ಕೆ.ಆರ್.ಎಸ್. ಅಣೆಕಟ್ಟೆಯಿಂದ ಹರಿಯುವ ವಿಶ್ವೇಶ್ವರಯ್ಯ ನಾಲೆಯ ಆಕರ್ಷಣೆ
ಹೇಮಂತ್ಕುಮಾರ್
ಮಂಡ್ಯ : ಸುಡುವ ಬಿಸಿಲಿನಿಂದ ಕಂಗಾಲಾದ ಜನರು ತಂಪನ್ನೆರೆಯುವ ಜಲಪಾತಗಳತ್ತ ಮುಖ ಮಾಡುತ್ತಾರೆ. ಅಂತೆಯೇ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಬಳಿಯ ಕುರಹಟ್ಟಿ ವಾಟರ್ಫಾಲ್ಸ್ ದೂರದ ಊರುಗಳಿಂದ ಜನರನ್ನು ಕೈಬೀಸಿ ಕರೆಯುತ್ತಿದೆ.
ಇದು ನೈಸರ್ಗಿಕವಾದ ಜಲಪಾತವಲ್ಲ. ಕೆ. ಆರ್. ಎಸ್. ಅಣೆಕಟ್ಟೆಯಿಂದ ಬರುವ ವಿಶ್ವೇಶ್ವರಯ್ಯ ನಾಲೆ. ಈ ನಾಲೆಯ ನೀರು ಈ ಜಾಗದಲ್ಲಿ ಹೆಚ್ಚಾಗಿ ಹರಿಯುವುದರಿಂದ ನಿರ್ಮಾಣವಾಗಿರುವ ಫಾಲ್ಸ್.
ಅಂತರ್ಜಾಲದಲ್ಲಿ ಸರ್ಚ್ ಮಾಡಿ ನೋಡುವ ಬೆಂಗಳೂರು -ಮೈಸೂರು ನಗರದ ಯುವಕ ಮಿತ್ರರು ಹೆಚ್ಚಾಗಿ ಟೆಂಪೂ, ಕಾರುಗಳಲ್ಲಿ ಆಗಮಿಸುತ್ತಾರೆ. ನೈಸರ್ಗಿಕ ಜಲಪಾತಗಳಲ್ಲಿರುವಂತೆ ಯಾವುದೇ ಅಪಾಯಗಳ ಆತಂಕವಿಲ್ಲ. ಕೆಳಗೆ ಲೋಕಪಾವನಿ ನದಿ ಹರಿಯುತ್ತಿದ್ದರೆ, ಮೇಲ್ಗಾಲುವೆ(ಆಕ್ವಾಡಕ್ಟ್) ಮೂಲಕ ಕಾವೇರಿ ಹರಿಯುವ ಆಕರ್ಷಕ ತಾಣವಿದು.
ಈ ಮೇಲ್ಗಾಲುವೆಗೆ 20 ಸಾವಿರ ಕ್ಯೂಸೆಕ್ಸ್ ನೀರು ಹರಿವಿನ ಸಾಮರ್ಥ್ಯವಿದ್ದು, ಹೆಚ್ಚುವರಿ ನೀರು ಮೇಲ್ಗಾಲುವೆಯ ಒಂದು ಬದಿಯಲ್ಲಿ ಮಾತ್ರ ಜಲಪಾತದಂತೆ ಧುಮ್ಮಿಕ್ಕುವುದನ್ನು ನೋಡಲು ಆಕರ್ಷಕವಾಗಿದೆ. ಪ್ರವಾಸಿಗರು ತಮ್ಮ ವಾಹನಗಳೊಂದಿಗೆ ಫಾಲ್ಸ್ನೊಳಗೆ ಹೋಗಿ ಬಂದು ಖುಷಿ ಪಡುತ್ತಾರೆ. ಆ ಮೂಲಕ ಕಾರನ್ನು ವಾಷ್ ಮಾಡಿಕೊಳ್ಳುವುದನ್ನೂ ಕಾಣಬಹುದು.
ಇನ್ನೂ ಕೆಲ ಸಾಹಸಿಗಳು ಕಾಲುವೆ ಮೇಲಕ್ಕೇ ಹೋಗಿ ಕುಳಿತು ಸಾಹಸ ಮಾಡುವುದೂ ಇಲ್ಲಿ ಸಾಮಾನ್ಯ. ಮೇಲಿನಿಂದ ಧುಮ್ಮಿಕ್ಕುವ ಜಲಪಾತದಲ್ಲಿ ನಿಂತು ರಭಸದಿಂದ ಬೀಳುವ ನೀರಿನಲ್ಲಿ ಖುಷಿ ಪಡುವುದೇ ಇಲ್ಲಿನ ವಿಶೇಷ.
ಈ ಸೊಬಗನ್ನು ಸವಿಯಬೇಕಾದರೆ ವಿಶ್ವೇಶ್ವರಯ್ಯ ನಾಲೆಯಲ್ಲಿ ನೀರು ಹರಿಯಬಿಟ್ಟಾಗ ಮಾತ್ರ ಇಂತಹ ಫಾಲ್ಸ್ ಕಾಣಸಿಗುತ್ತದೆ. ನೀರಿಲ್ಲದಿದ್ದಾಗ ಕೆಳಗೆ ಹರಿಯುವ ಲೋಕಪಾವನಿಯ ಝುಳು ಝುಳು ನಿನಾದವನ್ನಷ್ಟೇ ಕೇಳಬಹುದು
ಟೆಹ್ರಾನ್ : ಪಶ್ಚಿಮ ಏಷ್ಯಾ ಸಂಘರ್ಷ ಕುರಿತು ಎರಡನೇ ಸುತ್ತಿನ ಮಾತುಕತೆಗೆ ಅಮೆರಿಕ ಉತ್ಸುಕತೆ ತೋರಿದರೂ ಇರಾನ್ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.…
ಬೇಸಿಗೆಯ ಸುಡು ಬಿಸಿಲು ಮತ್ತು ಅಸಹನೀಯ ಧಗೆಯಿಂದಾಗಿ ಜನರು ತಂಪು ಪಾನೀಯಗಳ ಮೊರೆ ಹೋಗುವುದು ಅನಿವಾರ್ಯ ವಾಗಿದೆ. ಇದನ್ನೇ ಬಂಡವಾಳ…
ಮೈಸೂರು ಜಿಲ್ಲೆಯ ತಿ.ನರಸೀಪುರದಿಂದ ಮಂಡ್ಯ ನಗರಕ್ಕೆ ಬೆಳಗಿನ ಸಮಯದಲ್ಲಿ ಬಸ್ ಸೌಲಭ್ಯಗಳಿಲ್ಲದ್ದರಿಂದ ಈ ಮಾರ್ಗದಲ್ಲಿ ತೆರಳುವ ಅನೇಕ ಶಾಲಾ ಕಾಲೇಜು…
ಮೈಸೂರು ಮಹಾನಗರ ಪಾಲಿಕೆಯು ಸಾರ್ವಜನಿಕರು ಆಸ್ತಿ ತೆರಿಗೆಯನ್ನು ಕಟ್ಟಲು ಏಪ್ರಿಲ್ ತಿಂಗಳಿನಲ್ಲಿ ಮಾತ್ರ ಶೇ.5ರಷ್ಟು ರಿಯಾಯಿತಿಯನ್ನು ನೀಡಿದೆ. ನಂತರದ ಮೇ…
ತಮ್ಮ ಮುಂದಿನ ದಾರಿಯ ಬಗ್ಗೆ ಗಂಭೀರ ಆಲೋಚನೆಯಲ್ಲಿರುವ ಮುಸ್ಲಿಂ ಮತದಾರರು ಇತ್ತೀಚೆಗೆ ನಡೆದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ…