ಮೈಸೂರು: ನಗರದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫ್ರೆಸೆನಿಯಸ್ ವೈದ್ಯಕೀಯ ಆರೈಕೆ ಡಯಾಲಿಸಿಸ್ ಯಂತ್ರವನ್ನು ಅಳವಡಿಸುವ ಮೂಲಕ ಡಯಾಲಿಸಿಸ್ ಸೇವೆಯನ್ನು ಉನ್ನತೀಕರಿಸಿದೆ.
ಫ್ರೆಸೆನಿಯಸ್ ವೈದ್ಯಕೀಯ ಆರೈಕೆ ಡಯಾಲಿಸಿಸ್ ಯಂತ್ರವು ವಿಶ್ವದ ಅತ್ಯಂತ ವಿಶ್ವಾಸಾರ್ಹ ಡಯಾಲಿಸಿಸ್ ಯಂತ್ರವಾಗಿದ್ದು, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೆಫ್ರಾಲಜಿ ವಿಭಾಗಕ್ಕೆ ಈ ೫ ಯಂತ್ರಗಳ ಸೇರ್ಪಡೆಯು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಸುರಕ್ಷತೆಯಲ್ಲಿ ನಿರಂತರ ಸುಧಾರಣೆಯ ಹಾದಿಗೆ ಸಾಕ್ಷಿಯಾಗಿದೆ.
ತೀವ್ರ ನಿಗಾ ಘಟಕದಲ್ಲಿ ಮೂತ್ರಪಿಂಡ ವೈಫಲ್ಯದ ರೋಗಿಗಳಿಗೆ ನೀಡುವ ಡಾಂಲಿಸಿಸ್ ಚಿಕಿತ್ಸೆಯಲ್ಲಿ ಸಸ್ಟ್ತ್ಯೆನ್ಡ್ ಲೊ-ಎಫಿಷಿಯನ್ಸಿ ಡಯಾಲಿಸಿಸ್ ಜನಪ್ರಿಯವಾಗುತ್ತಿರುವ ಚಿಕಿತ್ಸ ವಿಧಾನವಾಗಿದೆ. ಸಸ್ಟ್ತ್ಯೆನ್ಡ್ ಲೊ-ಎಫಿಷಿಯನ್ಸಿ ಡಯಾಲಿಸಿಸ್ ಸಾಂಪ್ರದಾಯಿಕ ಇಂಟರ್ಮಿಟೆಂಟ್ ಹಿಮೋ ಡಯಾಲಿಸಿಸ್ ಮತ್ತು ಕಂಟಿನ್ಯೂಸ್ ರೆನಲ್ ರಿಪ್ಲೇಸೆಮೆಂಟ್ ಥೆರಪಿ ನಡುವಿನ ಮಧ್ಯಂತರ ಹೈಬ್ರಿಡ್ ಡಯಾಲಿಸಿಸ್ ವಿಧಾನವಾಗಿದೆ.
ಸ್ಲೆಡ್ ಚಿಕಿತ್ಸಾ ವಿಧಾನದ ಪ್ರಯೋಜನಗಳೆಂದರೆ ಸಣ್ಣ ದ್ರಾವಣಗಳ ಸಮರ್ಥ ತೆರವು, ಉತ್ತಮ ಹಿಮೋಡೈನಾಮಿಕ್ ಸಹಿಷ್ಣುತೆ. ರೋಗಿಗಳಿಗೆ ಸುಲಭವಾಗಿ ಹೊಂದಿಕೊಳ್ಳುವ ಈ ವಿಧಾನದಿಂದ ರೋಗಿಗಳು ಆಸ್ಪತ್ರೆಯಲ್ಲಿ ಕಳೆಯಬೇಕಾದ ಸಾಮ್ಯ ಹಾಗೂ ಚಿಕಿತ್ಸೆಗೆ ತಗಲುವ ವೆಚ್ಚ ಎರಡೂ ಕಡಿಮೆಯಾಗಲಿವೆ.
ಉಚಿತ ಸಾರಿಗೆ ಸೌಲಭ್ಯ: ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳಿಗೆ ಉಚಿತ ಸಾರಿಗೆ ಸೇವೆಗಳನ್ನು ಒದಗಿಸುತ್ತಿದೆ. ಈ ಉಚಿತ ಸೇವೆಯು ತುಂಬಾ ಉಪಯುಕ್ತ ವಾಗಿದೆ. ಏಕೆಂದರೆ ಡಯಾಲಿಸಿಸ್ಗೆ ಒಳಗಾಗುವ ರೋಗಿಗಳು ದುರ್ಬಲರಾಗುತ್ತಾರೆ ಮತ್ತು ಕಾರ್ಯ ವಿಧಾನದ ನಂತರ ಸ್ನಾಯು ಸೆಳೆತ, ಬಿಪಿ ಏರಿಳಿತಗಳು ಮತ್ತು ಮುಂತಾದವುಗಳನ್ನು ಅನುಭವಿಸುತ್ತಾರೆ. ಸಾರಿಗೆಯನ್ನು ಹುಡುಕುವ ಯಾವುದೇ ಒತ್ತಡವಿಲ್ಲದೆ ರೋಗಿಗಳು ಮನೆಗೆ ತೆರಳಿ ಚೇತರಿಸಿಕೊಳ್ಳಬಹುದಾಗಿದೆ. ಡಯಾಲಿಸಿಸ್ ರೋಗಿಗಳು ಸಹಾಯವಾಣಿ ಸಂಖ್ಯೆ: 8884458893 ಕರೆ ಮಾಡುವ ಮೂಲಕ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ…
ಬೆಂಗಳೂರು : ಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ನ ಐವರು ಮತ್ತು ಬಿಜೆಪಿಯ ಎರಡು…
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಜಯ ಸಾಧಿಸಿದ್ದಾರೆ. ಅಡ್ಡಮತದ ಪರಿಣಾಮ ಮೈತ್ರಿ ಅಭ್ಯರ್ಥಿ…
ಹೊಸದಿಲ್ಲಿ : 2025-26ನೇ ಆರ್ಥಿಕ ಸಾಲಿನಡಿ ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ ಶೇ.8.25ರಷ್ಟಿ ಬಡ್ಡಿದರ ನೀಡಲು ಕೇಂದ್ರ ಸರ್ಕಾರವು ಒಪ್ಪಿಗೆ…
ಚಾಮರಾಜನಗರ : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಚ್.ಆರ್.ಸುರೇಶ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ…
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮ ರಾಜ್ಯದಲ್ಲಿ ಏಳು ದಿನ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…