳೆ ಹಿಡಿದು ಮಾದಪ್ಪನ ಹಾಡಿಗೆ ಹೆಚ್ಚಿ ಹಾಕಿದರು. ವಾರಾಂತ್ಯವಾದ ಭಾನುವಾರ ಸಾಕಷ್ಟು ರಂಗಾಸಕ್ತರು, ಹಿರಿಯರು, ಯುವಮನಸ್ಸುಗಳು ತಮ್ಮ ಸ್ನೇಹಿತರು ಮತ್ತು ಹಿತೈಷಿಗಳ ಜತೆಗೂಡಿ ರಂಗಾಯಣ ಅಂಗಳದಲ್ಲಿ ಜಮಾಯಿಸಿ ಜನಪದ ‘ರಸ’ ಸವಿದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

3 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

3 hours ago

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

4 hours ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

4 hours ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

4 hours ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

4 hours ago