ಜಿಲ್ಲೆಗಳು

ಶೀಘ್ರ ದೇವನೂರು ಕೆರೆ ಅಭಿವೃದ್ಧಿ ಕಾರ್ಯ ಶುರು

ಅಂತಿಮ  ಹಂತದಲ್ಲಿ ತಾಂತ್ರಿಕ ಬಿಡ್‌ ಗೆ ಅನುಮೋದನೆ ; ಮೂವರ ತಂಡದಿಂದ ಸರ್ವೇ 

ದೇವನೂರು ಕೆರೆ ಅಭಿವೃದ್ಧಿ ಕುರಿತಂತೆ ಆಂದೋಲನ ದಿನಪತ್ರಿಕೆ ಮಾ.೨೨ರಿಂದ ೧೦ ದಿನಗಳ ಕಾಲ ಅಭಿಯಾನ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು

ಮೈಸೂರು: ಅವಸಾನದ ಅಂಚಿಗೆ ತಲುಪಿರುವ ದೇವನೂರು ಕೆರೆಗೆ ಕಾಯಕಲ್ಪ ನೀಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಮುಂದಾಗಿದ್ದು, ಮುಂದಿನ ೨೦ ದಿನಗಳಲ್ಲಿ ದೇವನೂರು ಕೆರೆ ಸಮಗ್ರ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ.

೨೦೨೨-೨೩ನೇ ಸಾಲಿನ ಮುಡಾ ಆಯವ್ಯಯದಲ್ಲಿ ದೇವನೂರು ಕೆರೆ ಅಭಿವೃದ್ಧಿಗೆ ಐದು ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಅದರಂತೆ, ಆರ್ಥಿಕ ಅನುಮತಿ ದೊರೆತು ತಾಂತ್ರಿಕ ಬಿಡ್‌ಗೆ ಜಿಲ್ಲಾಧಿಕಾರಿಯವರ ಅನುಮೋದನೆಗೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿ ಅವರಿಂದ ಒಪ್ಪಿಗೆ ದೊರೆಯುತ್ತಿದ್ದಂತೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ತೀರ್ಮಾನಿಸಿರುವುದರಿಂದ ಜನರ ಬಹು ದಿನಗಳ ಬೇಡಿಕೆ ಈಡೇರುವ ದಿನಗಳು ಸಮೀಪಿಸುತ್ತಿದೆ.

ಸರ್ವೇ ಕಾರ್ಯ: ದೇವನೂರು ಕೆರೆಯು ೧೨.೩೭ ಎಕರೆ ವಿಸ್ತೀರ್ಣಹೊಂದಿದ್ದು, ಕೆರೆಯ ಎಡ ಮತ್ತು ಬಲ ಭಾಗದಲ್ಲಿ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಹಾಗಾಗಿ, ಮುಡಾ ಸರ್ವೇಯರ್ ಕಾವೇರಿ ಗೌಡ, ರವಿ, ಮಧುಸೂದನ್ ಎಂಬವರು ಮಂಗಳವಾರದಿಂದ ಸರ್ವೇ ಕಾರ್ಯ ಆರಂಭಿಸಿದರು. ಕೆರೆಯ ಸುತ್ತಲೂ ಸರ್ವೇ ಮಾಡಿ ಬೌಂಡರಿ ನಿಗದಿಪಡಿಸುವ ಜತೆಗೆ ತಂತಿಬೇಲಿಯನ್ನು ಹಾಕಲಾಗುತ್ತದೆ. ಕೆರೆ ಅಂಗಳ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮನೆಗಳ ಪಟ್ಟಿಯನ್ನು ಮಾಡಿದ ಮೇಲೆ ತೆರವುಗೊಳಿಸಲು ನೋಟಿಸ್ ನೀಡಲಾಗುತ್ತದೆ. ನಗರಪಾಲಿಕೆ ವತಿಯಿಂದ ಖಾತೆ ಮಾಡಿಕೊಟ್ಟಿರುವುದರಲ್ಲದೆ, ವಿದ್ಯುತ್, ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಹಾಗಾಗಿ, ಮುಡಾದಿಂದ ಶೋಕಾಸ್ ನೋಟಿಸ್ ನೀಡಿದ ಮೇಲೆ ತೆರವು ಕಾರ್ಯಾಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಹೇಳಿದರು.

ಮುಡಾದಿಂದ ಒಂದು ಬಾರಿ ಸರ್ವೇ ನಡೆಸಿದ ನಂತರ ಸ.ನಂ. ೧೨೪, ೧೨೫, ೧೦೮ ಮತ್ತು ೧೦೯ರ ಪೈಕಿ ಅನಧಿಕೃತವಾಗಿ ೩ ಖಾಸಗಿ ಬಡಾವಣೆಗಳು ತಲೆ ಎತ್ತಿರುವುದಲ್ಲದೆ, ೨೧ ಮನೆಗಳು ತಲೆ ಎತ್ತಿವೆ. ಇವುಗಳನ್ನು ತೆರವುಗೊಳಿಸುವುದಕ್ಕೆ ಬೇಕಾದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಎಸ್‌ಟಿಪಿ ಪ್ಲಾಂಟ್: ಕೆರೆ ಅಭಿವೃದ್ಧಿಪಡಿಸುವ ಜೊತೆಗೆ ಕಲುಷಿತ ನೀರು ಸಂಸ್ಕರಿಸಿ ಮಳೆ ನೀರು ಚರಂಡಿ ನೀರಿನೊಂದಿಗೆ ಹೋಗಲು ಎಸ್‌ಟಿಪಿ ಪ್ಲಾಂಟ್ ಅಳವಡಿಸಲಾಗುತ್ತದೆ. ಕೆರೆಯಲ್ಲಿ ಬೆಳೆದಿರುವ ಗಿಡಗಳು, ಬಂಡ್‌ಗಳನ್ನು ಕ್ಲೀನ್ ಮಾಡಿ ಶುದ್ಧ ನೀರು ನಿಲ್ಲುವಂತೆ ಮಾಡಲಾಗುತ್ತದೆ. ಮೇಲ್ಭಾಗದಿಂದ ಹರಿದು ಬರುವ ಚರಂಡಿ ನೀರು ಮತ್ತೊಂದು ಮಾರ್ಗದ ಮೂಲಕ ಹೋಗಲು ಪ್ರತ್ಯೇಕವಾಗಿ ಪೈಪ್‌ಲೇನ್ ಹಾಕುವುದಕ್ಕೆ ವಿನ್ಯಾಸ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

andolanait

Recent Posts

ಓದುಗರ ಪತ್ರ: ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಪ್ರಶ್ನಾರ್ಹ

ಇತ್ತೀಚೆಗೆ ರಾಜ್ಯಸಭಾ ಸದಸ್ಯ, ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಉತ್ತರಾಖಂಡ್ ರಾಜ್ಯದ ಹಲ್ ದ್ವಾನಿಯ ರಾಮಲೀಲಾ…

2 hours ago

ಓದುಗರ ಪತ್ರ: ಎನ್‌ಕೌಂಟರ್ ನಿಗೂಢತೆ?

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಮೃತಪಟ್ಟಿರುವ ಪ್ರಕರಣ ಹಲವಾರು…

2 hours ago

ಓದುಗರ ಪತ್ರ: ಜಂಬೂಸವಾರಿಯ ಹೊಸ ಸಾರಥಿ ಯಾರು?

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ೭೫೦ ಕೆಜಿ ತೂಕದ ಅಂಬಾರಿ ಹೊತ್ತು ಸಾಗುತ್ತಿದ್ದ ಅಭಿಮನ್ಯು ಆನೆ ಇನ್ನುಮುಂದೆ ಬರುವುದಿಲ್ಲ…

2 hours ago

ಧ್ವನಿಹೀನರಿಗೆ ಧ್ವನಿಯಾಗಿದ್ದ ದೇವರಾಜ ಅರಸು

ಎಚ್.ಹಾಲಪ್ಪ ಇಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿ ದೇಶದಲ್ಲಿ ಜನಪ್ರತಿನಿಧಿಗಳ ಸಂಖ್ಯೆ ಸಾವಿರಾರು. ಆದರೆ, ಕಾಲದ ಪರೀಕ್ಷೆಯಲ್ಲಿ ಮುತ್ಸದ್ದಿ…

2 hours ago

ನೀರಿಲ್ಲದಿದ್ದರೂ ಭರ್ತಿಯಾಗುತ್ತಿದೆ ಕಸುವಿನಹಳ್ಳಿ ಕೆರೆ!

ಎಸ್.ಎಸ್.ಭಟ್ ಸುತ್ತಲಿನ ಕ್ರಷರ್‌ನಿಂದ ತಂದು ಹಾಕುತ್ತಿರುವ ರಾಶಿ ದೂಳಿನಿಂದ ತುಂಬುತ್ತಿದೆ ಕೆರೆ; ಗ್ರಾಮಸ್ಥರ ಆಕ್ರೋಶ ನಂಜನಗೂಡು: ಮಳೆ ಬಂದರೆ ನೀರಿನಿಂದ…

2 hours ago