ಮಂಡ್ಯ

ಕೈಬೀಸಿ ಕರೆಯುತ್ತಿದೆ ಕುರಹಟ್ಟಿ ವಾಟರ್‌ಫಾಲ್ಸ್‌

ಕೆ.ಆರ್.ಎಸ್. ಅಣೆಕಟ್ಟೆಯಿಂದ ಹರಿಯುವ ವಿಶ್ವೇಶ್ವರಯ್ಯ ನಾಲೆಯ ಆಕರ್ಷಣೆ

ಹೇಮಂತ್‌ಕುಮಾರ್‌

ಮಂಡ್ಯ : ಸುಡುವ ಬಿಸಿಲಿನಿಂದ ಕಂಗಾಲಾದ ಜನರು ತಂಪನ್ನೆರೆಯುವ ಜಲಪಾತಗಳತ್ತ ಮುಖ ಮಾಡುತ್ತಾರೆ. ಅಂತೆಯೇ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಬಳಿಯ ಕುರಹಟ್ಟಿ ವಾಟರ್‌ಫಾಲ್ಸ್ ದೂರದ ಊರುಗಳಿಂದ ಜನರನ್ನು ಕೈಬೀಸಿ ಕರೆಯುತ್ತಿದೆ.

ಇದು ನೈಸರ್ಗಿಕವಾದ ಜಲಪಾತವಲ್ಲ. ಕೆ. ಆರ್. ಎಸ್. ಅಣೆಕಟ್ಟೆಯಿಂದ ಬರುವ ವಿಶ್ವೇಶ್ವರಯ್ಯ ನಾಲೆ. ಈ ನಾಲೆಯ ನೀರು ಈ ಜಾಗದಲ್ಲಿ ಹೆಚ್ಚಾಗಿ ಹರಿಯುವುದರಿಂದ ನಿರ್ಮಾಣವಾಗಿರುವ ಫಾಲ್ಸ್.

ಅಂತರ್ಜಾಲದಲ್ಲಿ ಸರ್ಚ್ ಮಾಡಿ ನೋಡುವ ಬೆಂಗಳೂರು -ಮೈಸೂರು ನಗರದ ಯುವಕ ಮಿತ್ರರು ಹೆಚ್ಚಾಗಿ ಟೆಂಪೂ, ಕಾರುಗಳಲ್ಲಿ ಆಗಮಿಸುತ್ತಾರೆ. ನೈಸರ್ಗಿಕ ಜಲಪಾತಗಳಲ್ಲಿರುವಂತೆ ಯಾವುದೇ ಅಪಾಯಗಳ ಆತಂಕವಿಲ್ಲ. ಕೆಳಗೆ ಲೋಕಪಾವನಿ ನದಿ ಹರಿಯುತ್ತಿದ್ದರೆ, ಮೇಲ್ಗಾಲುವೆ(ಆಕ್ವಾಡಕ್ಟ್) ಮೂಲಕ ಕಾವೇರಿ ಹರಿಯುವ ಆಕರ್ಷಕ ತಾಣವಿದು.

ಈ ಮೇಲ್ಗಾಲುವೆಗೆ 20 ಸಾವಿರ ಕ್ಯೂಸೆಕ್ಸ್ ನೀರು ಹರಿವಿನ ಸಾಮರ್ಥ್ಯವಿದ್ದು, ಹೆಚ್ಚುವರಿ ನೀರು ಮೇಲ್ಗಾಲುವೆಯ ಒಂದು ಬದಿಯಲ್ಲಿ ಮಾತ್ರ ಜಲಪಾತದಂತೆ ಧುಮ್ಮಿಕ್ಕುವುದನ್ನು ನೋಡಲು ಆಕರ್ಷಕವಾಗಿದೆ. ಪ್ರವಾಸಿಗರು ತಮ್ಮ ವಾಹನಗಳೊಂದಿಗೆ ಫಾಲ್ಸ್‌ನೊಳಗೆ ಹೋಗಿ ಬಂದು ಖುಷಿ ಪಡುತ್ತಾರೆ. ಆ ಮೂಲಕ ಕಾರನ್ನು ವಾಷ್ ಮಾಡಿಕೊಳ್ಳುವುದನ್ನೂ ಕಾಣಬಹುದು.

ಇನ್ನೂ ಕೆಲ ಸಾಹಸಿಗಳು ಕಾಲುವೆ ಮೇಲಕ್ಕೇ ಹೋಗಿ ಕುಳಿತು ಸಾಹಸ ಮಾಡುವುದೂ ಇಲ್ಲಿ ಸಾಮಾನ್ಯ. ಮೇಲಿನಿಂದ ಧುಮ್ಮಿಕ್ಕುವ ಜಲಪಾತದಲ್ಲಿ ನಿಂತು ರಭಸದಿಂದ ಬೀಳುವ ನೀರಿನಲ್ಲಿ ಖುಷಿ ಪಡುವುದೇ ಇಲ್ಲಿನ ವಿಶೇಷ.

ಈ ಸೊಬಗನ್ನು ಸವಿಯಬೇಕಾದರೆ ವಿಶ್ವೇಶ್ವರಯ್ಯ ನಾಲೆಯಲ್ಲಿ ನೀರು ಹರಿಯಬಿಟ್ಟಾಗ ಮಾತ್ರ ಇಂತಹ ಫಾಲ್ಸ್ ಕಾಣಸಿಗುತ್ತದೆ. ನೀರಿಲ್ಲದಿದ್ದಾಗ ಕೆಳಗೆ ಹರಿಯುವ ಲೋಕಪಾವನಿಯ ಝುಳು ಝುಳು ನಿನಾದವನ್ನಷ್ಟೇ ಕೇಳಬಹುದು

 

ಆಂದೋಲನ ಡೆಸ್ಕ್

Recent Posts

ಎಕ್ಸ್ ಬಿಟ್ಟು ಇನ್‌ಸ್ಟಾ ಹಿಡಿದ ರಾಜಕಾರಣ : ಮೋದಿಗೆ ಜೆನ್-ಝೀ ಕಾಟ

ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…

1 hour ago

ಓದುಗರ ಪತ್ರ: ಕಠಿಣ ಕ್ರಮ ಅಗತ್ಯ

ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್‌ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…

10 hours ago

ಓದುಗರ ಪತ್ರ: ಕಸ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಅಗತ್ಯ

ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…

10 hours ago

ಕೇಂದ್ರ ಸರ್ಕಾರದ ಮೇಲೆ ಜೆನ್ ಝೀ ಚಳುವಳಿಯ ತೂಗುಗತ್ತಿ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…

10 hours ago

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

12 hours ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

12 hours ago