ಜಿಲ್ಲೆಗಳು

ಇಂದಿರಾ ಕ್ಯಾಂಟೀನ್ ಸ್ಥಗಿತದಿಂದ ಬಡವರ ಹೊಟ್ಟೆಗೆ ಬರೆ

ಗುಮಡ್ಲುಪೇಟೆ ಪಟ್ಟಣದಲ್ಲಿ ಕ್ಯಾಂಟೀನ್ ಪುನರಾರಂಭಿಸಲು ಸಾರ್ವಜನಿಕರ ಆಗ್ರಹ
ವರದಿ: ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ಕಡಿಮೆ ಬೆಲೆಗೆ ತಿಂಡಿ, ಊಟ ಸಿಗುತಿದ್ದ ಇಂದಿರಾ ಕ್ಯಾಂಟೀನ್‌ಗೆ ಸಬ್ಸಿಡಿ ನೀಡುತ್ತಿಲ್ಲ ಎಂಬ ಕಾರಣ ಹೇಳಿ ಗುತ್ತಿಗೆದಾರರು ಕ್ಯಾಂಟೀನ್‌ಗೆ ಬೀಗ ಹಾಕಿದ ಪರಿಣಾಮ ಬಡವರ ಹೊಟ್ಟೆಗೆ ಬರೆ ಎಳೆದಂತಾಗಿದೆ.

ಒಂದು ವರ್ಷದಿಂದ ಜಿಲ್ಲೆುಂ ನಾಲ್ಕು ಇಂದಿರಾ ಕ್ಯಾಂಟೀನ್‌ಗಳು ಕಾಂರ್ು ನಿರ್ವಹಿಸುತ್ತಿದ್ದು , ವರ್ಷದಿಂದ ನಮಗೆ ಸಹಾುಂಧನ ಬಿಡುಗಡೆಾಂಗಿಲ್ಲ. ಹಾಗಾಗಿ ನಮಗೆ ಹೊರೆಾಂಗುತ್ತಿದ್ದು ಕ್ಯಾಂಟೀನ್ ಮುಂದುವರಿಸಲು ಸಾಧ್ಯವಾಗುತಿಲ್ಲ. ಡಿಸೆಂಬರ್ ೧೦ ರಿಂದ ನಾಲ್ಕೂ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಲಾಗುವುದು ಎಂದು ಗುತ್ತಿಗೆದಾರರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ಯಾಂಟೀನ್ ಬಂದ್ ವಾಡಿದ್ದರಿಂದ ಜನಸಾವಾನ್ಯರಿಗೆ ತೊಂದರೆಯಾಗುತ್ತಿದೆ. ಇದರಿಂದ ಕಾರ್ಮಿಕ ವರ್ಗ, ನಿರಾಶ್ರಿತರ ಹೊಟ್ಟೆಯ ಮೇಲೆ ಬರೆ ಎಳೆಯುವ ಕೆಲಸ ವಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದ ರಾಷ್ಟ್ರೀುಂ ಹೆದ್ದಾರಿುಂ ಬದಿುಂಲ್ಲಿರುವ ಇಂದಿರಾ ಕ್ಯಾಂಟೀನ್‌ನ್ನು ಈಗಾಗಲೇ ಮುಚ್ಚಲಾಗಿದ್ದು, ಇದು ಪುರಸಭೆ ಅಧೀನಕ್ಕೆ ಒಳಪಡುತ್ತದೆ. ಆದರೆ ಈ ವಿಚಾರ ಪುರಸಭೆ ಅಧ್ಯಕ್ಷರ ಗಮನಕ್ಕೆ ಬಂದಿಲ್ಲವೇ ಎಂಬುದೇ ಪ್ರಶ್ನೆಯಾಗಿದೆ. ಶಾಸಕರು ಪ್ರತಿನಿತ್ಯ ತಮ್ಮ ಕಚೇರಿಗೆ ತೆರಳುವಾಗ ಇಂದಿರಾ ಕ್ಯಾಂಟೀನ್ ಮುಂಭಾಗವೇ ಹೋಗುತ್ತಾರೆ. ಆದರೆ ಕ್ಯಾಂಟೀನ್ ಮುಚ್ಚಿರುವುದನ್ನು ಗಮನಿಸದೆ ಇರುವುದು ದುರ್ದೈವ ಎಂದು ಸಾರ್ವಜನಿಕರು ದೂರಿದ್ದಾರೆ.
ಬಡ ವರ್ಗದ ಕಾರ್ಮಿಕರು, ನಿರ್ಗತಿಕರಿಗೆ ಅನುಕೂಲವಾಗಿದ್ದ ಇಂದಿರಾ ಕ್ಯಾಂಟೀನ್ ಬಾಗಿಲು ಮುಚ್ಚಿದ ಪರಿಣಾಮ ಅನೇಕ ಜನರಿಗೆ ತೊಂದರೆಾಂಗುತ್ತಿದೆ. ೫-೧೦ ರೂ.ಗಳಿಗೆ ಬೆಳಿಗ್ಗೆ ತಿಂಡಿ, ಊಟ ಸಿಗುತಿದ್ದ ಕ್ಯಾಂಟೀನ್ ಬಿಟ್ಟು ಬಡವರ್ಗದ ಕಾರ್ಮಿಕರು ನಿತ್ಯ ೫೦-೧೦೦ ರೂ. ಕೊಟ್ಟು ಹೋಟೆಗಳಲ್ಲಿ ತಿನ್ನುವ ಪರಿಸ್ಥಿತಿ ನಿರ್ವಾಣವಾಗಿದೆ. ಹಾಗಾಗಿ ಕೂಡಲೇ ಜಿಲ್ಲಾಧಿಕಾರಿಗಳು ಪುರಸಭೆುಂ ಗಮನಕ್ಕೆ ತಂದು ಇಂದಿರಾ ಕ್ಯಾಟೀನ್‌ಅನ್ನು ಯಥಾವತ್ತಾಗಿ ಮುಂದುವರಿಸುವ ಮೂಲಕ ಬಡ ವರ್ಗದವರಿಗೆ ನೆರವಾಗಬೇಕು ಎಂಬುದು ಸಾರ್ವಜನಿಕರ ಒತ್ತಾುಂವಾಗಿದೆ.

ಸರ್ಕಾರ ಬಡವರ್ಗದವರಿಗೆ ಅನುಕೂಲವಾಗಿರುವ ಇಂದಿರಾ ಕ್ಯಾಂಟೀನ್ ಅಭಿವೃದ್ಧಿುಂತ್ತ ಚಿಂತಿಸಬೇಕು. ಉತ್ತಮವಾಗಿ ಕಾಂರ್ು ನಿರ್ವಹಿಸುವ ಗುತ್ತಿಗೆದಾರರಿಗೆ ಟೆಂಡರ್ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹ.

 ಸರ್ಕಾರ ಜನಸಾವಾನ್ಯರಿಗೆ ಅನುಕೂಲ ವಾಡಿಕೊಡದ ಮೇಲೆ ಇನ್ಯಾರಿಗೆ ಉಪೋಂಗ ವಾಡುತ್ತಾರೆ. ಸ್ಥಳೀುಂ ಅಧಿಕಾರಿಗಳು, ಶಾಸಕರು ಸರ್ಕಾರದ ಗಮನಕ್ಕೆ ತಂದು ಇಂದಿರಾ ಕ್ಯಾಂಟೀನ್‌ನ್ನು ಮತ್ತೆ ಆರಂಭಿಸಬೇಕು. ಕ್ಯಾಂಟೀನ್ ಮುಚ್ಚಿರುವುದರಿಂದ ಬಡವರ್ಗದವರಿಗೆ ತೊಂದರೆಾಂಗುತ್ತಿದೆ.-ಎಚ್.ಎಂ.ಗಣೇಶ್‌ಪ್ರಸಾದ್, ಕಾಂಗ್ರೆಸ್ ಮುಖಂಡ

ಒಂದು ವರ್ಷದಿಂದ ಸಹಾುಂಧನ ನೀಡಿಲ್ಲ. ಇದರಿಂದ ಕ್ಯಾಂಟೀನ್ ನಡೆಸಲು ಸಾಧ್ಯವಾಗುತಿಲ್ಲ ಎಂದು ಇಂದಿರಾ ಕ್ಯಾಂಟಿನ್ ಗುತ್ತಿಗೆದಾರರು ಜಿಲ್ಲಾಧಿಕಾರಿಗೆ ಅರ್ಜಿ ಬರೆದು ಮೂರು ದಿನಗಳಿಂದ ಸೇವೆ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಚರ್ಚಿಸಲಾಗುವುದು.
-ಪಿ.ಗಿರೀಶ್, ಪುರಸಭೆ ಅಧ್ಯಕ್ಷ

ಇಂದಿರಾ ಕ್ಯಾಂಟೀನ್ ಹಸಿವು ಮುಕ್ತ ಧ್ಯೇುಂದಿಂದ ಪ್ರಾರಂಭವಾಗಿದೆ. ರಾಜಕೀಯ ಉದ್ದೇಶದಿಂದ ಇದನ್ನು ಮುಚ್ಚುವ ದುರಾಲೋಚನೆ ಇದೆ. ಇದನ್ನು ಮತ್ತೆ ಆರಂಭಿಸಬೇಕು. ಇದರಿಂದ ಎಷ್ಟೋ ನಿರಾಶ್ರಿತರಿಗೆ ಅನುಕೂಲವಾಗಲಿದೆ. ರಾಜಕೀಯ ಉದ್ದೇಶದಿಂದ ಮುಚ್ಚಿದ್ದರೆ ಅದನ್ನು ಖಂಡಿಸುತ್ತೇನೆ. -ಸುಭಾಶ್ ವಾಡ್ರಹಳ್ಳಿ , ವಾನವ ಬಂಧುತ್ವ ಜಿಲ್ಲಾ ಸಂಚಾಲಕ.

ಶ್ರಮಿಕರು, ಬಡವರ್ಗದವರಿಗೆ ನೆರವಾಗಿದ್ದ ಇಮದಿರಾ ಕ್ಯಾಂಟೀನ್ ಮುಚ್ಚುವ ಮೂಲಕ ಬಿಜೆಪಿ ಶ್ರೀಮಂತರ ಪರ ಎಂಬುದನ್ನು ಸಾಬೀತು ವಾಡಿದೆ. ಬಡವರ ಹೊಟ್ಟೆ ಮೇಲೆ ಹೊಡೆುುಂವುದೇ ಇವರ ಕೆಲಸವಾಗಿದೆ. ಎಸ್ಸಿ-ಎಸ್ಟಿ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸೈಕಲ್ ನೀಡಿಲ್ಲ, ಈ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ. -ಪಿ ಗಿರೀಶ್, ಸಾರ್ವಜನಿಕ

ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದ್ದ ಇಂದಿರಾ ಕ್ಯಾಂಟೀನ್‌ನ್ನು ಮುಚ್ಚಿರುವುದು ಖಂಡನೀುಂ. ಎಷ್ಟೋ ಕೂಲಿ ಕಾರ್ಮಿಕರಿಗೆ ಇದರಿಂದ ತೊಂದರೆಾಂಗಿದೆ. ಆದಷ್ಡು ಬೇಗ ಪುನರಾರಂಭಿಸಬೇಕು. -ಅಬ್ದುಲ್ ವಾಲಿಕ್, ಕಾವಲುಪಡೆ ಅಧ್ಯಕ್ಷ

andolana

Recent Posts

ಓದುಗರ ಪತ್ರ: ಬಂಡಾಯದ ಹೊಳೆ

ಬಂಡಾಯದ ಹೊಳೆ ಮಿಂಚು ಹೂಮಳೆ ! ಅತಿವೃಷ್ಟಿ,ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ, ಕಾರಣ,…

11 hours ago

ಓದುಗರ ಪತ್ರ: ಆತಂಕಕಾರಿ ವಿಚಾರ

ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ…

11 hours ago

ಓದುಗರ ಪತ್ರ: ಜ್ಞಾಪಿಸಿಕೊಳ್ಳಬೇಕಿತ್ತು, ಕೃತಜ್ಞತೆ ಹೇಳಬೇಕಿತ್ತು…

ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು…

11 hours ago

ಮನುಕುಲದ ಏರಿಳಿತಗಳಿಗೆ ಸಾಕ್ಷಿದಾರರಾದ ಈ ಪೀಳಿಗೆಗಳು

ಶುಭಾ ಖಟಾವಕರ ಮ್ಹೆತ್ರಸ್ ಹೊಸ ಇತಿಹಾಸ ಸೃಷ್ಟಿಸಿದ ‘ಜೆನ್ ಝೀ’ ಪೀಳಿಗೆ ಸಂಪ್ರದಾಯಗಳನ್ನು ಪ್ರಶ್ನಿಸಿದ ‘ಬೂಮರ್ಸ್’ ಯುವಜನ ೧೯೦೦ ರಿಂದ…

11 hours ago

ನನೆಗುದಿಗೆ ಬಿದ್ದ ರಾಜ್‌ಘಾಟ್ ಮಾದರಿ ಗಾಂಧಿ ಸ್ಮಾರಕ

ಪುನೀತ್ ೩ ವರ್ಷ ಕಳೆದರೂ ಮುಗಿಯದ ಕಾಮಗಾರಿ: ಶೀಘ್ರ ಪೂರ್ಣಗೊಳಿಸಲು ಒತ್ತಾಯ ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದ…

11 hours ago

ಅನಿಲ್ ಚಿಕ್ಕಮಾದುಗೆ ಕೈತಪ್ಪಿದ ಸಚಿವ ಸ್ಥಾನ; ಕ್ಷೇತ್ರದ ಜನರಿಗೆ ನಿರಾಸೆ

ಮಂಜು ಕೋಟೆ ಕೋಟೆ: ಸಚಿವ ಸ್ಥಾನ ದೊರೆತಿದ್ದರೆ ಹಿಂದುಳಿದ ಕ್ಷೇತ್ರದ ಅಭಿವೃದ್ಧಿಯಾಗುತ್ತಿತ್ತು ಎಂಬ ನಿರೀಕ್ಷೆ ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ…

11 hours ago