ಕೊಡಗು

ಕೊಡಗು: ಗೇಟ್‌ನಲ್ಲಿ ಸಿಕ್ಕಿಕೊಂಡ ತಲೆಯನ್ನು ಹೊರ ತೆಗೆಯಲು ಪರದಾಡಿದ ಕಾಡಾನೆ

ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ತಿತಿಮತಿಯ ಬಳಿಯ ಅರಣ್ಯ ಇಲಾಖೆಯ ಟಿಂಬರ್‌ ಯಾರ್ಡ್‌ನ ಗೇಟ್‌ನಲ್ಲಿ ಕಾಡಾನೆಯ ತಲೆ ಸಿಕ್ಕಿಕೊಂಡಿದ್ದು, ಅದನ್ನು ಹೊರ ತೆಗೆಯಲು ಪಡದಾಡಿದೆ.

ತಿತಿಮತಿಯ ಬಳಿಯ ಅರಣ್ಯ ಇಲಾಖೆಯಲ್ಲಿ ಇಂದು(ಜನವರಿ.18) ಟಿಂಬರ್ ಯಾರ್ಡ್‌ನ ಗೇಟ್‌ನಲ್ಲಿ ಕಾಡಾನೆ ತಲೆಯೂ ಸಿಕ್ಕಿಕೊಂಡಿದ್ದು, ಕೆಲಕಾಲ ಹೊರಬರಲು ಹರಸಾಹಸ ಮಾಡಿದೆ.

ಒಟ್ಟು 5 ಕಾಡಾನೆಗಳ ಹಿಂಡಿನಲ್ಲಿದ್ದ ಒಂದು ಕಾಡಾನೆಯ ತಲೆ ,ರೆಡಿಯೋ ಕಾಲರ್ ಅಳವಡಿಸಿದ್ದ ಯಾರ್ಡ್ ಗೇಟ್‌ನಲ್ಲಿ ಸಿಲುಕಿಕೊಂಡಿತ್ತು. ಆದರೆ ಆ ಕಾಡಾನೆ ಕೆಲಕ್ಷಣದಲ್ಲಿಯೇ ಚಾಣಕ್ಷತೆಯಿಂದ ತಲೆ ಹೊರತೆಗೆದು ಪರಾರಿಯಾಗಿದೆ. ಇನ್ನೂ ಕಾಡಾನೆ ತಲೆ ಸಿಲುಕಿಕೊಂಡಿದ್ದ ಸಂಗಾತಿಯ ನೆರವಿಗೆ ಧಾವಿಸಿದ್ದ ಮತ್ತೊಂದು ಕಾಡಾನೆಯೂ ಕ್ಯಾಮರದಲ್ಲಿ ಸೆರೆಯಾಗಿದೆ.

ಈ ಘಟನೆಯೂ ಮನೆಯಪಂಡ ಮಾಯಾ ರಾಮ್ ದಾಸ್ ಅವರ ಭದ್ಗಗೋಳ ಎಸ್ಟೇಟ್‌ನ ಮುಂಭಾಗ ಅರಣ್ಯ ಡಿಪೋದಲ್ಲಿ ನಡೆದಿದೆ. ಈ ವೇಳೆ ತಲೆ ಸಿಕ್ಕಿಕೊಂಡಿದ್ದ ಕಾಡಾನೆಯೊಂದಿಗೆ ಐದು ಕಾಡಾನೆಗಳಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.

ಅರ್ಚನ ಎಸ್‌ ಎಸ್

Recent Posts

ಇದ್ದೂ ಇಲ್ಲದಂತಿರುವ ಟರ್ಷಿಯರಿ ಕ್ಯಾನ್ಸರ್‌ ಕೇರ್‌

ರಾಜ್ಯ ಸರ್ಕಾರದಿಂದ ಅನುದಾನ ವಿಳಂಬ; ಚಿಕಿತ್ಸೆಗಾಗಿ ಬೆಂಗಳೂರು, ಮೈಸೂರಿನ ಆಸ್ಪತ್ರೆಗೆ ಅಲೆಯುತ್ತಿರುವ ರೋಗಿಗಳು ಮಂಡ್ಯ: ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ…

15 mins ago

ಸಿಎಂಗೆ ವಿದ್ಯಾರ್ಥಿಗಳು ಪತ್ರ ಬರೆದ ಪ್ರಕರಣ: ಪಚ್ಚೆದೊಡ್ಡಿ ಸರ್ಕಾರಿ ಶಾಲೆಗೆ ಬಿಇಒ ಭೇಟಿ

ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…

3 hours ago

ಕೋಟೆ ಪುರಸಭೆ ಪೌರಕಾರ್ಮಿಕರು, ನೌಕರರಿಗೆ ೫ ತಿಂಗಳಿಂದ ಸಂಬಳವಿಲ್ಲ

ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…

3 hours ago

ಕೈಬೀಸಿ ಕರೆಯುತ್ತಿದೆ ‘ಪ್ರಸಾರಾಂಗ ಪುಸ್ತಕೋತ್ಸವ’

ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ,…

3 hours ago

ನಗರಪಾಲಿಕೆ ಆರ್ಥಿಕ ಬರ ನೀಗಿಸಿದ ತೆರಿಗೆ ಸಂಗ್ರಹ

ಕೆ.ಬಿ.ರಮೇಶನಾಯಕ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು…

3 hours ago