ಬಿಸಲವಾಡಿ, ಮುಕ್ಕಡಹಳ್ಳಿಯಲ್ಲಿ ಗೋವುಗಳು-ಕರು ಬಲಿ
ರಾಜೇಶ್ ಬೆಂಡರವಾಡಿ
ಚಾಮರಾಜನಗರ: ಕಾಡು ಪ್ರಾಣಿಗಳಾದ ಹುಲಿ, ಚಿರತೆ ದೃಶ್ಯ ನೋಡಿದರೆ ಭಯ. ಅವು ಗ್ರಾಮದ ಹತ್ತಿರ ಬಂದು ಗೋವು, ಕರುಗಳನ್ನು ಕೊಂದು ತಿಂದುಹೋದರೆ! ಹೌದು, ತಾಲ್ಲೂಕಿನ ಬಿಸಲವಾಡಿ ಬಳಿ ಹುಲಿ ಉಪಟಳ ಹಾಗೂ ಮುಕ್ಕಡಹಳ್ಳಿ ಗ್ರಾಮದ ಹತ್ತಿರ ಚಿರತೆ ಹಾವಳಿ ಎಲ್ಲರನ್ನು ಭಯಭೀತರನ್ನಾಗಿಸಿದೆ. ಈ ಗ್ರಾಮಗಳು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಟ್ಟಿವೆ. ಬಿಸಲವಾಡಿ ಶಿವಣ್ಣಶೆಟ್ಟಿ ಅವರ ೨ ಹಸುಗಳು ಗುರುವಾರ(ನ.೩) ಹುಲಿಬಾಯಿಗೆ ತುತ್ತಾಗಿವೆ.
ಇದು ಹುಲಿರಾಯನ ಕತೆಯಾದರೆ ಇನ್ನು ಚಿರತೆ ಮುಕ್ಕಡಹಳ್ಳಿ-ಹರವೆ ನಡುವಿನ ಜಮೀನೊಂದರಲ್ಲಿ ಸುಮಾರು ಒಂದೂವರೆ ವರ್ಷದ ಕರುವನ್ನು ಕೊಂದು ತಿಂದು ಅದರ ಕಳೇಬರವನ್ನು ಬಿಟ್ಟುಹೋಗಿದೆ. ಗ್ರಾಮದ ಶಿವಣ್ಣ ಅವರು ಜಮೀನಿಂದ ಮನೆಗೆ ಹಸುಗಳೊಂದಿಗೆ ಮುಂದೆ ಬಂದಿದ್ದು ಹಿಂದೆ ಕರು ಬರುತ್ತಿತ್ತು. ಈ ವೇಳೆ ಚಿರತೆ ದಾಳಿ ಮಾಡಿದೆ. ಕರು ಕಾಣದಿದ್ದಾಗ ವಾಪಸ್ ಜಮೀನಿಗೆ ಬಂದು ನೋಡಿದಾಗ ಅದು ಇರಲಿಲ್ಲ. ಮಾರನೇ ದಿನ ಅದರ ಕಳೇಬರ ಬಿಡಿಬಿಡಿಯಾಗಿ ಬಿದ್ದಿರುವುದು ಗೋಚರಿಸಿದೆ.
ಈ ಘಟನೆ ನಡೆದು ೫ ದಿನಗಳಾಗಿವೆ. ಕಾಕತಾಳೀಯವೋ ಅಥವಾ ಅಲ್ಲಿಯೇ ಚಿರತಗಳು ಬೀಡುಬಿಟ್ಟಿವೆಯೋ ಗೊತ್ತಿಲ್ಲ. ಶಿವಣ್ಣ ಅವರಿಗೆ ಸೇರಿದ ಕರು ಹಾಗೂ ಕುರಿಯನ್ನು ಕಳೆದ ವರ್ಷವೂ ಇದೇ ರೀತಿ ಚಿರತೆ ಬೇಟೆಯಾಡಿತ್ತು.
ಹರವೆ ಮತ್ತು ಮುಕ್ಕಡಹಳ್ಳಿ ಗ್ರಾಮಕ್ಕೆ ನೇರ ಸಂಪರ್ಕ ಕಲ್ಪಿಸುವ ಕಾಲು ದಾರಿಯಲ್ಲಿರುವ ಜಮೀನೊಂದರಲ್ಲಿ ಚಿರತೆ ದಾಳಿ ಮಾಡಿ ಕರುವನ್ನು ಕೊಂದಿರುವ ವಿಚಾರವನ್ನು ಪ್ರಗತಿಪರ ಕೃಷಿಕ ಮಧುಸೂದನ್ ಅವರು ಅರಣ್ಯ ಇಲಾಖೆಯ ಆರ್ಎಫ್ಒ ಗಮನಕ್ಕೆ ತರಲಾಗಿ ಆ ಕೂಡಲೇ ಬೋನನ್ನು ತಂದಿರಿಸಲಾಗಿದೆ. ಆದರೆ ಬೋನಿಗೆ ಚಿರತೆ ಬಿದ್ದಿಲ್ಲ. ಹೀಗಾಗಿ ಕೃಷಿಕರು, ದನಗಾಹಿಗಳು ಮತ್ತು ಕಾರ್ಮಿಕರು ಜೀವಭಯದಿಂದ ತಿರುಗಾಡುವಂತಾಗಿದೆ. ಹುಲಿ ಹಸುಗಳನ್ನು ಕೊಂದಿರುವ ಬಿಸಲವಾಡಿ ಗ್ರಾಮ ತಮಿಳುನಾಡಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿದೆ. ಹತ್ತಿರದಲ್ಲೇ ಹೊನ್ನಹಳ್ಳಿ ಗುಡ್ಡವೂ ಇದೆ. ಇಲ್ಲಿ ಚಿರತೆಗಳ ಕಾಟವೂ ಜಾಸ್ತಿಯಾಗಿದೆ.. ಹೀಗಾಗಿ ಈ ಭಾಗದಲ್ಲಿ ಹಸು, ಮೇಕೆ, ಕುರಿ, ನಾಯಿಗಳು ಬಲಿಯಾಗುತ್ತಲೇ ಇವೆ. ಕಳೆದ 4 ತಿಂಗಳಲ್ಲಿ 8 ಸಾಕು ಪ್ರಾಣಿಗಳು ಬಲಿಯಾಗಿವೆ ಎಂದು ಚಾಮರಾಜನಗರ ಪ್ರಾದೇಶಿಕ ಅರಣ್ಯವಲಯದ(ಕೇಂದ್ರಸ್ಥಾನ) ಮೂಲಗಳು ತಿಳಿಸಿವೆ.
–ಮುಕ್ಕಡಹಳ್ಳಿ ಮಧುಸೂದನ್, ಪ್ರಗತಿಪರ ರೈತ.
ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್ಗಳು ಈಗ ಇನ್ಸ್ಟಾಗ್ರಾಂ…
ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…
ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…
ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…
ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…