ಅಂಕಣಗಳು

ಬಾನು ಮುಷ್ತಾಕ್ ಆಯ್ಕೆ ತಪ್ಪು ಎನ್ನುವುದು ಸಂಕುಚಿತ ಭಾವ

ಈ ರೀತಿ ಹಬ್ಬ, ಉತ್ಸವಗಳಲ್ಲಿ ಸರ್ಕಾರವು ಧರ್ಮನಿರಪೇಕ್ಷತೆ ಉಳಿಸಿಕೊಳಬೇಕಾಗುತ್ತದೆ. 

ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ರಾಜ್ಯ ಸರ್ಕಾರದ ತೀರ್ಮಾನದಲ್ಲಿ ಯಾವ ವಿಧವಾದ ಲೋಪವೂ ಕಾಣುವುದಿಲ್ಲ. ಅವರನ್ನು ಕರೆದಿರುವುದು ತಪ್ಪು ಅಂತ ಕಾನೂನಾತ್ಮಕವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲದೆ, ಮುಷ್ತಾಕ್ ಅವರು ಅನ್ಯ ಧರ್ಮೀಯರು, ಹಾಗಾಗಿ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಬಾರದು ಎಂಬ ಮನೋಭಾವನೆಯು ಹಿಂದೂ ಧರ್ಮದಲ್ಲಿ ಇಲ್ಲದಿರುವ ಸಂಕುಚಿತತೆಯನ್ನು ಇದೆ ಎಂದು ವಾದ ಮಾಡಿದಂತಾಗುತ್ತದೆ.

ಚಾಮುಂಡೇಶ್ವರಿಯನ್ನು ಆರಾಧಿಸುವುದಕ್ಕೆ ಧಾರ್ಮಿಕ ಹಾಗೂ ಸಾಮಾಜಿಕ ಇತಿಹಾಸ ಇದೆ. ಆದರೆ, ಅದಕ್ಕೆ ಪೂರಕವಾದ ಧಾರ್ಮಿಕ ಭಾವನೆ ಗಳು ಉದ್ಘಾಟಕರಿಗೂ ಇರಬೇಕು ಎಂದು ಹೇಳುವಂತಹ ನಿಯಮಗಳನ್ನು ರೂಪಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಬಾನು ಮುಷ್ತಾಕ್ ಅವರನ್ನು ಕರೆದಿರುವುದನ್ನು ತಪ್ಪು ಎಂದು ಕಾನೂನಾತ್ಮಕವಾಗಿ ಹೇಳಲು ಅವಕಾಶವೇ ಇಲ್ಲ. ದಸರಾ ಉದ್ಘಾಟಿಸಲು ಮುಷ್ತಾಕ್ ಅವರಿಗೆ ಅಭ್ಯಂತರ ಏನೂ ಇಲ್ಲ ಎಂದರೆ, ಮುಂದಿನ ಯಾವುದೇ ಪ್ರಶ್ನೆಗೂ ಅರ್ಥ ಇರುವುದಿಲ್ಲ. ಈ ರೀತಿ ಹಬ್ಬಗಳು ಅಥವಾ ಉತ್ಸವಗಳ ಬಗ್ಗೆ ರಾಜ್ಯ ಸರ್ಕಾರದ ನಡೆ ಹೇಗಿರಬೇಕು ಎಂಬುದರ ಬಗ್ಗೆ ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ. ಆದರೆ, ಸರ್ಕಾರವು ಒಂದು ಧರ್ಮ ನಿರಪೇಕ್ಷತೆ ಅಂದರೆ ಜಾತ್ಯತೀತ ರುಜುವಾತು (ಸೆಕ್ಯುರಲ್ ಕ್ರೆಡೆನ್ಷಿಯಲ್ಸ್) ಅನ್ನು ಉಳಿಸಿಕೊಳ್ಳಬೇಕಾಗುತ್ತದೆ.

೨೫೦- ೩೦೦ ವರ್ಷಗಳ ಹಿಂದೆ ಯಾವುದೇ ಒಂದು ಸಾಂಪ್ರದಾಯಿಕ, ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಅಥವಾ ಉದ್ಘಾಟನೆಯಲ್ಲಿ ದಲಿತರಿಗೆ ಅವಕಾಶ ಇರುತ್ತಿರಲಿಲ್ಲ. ಹಾಗಂತ ಆ ಕಾಲದ ಪದ್ಧತಿಯನ್ನೇ ನಾವು ಮುಂದುವರಿಸಬೇಕು ಅಂತ ರಾಜ್ಯ ಸರ್ಕಾರ ದಲಿತರನ್ನು ಹೊರಗಿಟ್ಟರೆ, ಅದು ಸಂವಿಧಾನಕ್ಕೆ ಅಪವಾದವಾಗು ತ್ತದೆ. ಅದು ಆರ್ಟಿಕಲ್ ೧೭ರ ಅಸ್ಪೃಶ್ಯತೆ ಪ್ರತಿಬಂಧಕವನ್ನು ಉಲ್ಲಂಘಿಸುತ್ತದೆ. ಅಸ್ಪ ಶ್ಯತೆ ಯನ್ನು ಆಚರಿಸಿದರೆ ಅಥವಾ ಪ್ರತಿಪಾದಿಸಿದರೆ ಶಿಕ್ಷಿಸಲು ಕಾಯ್ದೆ ಇದೆ. ಸಂಪ್ರದಾಯ ಎಂದ ಮಾತ್ರಕ್ಕೆ ಇಂತಹ ಆಚರಣೆಗಳನ್ನು ಮುಂದುವರಿಸಲು ಆಗುವುದಿಲ್ಲ. ಅದೇ ರೀತಿ ರಾಜ್ಯ ಸರ್ಕಾರ ಒಂದು ವೇಳೆ ಹಿಂದೂ ಹಬ್ಬದ ಉದ್ಘಾಟನೆಯಲ್ಲಿ ಹಿಂದೂಗಳೇ ಆಗಿರಬೇಕು ಅಥವಾ ಇಂತಹ ವರ್ಗದವರೇ ಆಗಿರಬೇಕು, ದ್ವೈತರು ಅಥವಾ ಅದ್ವೈತರೇ ಆಗಿರಬೇಕು ಎಂದು ನಿಯಗಳನ್ನು ಹಾಕಿಕೊಂಡರೆ ಅದು ಧರ್ಮನಿರಪೇಕ್ಷತೆಗೆ ದೊಡ್ಡ ಹೊಡೆತವಾಗುತ್ತದೆ. ಒಂದು ಆರಾಧನೆ ಮಾಡುವುದಕ್ಕೆ ಅಗತ್ಯವಾದ ಪ್ರಮಾಣದಷ್ಟೇ ನಂಬಿಕೆ ಉದ್ಘಾಟಿಸುವುದಕ್ಕೂ ಬೇಕಾಗುತ್ತದೆಯೇ? ಈ ದೇಶದಲ್ಲಿ ಶೇ.೭೮ರಿಂದ ೮೦ರಷ್ಟು ಜನರು ಹಿಂದೂ ಧರ್ಮವನ್ನು ಪಾಲನೆ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್, ಹಿಂದೂ ಧರ್ಮದ ಬಗ್ಗೆ ವ್ಯಾಖ್ಯಾನ ವಾಡುವಾಗ ಅದೊಂದು ಜೀವನ ವಿಧಾನ (ವೇ ಆಫ್ ಲೈಫ್) ಎಂದು ಹೇಳಿದೆ. ಹೀಗಿರಬೇಕಾದರೆ ಸರ್ಕಾರವು ಚಾಮುಂಡೇಶ್ವರಿಯನ್ನು ಆರಾಧಿಸುವುದಕ್ಕೆ ಬೇಕಿರುವ ನಂಬಿಕೆ ಇರುವವರು ಮಾತ್ರ ದಸರಾ ಉತ್ಸವವನ್ನು ಉದ್ಘಾಟನೆ ಮಾಡಬೇಕು ಎಂದು ಹೇಳಲು ಸಾಧ್ಯವಿಲ್ಲ.

ದಸರಾ ಮಹೋತ್ಸವವನ್ನು ಉದ್ಘಾಟಿಸುವುದಕ್ಕೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ವೈಯಕ್ತಿಕವಾಗಿ ಯಾವುದೇ ಸಮಸ್ಯೆ ಇರದಿದ್ದರೆ, ಯಾವುದೇ ವಿಧವಾದ ಧಾರ್ಮಿಕ ಅಡೆತಡೆ ಇಲ್ಲ ಅನಿಸಿದರೆ, ಅಲ್ಲಿ ವಿವಾದ ಎಂಬುದರ ಪ್ರಸ್ತಾಪಕ್ಕೇ ಜಾಗ ಇರುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆ ಇರುವುದರಿಂದ ಪ್ರತಿಯೊಬ್ಬ ರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರುತ್ತದೆ. ಹಾಗಾಗಿ ಎಲ್ಲರೂ ಅವರವರ ಅಭಿಪ್ರಾಯಗಳನ್ನು ಹೇಳಬಹುದು. ಆದರೆ, ವಾಸ್ತವದ ತಳಹದಿಯಲ್ಲಿ ಆ ಹೇಳಿಕೆಗಳು ಇರಬೇಕು ಅಷ್ಟೆ.

” ೨೫೦- ೩೦೦ ವರ್ಷಗಳ ಹಿಂದೆ ಯಾವುದೇ ಒಂದು ಸಾಂಪ್ರದಾಯಿಕ, ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಅಥವಾ ಉದ್ಘಾಟನೆಯಲ್ಲಿ ದಲಿತರಿಗೆ ಅವಕಾಶ ಇರುತ್ತಿರಲಿಲ್ಲ. ಹಾಗಂತ ಆ ಕಾಲದ ಪದ್ಧತಿಯನ್ನೇ ನಾವು ಮುಂದುವರಿಸಬೇಕು ಅಂತ ರಾಜ್ಯ ಸರ್ಕಾರ ದಲಿತರನ್ನು ಹೊರಗಿಟ್ಟರೆ, ಅದು ಸಂವಿಧಾನಕ್ಕೆ ಅಪವಾದವಾಗುತ್ತದೆ. ಸಂಪ್ರದಾಯ ಎಂದ ಮಾತ್ರಕ್ಕೆ ಇಂತಹ ಆಚರಣೆಗಳನ್ನು ಮುಂದುವರಿಸಲು ಆಗುವುದಿಲ್ಲ”

ಕೆ.ವಿ.ಧನಂಜಯ, ಅಡ್ವೊಕೇಟ್, ಸುಪ್ರೀಂ ಕೋರ್ಟ್

ಆಂದೋಲನ ಡೆಸ್ಕ್

Recent Posts

ಗುರುವಾರ ಅಮೇರಿಕಾ-ಇರಾನ್‌ ಮಧ್ಯೆ 2ನೇ ಹಂತದ ಮಾತುಕತೆ

ಇಸ್ಲಾಮಾಬಾದ್:‌ ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಇರಾನ್‌ ಮತ್ತು ಅಮೇರಿಕಾ ನಡುವೆ 2ನೇ ಸುತ್ತಿನ ಮಾತುಕತೆಗೆ…

9 mins ago

ಇಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಜಯಂತಿ: ಗಣ್ಯಾತಿಗಣ್ಯರಿಂದ ಶುಭಾಶಯ

ನವದೆಹಲಿ: ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.‌ಅಂಬೇಡ್ಕರ್‌ ಅವರ 135ನೇ ಜನ್ಮ ಜಯಂತಿ. ಇದರ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ…

49 mins ago

ರೈತಾಪಿ ವರ್ಗಕ್ಕೆ ಬಿಗ್‌ ಶಾಕ್‌ ಕೊಟ್ಟ ಹವಾಮಾನ ಇಲಾಖೆ: ಏನದು ಗೊತ್ತಾ.?

ನವದೆಹಲಿ: ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.…

1 hour ago

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಜೀರ್‌ ಅಹಮ್ಮದ್‌ ರಾಜೀನಾಮೆ

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್‌ಸಿ ನಜೀರ್‌ ಅಹಮ್ಮದ್‌ ಅವರು ರಾಜೀನಾಮೆ ನೀಡಿದ್ದಾರೆ. ನಜೀರ್‌ ಅಹಮ್ಮದ್‌ ಅವರು ಸಿಎಂ…

2 hours ago

ಓದುಗರ ಪತ್ರ: ನದಿ ಮಾಲಿನ್ಯ ತಡೆಗಟ್ಟಿ

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ಕಾವೇರಿ ನದಿಯ ಉಪನದಿಯಾಗಿದ್ದು, ಹುಣಸೂರು ಭಾಗದ ಬಹಳ ಮುಖ್ಯವಾದ…

5 hours ago

ಓದುಗರ ಪತ್ರ: ಸಚಿವ ಸೋಮಣ್ಣ ಹೇಳಿಕೆ ಸ್ವಾಗತಾರ್ಹ

ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಕರ್ನಾಟಕದವರು ಇನ್ನು ಮುಂದೆ ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಹಾಗೂ ರೈಲ್ವೆ ಇಲಾಖೆ…

5 hours ago