ಹಾಸನ

ಇದು 1 ವರ್ಷ 8 ತಿಂಗಳ ಪುಟ್ಟ ಪೋರಿಯ ಸಾಧನೆ

ಹಾಸನ: 1 ವರ್ಷ 8 ತಿಂಗಳ ಪುಟ್ಟ ಪೋರಿ 215ಕ್ಕಿಂತಲೂ ಹೆಚ್ಚು ಚಟುವಟಿಕೆಗಳನ್ನು ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾಳೆ.

ಹಾಸನದ ನಾಗರನವಿಲೆಯಲ್ಲಿ ವಾಸವಿದ್ದ ರಾಹುಲ್‌ ಹಾಗೂ ರಮ್ಯಾ ದಂಪತಿಯ ಪುತ್ರಿ ರಾಮರಕ್ಷಾ ಎಂಬಾಕೆ 215ಕ್ಕಿಂತಲೂ ಹೆಚ್ಚು ವಿವಿಧ ಚಟುವಟಿಕೆಗಳನ್ನು ಮಾಡುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾಳೆ.

ರಾಹುಲ್‌ ಹಾಗೂ ರಮ್ಯಾ ದಂಪತಿ ಕೆಲಸದ ನಿಮಿತ್ತ ಕಾರವಾರದಲ್ಲಿದ್ದು, ಮಗಳ ಈ ಸಾಧನೆಯಿಂದ ಸಂತೋಷಗೊಂಡಿದ್ದಾರೆ.

1 ವರ್ಷ 8 ತಿಂಗಳ ವಯಸ್ಸಿನಲ್ಲಿ ಪುಟ್ಟ ಪೋರಿ ರಾಮರಕ್ಷಾ 200ಕ್ಕಿಂತಲೂ ಹೆಚ್ಚು ಚಟುವಟಿಕೆಗಳನ್ನು ಮಾಡುವ ಮೂಲಕ ಮಕ್ಕಳ ವಿಭಾಗದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾಳೆ.

100ಕ್ಕೂ ಫ್ಲಾಶ್ ಕಾರ್ಡ್‌ಗಳ ಗುರುತಿಸುವಿಕೆ ಜೊತೆಗೆ ದೇವರ ಹೆಸರುಗಳು, ದಶಾವತಾರ, ಮಂತ್ರ, ಶ್ಲೋಕಗಳು, ದೇವರವಾಹನಗಳನ್ನು ಹೇಳುತ್ತಾಳೆ.

ಜೊತೆಗೆ 25ಕ್ಕೂ ಹೆಚ್ಚು ತರಕಾರಿಗಳ ಹೆಸರು, 30ಕ್ಕೂ ಹೆಚ್ಚು ಹಣ್ಣುಗಳ ಹಾಗೂ ಪ್ರಾಣಿಗಳ ಹೆಸರನ್ನು ಹೇಳಲಿದ್ದು, ಜೊತೆಗೆ ಕನ್ನಡ ವರ್ಣಮಾಲೆ, ಎಲೆಕ್ಟ್ರಾನಿಕ್ ಸಾಧನಗಳು, ರಾಷ್ಟ್ರೀಯ ಧ್ವಜ, ಭಾರತೀಯ ಕರೆನ್ಸಿ, ಭಾರತದ ಸ್ಮಾರಕಗಳು, ವಿಜ್ಞಾನಿ ಹೆಸರುಗಳು, 10ಕ್ಕೂ ಹೆಚ್ಚು ಹೂವುಗಳ ಹೆಸರುಗಳು, ಗಣಿತ ಚಿಹ್ನೆಗಳು, 38ಕ್ಕೂ ದಿನಸಿ ವಸ್ತುಗಳು, ಒಣಹಣ್ಣುಗಳ ಹೆಸರನ್ನು ಹೇಳುತ್ತಾಳೆ.

ಜೊತೆಗೆ ಮಳೆಬಿಲ್ಲಿನ ಬಣ್ಣಗಳು, ಪಂಚಭೂತಗಳು, ನವಗ್ರಹಗಳು, ವಾರಗಳು, ತಿಂಗಳುಗಳು, ಗ್ರಹಗಳು, ಸಂಚಾರ ಸಂಕೇತಗಳು, ಮಾಯಾ ಪದಗಳು, ಆಹಾರದ ಹೆಸರುಗಳು, ವೈವಿಧ್ಯಮಯ ಪ್ರಾಣಿಗಳು ಮತ್ತು ಅದರ ಶಬ್ದ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ವಿರುದ್ಧಾರ್ಥಕ ಪದಗಳನ್ನು ಹೇಳಲಿದ್ದು, ಎಲ್ಲರನ್ನು ಅಚ್ಚರಿಗೊಳಿಸುತ್ತಿದ್ದಾಳೆ.

ಇವೆಲ್ಲದರ ಜೊತೆಗೆ ಆಟಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರುಗಳು, ಗ್ರಹಗಳು, ಸನ್ನೆಗಳು ಸೇರಿದಂತೆ ಅನೇಕ ಚಟುವಟಿಕೆ ಮಾಡಲಿದ್ದಾಳೆ.

ಇದೆಲ್ಲಾ ಸಾಧನೆ ಮಾಡಿದ ಪುಟ್ಟ ಪೋರಿ ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌, ವಲ್ಡ್‌ ರೆಕಾರ್ಡ್, ಸೂಪರ್‌ ಅಚೀವರ್‌ ಅವಾರ್ಡ್‌ 2025, ಕರ್ನಾಟಕ ಬುಕ್‌ ಆಫ್‌ ರೆಕಾರ್ಡ್‌ ಗೌರವಕ್ಕೆ ಪಾತ್ರರಾಗಿದ್ದಾಳೆ.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಬಂಡಾಯದ ಹೊಳೆ

ಬಂಡಾಯದ ಹೊಳೆ ಮಿಂಚು ಹೂಮಳೆ ! ಅತಿವೃಷ್ಟಿ,ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ, ಕಾರಣ,…

7 hours ago

ಓದುಗರ ಪತ್ರ: ಆತಂಕಕಾರಿ ವಿಚಾರ

ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ…

7 hours ago

ಓದುಗರ ಪತ್ರ: ಜ್ಞಾಪಿಸಿಕೊಳ್ಳಬೇಕಿತ್ತು, ಕೃತಜ್ಞತೆ ಹೇಳಬೇಕಿತ್ತು…

ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು…

7 hours ago

ಮನುಕುಲದ ಏರಿಳಿತಗಳಿಗೆ ಸಾಕ್ಷಿದಾರರಾದ ಈ ಪೀಳಿಗೆಗಳು

ಶುಭಾ ಖಟಾವಕರ ಮ್ಹೆತ್ರಸ್ ಹೊಸ ಇತಿಹಾಸ ಸೃಷ್ಟಿಸಿದ ‘ಜೆನ್ ಝೀ’ ಪೀಳಿಗೆ ಸಂಪ್ರದಾಯಗಳನ್ನು ಪ್ರಶ್ನಿಸಿದ ‘ಬೂಮರ್ಸ್’ ಯುವಜನ ೧೯೦೦ ರಿಂದ…

7 hours ago

ನನೆಗುದಿಗೆ ಬಿದ್ದ ರಾಜ್‌ಘಾಟ್ ಮಾದರಿ ಗಾಂಧಿ ಸ್ಮಾರಕ

ಪುನೀತ್ ೩ ವರ್ಷ ಕಳೆದರೂ ಮುಗಿಯದ ಕಾಮಗಾರಿ: ಶೀಘ್ರ ಪೂರ್ಣಗೊಳಿಸಲು ಒತ್ತಾಯ ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದ…

7 hours ago

ಅನಿಲ್ ಚಿಕ್ಕಮಾದುಗೆ ಕೈತಪ್ಪಿದ ಸಚಿವ ಸ್ಥಾನ; ಕ್ಷೇತ್ರದ ಜನರಿಗೆ ನಿರಾಸೆ

ಮಂಜು ಕೋಟೆ ಕೋಟೆ: ಸಚಿವ ಸ್ಥಾನ ದೊರೆತಿದ್ದರೆ ಹಿಂದುಳಿದ ಕ್ಷೇತ್ರದ ಅಭಿವೃದ್ಧಿಯಾಗುತ್ತಿತ್ತು ಎಂಬ ನಿರೀಕ್ಷೆ ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ…

8 hours ago