ಜಿಲ್ಲೆಗಳು

ಸಾಕು ಪ್ರಾಣಿಗಳಿಗೆ ಕಂಟಕವಾದ ಹುಲಿ, ಚಿರತೆ!

ಬಿಸಲವಾಡಿ, ಮುಕ್ಕಡಹಳ್ಳಿಯಲ್ಲಿ ಗೋವುಗಳು-ಕರು ಬಲಿ

ರಾಜೇಶ್ ಬೆಂಡರವಾಡಿ
ಚಾಮರಾಜನಗರ: ಕಾಡು ಪ್ರಾಣಿಗಳಾದ ಹುಲಿ, ಚಿರತೆ ದೃಶ್ಯ ನೋಡಿದರೆ ಭಯ. ಅವು ಗ್ರಾಮದ ಹತ್ತಿರ ಬಂದು ಗೋವು, ಕರುಗಳನ್ನು ಕೊಂದು ತಿಂದುಹೋದರೆ! ಹೌದು, ತಾಲ್ಲೂಕಿನ ಬಿಸಲವಾಡಿ ಬಳಿ ಹುಲಿ ಉಪಟಳ ಹಾಗೂ ಮುಕ್ಕಡಹಳ್ಳಿ ಗ್ರಾಮದ ಹತ್ತಿರ ಚಿರತೆ ಹಾವಳಿ ಎಲ್ಲರನ್ನು ಭಯಭೀತರನ್ನಾಗಿಸಿದೆ. ಈ ಗ್ರಾಮಗಳು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಟ್ಟಿವೆ. ಬಿಸಲವಾಡಿ ಶಿವಣ್ಣಶೆಟ್ಟಿ ಅವರ ೨ ಹಸುಗಳು ಗುರುವಾರ(ನ.೩) ಹುಲಿಬಾಯಿಗೆ ತುತ್ತಾಗಿವೆ.
ಮೂರು ಹಸುಗಳನ್ನು ಜಮೀನಿನಲ್ಲಿ ಮೇಯಲು ಬಿಡಲಾಗಿತ್ತು. ಸಂಜೆ ಎಂದಿನಂತೆ ಮೂರೂ ಹಸುಗಳು ಮನೆಗೆ ಹಿಂದಿರುಗಲಿಲ್ಲ, ಒಂದು ಮಾತ್ರ ಬಂದಿತು. ಮಾರನೇ ದಿನ ಜಮೀನಿನಲ್ಲಿ ಹುಡುಕಿದಾಗ ಎರಡು ಹಸುಗಳು ಸತ್ತುಬಿದ್ದಿದ್ದವು. ಹುಲಿ ಅರೆಬರೆ ತಿಂದು ಬಿಟ್ಟುಹೋಗಿತ್ತು. ಹೆಜ್ಜೆ ಗುರುತು, ಬೇಟೆಯಾಡಿರುವ ರೀತಿಯಿಂದ ಹುಲಿ ಎಂಬುದು ಅರಣ್ಯ ಇಲಾಖೆಗೆ ದೃಢಪಟ್ಟಿದೆ.

ಇದು ಹುಲಿರಾಯನ ಕತೆಯಾದರೆ ಇನ್ನು ಚಿರತೆ ಮುಕ್ಕಡಹಳ್ಳಿ-ಹರವೆ ನಡುವಿನ ಜಮೀನೊಂದರಲ್ಲಿ ಸುಮಾರು ಒಂದೂವರೆ ವರ್ಷದ ಕರುವನ್ನು ಕೊಂದು ತಿಂದು ಅದರ ಕಳೇಬರವನ್ನು ಬಿಟ್ಟುಹೋಗಿದೆ. ಗ್ರಾಮದ ಶಿವಣ್ಣ ಅವರು ಜಮೀನಿಂದ ಮನೆಗೆ ಹಸುಗಳೊಂದಿಗೆ ಮುಂದೆ ಬಂದಿದ್ದು ಹಿಂದೆ ಕರು ಬರುತ್ತಿತ್ತು. ಈ ವೇಳೆ ಚಿರತೆ ದಾಳಿ ಮಾಡಿದೆ. ಕರು ಕಾಣದಿದ್ದಾಗ ವಾಪಸ್ ಜಮೀನಿಗೆ ಬಂದು ನೋಡಿದಾಗ ಅದು ಇರಲಿಲ್ಲ. ಮಾರನೇ ದಿನ ಅದರ ಕಳೇಬರ ಬಿಡಿಬಿಡಿಯಾಗಿ ಬಿದ್ದಿರುವುದು ಗೋಚರಿಸಿದೆ.

ಈ ಘಟನೆ ನಡೆದು ೫ ದಿನಗಳಾಗಿವೆ. ಕಾಕತಾಳೀಯವೋ ಅಥವಾ ಅಲ್ಲಿಯೇ ಚಿರತಗಳು ಬೀಡುಬಿಟ್ಟಿವೆಯೋ ಗೊತ್ತಿಲ್ಲ. ಶಿವಣ್ಣ ಅವರಿಗೆ ಸೇರಿದ ಕರು ಹಾಗೂ ಕುರಿಯನ್ನು ಕಳೆದ ವರ್ಷವೂ ಇದೇ ರೀತಿ ಚಿರತೆ ಬೇಟೆಯಾಡಿತ್ತು.
ಹರವೆ ಮತ್ತು ಮುಕ್ಕಡಹಳ್ಳಿ ಗ್ರಾಮಕ್ಕೆ ನೇರ ಸಂಪರ್ಕ ಕಲ್ಪಿಸುವ ಕಾಲು ದಾರಿಯಲ್ಲಿರುವ ಜಮೀನೊಂದರಲ್ಲಿ ಚಿರತೆ ದಾಳಿ ಮಾಡಿ ಕರುವನ್ನು ಕೊಂದಿರುವ ವಿಚಾರವನ್ನು ಪ್ರಗತಿಪರ ಕೃಷಿಕ ಮಧುಸೂದನ್ ಅವರು ಅರಣ್ಯ ಇಲಾಖೆಯ ಆರ್‌ಎಫ್‌ಒ ಗಮನಕ್ಕೆ ತರಲಾಗಿ ಆ ಕೂಡಲೇ ಬೋನನ್ನು ತಂದಿರಿಸಲಾಗಿದೆ. ಆದರೆ ಬೋನಿಗೆ ಚಿರತೆ ಬಿದ್ದಿಲ್ಲ. ಹೀಗಾಗಿ ಕೃಷಿಕರು, ದನಗಾಹಿಗಳು ಮತ್ತು ಕಾರ್ಮಿಕರು ಜೀವಭಯದಿಂದ ತಿರುಗಾಡುವಂತಾಗಿದೆ. ಹುಲಿ ಹಸುಗಳನ್ನು ಕೊಂದಿರುವ ಬಿಸಲವಾಡಿ ಗ್ರಾಮ ತಮಿಳುನಾಡಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿದೆ. ಹತ್ತಿರದಲ್ಲೇ ಹೊನ್ನಹಳ್ಳಿ ಗುಡ್ಡವೂ ಇದೆ. ಇಲ್ಲಿ ಚಿರತೆಗಳ ಕಾಟವೂ ಜಾಸ್ತಿಯಾಗಿದೆ.. ಹೀಗಾಗಿ ಈ ಭಾಗದಲ್ಲಿ ಹಸು, ಮೇಕೆ, ಕುರಿ, ನಾಯಿಗಳು ಬಲಿಯಾಗುತ್ತಲೇ ಇವೆ. ಕಳೆದ 4 ತಿಂಗಳಲ್ಲಿ 8 ಸಾಕು ಪ್ರಾಣಿಗಳು ಬಲಿಯಾಗಿವೆ ಎಂದು ಚಾಮರಾಜನಗರ ಪ್ರಾದೇಶಿಕ ಅರಣ್ಯವಲಯದ(ಕೇಂದ್ರಸ್ಥಾನ) ಮೂಲಗಳು ತಿಳಿಸಿವೆ.


ಬೋನಿಗೆ ಚಿರತೆ ಬೀಳುವ ಸಾಧ್ಯತೆ ತುಂಬಾ ಕಡಿಮೆ. ಆದ್ದರಿಂದ ಅದನ್ನು ಹಿಡಿದು ಹೊರಗೆ ಸ್ಥಳಾಂತರಿಸಬೇಕು. ಚಿರತೆ ದಾಳಿಯಿಂದ ತಿ.ನರಸೀಪುರ ತಾಲ್ಲೂಕಿನಲ್ಲಿ ವ್ಯಕ್ತಿಯೊಬ್ಬರು ಇತ್ತೀಚೆಗಷ್ಟೇ ಮೃತಪಟ್ಟಿದ್ದು ಇದು ಎಲ್ಲರಿಗೂ ಎಚ್ಚರಿಕೆಯಾಗಿದೆ.

ಮುಕ್ಕಡಹಳ್ಳಿ ಮಧುಸೂದನ್, ಪ್ರಗತಿಪರ ರೈತ.

andolanait

Recent Posts

ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿಗಳ ವರ್ಗಾವಣೆ

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಸಿದ್ದರಾಮಯ್ಯ ಅವರು ತಮ್ಮ ವಿದಾಯದ ಕೊನೇ ಕ್ಷಣದಲ್ಲೂ ಮಹತ್ವದ ಕ್ರಮ ಕೈಗೊಂಡಿದ್ದು,…

9 hours ago

ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ರಾಜ್ಯ ರಾಜಕೀಯದಲ್ಲೇ ಮುಂದುವರಿಯುತ್ತೇನೆ : ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು : ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಿಎಂ…

12 hours ago

ಹೈಕಮಾಂಡ್‌ ಸೂಚನೆಯಂತೆ ರಾಜೀನಾಮೆ : ಸಿದ್ದರಾಮಯ್ಯ ಸುದ್ದಿಗೋಷ್ಠಿಯ ಹೈಲೆಟ್ಸ್‌

ಬೆಂಗಳೂರು : ಹೈಕಮಾಂಡ್‌ ಸೂಚನೆಯಂತೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ…

12 hours ago

ಯಾರೇ ಸಿಎಂ ಆದರೂ ಕರ್ನಾಟಕ ಅಭಿವೃದ್ಧಿಯಾಗಲ್ಲ: ವಿಜಯೇಂದ್ರ

ಕೊಪ್ಪಳ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ವಿಚಾರ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ…

14 hours ago

ಅಧಿಕಾರ ಬದಲಾವಣೆ ಎನ್ನುವುದು ಹೈಕಮಾಂಡ್ ನಿರ್ಧಾರ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಅಧಿಕಾರ ಬದಲಾವಣೆ ಎನ್ನುವುದು ಹೈಕಮಾಂಡ್‌ ನಿರ್ಧಾರ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ…

15 hours ago

ಮುಂದೆಯೂ ಇದೇ ರೀತಿ ಸಹಕಾರ ನೀಡಿ: ಮಂತ್ರಿಗಳಿಗೆ ಡಿಸಿಎಂ ಡಿಕೆಶಿ ಮನವಿ

ಬೆಂಗಳೂರು: ಬ್ರೇಕ್‌ಫಾಸ್ಟ್‌ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಂತ್ರಿಗಳ ಜೊತೆ ಸಹಕಾರವನ್ನು ಕೇಳಿದ್ದಾರೆ. ಸಿಎಂ ಹುದ್ದೆಗೆ ಇಂದು ಸಿದ್ದರಾಮಯ್ಯ ರಾಜೀನಾಮೆ…

16 hours ago