ಅಂಕಣಗಳು

ಅಣ್ಣನ ನೋಡುವ ನೆಪದಲ್ಲಿ ಬಂದಿದ್ದ ಕಿರಾತಕ

• ಕೀರ್ತನ ಎಂ.

ತಾರಾ, ಹೊಳೆಯುವ ಮೊಗದವಳು. ಚಂದಿರನ ನಗು, ಮುಗಿಲಿನ ಶುಭ್ರ ಬಿಳುಪಿನ ಚೆಲುವೆ. ತನ್ನ ಪುಟ್ಟ ಕುಟುಂಬವೇ ಅವಳ ಪ್ರಪಂಚ, ಆ ಪ್ರಪಂಚದಲ್ಲಿ ಅಣ್ಣನ ಸ್ನೇಹಿತನ ಆಗಮನವಾಗಿತ್ತು. ಏಳು ವರ್ಷಗಳು ಇರುವವಳು ಅವನನ್ನು ಬಾಯಿ ತುಂಬಾ ಅಣ್ಣ ಎಂದು ಕರೆಯುತ್ತಿದ್ದಳು. ಏಷ್ಟು ವರ್ಷ… ಅಂದು ಅವಳು ಮೈನೆರೆದು ಸರಿಯಾಗಿ ಎರಡು ತಿಂಗಳುಗಳು ಕಳೆದಿತ್ತು. ಶಾಲೆಯಲ್ಲಿ ಕಾಡಿ ಬೇಡಿ ಮೂರು ವಾರ ರಜೆ ಗಿಟ್ಟಿಸಿ ಅದ್ಧೂರಿಯಾಗಿ ಆರತಿ ಶಾಸ್ತ್ರವನ್ನೂ ಮಾಡಿ ಮುಗಿಸಿದ್ದರು. ಆ ದಿನ ಕಾರ್ಯಕ್ರಮಕ್ಕೆ ಬಂದವನು ಮರಳಿ ಗೆಳೆಯನನ್ನು ಭೇಟಿ ಆಗುವ ನೆಪದಲ್ಲಿ ಮನೆಗೆ ಬಂದಿದ್ದ. ಅದೂ ತಾರ ಒಬ್ಬಳೇ ಇದ್ದ ಹೊತ್ತಲ್ಲಿ! ‘ಅಣ್ಣ…’ಬಾಗಿಲು ತೆಗೆದವಳು ಖುಷಿಯಿಂದ ಅವನ ಬಳಿ ಬಂದಳು.

ಮನೆಯಲ್ಲಿ ಯಾರೂ ಇಲ್ಲದ ಹೊತ್ತು ಎಲ್ಲಿ ನಿನ್ನ ಅಣ್ಣ? ಆಂಟಿ ಅಂಕಲ್‌ ಇಲ್ವಾ?’ ಎಂದು ಕೇಳುತ್ತ ಅವಳ ಹೆಗಲು ಬಳಸುತ್ತಾ ಒಳ ಬಂದ.

‘ಇಲ್ಲ ಅಪ್ಪ ಕೆಲಸಕ್ಕೆ ಹೋಗಿದ್ದಾರೆ ಅಮ್ಮ ಸಂತೆಗೆ ಹೋಗಿದ್ದಾರೆ. ಅಣ್ಣ ಇನ್ನೇನು ಬರಬಹುದು’ ಎಂದವಳ ಮಾತು ಕೇಳುತ್ತ ಅವಳನ್ನು ಪಕ್ಕದಲ್ಲಿ ಕೂರಿಸಿಕೊಂಡು ತಾನು ಅಂಟಿಕೊಂಡು ಕುಳಿತ. ಹೆಗಲು ಬಳಸಿದ ಕೈ ನಿಧಾನವಾಗಿ ಕೆಳಜಾರಲು ಇರುಸುಮುರಿಸು ಅವಳಿಗೆ.

‘ಅಣ್ಣ ಇರು ಕಾಫಿ ತರ್ತಿನಿ’ ನಾಜೂಕಾಗಿ ಬಿಡಿಸಿಕೊಂಡು ಅಲ್ಲಿಂದ ಎದ್ದು ಬಂದವಳಿಗೆ ಮೊದಲ ಬಾರಿ ಅವನ ಸ್ಪರ್ಶ ಅಹಿತವಾಯಿತು.
ತಪ್ಪಿಸಿಕೊಂಡೆ ಎಂದುಕೊಳ್ಳುವಾಗ ಹಿಂದೆ ಬಂದವನು ತಪ್ಪಿಸಿಕೊಳ್ಳಲು ಆಗದಂತೆ ಕಚಗುಳಿ ಕೊಡುವ ನೆಪದಲ್ಲಿ ಅವಳ ಮೈ ಪೂರಾ ಸ್ಪರ್ಶಿಸುತ್ತಿದ್ದ. ಅವಳಿಗೂ ಏನೋ ಸರಿಯಿಲ್ಲ ಎನ್ನುವುದು ಅರ್ಥವಾಗಲು ‘ಅಣ್ಣ ಬಿಡಿ’ ಎಂದು ಕೂಗುತ್ತ ಹೇಗೋ ಬಿಡಿಸಿಕೊಂಡಳು.

ಮತ್ತೊಮ್ಮೆ ಅವಳ ಬಳಿ ಬರುವವನ ತಡೆದಿದ್ದು ಅಷ್ಟರಲ್ಲಿ ಹೊರಗೆ ಕೇಳಿದ ಅವಳ ತಾಯಿಯ ಸದ್ದು. ಅವನು ಹೊರ ನಡೆದ ತಕ್ಷಣ ದೀರ್ಘವಾಗಿ ಉಸಿರೆಳೆದುಕೊಂಡ ತಾರಾ ಏನೂ ನಡೆದಿಲ್ಲ ಎನ್ನುವಂತೆ ಇಬ್ಬರಿಗೂ ಕಾಫಿ ನೀಡಿದಳು. ಆದಷ್ಟು ಅವನಿಂದ ಅಂತರ ಕಾಯ್ದುಕೊಳ್ಳುತ್ತಾ ಇದ್ದಳು. ಆದರೆ ಅವನು ಎಲ್ಲರ ಕಣ್ಣಪ್ಪಿಸಿ ತನ್ನ ಚಪಲ ತೀರಿಸಿಕೊಳ್ಳುತ್ತಾ ಇದ್ದ. ಅವಳ ಕುಟುಂಬದವರು ಅವನ ಮೇಲಿಟ್ಟಿದ್ದ ನಂಬಿಕೆಯೇ ಅವನಿಗೆ ಅಸ್ತವಾಗಿತ್ತು. ಅವಳಿಗೂ ಮನೆಯಲ್ಲಿ ಹೇಳುವ ಧೈರ್ಯವಿಲ್ಲ. ದಿನೇ ದಿನೇ ಅವನ ಉಪಟಳ ಹೆಚ್ಚಾಗಿ ಒಮ್ಮೆಯಂತೂ ಅತಿಯಾಗಿ ವರ್ತಿಸಿ ಪೂರ್ತಿಯಾಗಿ ಹೆದರುವಂತೆ ಮಾಡಿದ್ದ.

ಇನ್ನು ಸುಮ್ಮನಿದ್ದರೆ ಆಗದು ಎಂದು ಯೋಚಿಸಿದ ತಾರ ವರ್ಷಗಳಿಂದ ಸಹಿಸಿದ್ದ ಅವನ ಕಾಟವನ್ನು ತಾನು ಪಿಯುಸಿ ಸೇರಿದಾಗ ಮನೆಯಲ್ಲಿ ಹೇಳುವ ನಿರ್ಧಾರ ಮಾಡಿ ತಾಯಿಗೆ ಭಯದಲ್ಲೇ ಎಲ್ಲವನ್ನೂ ಹೇಳಿದಳು.
‘ಮೊದಲೇ ಏಕೆ ಹೇಳಲಿಲ್ಲ ನೀನು? ಇನ್ನು ಅವನ ಹತ್ತಿರ ಹೋಗಬೇಡ’ ಎಂದು ಅವನಿಗೆ ಬೈದುಕೊಳ್ಳುತ್ತಾ ಇವಳಿಗೂ ಗದರಿದರು ಅಮ್ಮ. ಅದಾದ ಮೇಲೆ ಅವಳು ಓದಿನ ಸಲುವಾಗಿ ಬೇರೆ ಊರಿಗೆ ತೆರಳಿದಳು. ಅವನ ಕಾಟ ತಪ್ಪಿತ್ತು. ಅಲ್ಲಿಂದ ಹೊರ ಬಂದ ಮೇಲೆ ಅದು ಅವಳನ್ನು ಮಾನಸಿಕವಾಗಿ ಕಾಡಲು ಶುರುವಾಗಿ ಪುರುಷರನ್ನು ಕಂಡರೆ ವಿಚಿತ್ರ ಭಯ ಹುಟ್ಟಿಕೊಂಡಿತು. ಅದೊಂದು ದುಃಸ್ವಪ್ನವಾಗಿ ಜೀವನ ಪೂರ್ತಿ ತಾರಾಳನ್ನು ಕಾಡಿತು ಅವಳ ದಾಂಪತ್ಯ ಜೀವನವನ್ನೂ ಹಾಳು ಮಾಡಿತು…

ಅಂದು ತಾರ ಹೇಳಿಕೊಂಡಾಗ ಏನೂ ಅರಿಯದ ಅವಳ ಬದಲಾಗಿ ಅವಳ ತಾಯಿ ದನಿ ಏರಿಸಿದ್ದರೂ ಕೂಡ ಅದು ಅವಳನ್ನು ಜೀವನ ಪೂರ್ತಿ ಕಾಡುತ್ತಾ ಇರಲಿಲ್ಲವೇನೋ. ಕೇವಲ ತಂದೆ ತಾಯಿ ಪಾತ್ರ ಮಾತ್ರವೇ ಇದೆಯೇ ಇದರಲ್ಲಿ? ಖಂಡಿತ ಇಲ್ಲ. ಸಮಾಜದ ಪಾತ್ರವೂ ಇದೆ ಅಲ್ಲವೇ?
keerthana.manju.guha6@gmail.com

andolanait

Recent Posts

ರಾಮಕೃಷ್ಣ ಆಶ್ರಮದವರು ಕೊಟ್ಟ ಮಾತು ಉಳಿಸಿಕೊಳ್ಳಬೇಕಿತ್ತು

ಶತಮಾನದ ಹಿಂದೆ ಮೈಸೂರು ಸಂಸ್ಥಾನದ ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ಅವರು ಮೈಸೂರಿನ ಹೆಣ್ಣುಮಕ್ಕಳಿಗಾಗಿ ಸ್ಥಾಪಿಸಿದ್ದ ‘ಮಹಾರಾಣಿಯವರ ಹೊಸ ಮಾದರಿ (ಎನ್‌ಟಿಎಂ) ಶಾಲೆ’…

9 hours ago

ಅರವತ್ತು ದಿನಗಳು ಕಳೆಯಿತು…ಫಲದ ನಿರೀಕ್ಷೆಯಲ್ಲಿ!

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ತೋಳ ಬಂತು ತೋಳ ಕತೆಯನ್ನು ನೆನಪಿಸುವಂತಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕಾಂಗ್ರೆಸ್…

9 hours ago

ಇಂದು ಕೊಡಗು ಜಿಲ್ಲೆಯಲ್ಲಿ ಕಕ್ಕಡ 18ರ ಸಂಭ್ರಮ

ನವೀನ್ ಡಿಸೋಜ ಮನೆಮನೆಗಳಲ್ಲಿ ಘಮಘಮಿಸಲಿದೆ ಮದ್ದುಸೊಪ್ಪಿನ ಖಾದ್ಯ; ವಿಭಿನ್ನ ಹಬ್ಬದಾಚರಣೆಗೆ ಜಿಲ್ಲೆಯಲ್ಲಿ ಸಿದ್ಧತೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ (ಆ.೩)ಕಕ್ಕಡ…

9 hours ago

ಸಾರ್ವಜನಿಕರ ಶೌಚಾಲಯಕ್ಕೆ ಬೇಕಿದೆ ಚಿಕಿತ್ಸೆ!

ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿನ ಶೌಚಾಲಯದಲ್ಲಿ ಅಶುಚಿತ್ವ ತಾಂಡವ ಮೈಸೂರು: ವಾಯುವಿಹಾರಿಗಳು ಹಾಗೂ ಕ್ರೀಡಾಸಕ್ತರ ನೆಚ್ಚಿನ ತಾಣವಾಗಿರುವ ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ…

9 hours ago

ಗ್ರಾಪಂಗಳ ಅತ್ಯುತ್ತಮ ಕೆಲಸಕ್ಕೆ ಉತ್ತಮ ಪ್ರಶಸ್ತಿ

ಕೆ.ಬಿ.ರಮೇಶನಾಯಕ ಪ್ರಗತಿಯಲ್ಲಿ ಹಿಂದೆ ಬಿದ್ದಿರುವ ಗ್ರಾಪಂಗಳನ್ನು ಹುರಿದುಂಬಿಸಲು ಜಿಪಂ ಹೊಸ ಯೋಜನೆ ಪ್ರಶಸ್ತಿಗೆ ನಾಲ್ಕು ಕಾರ್ಯಸೂಚಿಯಲ್ಲಿ ಪ್ರಗತಿ ಸಾಧಿಸಿದ ಗ್ರಾಪಂಗಳ…

10 hours ago

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

1 day ago