ಜಿಲ್ಲೆಗಳು

ಪ್ರೊ.ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಸ್ವೀಕರಿಸಿ ಕೋಟಗಾನಹಳ್ಳಿ ರಾಮಯ್ಯ ನುಡಿ

ಮಂಡ್ಯ: ನಮ್ಮ ನೆಲದ ಬಹಳ ದೊಡ್ಡ ಬಿಕ್ಕಟ್ಟು ಶಿಕ್ಷಣ. ೧೫೦ ವರ್ಷಗಳಿಂದ ಅತ್ಯಂತ ದೋಷಪೂರ್ಣ ಸ್ಥಿತಿಯಲ್ಲಿ ಶಿಕ್ಷಣ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನೇ ಮುಂದಿನ ತಲೆಮಾರಿಗೂ ಮುಂದುವರಿಸಿದರೆ ಭವಿಷ್ಯ ಅಪಾಯಕಾರಿಯಾಗುತ್ತದೆ ಎಂದು ಕವಿ, ನಾಟಕಕಾರ ಕೋಟಗಾನಹಳ್ಳಿ ರಾಮಯ್ಯ ಎಚ್ಚರಿಸಿದರು.

ಪ್ರೊ.ಎಚ್.ಎಲ್.ಕೇಶವಮೂರ್ತಿ ಪ್ರತಿಷ್ಠಾನದಿಂದ ಬುಧವಾರ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ೫ನೇ ವರ್ಷದ ಪ್ರೊ.ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ನಮ್ಮ ಮಕ್ಕಳು ಏನು ಕಲಿಯುತ್ತಿದ್ದಾರೆ ಗೊತ್ತಿಲ್ಲ. ಈ ಕಲಿಕೆಗೆ ಭವಿಷ್ಯ ಇದೆಯೇ? ಅದು ಗೊತ್ತಿಲ್ಲ. ಎಷ್ಟೋ ಪೋಷಕರಿಗೆ ತಮ್ಮ ಮಕ್ಕಳ ಎಷ್ಟನೇ ತರಗತಿಯಲ್ಲಿ ಓದುತ್ತಿದ್ದಾರೆ. ಯಾವ ಶಾಲೆ? ಅದೂ ತಿಳಿದಿಲ್ಲ. ಇದು ನಮ್ಮ ಸ್ಥಿತಿ ಎಂದರು.

ಮಕ್ಕಳು ಏನು ಓದಬೇಕೆಂದು ಯಾರು ನಿರ್ಧರಿಸುತ್ತಿದ್ದಾರೆ? ಸಮಾಜ, ಪೋಷಕರು, ಮಕ್ಕಳು ಅಲ್ಲ. ಶಿಕ್ಷಣ ತಜ್ಞರು ನಿರ್ಧರಿಸುತ್ತಿದ್ದಾರೆ. ಕಾನ್ವೆಂಟ್‌ನಲ್ಲಿ ಕಲಿಯುವ ಮಗು ರಾಗಿ ಮರದಲ್ಲಿ ಬೆಳೆಯುತ್ತದೆ ಎನ್ನುತ್ತದೆ. ಪ್ರಾಥಮಿಕ ಶಾಲೆಯ ಮಗುವೊಂದು ರಾಕೆಟ್ ತಂತ್ರಜ್ಞಾನದ ಬಗ್ಗೆ ತಿಳಿಯಬಯಸಿತು. ಅದಕ್ಕೆ ಪೂರಕ ವ್ಯವಸ್ಥೆ ನಮ್ಮಲ್ಲಿ ಇಲ್ಲ ಎಂದರು.

ಮಕ್ಕಳ ಶಿಕ್ಷಣಕ್ಕೆ ಏನಾದರೂ ಪರಿಹಾರ ಹುಡುಕಬೇಕೆಂದು ಜೀವನದಿಯ ಜಾಡು ಹುಡುಕುತ್ತ ಸಾಗಿದೆ. ಇದಕ್ಕೆ ಕಿರುಝರಿಯ ಪಯಣಗಳನ್ನು ಕೂಡಿಸಿಕೊಂಡೆ. ನಮ್ಮ ಪೂರ್ವಿಕರ ವಿವೇಕ ಮತ್ತು ಜನಪದ ಕತೆಗಳನ್ನು ಆಧರಿಸಿ ನೆಲಪಠ್ಯ ರೂಪಿಸುತ್ತಿರುವೆ. ಜೀವಂತ ಪ್ರಬಂಧವಾಗಿ ೬ ತಿಂಗಳಲ್ಲಿ ಸಿಗಲಿದೆ ಎಂದು ತಿಳಿಸಿದರು.

ಮಕ್ಕಳ ಸಾಹಿತ್ಯಕ್ಕೆ ಕೊಡುಗೆ ನೀಡಿದ ಕುವೆಂಪು, ರಾಜರತ್ನಂ, ಕೈಲಾಸಂ ಪರಂಪರೆಯನ್ನು ಯಾರು ಕೂಡ ಗಮನಿಸಲು ಹೋಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಕ್ಕಳಿಗೆ ಏನು ಬರೆದಿದ್ದಾರೆ ಎಂದು ಕೇಳುತ್ತಾರೆ. ನಮ್ಮಲ್ಲಿ ಮಕ್ಕಳ ಸಾಹಿತ್ಯ ಕೊನೆಯದು. ಸಶಸ್ತ್ರ ಮಾರಾಟ ಮಾಡುವ ಸ್ವಿಡನ್ ದೇಶದಲ್ಲಿ ಪ್ರಧಾನಿ, ಅಧ್ಯಕ್ಷನಾಗುವುದು ಸುಲಭ. ಶಿಕ್ಷಕನಾಗುವುದು ಕಷ್ಟ. ಕಠಿಣವಾದ ಪರೀಕ್ಷೆಗಳ ಮೂಲಕ ಆಯ್ಕೆ ನಡೆಯುತ್ತದೆ. ನಮ್ಮಲ್ಲಿ ಯಾವ ಪರಿಸ್ಥಿತಿ ಇದೆ? ಮಕ್ಕಳಿಗೆ ಎಂತಹ ಭವಿಷ್ಯ ರೂಪಿಸುತ್ತಿದ್ದೇವೆ? ಎಂದರು.

ಇವತ್ತು ೧೯೯೧ರಲ್ಲಿ ಭಾರತ ಜಾಗತೀಕರಣಕ್ಕೆ ತೆರೆದುಕೊಂಡಿತು. ಇದರ ಪರಿಣಾಮ ಮುಂದಿನ ೧೫ ವರ್ಷಕ್ಕೆ ತೀವ್ರವಾಗುತ್ತದೆ. ಎನ್‌ಇಪಿ ಕೌಶಲದ ಮೂಲಕ ೧೫ ಸಾವಿರಕ್ಕೆ ನಮ್ಮ ಮಕ್ಕಳನ್ನು ಗುಲಾಮರನ್ನಾಗಿಸುತ್ತದೆ. ಇದು ಹಿಟ್ಲರ್‌ಗಿಂತ ಕ್ರೂರವಾದದ್ದು ಮತ್ತು ನರಹತ್ಯೆಗೆ ಕಾರಣವಾಗುತ್ತದೆ. ಎಲ್ಲ ರೀತಿಯ ಚೌಕಟ್ಟಿಗೆ ವಿಷದ ಬಳ್ಳಿ ಬಿತ್ತಲಾಗಿದೆ. ಅದನ್ನು ಹಬ್ಬಿಸುವುದು ಉಳಿದಿರುವ ಕೆಲಸ. ನಮ್ಮ ಮಕ್ಕಳ ಭವಿಷ್ಯಭೀಕರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿರೋಧ ಏನು ಮಾಡಬೇಕು? ಆ ದಿಕ್ಕಿನಲ್ಲಿ ಸಂತೋಷವಾಗುವಷ್ಟು ಕೆಲಸ ಮಾಡಿದ್ದೇನೆ. ನಮ್ಮ ಮನೆಗಳಿಂದ ಪ್ರತಿರೋಧ ರೂಪಿಸಬೇಕು. ಇದಕ್ಕೆ ಪೂರ್ವಿಕರ ವಿವೇಕ ಬಳಸಿಕೊಳ್ಳಬೇಕು. ಮಕ್ಕಳ ಭವಿಷ್ಯ ರೂಪಿಸುವ ದಿಸೆಯಲ್ಲಿ ೨೦ ನಾಟಕಗಳನ್ನು ಬರೆದಿದ್ದೇನೆ. ಅದರಲ್ಲಿಯೂ ಬಹಳ ಆನಂದ ಇದೆ ಎಂದು ನುಡಿದರು.

ಪ್ರೊ.ಎಚ್.ಎಲ್.ಕೇಶವಮೂರ್ತಿ ಪ್ರತಿಷ್ಠಾನದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಎಚ್.ಎನ್.ಶಿವಣ್ಣಗೌಡ ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಿದರು. ಹಿರಿಯ ಲೇಖಕ ಜಗದೀಶ್ ಕೊಪ್ಪ ಸ್ವಾಗತಿಸಿದರು. ಕವಿ ರಾಜೇಂದ್ರ ಪ್ರಸಾದ್ ನಿರೂಪಿಸಿದರು.


ಪ್ರೊ.ಎಚ್.ಎಲ್.ಕೇಶವಮೂರ್ತಿ ಅಕ್ಷರಗಳಲ್ಲಿ ನುಡಿಗಳಲ್ಲಿ ಸದಾ ಜೀವಂತವಾಗಿದ್ದಾರೆ. ಬೇಸರಗಹಳ್ಳಿ ರಾಮಣ್ಣ ಸೇರಿದಂತೆ ಅನೇಕರು ವ್ಯಕ್ತಿಯ ನೆನಪಾಗಿ ಉಳಿಯೋದಿಲ್ಲ. ಬಳಗದ ನೆನಪಾಗಿ ಉಳಿಯುತ್ತಾರೆ. ಈ ಪ್ರಶಸ್ತಿ ಹೃದಯ ಭಾರ ಅನಿಸಿತು. ನಾನೇನು ದೊಡ್ಡ ಕೆಲಸ ಮಾಡಿಲ್ಲ. ಹೆಚ್ಚೇ ಅಭಿಮಾನ ಪ್ರೀತಿ ತೋರಿದ್ದಾರೆ.

-ಕೋಟಗಾನಹಳ್ಳಿ ರಾಮಯ್ಯ


ಕೋಟಗಾನಹಳ್ಳಿ ರಾಮಯ್ಯ ಬಂಡೆಗಳ ನಡುವಿನ ಚಿಗುರು. ಸಿನಿಮಾ, ಸಂಸ್ಕೃತಿ, ಜನರಿಂದ ದೂರವಾಗಿ ಯೋಗಿಯಂತೆ ಆದಿಮದಲ್ಲಿ ಇದ್ದಾಗಲೂ ಜನರ ಬಗ್ಗೆಯೇ ಆಲೋಚಿಸುತ್ತಾರೆ. ಹಲವು ಸಂಕಷ್ಟಗಳನ್ನು ಎದುರಿಸುತ್ತ ಇನ್ನೊಂದು ಇನ್ನೊಂದು ಹೆಜ್ಜೆಗಳನ್ನು ಇಟ್ಟಿದ್ದಾರೆ. ಕನ್ನಡ ಜನ ಸಂಸ್ಕೃತಿ, ಚಳವಳಿಗಳು ಕೋಟಗಾನಹಳ್ಳಿ ರಾಮಯ್ಯ ಹೆಸರು ಉಲ್ಲೇಖಿಸದೇ ಮುಂದಕ್ಕೆ ಹೋಗಲಾಗದು.

-ಸಿ.ಎಂ.ನರಸಿಂಹಮೂರ್ತಿ, ಹಿರಿಯ ಪತ್ರಕರ್ತ

andolanait

Recent Posts

ಅಷ್ಟಾಂಗ ಯೋಗದ ರಾಜಧಾನಿ ಮೈಸೂರು

ಉದ್ಯಮವಾಗಿಯೂ ಬೆಳೆಯುವತ್ತ ಯೋಗ ಮಕ್ಕಳು ವಯೋವೃದ್ಧರನ್ನೂ ಸೆಳೆಯುವ ಯೋಗ ಯೋಗ ದೈಹಿಕ ಬಲ ಮತ್ತು ನಮ್ಯತೆ ಹೆಚ್ಚಿಸುವಲ್ಲಿ ಸಹಕಾರಿ ನಮಗೆ…

1 hour ago

ಆಂದೋಲನ ಸಾರ್ಥಕ ಪಯಣ : ಪರಿಸರ ಸಂರಕ್ಷಣೆ ಎಲ್ಲರ ಹೊಣೆ

ಎಚ್.ಎಸ್.ದಿನೇಶ್‌ ಕುಮಾರ್‌ ಜಾಗತಿಕ ತಾಪಮಾನ ವಿಪರೀತ ಹೆಚ್ಚಳವಾಗುತ್ತಿದೆ. ಈ ಸಂದರ್ಭದಲ್ಲಿ ಪರಿಸರ ಸಮತೋಲನ ಕಾಪಾಡಿಕೊಳ್ಳದಿದ್ದರೆ ಇಡೀ ಮಾನವ ಕುಲವೇ ಸಂಕಷ್ಟಕ್ಕೀಡಾಗಬೇಕಾಗುತ್ತದೆ.…

2 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ : ಬಿಎಸ್‌ವೈಗೆ ಲಿಂಗಾಯತ ಶಕ್ತಿಯದ್ದೇ ಚಿಂತೆ

ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್‌ ಕಡೆಗೆ ವಾಲುವ ಆತಂಕ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಯಡಿಯೂರಪ್ಪ ಚಿಂತೆಯಲ್ಲಿದ್ದಾರೆ. ಅವರ ಚಿಂತೆಗೆ ಕಾರಣ…

2 hours ago

ಒಡನಾಡಿ ಸ್ಟ್ಯಾನ್ಲಿ ಅವರ ವಾರದ ಅಂಕಣ ; ಕೋಟಿಗೊಬ್ಬರೇ ಕೋಟಿ….!

ʻಬದುಕಿ ನಿರ್ಗಮಿಸುವುದಾದರೆ ಕೋಟಿಯವರಂತೆ ಬಾಳಿ ಹೊರಡಬೇಕುʼ ಕನ್ನಡದ ಪಾಪು, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರು ಸಂಪಾದಕರಾಗಿದ್ದ ಧಾರವಾಡದ ‘ವಿಶ್ವವಾಣಿ’ ಪತ್ರಿಕೆಯ…

6 hours ago

ಆಂದೋಲನ ಸಂಪಾದಕೀಯ | ಸಾರ್ಥಕ ಪಯಣ 54 ; ಬೆನ್ನುತಟ್ಟಿ ನಡೆಸಿದವರು ನೀವು. . .

ನಿಮ್ಮೆಲ್ಲರ ‘ಆಂದೋಲನ’ ದಿನಪತ್ರಿಕೆ ೫೪ನೇ ವಸಂತಕ್ಕೆ ಪಾದಾರ್ಪಣೆ ಮಾಡಿದೆ. ಹುಟ್ಟಿನಿಂದ ನಡೆದುಬಂದ ಮಾರ್ಗದಲ್ಲೇ, ರೂಢಿಸಿಕೊಂಡ ಸಿದ್ಧಾಂತಗಳ ನೆರಳಲ್ಲೇ ಸಹಸ್ರಾರು ಸವಾಲುಗಳ…

6 hours ago

ಎಸ್‌ಐಆರ್‌ | ಬಿಜೆಪಿಯಿಂದ ಅನಗತ್ಯ ಆರೋಪ ; ಎಂ.ಲಕ್ಷ್ಮಣ್‌ ಕಿಡಿ

ಮೈಸೂರು : ಎಸ್‌ಐಆರ್ ಪ್ರಕ್ರಿಯೆ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಕದಿಯುತ್ತಿರುವ ಬಿಜೆಪಿ, ಕೆಲವು ದಿನಗಳಿಂದ ಅನಗತ್ಯ…

22 hours ago