ಮೈಸೂರು: ಬಹರೂಪಿಯ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ಆಯೋಜಿಸಿರುವ ಚಲನಚಿತ್ರೋತ್ಸವದಲ್ಲಿ ಬುಧವಾರ ಕೃಷಿಯ ಮೂಲಕ ಕೈದಿಗಳ ಮನ ಪರಿವರ್ತನೆ, ರಾಷ್ಟ್ರಕವಿ ಕುವೆಂಪು ಅವರ ಬದುಕು ಬರಹ ಮತ್ತು ಸಂಗೀತದ ಮೇಲೆ ಬೆಳಕು ಚೆಲ್ಲುವ ಚಿತ್ರಗಳು ಪ್ರದರ್ಶನಗೊಂಡವು.
ಬೆಳಿಗ್ಗೆ ೧೦.೩೦ ರಿಂದ ೨೮ ನಿಮಿಷದ ಫಿಡ್ಲರ್ ಆನ್ ದಿ ತ್ಯಾಚ್ (ಇಂಗ್ಲಿಷ್) ಸಿನಿಮಾ ಪ್ರದರ್ಶನವಾಯಿತು. ನೇಪಾಳದ ಕಾಲಿಂಪಾಂಗ್ನ ಗಾಂಧಿ ಆಶ್ರಮ ಶಾಲೆಯಲ್ಲಿನ ಶಿಕ್ಷಕನಿಗೆ ಪಿಟೀಲು ವಾದನದಲ್ಲಿ ಸಾಕಷ್ಟು ಆಸಕ್ತಿ. ಇದನ್ನೇ ಅಸ್ತ್ರವಾಗಿಸಿಕೊಂಡು ತನ್ನ ಸುತ್ತಲು ಇರುವ ಅನಕ್ಷರಸ್ಥ ಮಕ್ಕಳನ್ನು ಶಾಲೆಯೆಡೆಗೆ ಸೆಳೆಯುವುದು ಚಿತ್ರದ ಕಥಾವಸ್ತು. ಇದು ನೋಡುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.
ಬಾಲ್ಯದಲ್ಲಿ ನೋಡಿದ ‘ಸೌಂಡ್ ಆಫ್ ಮ್ಯೂಸಿಕ್’ ಚಿತ್ರದ ದೃಶ್ಯಗಳು ಶಿಕ್ಷಕನ ಮೇಲೆ ಗಾಢವಾದ ಪರಿಣಾಮ ಬೀರಿರುತ್ತದೆ. ಇದರಿಂದ ಸ್ವತಃ ಪಿಟೀಲು ಕಲಿತು ಹತ್ತಾರು ಶಿಷ್ಯರನ್ನು ಬೆಳೆಸಿ ಅವರೊಂದಿಗೆ ಪರ್ವತದ ತಪ್ಪಲಿನಲ್ಲಿ ಅಂತಹುದೇ ಕಚೇರಿಯೊಂದನ್ನು ಮಾಡಿ ತೋರಿಸುತ್ತಾನೆ. ಈ ಬೆಳವಣಿಗೆಯಿಂದ ಮಕ್ಕಳು ಶಾಲೆಗೆ ಹೋಗುವುದನ್ನು ಪ್ರಾರಂಭಿಸುತ್ತಾರೆ. ಹೀಗೆ ಇಲ್ಲಿ ಕಲಿತವರು ಪಿಟೀಲು ವಾದನದ ಮೇಲೆ ಹಿಡಿತ ಸಾಧಿಸಿ ದೇಶ ವಿದೇಶಗಳಲ್ಲಿ ಖ್ಯಾತ ಸಂಗೀತಗಾರರಾಗಿ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಈ ಕಿರುಚಿತ್ರವು ದೂರದರ್ಶನ ಅಲ್ಲದೆ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.
ಬಳಿಕ ಖ್ಯಾತ ನಿರ್ದೇಶಕ ಎಂ.ಎಸ್.ಪ್ರಕಾಶ್ ಬಾಬು ನಿರ್ದೇಶನದ ವಯೋಲಿನ್ ಸಂಗೀತ ವಿದ್ವಾನ್ ‘ಮೈಸೂರು ಮಂಜುನಾಥ್’ ೧೪ ನಿಮಿಷದ ಕನ್ನಡ ಸಿನಿಮಾ ಪ್ರದರ್ಶನಗೊಂಡಿತು. ಭಾರತ ರತ್ನ ಪಂಡಿತ್ ರವಿಶಂಕರ್ ಅವರಿಂದ ‘ಮೈಸೂರಿನ ರಾಜಕುಮಾರ’ ಎಂದು ಮಂಜುನಾಥ್ ಹೊಗಳಿಸಿಕೊಂಡಿದ್ದರು. ಅಸಂಖ್ಯಾತ ವೇದಿಕೆಗಳಲ್ಲಿ, ಸಮ್ಮೇಳನಗಳಲ್ಲಿ, ಸಂಗೀತ ಉತ್ಸವಗಳಲ್ಲಿ ಹಾಗೂ ಪ್ರಸಿದ್ಧ ವಿಶ್ವ ವಿದ್ಯಾಲಯಗಳಲ್ಲಿ ತಮ್ಮ ವಯೋಲಿನ್ ವಾದನದಿಂದ ಲಕ್ಷಾಂತರ ಸಂಗೀತ ಪ್ರೇಮಿಗಳನ್ನು ಮೋಡಿ ಮಾಡಿದ ಅಸಾಮಾನ್ಯ ಸಂಗೀತ ವಿದ್ವಾಂಸ ಮಂಜುನಾಥ್ ಅವರ ಬಗ್ಗೆ ಚಿತ್ರ ವಿವರ ಒದಗಿಸಿತು.
ಇದಾದ ನಂತರ ಮಧ್ಯಾಹ್ನ ೧೨ಕ್ಕೆ ಕುವೆಂಪು ಅವರ ಬಾಲ್ಯ, ಬದುಕು ಮತ್ತು ಸಾಹಿತ್ಯಿಕ ಸಾಧನೆಗಳನ್ನು ಬಿಂಬಿಸುವ ಕಿರುಚಿತ್ರ ‘ರಾಷ್ಟ್ರಕವಿ ಕುವೆಂಪು; ಬದುಕು ಬರಹ’ ೨೮ ನಿಮಿಷದ ಕಿರುಚಿತ್ರ ಪ್ರದರ್ಶನಗೊಂಡಿತು. ನಿಸರ್ಗದ ಮಡಿಲು ಮಲೆನಾಡಿನ ಕುಪ್ಪಳ್ಳಿಯಲ್ಲಿ ಜನಿಸಿ ಅಲ್ಲಿನ ಪರಿಸರವನ್ನು ತಮ್ಮ ಸಾಹಿತ್ಯದಲ್ಲಿ ಚಿತ್ರಿಸಿದ್ದಾರೆ. ಅಲ್ಲಿಯ ಭೂ ರಚನೆ, ನದಿ, ತೊರೆ, ಹಳ್ಳ-ಕೊಳ್ಳ ಅಥವಾ ಆ ಕಾಲಘಟ್ಟದಲ್ಲಿದ್ದ ಪಾತ್ರಗಳು ನಿರಂತರವಾಗಿ ಅವರ ಸಾಹಿತ್ಯದಲ್ಲಿ ಜೀವಂತಿಕೆ ಪಡೆದು ನಿಲ್ಲುತ್ತವೆ. ಇಲ್ಲಿನ ಪರಿಸರ ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿತು. ಇದನ್ನು ಈ ಕಿರುಚಿತ್ರದಲ್ಲಿ ಉಮಾಶಂಕರ್ ಸ್ವಾಮಿ ಸೊಗಸಾಗಿ ಸೆರೆ ಹಿಡಿದಿದ್ದಾರೆ.
ಬಳಿಕ ಸವ್ಯಸಾಚಿ ಮುಖರ್ಜಿ ನಿರ್ದೇಶನದ ‘ಬಿಸ್ಮಿಲಾ ಆಫ್ ಬನಾರಸ್’ ೬೦ ನಿಮಿಷದ ಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಖಾನ್ ಅವರು ಮೂಲತಃ ಬಿಹಾರದ ರಾಜರ ಆಸ್ಥಾನದ ಸಂಗೀತ ವಿದ್ವಾಂಸರಾಗಿದ್ದು, ಪ್ರೌಢ ವಯಸ್ಸಿಗೆ ಬರುತ್ತಿದ್ದಂತೆ ಅವರು ಚಿಕ್ಕಪ್ಪನವರಾದ ಅಲಿಭಕ್ಷಿ ಅವರೊಂದಿಗೆ ಶಹನಾಯಿ ವಿದ್ವತ್ನ್ನು ಪಡೆಯುತ್ತಾರೆ. ಬಳಿಕ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಖಾಯಂ ಸಂಗೀತಗಾರರಾಗಿ ನೆಲೆ ನಿಲ್ಲುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಅವರನ್ನು ಕೆಂಪುಕೋಟೆಯ ಮೇಲೆ ಕಾರ್ಯಕ್ರಮ ನೀಡಲು ಅವಕಾಶ ಮಾಡಿಕೊಟ್ಟಿರುವುದು ಹೆಮ್ಮೆಯ ವಿಷಯ.
ಮಧ್ಯಾಹ್ನ ೨ ರಿಂದ ಕೃಷಿಯ ಮೂಲಕ ಕೈದಿಗಳ ಮನ ಪರಿವರ್ತಿಸುವ ಸೊಗಸಾದ ಹಿಂದಿಯ ‘ದೋ ಆಂಖೇ ಬಾರಾ ಹಾತ್’ ಚಿತ್ರ ಎಲ್ಲರ ಮನ ಸೆಳೆಯಿತು. ಅತ್ಯಂತ ಭಾವನಾತ್ಮಕ ಸನ್ನಿವೇಶಗಳನ್ನೊಳಗೊಂಡ ಖೈದಿಗಳ ವೈಯಕ್ತಿಕ ಜೀವನದ ಕನ್ನಡಿಯಂತಿದ್ದ ಚಿತ್ರ ಪರಿಶ್ರಮ ಎಂಥಹವರನ್ನೂ ಸುಧಾರಿಸಬಲ್ಲುದು ಎಂಬುದನ್ನು ತೋರಿಸಿಕೊಟ್ಟಿತು. ಕನ್ನಡಿಗರೇ ಆದ ವಿ.ಶಾಂತಾರಾಂ ಅವರ ಭಾರತೀಯತೆಯನ್ನು ಎತ್ತಿ ಹಿಡಿಯುವ ಹಲವಾರು ಸಿನೆಮಾಗಳ ಫೈಕಿ ಇದೂ ಒಂದು.ಬಬ
ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…
ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…
ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…
ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ…