ಅಂಕಣಗಳು

ಅಣ್ಣನ ನೋಡುವ ನೆಪದಲ್ಲಿ ಬಂದಿದ್ದ ಕಿರಾತಕ

• ಕೀರ್ತನ ಎಂ.

ತಾರಾ, ಹೊಳೆಯುವ ಮೊಗದವಳು. ಚಂದಿರನ ನಗು, ಮುಗಿಲಿನ ಶುಭ್ರ ಬಿಳುಪಿನ ಚೆಲುವೆ. ತನ್ನ ಪುಟ್ಟ ಕುಟುಂಬವೇ ಅವಳ ಪ್ರಪಂಚ, ಆ ಪ್ರಪಂಚದಲ್ಲಿ ಅಣ್ಣನ ಸ್ನೇಹಿತನ ಆಗಮನವಾಗಿತ್ತು. ಏಳು ವರ್ಷಗಳು ಇರುವವಳು ಅವನನ್ನು ಬಾಯಿ ತುಂಬಾ ಅಣ್ಣ ಎಂದು ಕರೆಯುತ್ತಿದ್ದಳು. ಏಷ್ಟು ವರ್ಷ… ಅಂದು ಅವಳು ಮೈನೆರೆದು ಸರಿಯಾಗಿ ಎರಡು ತಿಂಗಳುಗಳು ಕಳೆದಿತ್ತು. ಶಾಲೆಯಲ್ಲಿ ಕಾಡಿ ಬೇಡಿ ಮೂರು ವಾರ ರಜೆ ಗಿಟ್ಟಿಸಿ ಅದ್ಧೂರಿಯಾಗಿ ಆರತಿ ಶಾಸ್ತ್ರವನ್ನೂ ಮಾಡಿ ಮುಗಿಸಿದ್ದರು. ಆ ದಿನ ಕಾರ್ಯಕ್ರಮಕ್ಕೆ ಬಂದವನು ಮರಳಿ ಗೆಳೆಯನನ್ನು ಭೇಟಿ ಆಗುವ ನೆಪದಲ್ಲಿ ಮನೆಗೆ ಬಂದಿದ್ದ. ಅದೂ ತಾರ ಒಬ್ಬಳೇ ಇದ್ದ ಹೊತ್ತಲ್ಲಿ! ‘ಅಣ್ಣ…’ಬಾಗಿಲು ತೆಗೆದವಳು ಖುಷಿಯಿಂದ ಅವನ ಬಳಿ ಬಂದಳು.

ಮನೆಯಲ್ಲಿ ಯಾರೂ ಇಲ್ಲದ ಹೊತ್ತು ಎಲ್ಲಿ ನಿನ್ನ ಅಣ್ಣ? ಆಂಟಿ ಅಂಕಲ್‌ ಇಲ್ವಾ?’ ಎಂದು ಕೇಳುತ್ತ ಅವಳ ಹೆಗಲು ಬಳಸುತ್ತಾ ಒಳ ಬಂದ.

‘ಇಲ್ಲ ಅಪ್ಪ ಕೆಲಸಕ್ಕೆ ಹೋಗಿದ್ದಾರೆ ಅಮ್ಮ ಸಂತೆಗೆ ಹೋಗಿದ್ದಾರೆ. ಅಣ್ಣ ಇನ್ನೇನು ಬರಬಹುದು’ ಎಂದವಳ ಮಾತು ಕೇಳುತ್ತ ಅವಳನ್ನು ಪಕ್ಕದಲ್ಲಿ ಕೂರಿಸಿಕೊಂಡು ತಾನು ಅಂಟಿಕೊಂಡು ಕುಳಿತ. ಹೆಗಲು ಬಳಸಿದ ಕೈ ನಿಧಾನವಾಗಿ ಕೆಳಜಾರಲು ಇರುಸುಮುರಿಸು ಅವಳಿಗೆ.

‘ಅಣ್ಣ ಇರು ಕಾಫಿ ತರ್ತಿನಿ’ ನಾಜೂಕಾಗಿ ಬಿಡಿಸಿಕೊಂಡು ಅಲ್ಲಿಂದ ಎದ್ದು ಬಂದವಳಿಗೆ ಮೊದಲ ಬಾರಿ ಅವನ ಸ್ಪರ್ಶ ಅಹಿತವಾಯಿತು.
ತಪ್ಪಿಸಿಕೊಂಡೆ ಎಂದುಕೊಳ್ಳುವಾಗ ಹಿಂದೆ ಬಂದವನು ತಪ್ಪಿಸಿಕೊಳ್ಳಲು ಆಗದಂತೆ ಕಚಗುಳಿ ಕೊಡುವ ನೆಪದಲ್ಲಿ ಅವಳ ಮೈ ಪೂರಾ ಸ್ಪರ್ಶಿಸುತ್ತಿದ್ದ. ಅವಳಿಗೂ ಏನೋ ಸರಿಯಿಲ್ಲ ಎನ್ನುವುದು ಅರ್ಥವಾಗಲು ‘ಅಣ್ಣ ಬಿಡಿ’ ಎಂದು ಕೂಗುತ್ತ ಹೇಗೋ ಬಿಡಿಸಿಕೊಂಡಳು.

ಮತ್ತೊಮ್ಮೆ ಅವಳ ಬಳಿ ಬರುವವನ ತಡೆದಿದ್ದು ಅಷ್ಟರಲ್ಲಿ ಹೊರಗೆ ಕೇಳಿದ ಅವಳ ತಾಯಿಯ ಸದ್ದು. ಅವನು ಹೊರ ನಡೆದ ತಕ್ಷಣ ದೀರ್ಘವಾಗಿ ಉಸಿರೆಳೆದುಕೊಂಡ ತಾರಾ ಏನೂ ನಡೆದಿಲ್ಲ ಎನ್ನುವಂತೆ ಇಬ್ಬರಿಗೂ ಕಾಫಿ ನೀಡಿದಳು. ಆದಷ್ಟು ಅವನಿಂದ ಅಂತರ ಕಾಯ್ದುಕೊಳ್ಳುತ್ತಾ ಇದ್ದಳು. ಆದರೆ ಅವನು ಎಲ್ಲರ ಕಣ್ಣಪ್ಪಿಸಿ ತನ್ನ ಚಪಲ ತೀರಿಸಿಕೊಳ್ಳುತ್ತಾ ಇದ್ದ. ಅವಳ ಕುಟುಂಬದವರು ಅವನ ಮೇಲಿಟ್ಟಿದ್ದ ನಂಬಿಕೆಯೇ ಅವನಿಗೆ ಅಸ್ತವಾಗಿತ್ತು. ಅವಳಿಗೂ ಮನೆಯಲ್ಲಿ ಹೇಳುವ ಧೈರ್ಯವಿಲ್ಲ. ದಿನೇ ದಿನೇ ಅವನ ಉಪಟಳ ಹೆಚ್ಚಾಗಿ ಒಮ್ಮೆಯಂತೂ ಅತಿಯಾಗಿ ವರ್ತಿಸಿ ಪೂರ್ತಿಯಾಗಿ ಹೆದರುವಂತೆ ಮಾಡಿದ್ದ.

ಇನ್ನು ಸುಮ್ಮನಿದ್ದರೆ ಆಗದು ಎಂದು ಯೋಚಿಸಿದ ತಾರ ವರ್ಷಗಳಿಂದ ಸಹಿಸಿದ್ದ ಅವನ ಕಾಟವನ್ನು ತಾನು ಪಿಯುಸಿ ಸೇರಿದಾಗ ಮನೆಯಲ್ಲಿ ಹೇಳುವ ನಿರ್ಧಾರ ಮಾಡಿ ತಾಯಿಗೆ ಭಯದಲ್ಲೇ ಎಲ್ಲವನ್ನೂ ಹೇಳಿದಳು.
‘ಮೊದಲೇ ಏಕೆ ಹೇಳಲಿಲ್ಲ ನೀನು? ಇನ್ನು ಅವನ ಹತ್ತಿರ ಹೋಗಬೇಡ’ ಎಂದು ಅವನಿಗೆ ಬೈದುಕೊಳ್ಳುತ್ತಾ ಇವಳಿಗೂ ಗದರಿದರು ಅಮ್ಮ. ಅದಾದ ಮೇಲೆ ಅವಳು ಓದಿನ ಸಲುವಾಗಿ ಬೇರೆ ಊರಿಗೆ ತೆರಳಿದಳು. ಅವನ ಕಾಟ ತಪ್ಪಿತ್ತು. ಅಲ್ಲಿಂದ ಹೊರ ಬಂದ ಮೇಲೆ ಅದು ಅವಳನ್ನು ಮಾನಸಿಕವಾಗಿ ಕಾಡಲು ಶುರುವಾಗಿ ಪುರುಷರನ್ನು ಕಂಡರೆ ವಿಚಿತ್ರ ಭಯ ಹುಟ್ಟಿಕೊಂಡಿತು. ಅದೊಂದು ದುಃಸ್ವಪ್ನವಾಗಿ ಜೀವನ ಪೂರ್ತಿ ತಾರಾಳನ್ನು ಕಾಡಿತು ಅವಳ ದಾಂಪತ್ಯ ಜೀವನವನ್ನೂ ಹಾಳು ಮಾಡಿತು…

ಅಂದು ತಾರ ಹೇಳಿಕೊಂಡಾಗ ಏನೂ ಅರಿಯದ ಅವಳ ಬದಲಾಗಿ ಅವಳ ತಾಯಿ ದನಿ ಏರಿಸಿದ್ದರೂ ಕೂಡ ಅದು ಅವಳನ್ನು ಜೀವನ ಪೂರ್ತಿ ಕಾಡುತ್ತಾ ಇರಲಿಲ್ಲವೇನೋ. ಕೇವಲ ತಂದೆ ತಾಯಿ ಪಾತ್ರ ಮಾತ್ರವೇ ಇದೆಯೇ ಇದರಲ್ಲಿ? ಖಂಡಿತ ಇಲ್ಲ. ಸಮಾಜದ ಪಾತ್ರವೂ ಇದೆ ಅಲ್ಲವೇ?
keerthana.manju.guha6@gmail.com

andolanait

Recent Posts

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

36 mins ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

1 hour ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

1 hour ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

1 hour ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

1 hour ago

ಮಹಾಪಂಚ್ ಕಾರ್ಟೂನ್‌

ಮಹಾಪಂಚ್ ಕಾರ್ಟೂನ್‌ | ಸೆಪ್ಟಂಬರ್‌ 18 ಶುಕ್ರವಾರ

2 hours ago