Andolana originals

ಅಷ್ಟಾಂಗ ಯೋಗದ ರಾಜಧಾನಿ ಮೈಸೂರು

ಉದ್ಯಮವಾಗಿಯೂ ಬೆಳೆಯುವತ್ತ ಯೋಗ
ಮಕ್ಕಳು ವಯೋವೃದ್ಧರನ್ನೂ ಸೆಳೆಯುವ ಯೋಗ
ಯೋಗ ದೈಹಿಕ ಬಲ ಮತ್ತು ನಮ್ಯತೆ ಹೆಚ್ಚಿಸುವಲ್ಲಿ ಸಹಕಾರಿ

ನಮಗೆ ಮೈಸೂರು ಪಾಕ್ ಗೊತ್ತು. . . ಮೈಸೂರು ಸಿಲ್ಕ್ ಗೊತ್ತು. . . ಮೈಸೂರು ಮಲ್ಲಿಗೆಯೂ ಗೊತ್ತು. . . ಆದರೆ, ಮೈಸೂರು ಯೋಗ ಗೊತ್ತಾ? ಹೆಚ್ಚಿನವರಿಗೆ ಇದು ಗೊತ್ತಿಲ್ಲ. ಇದು ಮೈಸೂರಿನ ಯೋಗ ವಿದ್ವಾಂಸರೇ ರೂಢಿಸಿಕೊಂಡ, ಜಗತ್ತಿಗೆ ಅದರ ವಿಶೇಷತೆಯನ್ನು ಮನದಟ್ಟು ಮಾಡಿದ ವಿಶೇಷವಾದ ವಿಧಾನ. ಅದೇ ಅಷ್ಟಾಂಗ ಯೋಗ. ಈ ಯೋಗ ವಿಧಾನವನ್ನು ಶ್ರೀಕೃಷ್ಣ ಪಟ್ಟಾಭಿ ಜೋಯಿಸರು ಮೊದಲ ಬಾರಿಗೆ ರೂಢಿಗೆ ತಂದರು. ಅವರು, ೨೦ನೇ ಶತಮಾನದ ಮಹಾನ್ ಯೋಗ ಪಟುಗಳಲ್ಲೊಬ್ಬರಾದ ಟಿ. ಕೃಷ್ಣಮಾಚಾರ್ಯರ ಶಿಷ್ಯರು. ಶ್ರೀಕೃಷ್ಣ ಪಟ್ಟಾಭಿ ಯವರು ರೂಪಿಸಿದ ಅಷ್ಟಾಂಗ ಯೋಗ ಇಂದು ಜಗತ್ತಿನಾದ್ಯಂತ ರೂಢಿಯಲ್ಲಿದೆ. ಹಾಗಾಗಿಯೇ, ಮೈಸೂರನ್ನು ಅಷ್ಟಾಂಗ ಯೋಗದ ರಾಜಧಾನಿ ಎಂದು ಕರೆಯಲಾಗುತ್ತದೆ.

ಮೈಸೂರನ್ನು ದೇಶದ ಯೋಗ ರಾಜಧಾನಿ ಎಂದು ಹೆಸರಿಸಲು ಇರುವ ಪ್ರಮುಖ ಕಾರಣವೇನೆಂದರೆ, ಮೈಸೂರಿಗೆ ಇರುವ ಪ್ರಾಚೀನತೆ ಹಾಗೂ ಸಾಂಸ ತಿಕ ಮೌಲ್ಯ. ಸುಮಾರು ಒಂದು ನೂರು ವರ್ಷಗಳ ಇತಿಹಾಸವನ್ನು ಈ ನಗರಿ ಹೊಂದಿದೆ. ಮೈಸೂರಿನ ಯದುವಂಶದ ಅರಸರು ಯೋಗ ಶಿಕ್ಷಣಕ್ಕೆ ರಾಜಾಶ್ರಯ ನೀಡಿದ್ದಕ್ಕೆ ಅನೇಕ ದಾಖಲೆಗಳಿವೆ. ಮುಮ್ಮಡಿ ಕೃಷ ರಾಜ ಒಡೆಯರ್ ರವರ ‘ಶೃತತ ನಿಽ’ ಎಂಬ ಗ್ರಂಥದಲ್ಲಿ ೧೨೨ ಯೋಗಾಸನಗಳ ಚಿತ್ರಣವಿದೆ ಎಂದು ವಿದ್ವಾಂಸರು ಹೇಳುತ್ತಾರೆ. ೧೯೩೦ರಲ್ಲಿ ಮೈಸೂರು ಅರಮನೆಯಲ್ಲಿ ಯೋಗ ಶಾಲೆಯನ್ನು ಸ್ಥಾಪಿಸಿ ರಾಜಕುಟುಂಬ ಮತ್ತು ಸಾರ್ವಜನಿಕರಿಗೆ ಯೋಗ ಕಲಿಸಲಾಗುತ್ತಿತ್ತು. ಟಿ. ಕೃಷ್ಣಮಾಚಾರ್ಯರು, ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ (ಬಿಕೆಎಸ್) ಅಯ್ಯಂಗಾರ್, ಕೆ. ಪಟ್ಟಾಭಿ ಜೋಯಿಸರು ಯೋಗ ಸಾಧನೆ ಮೂಲಕ ಮೈಸೂರಿನ ಕೀರ್ತಿ ಪತಾಕೆಯನ್ನು ಇಡೀ ವಿಶ್ವಕ್ಕೇ ಪಸರಿಸಿದ್ದಾರೆ.

ಮೈಸೂರಿನ ಯೋಗದ ಇತಿಹಾಸ: ಮೈಸೂರು ಅರಮನೆಯ ದಾಖಲೆಗಳ ಪ್ರಕಾರ, ಸರಿಸುಮಾರು ೨೨೫ ವರ್ಷಗಳಿಂದ, ಮೈಸೂರು ರಾಜ ಮನೆತನವು ಯೋಗವನ್ನು ಪ್ರೋತ್ಸಾಹಿಸುತ್ತಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ರಚಿತ ವಿದ್ವತ್ಪೂರ್ಣ ಪುಸ್ತಕ ಶೃತತನಿಽಯಲ್ಲಿ ಯೋಗಾಸನದ ೧೨೨ ಆಸನಗಳ ವಿವರಣೆಯನ್ನು ದಾಖಲಿಸಲಾಗಿದೆ. ಈ ಪುಸ್ತದ ಪ್ರಕಾರ ಮೈಸೂರು ಸಾಮ್ರಾಜ್ಯದಲ್ಲಿ ಯೋಗಕ್ಕೆ ೨೨೫ ವರ್ಷಗಳಷ್ಟು ಹಿಂದಿನ ಪ್ರಾಚೀನ ಇತಿಹಾಸವಿರುವುದು ಸ್ಪಷ್ಟವಾಗುತ್ತದೆ. ಮೈಸೂರು ಅರಮನೆಯಲ್ಲಿ ೧೯೩೦ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜಮನೆತನದ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಯೋಗವನ್ನು ಕಲಿಸಬೇಕು ಎಂಬ ಮಹತ್ವದ ನಿರ್ಧಾರವನ್ನು ಕೈಗೊಂಡು ಯೋಗಶಾಲೆಯನ್ನು ಪ್ರಾರಂಭಿಸಿದರು. ಆ ಮೂಲಕ, ಯೋಗ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದರು.

ಮೈಸೂರು ಯೋಗ ಶಿಕ್ಷಕರ ಅತಿ ದೊಡ್ಡ ನಗರ ಎಂದರೆ ತಪ್ಪಾಗಲಾರದು. ಏಕೆಂದರೆ ಪ್ರತಿ ವರ್ಷ ಸಾವಿರಾರು ಮಂದಿ ಇಲ್ಲಿ ಯೋಗ ಕಲಿತು, ಯೋಗ ಶಿಕ್ಷಣವನ್ನು ಪ್ರಚುರಪಡಿಸುತ್ತಿದ್ದಾರೆ. ಅರಮನೆಯಲ್ಲಿ ಯೋಗಶಾಲೆಯನ್ನು ಪ್ರಾರಂಭಿಸಿ ಯೋಗಾಭ್ಯಾಸವನ್ನು ಕಲಿಸಲು ಮುಂದಾದ ಟಿ. ಕೃಷ್ಣಮಾಚಾರ್ಯ ರನ್ನು ‘ಆಧುನಿಕ ಯೋಗ ಪಿತಾಮಹ’ ಎಂದು ಪರಿಗಣಿಸಲಾಗಿದೆ. ಯೋಗವನ್ನು ಉತ್ತೇಜಿಸಲು ನಾಲ್ವಡಿ ಕೃಷ್ಣರಾಜ ಒಡೆಯರ್‌ರು ಯೋಗದ ರಾಯಭಾರಿಯಾಗಿ ಕೃಷ ಮಾಚಾರ್ಯರನ್ನು ದೇಶದ ವಿವಿಧ ಭಾಗಗಳಿಗೆ ಕಳುಹಿಸಿದರು ಎನ್ನುತ ದೆ ಇತಿಹಾಸ.

ಕೃಷ್ಣಮಾಚಾರ್ಯರು ಮೈಸೂರಿನಲ್ಲಿ ಮೊತ್ತಮೊದಲ ಹಠ ಯೋಗ ಶಾಲೆಯನ್ನು ಪ್ರಾರಂಭಿಸಿದರು. ಹಠ ಯೋಗವನ್ನು ಅಭಿವೃದ್ಧಿಪಡಿಸಿದರು. ಅವರ ಯೋಗ ಶಾಲೆಯ ಶಿಷ್ಯರಾಗಿದ್ದ ಅವರ ಮಗ ದೇಶಿಕಾಚಾರ್ ಅವರು ಯೋಗದಲ್ಲಿ ವಿನಿಯೋಗ ವಿಧಾನವನ್ನು ಅಭಿವೃದ್ಧಿಪಡಿಸಿದರು. ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ (ಬಿಕೆಎಸ್) ಅಯ್ಯಂಗಾರ್‌ರು, ಕೃಷ್ಣಮಾಚಾರ್ಯರ ಶಿಷ್ಯವೃಂದದಲ್ಲಿನ ಇನ್ನೊಬ್ಬ ಪ್ರಸಿದ್ಧ ವಿದ್ಯಾರ್ಥಿ. ಅವರು ಇಂದು ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಅಯ್ಯಂಗಾರ್ ಯೋಗವನ್ನು ಅಭಿವೃದ್ಧಿಪಡಿಸಿ ಜಗತ್ತಿಗೆ ಪರಿಚಯಿಸಿದರು. ಅಷ್ಟಾಂಗ ಯೋಗವನ್ನು ಅಭಿವೃದ್ಧಿಪಡಿಸಿದ ಖ್ಯಾತಿ ಮೈಸೂರಿನ ಮತ್ತೊಬ್ಬ ಪ್ರಸಿದ್ಧ ಯೋಗ ಗುರು ಕೆ. ಪಟ್ಟಾಭಿ ಜೋಯಿಸ್ ಅವರದ್ದು.

ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯಕ್ಕೆ ಸಂಬಂಽಸಿದ ಹಲವು ಸಮಸ್ಯೆಗಳಿಗೆ ಯೋಗ ರಾಮಬಾಣ ಎನ್ನಲಾಗಿದ್ದು, ಯೋಗಕ್ಕೆ ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣದಿಂದ, ವೈಜ್ಞಾನಿಕ, ಸಾಂಪ್ರದಾಯಿಕ ಯೋಗ ಕಲಿಕಾ ತಾಣವಾದ ಮೈಸೂರು ಇಂದು ವಿಶ್ವದಲ್ಲೇ ಪ್ರಮುಖ ಯೋಗ ಕಲಿಕೆಯ ತಾಣವಾಗಿ ಬೆಳೆದಿದೆ. ಸಾಂಪ್ರದಾಯಿಕವಾಗಿರುವ ಅಷ್ಟಾಂಗ ಯೋಗ, ಹಠಯೋಗ ಮತ್ತು ವಿನಿಯೋಗದ ಜೊತೆಗೆ, ಹತ್ತಾರು ಆಧುನಿಕ ಯೋಗ ತರಬೇತಿ ಸಂಸ್ಥೆಗಳು ಇಂದು ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ.

600ಕ್ಕೂ ಹೆಚ್ಚು ಯೋಗ ಕೇಂದ್ರಗಳು
ಪ್ರತಿ ವರ್ಷ, ದೇಶದ ಮೂಲೆಮೂಲೆಗಳಿಂದ ಹಾಗೂ ವಿದೇಶಗಳಿಂದ ಸಾವಿರಾರು ಮಂದಿ ಯೋಗ ಕಲಿಯಲು ಮೈಸೂರಿಗೆ ಬರುತ್ತಾರೆಂದರೆ ನಿಮಗೆ ಅಚ್ಚರಿಯಾಗ ಬಹುದು. ಆರು ನೂರಕ್ಕೂ ಹೆಚ್ಚು ಯೋಗ ಕೇಂದ್ರಗಳು ತರಬೇತಿ ನೀಡುತ್ತಿವೆ. ಪ್ರತಿವರ್ಷ ಮಾರ್ಚ್ ತಿಂಗಳಿನಿಂದ ಜುಲೈ ತಿಂಗಳವರೆಗೆ ಸಾಮಾನ್ಯವಾಗಿ ಯೋಗ ಕೇಂದ್ರಗಳಲ್ಲಿ ಶಿಕ್ಷಣಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಮೈಸೂರಿನಲ್ಲೇ ೬೦೦ ಯೋಗ ಕೇಂದ್ರಗಳು, ೨೨ ಆಯುಷ್ಮಾನ್ ಆರೋಗ್ಯ ಮಂದಿರಗಳು ಇವೆ. ಅಲ್ಲದೆ, ನ್ಯಾಚುರೋಪತಿ ಕಾಲೇಜುಗಳು, ಪಂಚ ಕರ್ಮ ಆಯುರ್ವೇದ ಸೇವಾ ಕೇಂದ್ರಗಳಿವೆ. ನ್ಯಾಚುರೋಪತಿ, ಪಂಚಕರ್ಮ ಕೇಂದ್ರ ಗಳಲ್ಲಿಯೂ ಯೋಗ ಹೇಳಿಕೊಡಲಾಗುತ್ತದೆ. ಒಂದು ವರ್ಷದಲ್ಲಿ ಏನಿಲ್ಲವೆಂದರೂ ವಿವಿಧ ದೇಶಗಳಿಂದ ಅಂದಾಜು ೨೦ ಸಾವಿರ ಮಂದಿ ಇಲ್ಲಿಗೆ ಯೋಗ ಕಲಿಯಲು ಬರುತ್ತಾರೆ. ಗೋಕುಲಂ, ಯಾದವಗಿರಿ, ಜಯಲಕ್ಷ್ಮೀಪುರಂನಲ್ಲಿರುವ ಯೋಗ ತರಬೇತಿ ಕೇಂದ್ರಗಳು ಹೌಸ್‌ಫುಲ್ ಆಗಿರುಅತ್ತವೆ. ಇವರಲ್ಲಿ ವರ್ಷಕ್ಕೆ ಕನಿಷ್ಠ ೮,೦೦೦ ಮಂದಿ ಯೋಗ ಶಿಕ್ಷಕರಾಗುವ ಬಯಕೆಯನ್ನು ಹೊಂದಿರುತ್ತಾರೆ. ಮೈಸೂರಿಗೆ ಬಂದು ಯೋಗ ಕಲಿತು, ಪ್ರಮಾಣಪತ್ರವನ್ನು ಪಡೆದು ತಮ್ಮ ದೇಶಕ್ಕೆ ಹಿಂದಿರುಗಿದ ನಂತರ ಅವರು ಯೋಗ ಶಿಕ್ಷಕರಾಗಿ ತೊಡಗಿಸಿಕೊಂಡಿರು ವುದೂ ಉಂಟು. ಮೈಸೂರಿನ ಯೋಗ ಕೇಂದ್ರಗಳಲ್ಲಿ ಕೆ. ಪಟ್ಟಾಭಿ ಜೋಯಿಸ್ ಅಷ್ಟಾಂಗ ಸಂಸ್ಥೆ ಪ್ರಮುಖವಾಗಿದೆ. ಮೈಸೂರಿನ ಅನೇಕ ಯೋಗ ಕೇಂದ್ರಗಳಲ್ಲಿ ಅಷ್ಟಾಂಗ ಯೋಗವನ್ನು ಹೇಳಿಕೊಡಲಾಗುತ್ತದೆ. ಇದು ಭಾರತ ಮೂಲ ಯೋಗದ ಆಧುನಿಕ ರೂಪಾಂತರ ಎಂದೇ ಪರಿಗಣಿಸಲ್ಪಟ್ಟಿದೆ. ದೇಹದ ಉಸಿರಾಟವನ್ನು, ದೇಹದ ಅಂಗಾಂಗ ಚಲನೆಗಳಿಗೆ ಸಮ್ಮಿಳಿತಗೊಳಿಸುವ ಮೂಲಕ ಶರೀರದ ಅಂತಃಶಕ್ತಿಯನ್ನು ಜಾಗೃತಗೊಳಿಸುವ ವಿಶೇಷವಾದ ಯೋಗ ವಿನ್ಯಾಸವಾಗಿದೆ. ಇದರ ಬಗ್ಗೆ ವಿದೇಶಗಳಿಂದ ಬರುವ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸುತ್ತಾರೆ.

 

ಆಂದೋಲನ ಡೆಸ್ಕ್

Recent Posts

ಆಂದೋಲನ ಸಾರ್ಥಕ ಪಯಣ : ಪರಿಸರ ಸಂರಕ್ಷಣೆ ಎಲ್ಲರ ಹೊಣೆ

ಎಚ್.ಎಸ್.ದಿನೇಶ್‌ ಕುಮಾರ್‌ ಜಾಗತಿಕ ತಾಪಮಾನ ವಿಪರೀತ ಹೆಚ್ಚಳವಾಗುತ್ತಿದೆ. ಈ ಸಂದರ್ಭದಲ್ಲಿ ಪರಿಸರ ಸಮತೋಲನ ಕಾಪಾಡಿಕೊಳ್ಳದಿದ್ದರೆ ಇಡೀ ಮಾನವ ಕುಲವೇ ಸಂಕಷ್ಟಕ್ಕೀಡಾಗಬೇಕಾಗುತ್ತದೆ.…

3 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ : ಬಿಎಸ್‌ವೈಗೆ ಲಿಂಗಾಯತ ಶಕ್ತಿಯದ್ದೇ ಚಿಂತೆ

ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್‌ ಕಡೆಗೆ ವಾಲುವ ಆತಂಕ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಯಡಿಯೂರಪ್ಪ ಚಿಂತೆಯಲ್ಲಿದ್ದಾರೆ. ಅವರ ಚಿಂತೆಗೆ ಕಾರಣ…

3 hours ago

ಒಡನಾಡಿ ಸ್ಟ್ಯಾನ್ಲಿ ಅವರ ವಾರದ ಅಂಕಣ ; ಕೋಟಿಗೊಬ್ಬರೇ ಕೋಟಿ….!

ʻಬದುಕಿ ನಿರ್ಗಮಿಸುವುದಾದರೆ ಕೋಟಿಯವರಂತೆ ಬಾಳಿ ಹೊರಡಬೇಕುʼ ಕನ್ನಡದ ಪಾಪು, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರು ಸಂಪಾದಕರಾಗಿದ್ದ ಧಾರವಾಡದ ‘ವಿಶ್ವವಾಣಿ’ ಪತ್ರಿಕೆಯ…

7 hours ago

ಆಂದೋಲನ ಸಂಪಾದಕೀಯ | ಸಾರ್ಥಕ ಪಯಣ 54 ; ಬೆನ್ನುತಟ್ಟಿ ನಡೆಸಿದವರು ನೀವು. . .

ನಿಮ್ಮೆಲ್ಲರ ‘ಆಂದೋಲನ’ ದಿನಪತ್ರಿಕೆ ೫೪ನೇ ವಸಂತಕ್ಕೆ ಪಾದಾರ್ಪಣೆ ಮಾಡಿದೆ. ಹುಟ್ಟಿನಿಂದ ನಡೆದುಬಂದ ಮಾರ್ಗದಲ್ಲೇ, ರೂಢಿಸಿಕೊಂಡ ಸಿದ್ಧಾಂತಗಳ ನೆರಳಲ್ಲೇ ಸಹಸ್ರಾರು ಸವಾಲುಗಳ…

7 hours ago

ಎಸ್‌ಐಆರ್‌ | ಬಿಜೆಪಿಯಿಂದ ಅನಗತ್ಯ ಆರೋಪ ; ಎಂ.ಲಕ್ಷ್ಮಣ್‌ ಕಿಡಿ

ಮೈಸೂರು : ಎಸ್‌ಐಆರ್ ಪ್ರಕ್ರಿಯೆ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಕದಿಯುತ್ತಿರುವ ಬಿಜೆಪಿ, ಕೆಲವು ದಿನಗಳಿಂದ ಅನಗತ್ಯ…

22 hours ago

ಆರು ತಿಂಗಳ ಬಳಿಕ ಕೆಆರ್‌ಎಸ್‌ ಡ್ಯಾಂಗೆ 1000 ಕ್ಯೂಸೆಕ್ಸ್‌ ನೀರು ಒಳಹರಿವು

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ…

1 day ago