ಮಂಡ್ಯ

ಕೈಬೀಸಿ ಕರೆಯುತ್ತಿದೆ ಕುರಹಟ್ಟಿ ವಾಟರ್‌ಫಾಲ್ಸ್‌

ಕೆ.ಆರ್.ಎಸ್. ಅಣೆಕಟ್ಟೆಯಿಂದ ಹರಿಯುವ ವಿಶ್ವೇಶ್ವರಯ್ಯ ನಾಲೆಯ ಆಕರ್ಷಣೆ

ಹೇಮಂತ್‌ಕುಮಾರ್‌

ಮಂಡ್ಯ : ಸುಡುವ ಬಿಸಿಲಿನಿಂದ ಕಂಗಾಲಾದ ಜನರು ತಂಪನ್ನೆರೆಯುವ ಜಲಪಾತಗಳತ್ತ ಮುಖ ಮಾಡುತ್ತಾರೆ. ಅಂತೆಯೇ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಬಳಿಯ ಕುರಹಟ್ಟಿ ವಾಟರ್‌ಫಾಲ್ಸ್ ದೂರದ ಊರುಗಳಿಂದ ಜನರನ್ನು ಕೈಬೀಸಿ ಕರೆಯುತ್ತಿದೆ.

ಇದು ನೈಸರ್ಗಿಕವಾದ ಜಲಪಾತವಲ್ಲ. ಕೆ. ಆರ್. ಎಸ್. ಅಣೆಕಟ್ಟೆಯಿಂದ ಬರುವ ವಿಶ್ವೇಶ್ವರಯ್ಯ ನಾಲೆ. ಈ ನಾಲೆಯ ನೀರು ಈ ಜಾಗದಲ್ಲಿ ಹೆಚ್ಚಾಗಿ ಹರಿಯುವುದರಿಂದ ನಿರ್ಮಾಣವಾಗಿರುವ ಫಾಲ್ಸ್.

ಅಂತರ್ಜಾಲದಲ್ಲಿ ಸರ್ಚ್ ಮಾಡಿ ನೋಡುವ ಬೆಂಗಳೂರು -ಮೈಸೂರು ನಗರದ ಯುವಕ ಮಿತ್ರರು ಹೆಚ್ಚಾಗಿ ಟೆಂಪೂ, ಕಾರುಗಳಲ್ಲಿ ಆಗಮಿಸುತ್ತಾರೆ. ನೈಸರ್ಗಿಕ ಜಲಪಾತಗಳಲ್ಲಿರುವಂತೆ ಯಾವುದೇ ಅಪಾಯಗಳ ಆತಂಕವಿಲ್ಲ. ಕೆಳಗೆ ಲೋಕಪಾವನಿ ನದಿ ಹರಿಯುತ್ತಿದ್ದರೆ, ಮೇಲ್ಗಾಲುವೆ(ಆಕ್ವಾಡಕ್ಟ್) ಮೂಲಕ ಕಾವೇರಿ ಹರಿಯುವ ಆಕರ್ಷಕ ತಾಣವಿದು.

ಈ ಮೇಲ್ಗಾಲುವೆಗೆ 20 ಸಾವಿರ ಕ್ಯೂಸೆಕ್ಸ್ ನೀರು ಹರಿವಿನ ಸಾಮರ್ಥ್ಯವಿದ್ದು, ಹೆಚ್ಚುವರಿ ನೀರು ಮೇಲ್ಗಾಲುವೆಯ ಒಂದು ಬದಿಯಲ್ಲಿ ಮಾತ್ರ ಜಲಪಾತದಂತೆ ಧುಮ್ಮಿಕ್ಕುವುದನ್ನು ನೋಡಲು ಆಕರ್ಷಕವಾಗಿದೆ. ಪ್ರವಾಸಿಗರು ತಮ್ಮ ವಾಹನಗಳೊಂದಿಗೆ ಫಾಲ್ಸ್‌ನೊಳಗೆ ಹೋಗಿ ಬಂದು ಖುಷಿ ಪಡುತ್ತಾರೆ. ಆ ಮೂಲಕ ಕಾರನ್ನು ವಾಷ್ ಮಾಡಿಕೊಳ್ಳುವುದನ್ನೂ ಕಾಣಬಹುದು.

ಇನ್ನೂ ಕೆಲ ಸಾಹಸಿಗಳು ಕಾಲುವೆ ಮೇಲಕ್ಕೇ ಹೋಗಿ ಕುಳಿತು ಸಾಹಸ ಮಾಡುವುದೂ ಇಲ್ಲಿ ಸಾಮಾನ್ಯ. ಮೇಲಿನಿಂದ ಧುಮ್ಮಿಕ್ಕುವ ಜಲಪಾತದಲ್ಲಿ ನಿಂತು ರಭಸದಿಂದ ಬೀಳುವ ನೀರಿನಲ್ಲಿ ಖುಷಿ ಪಡುವುದೇ ಇಲ್ಲಿನ ವಿಶೇಷ.

ಈ ಸೊಬಗನ್ನು ಸವಿಯಬೇಕಾದರೆ ವಿಶ್ವೇಶ್ವರಯ್ಯ ನಾಲೆಯಲ್ಲಿ ನೀರು ಹರಿಯಬಿಟ್ಟಾಗ ಮಾತ್ರ ಇಂತಹ ಫಾಲ್ಸ್ ಕಾಣಸಿಗುತ್ತದೆ. ನೀರಿಲ್ಲದಿದ್ದಾಗ ಕೆಳಗೆ ಹರಿಯುವ ಲೋಕಪಾವನಿಯ ಝುಳು ಝುಳು ನಿನಾದವನ್ನಷ್ಟೇ ಕೇಳಬಹುದು

 

ಆಂದೋಲನ ಡೆಸ್ಕ್

Recent Posts

ಅಮೆರಿಕ ಜತೆ ಮಾತುಕತೆಗೆ ಹಿಂದೇಟು ಹಾಕಿದ ಇರಾನ್‌ ; ಹೊರ್ಮುಜ್ ನಿರ್ಬಂಧ ಮುಂದುವರಿಕೆ

ಟೆಹ್ರಾನ್‌ : ಪಶ್ಚಿಮ ಏಷ್ಯಾ ಸಂಘರ್ಷ ಕುರಿತು ಎರಡನೇ ಸುತ್ತಿನ ಮಾತುಕತೆಗೆ ಅಮೆರಿಕ ಉತ್ಸುಕತೆ ತೋರಿದರೂ ಇರಾನ್ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.…

15 mins ago

ಓದುಗರ ಪತ್ರ | ಬಿಸಿಲ ಬೇಗೆ ಮತ್ತು ನಕಲಿ ಮಾವಿನ ರಸದ ಹಾವಳಿ

ಬೇಸಿಗೆಯ ಸುಡು ಬಿಸಿಲು ಮತ್ತು ಅಸಹನೀಯ ಧಗೆಯಿಂದಾಗಿ ಜನರು ತಂಪು ಪಾನೀಯಗಳ ಮೊರೆ ಹೋಗುವುದು ಅನಿವಾರ್ಯ ವಾಗಿದೆ. ಇದನ್ನೇ ಬಂಡವಾಳ…

1 hour ago

ಓದುಗರ ಪತ್ರ | ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರು ಜಿಲ್ಲೆಯ ತಿ.ನರಸೀಪುರದಿಂದ ಮಂಡ್ಯ ನಗರಕ್ಕೆ ಬೆಳಗಿನ ಸಮಯದಲ್ಲಿ ಬಸ್ ಸೌಲಭ್ಯಗಳಿಲ್ಲದ್ದರಿಂದ ಈ ಮಾರ್ಗದಲ್ಲಿ ತೆರಳುವ ಅನೇಕ ಶಾಲಾ ಕಾಲೇಜು…

2 hours ago

ಓದುಗರ ಪತ್ರ | ಅವೈಜ್ಞಾನಿಕ ಆಸ್ತಿ ತೆರಿಗೆ ಪದ್ಧತಿ ಕೊನೆಗೊಳ್ಳಲಿ

ಮೈಸೂರು ಮಹಾನಗರ ಪಾಲಿಕೆಯು ಸಾರ್ವಜನಿಕರು ಆಸ್ತಿ ತೆರಿಗೆಯನ್ನು ಕಟ್ಟಲು ಏಪ್ರಿಲ್ ತಿಂಗಳಿನಲ್ಲಿ ಮಾತ್ರ ಶೇ.5ರಷ್ಟು ರಿಯಾಯಿತಿಯನ್ನು ನೀಡಿದೆ. ನಂತರದ ಮೇ…

2 hours ago

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ; ಕವಲು ದಾರಿಯಲ್ಲಿ ಕರ್ನಾಟಕದ ಮುಸ್ಲಿಂ ರಾಜಕಾರಣ

ತಮ್ಮ ಮುಂದಿನ ದಾರಿಯ ಬಗ್ಗೆ ಗಂಭೀರ ಆಲೋಚನೆಯಲ್ಲಿರುವ ಮುಸ್ಲಿಂ ಮತದಾರರು ಇತ್ತೀಚೆಗೆ ನಡೆದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ…

3 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಏಪ್ರಿಲ್‌ 21 ಮಂಗಳವಾರ  

4 hours ago