ಜಿಲ್ಲೆಗಳು

ಚುಡಾದ 20 ವರ್ಷಗಳ ಮಾಸ್ಟರ್ ಪ್ಲಾನ್ ಸಿದ್ಧ!

ತಾತ್ಕಾಲಿಕ ಒಪ್ಪಿಗೆ ದೊರೆಕಿದ್ದು ಅಂತಿಮ ಅನುಮೋದನೆ ಬಾಕಿ

ರಾಜೇಶ್ ಬೆಂಡರವಾಡಿ

ಚಾಮರಾಜನಗರ: ಬೆಳೆಯುತ್ತಿರುವ ಚಾಮರಾಜನಗರದ ಮುಂದಿನ ೨೦ವರ್ಷಗಳ ಬೆಳವಣಿಗೆ ದೃಷ್ಟಿಯಲ್ಲಿರಿಸಿಕೊಂಡು  ಚುಡಾ ಸಿದ್ಧಪಡಿಸಿರುವ ಮಾಸ್ಟರ್ ಪ್ಲಾನ್ (ಪರಿಷ್ಕೃತ -೨)ಕರಡು ಪ್ರತಿಗೆ ಅನುಮೋದನೆ ದೊರಕಿದ್ದು ಅಂತಿಮ ಅನುಮೋದನೆಗಾಗಿ ಸರ್ಕಾರಕ್ಕೆ ಕಳಿಸುವುದಷ್ಟೇ ಬಾಕಿ ಇದೆ.
ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರ(ಚುಡಾ) ವ್ಯಾಪ್ತಿ ೧೨೦.೯೯ ಚದರ ಕಿಲೋಮೀಟರ್ ಇದೆ. ಚಾಮರಾಜನಗರ ನಗರಸಭೆಯು ೩೧ ವಾರ್ಡುಗಳಲ್ಲದೆ ನಗರ ಸುತ್ತಮುತ್ತಲಿನ ೨೬ ಗ್ರಾಮಗಳೂ ಇದರಲ್ಲಿ ಸೇರಿವೆ.
ಕೂಡ್ಲೂರು, ಬೂದಿತಿಟ್ಟು, ಶಿವಪುರ, ಕೋಡಿಮೋಳೆ, ಚಂದಕವಾಡಿ, ಬಸವನಪುರ, ಬಂಡಿಗೆರೆ, ದೊಡ್ಡಮೋಳೆ ಇನ್ನಿತರ ಗ್ರಾಮಗಳು ಚುಡಾದ ಕರಡು ನಕ್ಷೆಯಲ್ಲಿದ್ದು, ಈ ಎಲ್ಲಾ ಕಡೆಯ ಬೆಳವಣಿಗೆಯನ್ನು ಮಹಾಯೋಜನೆಯಲ್ಲಿ (ಮಾಸ್ಟರ್ ಪ್ಲಾನ್‌ನಲ್ಲಿ) ದಾಖಲಿಸಲಾಗಿದೆ.
ವಸತಿ, ಉದ್ಯಾನವನ, ವಾಣಿಜ್ಯ, ಕೈಗಾರಿಕೆ, ವ್ಯವಸಾಯ, ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ ವಲಯ-ಹೀಗೆ ವಿವಿಧ ಪ್ರಕಾರಗಳ ಅನುಸಾರ ಭೂಮಿಯನ್ನು ವಿಂಗಡಿಸಲಾಗಿದೆ. ಮುಂದಿನ ೨೦೪೧ನೇ ಇಸವಿಯ ೨.೫೦ ಲಕ್ಷ ಜನಸಂಖ್ಯೆಯನ್ನು ಆಧರಿಸಿ ಸಿದ್ಧಪಡಿಸಿರುವ ಈ ಮಾಸ್ಟರ್ ಪ್ಲಾನ್‌ಗೆ ಕಳೆದ ಮಾರ್ಚ್ ನಲ್ಲಿಯೇ ಸರ್ಕಾರ ತಾತ್ಕಾಲಿಕ ಅನುಮೋದನೆ ನೀಡಿದೆ.
ಕರಡು ಅನುಮೋದನೆ ಬಳಿಕ ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಕ್ಕೆ ೬೦ದಿನಗಳ ಕಾಲಾವಕಾಶ ನೀಡಲಾಗಿತ್ತು. ಅದರಂತೆ ಆಕ್ಷೇಪಗಳು-ಸಲಹೆಗಳನ್ನು ಪಡೆಯಲಾಗಿದೆ. ಕೆಲವೊಂದು ಸಲಹೆಗಳನ್ನು ಅಳವಡಿಸಿಕೊಂಡು ಅಂತಿಮ ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರಿಗೆ ಸಲ್ಲಿಸಲು ಪ್ರತಿ ಸಿದ್ಧವಾಗಿದೆ.
ಕುಲಗಾಣ ಶಾಂತಮೂರ್ತಿ ಅವರ ನಂತರ ಚುಡಾಕ್ಕೆ ಯಾರನ್ನೂ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಅವರೇ ಅಧ್ಯಕ್ಷರಾಗಿದ್ದು ಅವರಿಂದ ಸಹಿಪಡೆದು ಅಂತಿಮ ಒಪ್ಪಿಗೆಗಾಗಿ ಸರ್ಕಾರಕ್ಕೆ ಕಳುಹಿಸಬೇಕಿದೆ.
ಮೂಲಗಳ ಪ್ರಕಾರ ಈ ತಿಂಗಳ ಒಳಗೆ ಸರ್ಕಾರ ಕ್ಕೆ ಸಲ್ಲಿಕೆಯಾಗಲಿದ್ದು ಅಲ್ಲಿ ಅನುಮೋದನೆ ದೊರೆತ ನಂತರ ಹೊಸ ಮಹಾಯೋಜನೆ(ಪರಿಷ್ಕೃತ೨) ಅನುಷ್ಠಾನಕ್ಕೆ ಬರಲಿದೆ. ಚಾ.ನಗರ ನಗರಸಭೆ ಮಾದರಿಯಲ್ಲೇ ಸುತ್ತಮುತ್ತಲಿನ ೨೬ಗ್ರಾಮಗಳವರು ಕಟ್ಟಡಗಳ ನಿರ್ಮಾಣ ಭೂ ಪರಿವರ್ತನೆ, ಇಷ್ಟೇ ಎತ್ತರದಲ್ಲಿ ಕಟ್ಟಡ ಕಟ್ಟಬೇಕೆಂಬ ನಿಯಮಗಳಿಗೆ ಮಹಾಯೋಜನೆ-೧ಜಾರಿಗೊಂಡಾಗಲೇ ಒಳಪಟ್ಟಿದ್ದಾರೆ. ಆದರೆ ಆಸ್ತಿ ತೆರಿಗೆ, ಕುಡಿಯುವ ನೀರು ಇನ್ನಿತರ ಮೂಲಸೌಕರ್ಯ ವ್ಯವಹಾರಗಳೆಲ್ಲಾ ಎಂದಿನಂತೆ ಗ್ರಾಪಂಗಳಲ್ಲೇ ಮುಂದುವರಿದಿದೆ.
ಚುಡಾ ೧೯೯೮ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಆಗ ಚಾಮರಾಜನಗರ ನಗರಸಭೆ ಜೊತೆ ಕೆಲ ಗ್ರಾಮಗಳಷ್ಟೇ ಭಾಗಶಃ ಒಳಪಟ್ಟಿದ್ದವು. ೨೦೦೭ರಲ್ಲಿ ಮಹಾಯೋಜನೆ-೧ ರ ಪರಿಷ್ಕರಣೆ ನಡೆದಿತ್ತು.


ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರ(ಚುಡಾ) ಮಾಸ್ಟರ್ ಪ್ಲಾನ್-೨ಗೆ ಈಗಾಗಲೇ ತಾತ್ಕಾಲಿಕ ಅನುಮೋದನೆ ದೊರಕಿದೆ. ಅಂತಿಮ ಅನುಮೋದನೆ ದೊರಕಬೇಕಿದೆ.
-ಎಂ.ಎಸ್.ಪಂಕಜಾ, ಆಯುಕ್ತರು, ಚುಡಾ.


ಅನುಷ್ಠಾನ ನಿಶ್ಚಿತ
ಸರ್ಕಾರ ಈಗಾಗಲೇ ತಾತ್ಕಾಲಿಕ ಅನುಮೋದನೆ ನೀಡಿರುವುದರಿಂದ ಪರಿಷ್ಕೃತ ಕರಡು-೨ಗೆ ಅನುಮೋದನೆ ದೊರಕಿ ಅದು ಅನುಷ್ಠಾನಗೊಳ್ಳುವುದು ನಿಶ್ಚಿತ ಎಂದು ಚಾ.ನಗರ ನಗರಾಭಿವೃಧ್ಧಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

andolanait

Recent Posts

ಪಾಕ್‌ನಿಂದ ಆಫ್ಗಾನಿಸ್ತಾನದ ಮೇಲೆ ವಾಯು ದಾಳಿ ; 13 ಮಂದಿ ಸಾವು; 14 ಮಂದಿಗೆ ಗಾಯ

ಕಾಬೂಲ್ : ಪಾಕಿಸ್ತಾನವು ಬುಧವಾರ ನಡೆಸಿದ ಹೊಸ ವಾಯುದಾಳಿಗಳಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನ ತಿಳಿಸಿದೆ. ಪಾಕ್…

2 hours ago

ಭಾರತಿರಾಜ್‌ ಅಂತಿಮ ದರ್ಶನ ಪಡೆದ ರಜನಿ, ಕಮಲ್‌, ಸಿ.ಎಂ.ವಿಜಯ್‌

ಚೆನ್ನೈ : ತಮಿಳಿನ ಖ್ಯಾತ ನಿರ್ದೇಶಕ, ಪದ್ಮಶ್ರೀ ಭಾರತಿರಾಜ್ ನಿಧನಕ್ಕೆ ಹೆಸರಾಂತ ನಟರು ಕಂಬನಿ ಮಿಡಿದಿದ್ದಾರೆ. ಅವರ ಅಂತಿಮ ದರ್ಶನಕ್ಕೆ…

4 hours ago

ಎಚ್.ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನಕ್ಕೆ ದಲಿತ ಸಂಘಟನೆಗಳ ಆಗ್ರಹ

ವರುಣ : ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡಬೇಕು ಎಂದು ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಲಿತ ಸಂಘಟನೆಗಳ…

5 hours ago

ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಬಿಟ್ಟು ಬೇರೇನೂ ಮಾಡಲಿಲ್ಲ ಸಿದ್ದರಾಮಯ್ಯ: ಟೀಕೆ

ಮೈಸೂರು : ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಕೇಂದ್ರ ಸರ್ಕಾರದೊಂದಿಗೆ ಸೌಹಾರ್ದದಿಂದ ಸಂಪರ್ಕ ಸಾಧಿಸಿ ರಾಜ್ಯದ ಅಭಿವೃದ್ಧಿ…

5 hours ago

ರಾಜ್ಯಸಭಾ ಸ್ಥಾನ ಕೇಳಿಲ್ಲ, ಚರ್ಚೆಯೂ ನಡೆಸಿಲ್ಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು: ರಾಜ್ಯಸಭಾ ಸ್ಥಾನಕ್ಕೆ ಟಿಕೆಟ್‌ ತಪ್ಪಿದೆ ಎಂಬ ಕಾರಣದಿಂದ ನನ್ನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸಂಬಂಧ…

8 hours ago

ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ನಿಧನ

ಚೆನ್ನೈ: ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ಇಂದು ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕೆಲ…

11 hours ago