ಮಡಿಕೇರಿ: ಜನರಿಗೆ ಹತ್ತಿರದ ಶಿಕ್ಷಣ ಸಿಗಬೇಕು ಎಂಬ ಮಹತ್ವದ ಉದ್ದೇಶದಿಂದಲೇ ಕೊಡಗು ವಿವಿ ಆರಂಭಿಸಿರೋದು. ಹಾಗಾಗಿ ಹಣಕಾಸು ಅಥವಾ ಅನುದಾನದ ಕಾರಣದಿಂದ ಕೊಡಗು ವಿವಿ ಮುಚ್ಚಲು ಸರ್ಕಾರ ಮುಂದಾದರೆ ಕಾನೂನು ಹೋರಾಟ ನಡೆಸುವುದಾಗಿ ರಾಜ್ಯ ಉಚ್ಛನ್ಯಾಯಾಲಯದ ವಕೀಲರೂ ಆದ ಕಾಂಗ್ರೆಸ್ ಮುಖಂಡ ಹೆಚ್.ಎಸ್.ಚಂದ್ರಮೌಳಿ ಹೇಳಿದ್ದಾರೆ.
ರಾಜ್ಯದ ಬೇರೆ ವಿವಿಗಳಿಗೆ ಇರುವ ಪರಿಸ್ಥಿತಿ ಕೊಡಗು ವಿವಿಗೆ ಇಲ್ಲ. ಕೊಡಗು ವಿವಿ ಉಳಿಸಲು ರಾಜಕೀಯ ರಹಿತವಾದ ಹೋರಾಟದ ಅನಿವಾರ್ಯತೆ ಇದೆ. ನಮ್ಮ ಜಿಲ್ಲೆಯ ಬಡ ವಿದ್ಯಾರ್ಥಿಗಳು ವಿವಿ ಇಲ್ಲ ಎಂಬ ಕಾರಣಕ್ಕೆ ಹೊರ ಜಿಲ್ಲೆಗಳಿಗೆ ಹೋಗಿ ಉನ್ನತ ಶಿಕ್ಷಣ ಪಡೆಯದಂತಹ ಕೆಟ್ಟ ವಾತಾವರಣ ನಿರ್ಮಾಣ ವಾಗಕೂಡದು. ಲಾಭದಲ್ಲಿಯೇ ನಡೆಸಲು ಇದೇನು ಉದ್ಯಮವಲ್ಲ. ಹಾಗಾಗಿ ಲಾಭ ನಷ್ಟದ ಪ್ರಶ್ನೆ ಅಸಮಂಜಸ ಎಂದು ತಿಳಿಸಿದ್ದಾರೆ.
ಈಗ ಇರುವ ಕೊಡಗು ವಿವಿಗೆ ಸರ್ಕಾರ ಕನಿಷ್ಟ 10 ಕೋಟಿ ರೂ. ಕೊಟ್ಟರೂ ಸಾಕು. ಹೇಗೂ ನಡೆಸಿಕೊಂಡು ಹೋಗಬಹುದು. ರಾಜಕಾರಣಿಗಳು ಅಥವಾ ಜನಪ್ರತಿನಿಧಿಗಳು ದೂರದೃಷ್ಟಿ ಇಟ್ಟುಕೊಳ್ಳಬೇಕು. ಮಂಗಳೂರು ವಿವಿಗೆ ಕೊಡಗು ವಿವಿ ಸೇರಿಸಿ ಆ ವಿವಿಯ ಭಾರವನ್ನು ಹೆಚ್ಚಿಸೋದಕ್ಕಿಂತ ನಮ್ಮಲ್ಲಿಯೇ ಉಳಿಸಿಕೊಂಡರೆ ಮುಂದಿನ ಹತ್ತು ವರ್ಷಗಳಲ್ಲಿ ಕೊಡಗಿನಲ್ಲಿ ಮಹಾವಿದ್ಯಾಲಯಗಳ ಸಂಖ್ಯೆ ಹೆಚ್ಚುತ್ತದೆ ಎಂದಿದ್ದಾರೆ.
ವಿವಿ ಕುಲಪತಿಗಳನ್ನು ಜೊತೆಯಲ್ಲಿ ಒಯ್ದು ಸಂಪುಟ ಸಮಿತಿಯ ಸದಸ್ಯರಲ್ಲೊಬ್ಬರಾದ ಸಚಿವ ಹೆಚ್.ಸಿ.ಮಹದೇವಪ್ಪ, ಕೊಡಗು ಉಸ್ತುವಾರಿ ಸಚಿವ ಭೋಸರಾಜು ಅವರನ್ನು ಭೇಟಿಯಾಗಿ ವಾಸ್ತವ ವಿವರಿಸಲಾಗಿದೆ.
ಕೊಡಗಿನ ಮಂದಿ ಒಗ್ಗೂಡಿ ರಾಜಕೀಯ ರಹಿತವಾದ ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಬೇಕು. ಕೊಡಗಿನ ಜನಪ್ರತಿನಿಧಿಗಳು ಕೂಡ ಜನರ ಪರ ನಿಂತು ಸರ್ಕಾರಕ್ಕೆ ಒತ್ತಾಯ ಮಾಡಬೇಕು.
ನಾವು ರಾಜ್ಯದ ಒಂಭತ್ತು ವಿವಿ ಗಳ ಬಗ್ಗೆ ಮಾತಾಡಲ್ಲ. ಕೊಡಗು ಗುಡ್ಡ ಗಾಡು ಪ್ರದೇಶ. ಇಲ್ಲಿ ಬುಡಕಟ್ಟು, ಪರಿಶಿಷ್ಟ ಜಾತಿ, ವರ್ಗ ಹಾಗೂ ಪಂಗಡಗಳಿಗೆ ಸೇರಿದ ಬಹಳಷ್ಟು ಮಂದಿ ಇದ್ದಾರೆ. ಹಾಗಾಗಿ ಇಲ್ಲಿಯ ಪರಿಸ್ಥಿತಿಯೇ ಬೇರೆ ಇದೆ. ಸಾಕ್ಷರರ ಸಂಖ್ಯೆಯೂ ಕ್ಷೀಣವಾಗಿದೆ. ಹಾಗಾಗಿ ಎಲ್ಲವನ್ನು ಸರ್ಕಾರಕ್ಕೆ ವಿವರಿಸಬೇಕು ಎಂದು ಹೇಳಿದ್ದಾರೆ.
ಕೊಡಗು ವಿವಿಯಲ್ಲಿ ಮತ್ತೆ ಹೊಸದಾಗಿ ಪ್ರವಾಸೋದ್ಯಮ ಹಾಗೂ ಹೋಟೆಲ್ ಮೇನೇಜ್ ಮೆಂಟ್ ಕೋರ್ಸ್ ಅತೀ ಅಗತ್ಯವಿದ್ದು ಬೇಗ ಆರಂಭಿಸುವುದು ಸೂಕ್ತವಾಗಿದ್ದು ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಲಿದೆ.
ವೀರರು, ಯೋಧರು ಹಾಗೂ ಕ್ರೀಡಾಕಲಿಗಳ ಜಿಲ್ಲೆ ಕೊಡಗು ಜಿಲ್ಲೆಯ ವಿವಿ ಕುಲಪತಿಗಳಿಗೆ ಕ್ಯಾಂಪಸ್ ನಲ್ಲಿ ವಸತಿ ನಿಲಯವಿಲ್ಲ. ಓಡಾಡೋಕೆ ಒಂದು ಕಾರು ಕೂಡ ಇಲ್ಲ ಅಂದರೆ ಇದು ನಾಚಿಕೆಗೇಡಿನ ವಿಷಯ.
ಆದ್ದರಿಂದ ಸರ್ಕಾರ ಕೊಡಗು ವಿವಿ ಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ನಾನು ಕೊಡಗು ವಿವಿ ಉಳಿವಿಗೋಸ್ಕರ ನ್ಯಾಯಾಲಯದಲ್ಲಿ ಹೋರಾಟ ನಡೆಸಲೂ ಕೂಡ ಸಿದ್ಧನಿದ್ದೇನೆ ಎಂದು ಚಂದ್ರಮೌಳಿ ಹೇಳಿದ್ದಾರೆ.
ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲಾಗಿರುವ ಶೂಗಳ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ರಾಜ್ಯ ಸರ್ಕಾರದ…
ಬೆಂಗಳೂರು: ಹಬ್ಬಗಳ ಸೀಸನ್ ಸಮೀಪಿಸುತ್ತಿದ್ದಂತೆ ರಾಜ್ಯ ಸರ್ಕಾರ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಪಿಒಪಿ ಗಣೇಶ ಮೂರ್ತಿಗಳ…
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಕೃಷಿ ವಲಯ ಮತ್ತೊಂದು ಗಂಭೀರ ಸಂಕಷ್ಟದತ್ತ ಸಾಗುತ್ತಿದೆ. ಸತತ ಮೂರು ವಾರಗಳಿಂದ…
ಬೆಂಗಳೂರು: ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಬೆನ್ನಲ್ಲೇ ತಾಪಮಾನ ಏರಿಕೆಯಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲೂ ಬೇಸಿಗೆಯಂತಹ ಬಿಸಿಲಿನ ವಾತಾವರಣ ಕಂಡುಬರುತ್ತಿದೆ. ಸಾಮಾನ್ಯವಾಗಿ…
ಬೆಂಗಳೂರು: SIR ನೋಟಿಸ್ಗಳ ವಿಚಾರಣೆ ಅಧಿಕೃತವಾಗಿ ಆರಂಭವಾಗಿದೆ. ವಿಚಾರಣೆಗೆ ಹಾಜರಾಗುವ ವೇಳೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಕೊಂಡೊಯ್ಯುವುದು ಮುಖ್ಯವಾಗಿದೆ. ನಿಮ್ಮ…
ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…