ಜಿಲ್ಲೆಗಳು

ಅಂಗನವಾಡಿ ಕಟ್ಟಡದಲ್ಲಿ ಮೂಡಿದ ಬಣ್ಣದ ಚಿತ್ತಾರ

ಮಕ್ಕಳನ್ನು ಸೆಳೆಯಲು ಮುಳ್ಳುಸೋಗೆ ಗ್ರಾ.ಪಂ.ನಿಂದ ವಿಭಿನ್ನ ಪ್ರಯತ್ನ

ವರದಿ: ಪುನೀತ್ ಮಡಿಕೇರಿ

ಮಡಿಕೇರಿ: ಗೋಡೆಯ ಮೇಲೆ ಕಾಮನ ಬಿಲ್ಲಿನ ಚಿತ್ತಾರ, ಹಬ್ಬಿ ನಿಂತಿರುವ ಹಸಿರಿನ ಬಳ್ಳಿಗಳಲ್ಲಿ ಬಣ್ಣ ಬಣ್ಣದ ಹೂವುಗಳು, ಬೆಟ್ಟ-ಗುಡ್ಡ, ಗರಿಬಿಚ್ಚಿ ಹಾರುವ ಪಕ್ಷಿಗಳ ಕೆಳಗೆ ದಿಟ್ಟಿಸಿ ನೋಡುತ್ತಿರುವ ಸಿಂಹ, ಜಿಂಕೆ, ಆನೆ, ಜಿರಾಫೆ… ಇವು ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಗುಮ್ಮನಕೊಲ್ಲಿ ಗ್ರಾಮದಲ್ಲಿರುವ ವಿನಾಯಕ ಬಡಾವಣೆಯಲ್ಲಿರುವ ಅಂಗನವಾಡಿಯ ಚಿತ್ರಣ.

ಹೌದು, ಟಿಪಿಕಲ್ ಸರ್ಕಾರಿ ಕಚೇರಿಯಂತೆ ಕಾಣುತ್ತಿದ್ದ ಹಳೆಯ ವಿನಾಯಕ ಬಡಾವಣೆಯ ಅಂಗನವಾಡಿಗೆ ಈಗ ಹೊಸ ರೂಪ ಸಿಕ್ಕಿದೆ. ಕಾಮನಬಿಲ್ಲಿನೊಳಗೆ ಅದ್ದಿ ತೆಗೆದಂತೆ ಬಣ್ಣ ಬಣ್ಣದಲ್ಲಿ ಮಿಂಚುತ್ತಿರುವ ಹೊಸ ಅಂಗನವಾಡಿ ಕಟ್ಟಡ ಮಕ್ಕಳ ಗಮನ ಸೆಳೆಯುತ್ತಿದೆ. ವಿವಿಧ ಪ್ರಾಣಿಗಳ ಚಿತ್ತಾರಗಳು ಪುಟ್ಟ ಕಂದಮ್ಮಗಳನ್ನು ಆಕರ್ಷಿಸುತ್ತಿವೆ.

೧೫ನೇ ಹಣಕಾಸು ಯೋಜನೆಯಡಿಯಲ್ಲಿ ೩.೫ ಲಕ್ಷ ರೂ. ವ್ಯಯಿಸಿ, ಮುಳ್ಳುಸೋಗೆ ಗ್ರಾ.ಪಂ. ವತಿಯಿಂದ ಹಳೆಯ ಅಂಗನವಾಡಿಗೆ ಹೊಸ ರೂಪ ಕೊಡಲಾಗಿದೆ. ಅಂಗನವಾಡಿಯ ಹೊರಗೋಡೆ ಮಾತ್ರವಲ್ಲದೆ ಒಳಗೋಡೆಗಳನ್ನೂ ಚಿತ್ತಾಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.

ಅಂಗನವಾಡಿಗೆ ಹೋಗುವುದಿಲ್ಲ ಎಂದು ರಚ್ಚೆ ಹಿಡಿಯುವ ಮಗು ಕೂಡ ಖುಷಿಯಿಂದ ಆಡುತ್ತಾ ಬರುವಂತೆ ಇಲ್ಲಿಯ ವಾತಾವರಣ ರೂಪಿಸಲಾಗಿದೆ. ಅಂಗನವಾಡಿಯ ಒಳಾಂಗಣದಲ್ಲಿ ಟೈಲ್ಸ್ ಅಳವಡಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಸುತ್ತ ಆವರಣ ಗೋಡೆಯನ್ನೂ ನಿರ್ಮಿಸಲಾಗಿದೆ. ಮುಂಭಾಗದಲ್ಲಿ ಇಂಟರ್‌ಲಾಕ್ ಅಳವಡಿಸಿರುವುದು ಮತ್ತಷ್ಟು ಆಕರ್ಷಣೆಗೆ ಕಾರಣವಾಗಿದೆ. ಪೌಷ್ಟಿಕ ತೋಟ, ಒಳಾಂಗಣ ಹಾಗೂ ಹೊರಾಂಗಣದ ವರ್ಣರಂಜಿತ ನೋಟಗಳ ಮೂಲಕ ಕಲಿಕಾ ಸ್ನೇಹಿಯಾಗಿ ರೂಪುಗೊಳಿಸಲಾಗಿದೆ.

ನಿವೃತ್ತ ನೌಕರರ ಕೂಟದವರಿಂದ ಅಂಗನವಾಡಿ ಮಕ್ಕಳಿಗೆ ಕುರ್ಚಿ ಕೊಡುಗೆ

ಪುಟಾಣಿ ಕುರ್ಚಿಗಳ ಕೊಡುಗೆ
ಇಲ್ಲಿಗೆ ಬರುವ ಪುಟಾಣಿಗಳಿಗೆ ಸೂಕ್ತ ಆಸನ ವ್ಯವಸ್ಥೆಯ ಕೊರತೆ ಕಾಡುತ್ತಿತ್ತು. ಆಗ ನೆರವಿಗೆ ಬಂದವರು ನಿವೃತ್ತ ನೌಕರರ ಕೂಟದ ಸದಸ್ಯರು. ಅಂಗನವಾಡಿಗೆ ಸಿಕ್ಕಿದ ಹೊಸ ರೂಪದಿಂದ ಪ್ರೇರೇಪಿತರಾದ ನಿವೃತ್ತ ನೌಕರರ ಕೂಟದವರು ತಮ್ಮ ಮೊಮ್ಮಕ್ಕಳು, ಮರಿಮಕ್ಕಳಂಥ ಕಂದಮ್ಮಗಳಿಗಾಗಿ ಪುಟಾಣಿ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲು ಮುಂದೆ ಬಂದರು. ಇದೀಗ ಹೊಸ ಅಂಗನವಾಡಿಯಲ್ಲಿ ಹೊಸ ಹೊಸ ಕುರ್ಚಿಗಳಲ್ಲಿ ಕುಳಿತು ಮಕ್ಕಳು ನಗು ಬೀರುತ್ತಿದ್ದಾರೆ.

ಮುಳ್ಳುಸೋಗೆ ಪಂಚಾಯಿತಿ ವ್ಯಾಪ್ತಿಯ ಎಲ್ಲ ಅಂಗನವಾಡಿಗಳಲ್ಲೂ ಕಲಿಕಾ ಸ್ನೇಹಿ ವಾತಾವರಣವನ್ನು ಕಲ್ಪಿಸಲು ನಿರ್ಧರಿಸಲಾಗಿದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸಹಕಾರದಿಂದ ಈ ಗುರಿ ಸಾಧಿಸಲಾಗುವುದು. ಗೊಂದಿ ಬಸವನಹಳ್ಳಿ ಅಂಗನವಾಡಿಯನ್ನು ೧ ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗುವುದು. ಜನತಾ ಕಾಲೋನಿ ಅಂಗನವಾಡಿಗೆ ಈಗಾಗಲೇ ೧ ಲಕ್ಷ ರೂ. ಖರ್ಚು ಮಾಡಲಾಗಿದೆ. ಇನ್ನೂ ೧ ಲಕ್ಷ ರೂ. ವ್ಯಯಿಸಿ ಉತ್ತಮ ರೂಪ ನೀಡಲಾಗುವುದು. – ಎಂ.ಆರ್.ಸುಮೇಶ್, ಮುಳ್ಳುಸೋಗೆ ಪಿಡಿಒ

 

andolana

Recent Posts

ಇಂದಿನಿಂದ ಮೂರು ದಿನ ಸಿಇಟಿ ಪರೀಕ್ಷೆ

ಮೈಸೂರು : ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಗಳು ಬುಧವಾರದಿಂದ…

5 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಏಪ್ರಿಲ್‌ 22 ಬುಧವಾರ

30 mins ago

ಹಾಸನ: ಸಿಡಿಲು ಬಡಿದು ಮಹಿಳೆ ಸಾವು

ಹಾಸನ: ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ನಡೆದಿದೆ. ನೀಲಮ್ಮ ಎಂಬುವವರೇ ಸಿಡಿಲು ಬಡಿದು ಸಾವನ್ನಪ್ಪಿರುವ…

12 hours ago

ಪಹಲ್ಗಾಮ್‌ ದಾಳಿಯಾಗಿ ನಾಳೆಗೆ 1 ವರ್ಷ: ಸೇನೆಯಿಂದ ಪೋಸ್ಟ್‌

ನವದೆಹಲಿ: ಬೈಸರನ್‌ ವ್ಯಾಲಿಗೆ ಪ್ರವಾಸಕ್ಕೆಂದು ಹೋಗಿದ್ದಾಗ 26 ಜನರು ಸಾವನ್ನಪ್ಪಿದ್ದ ಭಯೋತ್ಪಾದಕ ದಾಳಿಗೆ ನಾಳೆ ಒಂದು ವರ್ಷ. ಭಾರತೀಯ ಸೇನೆ…

12 hours ago

ಬಿಜೆಪಿಯ ಅಪಪ್ರಚಾರಕ್ಕೆ ಅಭಿವೃದ್ದಿ ಕಾರ್ಯಗಳ ಮೂಲಕವೇ ಉತ್ತರ: ಸಿಎಂ ಸಿದ್ದರಾಮಯ್ಯ

ಪಿರಿಯಾಪಟ್ಟಣ: ಬಿಜೆಪಿಯ ಅಪಪ್ರಚಾರಕ್ಕೆ ಅಭಿವೃದ್ದಿ ಕಾರ್ಯಗಳ ಮೂಲಕವೇ ಉತ್ತರ ನೀಡುತ್ತಿದ್ದೇವೆ. ನಮ್ಮ ಅಭಿವೃದ್ಧಿ ಕಾರ್ಯಗಳು ಜನರಿಗೆ ಮುಟ್ಟಿವೆ. ಜನ ನಮ್ಮ…

12 hours ago

ಪಾಲಹಳ್ಳಿ ಬೇಸಿಗೆ ಶಿಬಿರದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದ ಸಚಿವ ಚಲುವರಾಯಸ್ವಾಮಿ

​ಶ್ರೀರಂಗಪಟ್ಟಣ: ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಬೇಸಿಗೆ ಶಿಬಿರಗಳು ಅತ್ಯುತ್ತಮ ವೇದಿಕೆಯಾಗಿದ್ದು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮಕ್ಕಳ ವ್ಯಕ್ತಿತ್ವ…

13 hours ago