ಅಂಕಣಗಳು

ಅಣ್ಣನ ನೋಡುವ ನೆಪದಲ್ಲಿ ಬಂದಿದ್ದ ಕಿರಾತಕ

• ಕೀರ್ತನ ಎಂ.

ತಾರಾ, ಹೊಳೆಯುವ ಮೊಗದವಳು. ಚಂದಿರನ ನಗು, ಮುಗಿಲಿನ ಶುಭ್ರ ಬಿಳುಪಿನ ಚೆಲುವೆ. ತನ್ನ ಪುಟ್ಟ ಕುಟುಂಬವೇ ಅವಳ ಪ್ರಪಂಚ, ಆ ಪ್ರಪಂಚದಲ್ಲಿ ಅಣ್ಣನ ಸ್ನೇಹಿತನ ಆಗಮನವಾಗಿತ್ತು. ಏಳು ವರ್ಷಗಳು ಇರುವವಳು ಅವನನ್ನು ಬಾಯಿ ತುಂಬಾ ಅಣ್ಣ ಎಂದು ಕರೆಯುತ್ತಿದ್ದಳು. ಏಷ್ಟು ವರ್ಷ… ಅಂದು ಅವಳು ಮೈನೆರೆದು ಸರಿಯಾಗಿ ಎರಡು ತಿಂಗಳುಗಳು ಕಳೆದಿತ್ತು. ಶಾಲೆಯಲ್ಲಿ ಕಾಡಿ ಬೇಡಿ ಮೂರು ವಾರ ರಜೆ ಗಿಟ್ಟಿಸಿ ಅದ್ಧೂರಿಯಾಗಿ ಆರತಿ ಶಾಸ್ತ್ರವನ್ನೂ ಮಾಡಿ ಮುಗಿಸಿದ್ದರು. ಆ ದಿನ ಕಾರ್ಯಕ್ರಮಕ್ಕೆ ಬಂದವನು ಮರಳಿ ಗೆಳೆಯನನ್ನು ಭೇಟಿ ಆಗುವ ನೆಪದಲ್ಲಿ ಮನೆಗೆ ಬಂದಿದ್ದ. ಅದೂ ತಾರ ಒಬ್ಬಳೇ ಇದ್ದ ಹೊತ್ತಲ್ಲಿ! ‘ಅಣ್ಣ…’ಬಾಗಿಲು ತೆಗೆದವಳು ಖುಷಿಯಿಂದ ಅವನ ಬಳಿ ಬಂದಳು.

ಮನೆಯಲ್ಲಿ ಯಾರೂ ಇಲ್ಲದ ಹೊತ್ತು ಎಲ್ಲಿ ನಿನ್ನ ಅಣ್ಣ? ಆಂಟಿ ಅಂಕಲ್‌ ಇಲ್ವಾ?’ ಎಂದು ಕೇಳುತ್ತ ಅವಳ ಹೆಗಲು ಬಳಸುತ್ತಾ ಒಳ ಬಂದ.

‘ಇಲ್ಲ ಅಪ್ಪ ಕೆಲಸಕ್ಕೆ ಹೋಗಿದ್ದಾರೆ ಅಮ್ಮ ಸಂತೆಗೆ ಹೋಗಿದ್ದಾರೆ. ಅಣ್ಣ ಇನ್ನೇನು ಬರಬಹುದು’ ಎಂದವಳ ಮಾತು ಕೇಳುತ್ತ ಅವಳನ್ನು ಪಕ್ಕದಲ್ಲಿ ಕೂರಿಸಿಕೊಂಡು ತಾನು ಅಂಟಿಕೊಂಡು ಕುಳಿತ. ಹೆಗಲು ಬಳಸಿದ ಕೈ ನಿಧಾನವಾಗಿ ಕೆಳಜಾರಲು ಇರುಸುಮುರಿಸು ಅವಳಿಗೆ.

‘ಅಣ್ಣ ಇರು ಕಾಫಿ ತರ್ತಿನಿ’ ನಾಜೂಕಾಗಿ ಬಿಡಿಸಿಕೊಂಡು ಅಲ್ಲಿಂದ ಎದ್ದು ಬಂದವಳಿಗೆ ಮೊದಲ ಬಾರಿ ಅವನ ಸ್ಪರ್ಶ ಅಹಿತವಾಯಿತು.
ತಪ್ಪಿಸಿಕೊಂಡೆ ಎಂದುಕೊಳ್ಳುವಾಗ ಹಿಂದೆ ಬಂದವನು ತಪ್ಪಿಸಿಕೊಳ್ಳಲು ಆಗದಂತೆ ಕಚಗುಳಿ ಕೊಡುವ ನೆಪದಲ್ಲಿ ಅವಳ ಮೈ ಪೂರಾ ಸ್ಪರ್ಶಿಸುತ್ತಿದ್ದ. ಅವಳಿಗೂ ಏನೋ ಸರಿಯಿಲ್ಲ ಎನ್ನುವುದು ಅರ್ಥವಾಗಲು ‘ಅಣ್ಣ ಬಿಡಿ’ ಎಂದು ಕೂಗುತ್ತ ಹೇಗೋ ಬಿಡಿಸಿಕೊಂಡಳು.

ಮತ್ತೊಮ್ಮೆ ಅವಳ ಬಳಿ ಬರುವವನ ತಡೆದಿದ್ದು ಅಷ್ಟರಲ್ಲಿ ಹೊರಗೆ ಕೇಳಿದ ಅವಳ ತಾಯಿಯ ಸದ್ದು. ಅವನು ಹೊರ ನಡೆದ ತಕ್ಷಣ ದೀರ್ಘವಾಗಿ ಉಸಿರೆಳೆದುಕೊಂಡ ತಾರಾ ಏನೂ ನಡೆದಿಲ್ಲ ಎನ್ನುವಂತೆ ಇಬ್ಬರಿಗೂ ಕಾಫಿ ನೀಡಿದಳು. ಆದಷ್ಟು ಅವನಿಂದ ಅಂತರ ಕಾಯ್ದುಕೊಳ್ಳುತ್ತಾ ಇದ್ದಳು. ಆದರೆ ಅವನು ಎಲ್ಲರ ಕಣ್ಣಪ್ಪಿಸಿ ತನ್ನ ಚಪಲ ತೀರಿಸಿಕೊಳ್ಳುತ್ತಾ ಇದ್ದ. ಅವಳ ಕುಟುಂಬದವರು ಅವನ ಮೇಲಿಟ್ಟಿದ್ದ ನಂಬಿಕೆಯೇ ಅವನಿಗೆ ಅಸ್ತವಾಗಿತ್ತು. ಅವಳಿಗೂ ಮನೆಯಲ್ಲಿ ಹೇಳುವ ಧೈರ್ಯವಿಲ್ಲ. ದಿನೇ ದಿನೇ ಅವನ ಉಪಟಳ ಹೆಚ್ಚಾಗಿ ಒಮ್ಮೆಯಂತೂ ಅತಿಯಾಗಿ ವರ್ತಿಸಿ ಪೂರ್ತಿಯಾಗಿ ಹೆದರುವಂತೆ ಮಾಡಿದ್ದ.

ಇನ್ನು ಸುಮ್ಮನಿದ್ದರೆ ಆಗದು ಎಂದು ಯೋಚಿಸಿದ ತಾರ ವರ್ಷಗಳಿಂದ ಸಹಿಸಿದ್ದ ಅವನ ಕಾಟವನ್ನು ತಾನು ಪಿಯುಸಿ ಸೇರಿದಾಗ ಮನೆಯಲ್ಲಿ ಹೇಳುವ ನಿರ್ಧಾರ ಮಾಡಿ ತಾಯಿಗೆ ಭಯದಲ್ಲೇ ಎಲ್ಲವನ್ನೂ ಹೇಳಿದಳು.
‘ಮೊದಲೇ ಏಕೆ ಹೇಳಲಿಲ್ಲ ನೀನು? ಇನ್ನು ಅವನ ಹತ್ತಿರ ಹೋಗಬೇಡ’ ಎಂದು ಅವನಿಗೆ ಬೈದುಕೊಳ್ಳುತ್ತಾ ಇವಳಿಗೂ ಗದರಿದರು ಅಮ್ಮ. ಅದಾದ ಮೇಲೆ ಅವಳು ಓದಿನ ಸಲುವಾಗಿ ಬೇರೆ ಊರಿಗೆ ತೆರಳಿದಳು. ಅವನ ಕಾಟ ತಪ್ಪಿತ್ತು. ಅಲ್ಲಿಂದ ಹೊರ ಬಂದ ಮೇಲೆ ಅದು ಅವಳನ್ನು ಮಾನಸಿಕವಾಗಿ ಕಾಡಲು ಶುರುವಾಗಿ ಪುರುಷರನ್ನು ಕಂಡರೆ ವಿಚಿತ್ರ ಭಯ ಹುಟ್ಟಿಕೊಂಡಿತು. ಅದೊಂದು ದುಃಸ್ವಪ್ನವಾಗಿ ಜೀವನ ಪೂರ್ತಿ ತಾರಾಳನ್ನು ಕಾಡಿತು ಅವಳ ದಾಂಪತ್ಯ ಜೀವನವನ್ನೂ ಹಾಳು ಮಾಡಿತು…

ಅಂದು ತಾರ ಹೇಳಿಕೊಂಡಾಗ ಏನೂ ಅರಿಯದ ಅವಳ ಬದಲಾಗಿ ಅವಳ ತಾಯಿ ದನಿ ಏರಿಸಿದ್ದರೂ ಕೂಡ ಅದು ಅವಳನ್ನು ಜೀವನ ಪೂರ್ತಿ ಕಾಡುತ್ತಾ ಇರಲಿಲ್ಲವೇನೋ. ಕೇವಲ ತಂದೆ ತಾಯಿ ಪಾತ್ರ ಮಾತ್ರವೇ ಇದೆಯೇ ಇದರಲ್ಲಿ? ಖಂಡಿತ ಇಲ್ಲ. ಸಮಾಜದ ಪಾತ್ರವೂ ಇದೆ ಅಲ್ಲವೇ?
keerthana.manju.guha6@gmail.com

andolanait

Recent Posts

ಮುಂಗಾರು ಮತ್ತೆ ಚುರುಕು ; ಮೈಸೂರು, ಮಂಡ್ಯ, ಕೊಡಗಿನಲ್ಲಿ ಮಳೆ ಸಾಧ್ಯತೆ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ…

2 hours ago

ಪರಿಷತ್‌ ಚುನಾವಣೆ : ಕಾಂಗ್ರೆಸ್‌ನ ಐವರು, ಬಿಜೆಪಿಯ ಇಬ್ಬರ ಗೆಲುವು,

ಬೆಂಗಳೂರು : ಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್​​ನ ಐವರು ಮತ್ತು ಬಿಜೆಪಿಯ ಎರಡು…

5 hours ago

ಪರಿಷತ್‌ ಚುನಾವಣೆ ; ಕಾಂಗ್ರೆಸ್‌ನ 5ನೇ ಅಭ್ಯರ್ಥಿಗೆ ಜಯ

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ವಿನಯ್‌ ಕಾರ್ತಿಕ್‌ ಜಯ ಸಾಧಿಸಿದ್ದಾರೆ. ಅಡ್ಡಮತದ ಪರಿಣಾಮ ಮೈತ್ರಿ ಅಭ್ಯರ್ಥಿ…

6 hours ago

ಪಿಎಫ್‌ಗೆ ಶೇ 8.25 ಬಡ್ಡಿದರ : ಕೇಂದ್ರ ಸರ್ಕಾರದ ಅನುಮೋದನೆ

ಹೊಸದಿಲ್ಲಿ : 2025-26ನೇ ಆರ್ಥಿಕ ಸಾಲಿನಡಿ ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ ಶೇ.8.25ರಷ್ಟಿ ಬಡ್ಡಿದರ ನೀಡಲು ಕೇಂದ್ರ ಸರ್ಕಾರವು ಒಪ್ಪಿಗೆ…

7 hours ago

ಕರ್ತವ್ಯ ಲೋಪ ; ಮಹಿಳಾ ಮತ್ತು ಮಕ್ಕಳ ಇಲಾಖೆ ಡಿಡಿ ಅಮಾನತ್ತು

ಚಾಮರಾಜನಗರ : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಚ್.ಆರ್.ಸುರೇಶ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ…

8 hours ago

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಏಳು ದಿನ ಭಾರೀ ಮಳೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮ ರಾಜ್ಯದಲ್ಲಿ ಏಳು ದಿನ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…

13 hours ago