ಮಳೆಯಿಂದ ತೇವಾಂಶ ಹೆಚ್ಚಾಗಿ ನೀರುಪಾಲಾಗುತ್ತಿರುವ ಭತ್ತ: ಗುಣಮಟ್ಟ ಕಳೆದುಕೊಳ್ಳುತ್ತಿರುವ ಕಾಫಿ ಬೆಳೆ
ಸೋಮವಾರಪೇಟೆ: ತಾಲೂಕಿನದ್ಯಂತ ಅಕಾಲಿಕ ಮಳೆ, ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಮಳೆಯಿಂದ ಭತ್ತ ಹಾಗೂ ಕಾಫಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದರೆ.
ಅಕಾಲಿಕ ಮಳೆಯು ಭತ್ತದ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಕೊಯ್ಲು ಮಾಡಿದ ಭತ್ತವನ್ನು ಮನೆ ತುಂಬಿಸಿಕೊಳ್ಳಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗದ್ದೆಗಳಲ್ಲಿ ಕೊಯ್ಲು ಮಾಡಿದ ಫಸಲನ್ನು ಹಾಗೆಯೇ ಬಿಟ್ಟಿದ್ದು, ಮಳೆಯಿಂದ ತೇವಾಂಶ ಹೆಚ್ಚಾಗಿ ಭತ್ತ ಮಣ್ಣು ಪಾಲಾಗುತ್ತಿದೆ. ತಾಲೂಕಿನ ಶಾಂತಲ್ಲಿ ಹಾಗು ಸೋಮವಾರಪೇಟೆ ಕಸಬಾ ಹೋಬಳ್ಳಿ ವ್ಯಾಪ್ತಿಯಲ್ಲಿ ಈಗಾಗಲೇ ಕೆಲ ರೈತರು ಭತ್ತ ಕಟಾವು ಮಾಡಿದ್ದು ಅಕಾಲಿಕ ಮಳೆಗೆ ಸಿಲುಕಿಕೊಂಡಿದ್ದಾರೆ. ಒಂದೆಡೆ ಕಾಡು ಪ್ರಾಣಿಗಳ ಹಾವಳಿ ಇನ್ನೊಂದೆಡೆ ಮಳೆಯಾದರೆ ಇದು ರೈತರಲ್ಲಿ ಚಿಂತೆಗೆಡು ಮಾಡಿದೆ.
ಭತ್ತ ಹಾಗೂ ಕಾಫಿ ಎರಡು ಕೃಷಿಯು ಒಂದೇ ಬಾರಿ ಕೂಯ್ಲಿಗೆ ಬಂದಿದ್ದು ರೈತರು ಆತಂಕ ಪಡಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಕೊಯ್ಲು ಮಾಡಿದ ಹಣ್ಣನ್ನು ಪಲ್ಟಿಂಗ್ ಮಾಡಿಸಿ ಮನೆಯ ಅಂಗಳ ಕಣದಲ್ಲಿ ಹಾಕಲಾಗಿದೆ. ಅಲ್ಲಿಯೂ ಕಾಫಿ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಪಾರ್ಚ್ಮೆಂಟ್ ಕಾಫಿ ಒಣಗಿಸಲು ಹಲವು ದಿನಗಳ ಬೇಕು. ಆದರೆ, ಕಳೆದ ಒಂದು ವಾರದಿಂದ ಮೋಡದ ವಾತಾವರಣ ಮುಂದುವರಿದಿದ್ದು, ಕಾಫಿ ಬೀಜ ಬಣ್ಣ ಹಾಗೂ ಗುಣಮಟ್ಟ ಕಳೆದುಕೊಳ್ಳುತ್ತಿರುವುದರಿಂದ ಬೆಳೆಗಾರರು ದೊಡ್ಡಮಟ್ಟದ ನ? ಅನುಭವಿಸುವಂತಾಗಿದೆ.
ಕಳೆದ ವ? ಅರೇಬಿಕಾ ಕಾಫಿಗೆ ಉತ್ತಮ ಬೆಲೆ ಸಿಕ್ಕಿತ್ತು. ೫೦ ಕೆ.ಜಿ. ತೂಕದ ಅರೇಬಿಕಾ ಪಾರ್ಚ್ಮೆಂಟ್ಗೆ ೧೫ ರಿಂದ ೧೬ ಸಾವಿರ ಹಾಗೂ ಅರೇಬಿಕಾ ಚೆರಿಗೆ ೫ರಿಂದ ೭ಸಾವಿರ ಸಿಕ್ಕಿತ್ತು. ಇದ್ದಕ್ಕಿದ್ದಂತೆ ತೋಟಗಳಲ್ಲಿ ಬಿಳಿಕಾಂಡಕೊರಕ ಕೀಟ ಬಾಧೆ ಹೆಚ್ಚಾಗಿ ಆರೇಬಿಕಾ ತೋಟದಲ್ಲಿ ಗಿಡಗಳು ಕಾಣೆಯಾಗುತ್ತಿದ್ದು, ಉಳಿದಿರುವ ಆರೇಬಿಕಾ ಕಾಫಿ ಆಕಾಲಿಕ ಮಳೆಯಿಂದಾಗಿ ಬೆಳೆಗಾರರ ಕೈ ಸೇರುತ್ತಿಲ್ಲ.
ಸೋಮವಾರಪೇಟೆ ವ್ಯಾಪ್ತಿಯಲ್ಲಿ ಹೆಚ್ಚು ಅರೇಬಿಕಾ ಬೆಳೆಗಾರರಿದ್ದರೂ ಕಾಫಿ ಬೀಜಗಳನ್ನು ವೈಜ್ಞಾನಿವಾಗಿ ಒಣಗಿಸುವ ಘಟಕಗಳು ಇಲ್ಲ. ಒಂದಿಬ್ಬರು ಮಾತ್ರ ಡ್ರೈಯಿಂಗ್ ಯಾರ್ಡ್ಗಳನ್ನು ನಿರ್ಮಿಸಿಕೊಂಡಿದ್ದು, ಅವರ ತೋಟದ ಕಾಫಿಗೆ ವರದಾನವಾಗಿದೆ. ಸೋಮವಾರಪೇಟೆಯ ಕನಿ? ನಾಲೈದು ಭಾಗಗಳಲ್ಲಿ ಕಾಫಿ ಒಣಗಿಸುವ ಡ್ರೈಯಿಂಗ್ ಯಾರ್ಡ್ ನಿರ್ಮಿಸಿದಲ್ಲಿ ಕೃಷಿಕರಿಗೆ ಅನುಕೂಲವಾಗಲಿದೆ.
ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಿರುವ ಕುರಿತು ಪರಿಶೀಲಿಸುತ್ತಿರುವ ಅಧಿಕಾರಿಗಳು ಎಚ್.ಡಿ.ಕೋಟೆ : ಕಬಿನಿ ಜಲಾಶಯದ ಹಿನ್ನೀರು ಮತ್ತು ನಾಗರಹೊಳೆ, ಬಂಡೀಪುರ…
ಅಸ್ಪೃಶ್ಯರನ್ನು ಅವರ ನೋವುಗಳಿಂದ ಮುಕ್ತಗೊಳಿಸಲು ಶ್ರಮಿಸಿದ ಮಹಾತ್ಮ ಯಾವುದೇ ಸಮಸ್ಯೆಗೆ ಆಯುಧಗಳು ಮಾತ್ರ ಉತ್ತರವಲ್ಲ ಎಂದು ಮಹಾತ್ಮ ಗಾಂಧಿ ಯಾವಾಗಲೂ…
ಮೈಸೂರು : ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ಇರುವೆ ಕಚ್ಚಿ ನವಜಾತ ಶಿಶು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಸಿಯುನ ಉಸ್ತುವಾರಿ ವೈದ್ಯರು…
ನನ್ನ ಮದುವೆ, ನನ್ನ ಹದಿಮೂರನೆಯ ವಯಸ್ಸಿನಲ್ಲಿ ನಡೆಯಿತೆಂಬುದನ್ನು ನಾನು ವ್ಯಥೆಯಿಂದ ಇಲ್ಲಿ ಬರೆಯಬೇಕಾಗಿದೆ. ನಾನು ಮಾತಾಪಿತೃ ನಿಷ್ಠೆಯಿಂದ ಕೂಡಿದ್ದೆ. ಆದರೆ…
ಗಾಂಧಿ ಮಹಾತ್ಮನ ಆತ್ಮಕಥೆಗೆ ಶತಮಾನೋತ್ಸವದ ಸಂದರ್ಭದಲ್ಲಿ ಆಂದೋಲನ ದಿನಪತ್ರಿಕೆಯ ಗಾಂಧಿ ಅಭಿಯಾನ ಆಲ್ಬರ್ಟ್ ಐನ್ಸ್ಟೀನ್ ಗಾಂಧೀಜಿಯವರನ್ನು ಕುರಿತು ಬರೆಯುತ್ತಾ, ‘ಗಾಂಧಿ…
ಮಂಡ್ಯ : ಇತ್ತೀಚೆಗೆ ಕೆ.ಆರ್.ಪೇಟೆ ಪಟ್ಟಣದ ಎರಡು ಖಾಸಗಿ ಡಯಾಗ್ನಾಸ್ಟಿಕ್ (ಸ್ಕ್ಯಾನಿಂಗ್) ಸೆಂಟರ್ಗಳಲ್ಲಿ ಕಾನೂನುಬಾಹಿರವಾಗಿ ಭ್ರೂಣಲಿಂಗ ಪತ್ತೆ ಮಾಡುತ್ತಿರುವುದನ್ನು ಲೋಕಾಯುಕ್ತ…