ಮಳವಳ್ಳಿ ಮಹದೇವಸ್ವಾಮಿ ಅವರ ಕಂಠ ಸಿರಿಗೆ ತಲೆದೂಗಿದ ಪ್ರೇಕ್ಷಕರು
ಮೈಸೂರು: ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ರಂಗಾಯಣದ ವನರಂಗದಲ್ಲಿ ಮಂಗಳವಾರ ಸಂಜೆ ನಡೆದ ಜನಪದೋತ್ಸವದಲ್ಲಿ ಖ್ಯಾತ ಗಾಯಕ ಡಾ.ಮಳವಳ್ಳಿ ಮಹಾದೇವಸ್ವಾಮಿ ಅವರು ಹರಿಸಿದ ಜನಪದ ಕಥನದ ಮೋಡಿ ಬಹುರೂಪಿಗೆ ಕಳೆ ತಂದಿತು.
ಮಳವಳ್ಳಿ ಮಹಾದೇವಸ್ವಾಮಿ ಅವರು ಕಂಚಿನ ಕಂಠದ ಮೂಲಕ ಮಂಟೇಸ್ವಾಮಿ ಕಾವ್ಯದ ಕಲ್ಯಾಣ ಪಟ್ಟಣದ ಸಾಲನ್ನು ಹಾಡುತ್ತಿದ್ದಂತೆ ಕಿಕ್ಕಿರಿದು ತುಂಬಿದ್ದ ಕಲಾರಸಿಕರು ತಲೆದೂಗಿದರು. ದಮ್ಮಡಿ, ಕರ್ಮಚಿ ಮತ್ತು ತಾಳದಲ್ಲಿ ಮಂಟೇಸ್ವಾಮಿ ಅವರು ಕಲ್ಯಾಣ ಪಟ್ಟಣದಲ್ಲಿ ಬಸವಣ್ಣ ಮತ್ತು ನೀಲಾಂಬಿಕೆಗೆ ದರ್ಶನ ನೀಡಿ ಕೂಡಲ ಸಂಗಮದಲ್ಲಿ ಐಕ್ಯವಾಗುವ ಹಿನ್ನೆಲೆ ಮತ್ತು ಮುಂದಿನ ಕಲಿಯ ಬಗ್ಗೆ ಎಚ್ಚರಿಸಿದ್ದ ಕಥೆಯನ್ನು ತಮ್ಮ ಕಂಚಿನ ಕಂಠದ ಮೂಲಕ ಪ್ರಸ್ತುತಪಡಿಸಿದರು.
ಕಲ್ಯಾಣದಲ್ಲಿ ಬಸವಣ್ಣನವರನ್ನು ಭೇಟಿ ಮಾಡಲು ಆಗಮಿಸುವ ಮಂಟೇಸ್ವಾಮಿ ಸೇವಕನಿಂದ ಅಪಮಾನಕ್ಕೆ ಒಳಗಾಗುತ್ತಾರೆ. ಕೋಪಗೊಂಡು ಶಿವಭಕ್ತ ಹರಳಯ್ಯನ ಮನೆ ಮುಂದೆ ಕೂರುವ ಮಂಟೇಸ್ವಾಮಿ ಅವರನ್ನು ಬಸವಣ್ಣ ಸಮಾಧಾನಪಡಿಸುವ ಪ್ರಸಂಗವನ್ನು ಮನಮುಟ್ಟುವಂತೆ ಹಾಡಿದರು.
ಕಲಿಗಾಲದ ಬಗ್ಗೆ ಮಂಟೇಸ್ವಾಮಿ ನುಡಿಯನ್ನು ಹಾಡುವಾಗ ಸಭಿಕರು ಹೌದೆಂದು ತಲೆಯಾಡಿಸಿದರು. ಒಂದು ಗಂಟೆಗಳ ಕಾಲ ಮಂಟೇಸ್ವಾಮಿ ಮಹತ್ವವನ್ನು ಕೇಳುಗರ ಎದೆಗೆ ಮುಟ್ಟಿಸಿದರು. ಮಂಗಳವಾರ ಮಳೆ ಬಿಡುವು ನೀಡಿದ್ದರಿಂದ ಜನರು ಕಿಕ್ಕಿರಿದು ನೆರೆದು ಗಾಯನ ಆಲಿಸಿದರು.
ದಮ್ಮಡಿಯಲ್ಲಿ ಮಹೇಶ್ ಮತ್ತು ಮಂಜು, ಕರ್ಮಚಿಯನ್ನು ಕೊಳತ್ತೂರು ನಂಜುಂಡಸ್ವಾಮಿ, ತಗ್ಗಳ್ಳಿ ಮಹಾದೇವ್, ತಾಳದಲ್ಲಿ ಮಹದೇವಸ್ವಾಮಿ ಅವರು ಸಹಕಾರ ನೀಡಿದರು.ಇದಕ್ಕೂ ಮುನ್ನ ದಕ್ಷಿಣ ಕನ್ನಡದ ಮಂಜುನಾಥ ಮತ್ತು ತಂಡ ಪ್ರಸ್ತುತಪಡಿಸಿದ ಜನಪದೋತ್ಸವದ ಕಂಗೀಲು ನೃತ್ಯ ಹೊಸ ರಂಗು ಮೂಡಿಸಿತು. ಕಂಗೀಲು ಪಾತ್ರಧಾರಿಗಳು ತೆಂಗಿನ ತಿಲಂಗ ಧರಿಸಿ ಕುಣಿುುಂತ್ತಿದ್ದುದ್ದು ನೋಡುಗರನ್ನು ಒಂದುಕ್ಷಣ ಅವಕ್ಕಾಗಿಸಿತು. ಕಂಗೀಲು ಒಂದು ಜಾನಪದ ಕುಣಿತವೂ ಹೌದು. ಆಚರಣೆುೂಂ ಹೌದು. ಈ ಜನಪದ ಕುಣಿತ ತುಳುನಾಡಿನ ಪ್ರಮುಖ ಪ್ರದರ್ಶನ ಕಲೆ ಆಗಿದ್ದು, ಸಾಂಸ್ಕೃತಿಕ ನಗರಿುಂ ರಂಗಾಸಕ್ತರು ಈ ಕಲೆುಂ ಸವಿ ಸವಿದರು.
ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…
ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…
ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…
ಮೈಸೂರು : ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…
ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತಂತೆ ಪರಿಶೀಲಿಸಲು ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವರಾದ…