ಜಿಲ್ಲೆಗಳು

ಚುಡಾದ 20 ವರ್ಷಗಳ ಮಾಸ್ಟರ್ ಪ್ಲಾನ್ ಸಿದ್ಧ!

ತಾತ್ಕಾಲಿಕ ಒಪ್ಪಿಗೆ ದೊರೆಕಿದ್ದು ಅಂತಿಮ ಅನುಮೋದನೆ ಬಾಕಿ

ರಾಜೇಶ್ ಬೆಂಡರವಾಡಿ

ಚಾಮರಾಜನಗರ: ಬೆಳೆಯುತ್ತಿರುವ ಚಾಮರಾಜನಗರದ ಮುಂದಿನ ೨೦ವರ್ಷಗಳ ಬೆಳವಣಿಗೆ ದೃಷ್ಟಿಯಲ್ಲಿರಿಸಿಕೊಂಡು  ಚುಡಾ ಸಿದ್ಧಪಡಿಸಿರುವ ಮಾಸ್ಟರ್ ಪ್ಲಾನ್ (ಪರಿಷ್ಕೃತ -೨)ಕರಡು ಪ್ರತಿಗೆ ಅನುಮೋದನೆ ದೊರಕಿದ್ದು ಅಂತಿಮ ಅನುಮೋದನೆಗಾಗಿ ಸರ್ಕಾರಕ್ಕೆ ಕಳಿಸುವುದಷ್ಟೇ ಬಾಕಿ ಇದೆ.
ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರ(ಚುಡಾ) ವ್ಯಾಪ್ತಿ ೧೨೦.೯೯ ಚದರ ಕಿಲೋಮೀಟರ್ ಇದೆ. ಚಾಮರಾಜನಗರ ನಗರಸಭೆಯು ೩೧ ವಾರ್ಡುಗಳಲ್ಲದೆ ನಗರ ಸುತ್ತಮುತ್ತಲಿನ ೨೬ ಗ್ರಾಮಗಳೂ ಇದರಲ್ಲಿ ಸೇರಿವೆ.
ಕೂಡ್ಲೂರು, ಬೂದಿತಿಟ್ಟು, ಶಿವಪುರ, ಕೋಡಿಮೋಳೆ, ಚಂದಕವಾಡಿ, ಬಸವನಪುರ, ಬಂಡಿಗೆರೆ, ದೊಡ್ಡಮೋಳೆ ಇನ್ನಿತರ ಗ್ರಾಮಗಳು ಚುಡಾದ ಕರಡು ನಕ್ಷೆಯಲ್ಲಿದ್ದು, ಈ ಎಲ್ಲಾ ಕಡೆಯ ಬೆಳವಣಿಗೆಯನ್ನು ಮಹಾಯೋಜನೆಯಲ್ಲಿ (ಮಾಸ್ಟರ್ ಪ್ಲಾನ್‌ನಲ್ಲಿ) ದಾಖಲಿಸಲಾಗಿದೆ.
ವಸತಿ, ಉದ್ಯಾನವನ, ವಾಣಿಜ್ಯ, ಕೈಗಾರಿಕೆ, ವ್ಯವಸಾಯ, ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ ವಲಯ-ಹೀಗೆ ವಿವಿಧ ಪ್ರಕಾರಗಳ ಅನುಸಾರ ಭೂಮಿಯನ್ನು ವಿಂಗಡಿಸಲಾಗಿದೆ. ಮುಂದಿನ ೨೦೪೧ನೇ ಇಸವಿಯ ೨.೫೦ ಲಕ್ಷ ಜನಸಂಖ್ಯೆಯನ್ನು ಆಧರಿಸಿ ಸಿದ್ಧಪಡಿಸಿರುವ ಈ ಮಾಸ್ಟರ್ ಪ್ಲಾನ್‌ಗೆ ಕಳೆದ ಮಾರ್ಚ್ ನಲ್ಲಿಯೇ ಸರ್ಕಾರ ತಾತ್ಕಾಲಿಕ ಅನುಮೋದನೆ ನೀಡಿದೆ.
ಕರಡು ಅನುಮೋದನೆ ಬಳಿಕ ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಕ್ಕೆ ೬೦ದಿನಗಳ ಕಾಲಾವಕಾಶ ನೀಡಲಾಗಿತ್ತು. ಅದರಂತೆ ಆಕ್ಷೇಪಗಳು-ಸಲಹೆಗಳನ್ನು ಪಡೆಯಲಾಗಿದೆ. ಕೆಲವೊಂದು ಸಲಹೆಗಳನ್ನು ಅಳವಡಿಸಿಕೊಂಡು ಅಂತಿಮ ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರಿಗೆ ಸಲ್ಲಿಸಲು ಪ್ರತಿ ಸಿದ್ಧವಾಗಿದೆ.
ಕುಲಗಾಣ ಶಾಂತಮೂರ್ತಿ ಅವರ ನಂತರ ಚುಡಾಕ್ಕೆ ಯಾರನ್ನೂ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಅವರೇ ಅಧ್ಯಕ್ಷರಾಗಿದ್ದು ಅವರಿಂದ ಸಹಿಪಡೆದು ಅಂತಿಮ ಒಪ್ಪಿಗೆಗಾಗಿ ಸರ್ಕಾರಕ್ಕೆ ಕಳುಹಿಸಬೇಕಿದೆ.
ಮೂಲಗಳ ಪ್ರಕಾರ ಈ ತಿಂಗಳ ಒಳಗೆ ಸರ್ಕಾರ ಕ್ಕೆ ಸಲ್ಲಿಕೆಯಾಗಲಿದ್ದು ಅಲ್ಲಿ ಅನುಮೋದನೆ ದೊರೆತ ನಂತರ ಹೊಸ ಮಹಾಯೋಜನೆ(ಪರಿಷ್ಕೃತ೨) ಅನುಷ್ಠಾನಕ್ಕೆ ಬರಲಿದೆ. ಚಾ.ನಗರ ನಗರಸಭೆ ಮಾದರಿಯಲ್ಲೇ ಸುತ್ತಮುತ್ತಲಿನ ೨೬ಗ್ರಾಮಗಳವರು ಕಟ್ಟಡಗಳ ನಿರ್ಮಾಣ ಭೂ ಪರಿವರ್ತನೆ, ಇಷ್ಟೇ ಎತ್ತರದಲ್ಲಿ ಕಟ್ಟಡ ಕಟ್ಟಬೇಕೆಂಬ ನಿಯಮಗಳಿಗೆ ಮಹಾಯೋಜನೆ-೧ಜಾರಿಗೊಂಡಾಗಲೇ ಒಳಪಟ್ಟಿದ್ದಾರೆ. ಆದರೆ ಆಸ್ತಿ ತೆರಿಗೆ, ಕುಡಿಯುವ ನೀರು ಇನ್ನಿತರ ಮೂಲಸೌಕರ್ಯ ವ್ಯವಹಾರಗಳೆಲ್ಲಾ ಎಂದಿನಂತೆ ಗ್ರಾಪಂಗಳಲ್ಲೇ ಮುಂದುವರಿದಿದೆ.
ಚುಡಾ ೧೯೯೮ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಆಗ ಚಾಮರಾಜನಗರ ನಗರಸಭೆ ಜೊತೆ ಕೆಲ ಗ್ರಾಮಗಳಷ್ಟೇ ಭಾಗಶಃ ಒಳಪಟ್ಟಿದ್ದವು. ೨೦೦೭ರಲ್ಲಿ ಮಹಾಯೋಜನೆ-೧ ರ ಪರಿಷ್ಕರಣೆ ನಡೆದಿತ್ತು.


ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರ(ಚುಡಾ) ಮಾಸ್ಟರ್ ಪ್ಲಾನ್-೨ಗೆ ಈಗಾಗಲೇ ತಾತ್ಕಾಲಿಕ ಅನುಮೋದನೆ ದೊರಕಿದೆ. ಅಂತಿಮ ಅನುಮೋದನೆ ದೊರಕಬೇಕಿದೆ.
-ಎಂ.ಎಸ್.ಪಂಕಜಾ, ಆಯುಕ್ತರು, ಚುಡಾ.


ಅನುಷ್ಠಾನ ನಿಶ್ಚಿತ
ಸರ್ಕಾರ ಈಗಾಗಲೇ ತಾತ್ಕಾಲಿಕ ಅನುಮೋದನೆ ನೀಡಿರುವುದರಿಂದ ಪರಿಷ್ಕೃತ ಕರಡು-೨ಗೆ ಅನುಮೋದನೆ ದೊರಕಿ ಅದು ಅನುಷ್ಠಾನಗೊಳ್ಳುವುದು ನಿಶ್ಚಿತ ಎಂದು ಚಾ.ನಗರ ನಗರಾಭಿವೃಧ್ಧಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

andolanait

Recent Posts

ಕಾಪಿ ಮಾಡು ಎಂದು ಹೇಳಿದ ಗುರುಗಳ ಮಾತನ್ನು ಧಿಕ್ಕರಿಸಿದೆ, ಆದರೆ ಅವರನ್ನು ದ್ವೇಷಿಸಲಿಲ್ಲ

ನಮ್ಮ ತಂದೆ ಪೋರ್‌ಬಂದರನ್ನು ಬಿಟ್ಟು ರಾಜ ಕೋಬಿಯ ರಾಜಾಸ್ಥಾನಿಕ ನ್ಯಾಯಾಲಯದ ಸದಸ್ಯರಾಗಿ ಹೊರಟಾಗ, ನನಗೆ ಕೇವಲ ಏಳು ವರ್ಷಗಳು. ಅಲ್ಲಿ…

17 mins ago

ರಾಷ್ಟ್ರಪಿತನ ‘ಸತ್ಯಾನ್ವೇಷಣೆ’ಗೆ ನೂರು ವರುಷ

ಗಾಂಧಿ ಮಹಾತ್ಮನ ಆತ್ಮಕಥೆಗೆ ಶತಮಾನೋತ್ಸವದ ಸಂದರ್ಭದಲ್ಲಿ ‘ಆಂದೋಲನ’ ದಿನಪತ್ರಿಕೆಯ ಗಾಂಧಿ ಅಭಿಯಾನ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಭಾಗಿತ್ವದಲಿ ಎಳೆಯ ಮಕಳ ಅಂಗಳಕೆ…

22 mins ago

ಡಿಜಿಟಲ್ ವೇದಿಕೆಗಳಲ್ಲಿ ಅಶ್ಲೀಲತೆಯ ಆರ್ಭಟ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಸೃಜನಶೀಲತೆಯ ವೇದಿಕೆಗಳಾಗುವ ಬದಲು ಹಣದಾಸೆಗಾಗಿ ಅಶ್ಲೀಲತೆಯನ್ನು ಪ್ರದರ್ಶಿಸುವ ಮಾರುಕಟ್ಟೆಗಳಾಗುತ್ತಿರುವುದು ಆತಂಕಕಾರಿ ವಿದ್ಯಮಾನ. ಪ್ರಭಾವಿ ವ್ಯಕ್ತಿಗಳು…

29 mins ago

ಮೆದಗನಾಣೆ ಗ್ರಾಮಕ್ಕೆ ಕೊನೆಗೂ ವಿದ್ಯುತ್ ಸಂಪರ್ಕ

೮ ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಆದಿವಾಸಿ ಹೋರಾಟ ಸಮಿತಿ ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಮೆದಗನಾಣೆ…

32 mins ago

ಚಾರಣಕ್ಕೆ ನೇಚರ್ ಗೈಡ್ ಕಡ್ಡಾಯ

ಜಿಪಿಎಸ್ ವಾಕಿಟಾಕಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ ಎಸ್‌ಒಪಿ ಬಿಡುಗಡೆ ಮಾಡಿದ ಸಚಿವ ಈಶ್ವರ್‌ ಖಂಡ್ರೆ  ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಇಲಾಖೆ…

37 mins ago