ಅಂಕಣಗಳು

ಹಿಟ್ ಅಂಡ್ ರನ್ ಹೊಸ ನಿಯಮ ಸಾಧಕ-ಬಾಧಕ

• ವಿವೇಕ ಕಾರಿಯಪ್ಪ, ಪ್ರಗತಿಪರ ರೈತ, ಚಿಂತಕ

ಹಿಟ್‌ ಅಂಡ್ ರನ್ ಅಪಘಾತ ಪ್ರಕರಣಗಳ ಸಂಬಂಧ ಕೇಂದ್ರ ಸರ್ಕಾರವು ಇತ್ತೀಚೆಗೆ ಹೊಸ ನಿಯಮವನ್ನು ಜಾರಿಗೊಳಿಸಿದ್ದು, ತಪ್ಪಿತಸ್ಥ ವಾಹನ ಚಾಲಕರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 7 ಲಕ್ಷ ರೂ. ಗಳವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಿದೆ. ಇದು ಬಹುತೇಕ ಟ್ರಕ್‌ಗಳು ಮತ್ತು ಲಾರಿ ಚಾಲಕರನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲ್ಪಟ್ಟಿರುವ ನಿಯಮವಾಗಿದೆ. ಆದರೆ, ದ್ವಿಚಕ್ರ ವಾಹನ ಸೇರಿದಂತೆ ಎಲ್ಲ ಬಗೆಯ ಚಾಲಕರಿಗೂ ಈ ಹೊಸ ನಿಯಮ ಅನ್ವಯವಾಗುತ್ತದೆ. ಇದು ಚಾಲಕರ ಶೋಷಣೆಗೆ ಮತ್ತೊಂದು ದಾರಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ಹಿಟ್ ಅಂಡ್ ರನ್ ಅಪಘಾತದ ಬಹಳಷ್ಟು ಪ್ರಕರಣಗಳಲ್ಲಿ ಚಾಲಕರ ನಿರ್ಲಕ್ಷ್ಯ ಇರುತ್ತದೆ. ಅದನ್ನು ಮೀರಿದ ಒಂದಿಷ್ಟು ನಿಜಾಂಶಗಳನ್ನು ಸಮಚಿತ್ತದಿಂದ ಅವಲೋಕಿಸುವುದು ಅಗತ್ಯ. ಹಾಗಾಗಿ ಆಟೊ ಮೊಬೈಲ್ಸ್ ಅಸೋಸಿಯೇಷನ್‌, ಈ ಹೊಸ ನಿಯಮವನ್ನು ವಿರೋಧಿಸುತ್ತಿರುವುದರ ಹಿಂದೆ ವಾಸ್ತವತೆ ಅರಿವು ಇದೆ ಎನ್ನಬಹುದು. ಪೊಲೀಸರು, ಹಿಟ್ ಅಂಡ್ ರನ್ ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿ ಚಾಲಕರಿಂದ ಲಂಚ ಪಡೆಯುವ ಸಾಧ್ಯತೆಯೂ ಇದೆ.

ಇದಕ್ಕೆ ಸಂಬಂಧಿಸಿದಂತೆ ನನ್ನದೇ ಅನುಭವ ಇದೆ. ಸುಮಾರು 25 ವರ್ಷಗಳ ಹಿಂದೆ ಮೈಸೂರಿನಲ್ಲಿ ನಾನು ರೈತರ ರಾಲಿಯೊಂದರಲ್ಲಿ ಪಾಲ್ಗೊಂಡ ಬಳಿಕ, ನನ್ನ ಜೀಪ್ ನಲ್ಲಿ ಊರಿಗೆ ಹಿಂದಿರುಗುತ್ತಿದ್ದೆ. ದಾರಿಯಲ್ಲಿ ಸೈಕಲ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಕೆಳಗೆ ಬಿದ್ದುಬಿಟ್ಟ, ಸ್ವಲ್ಪ ದೊಡ್ಡ ಪ್ರಮಾಣದಲ್ಲೇ ಗಾಯಗೊಂಡಿದ್ದ. ಕೂಡಲೇ ಆತನನ್ನು ನಾನು, ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದೆ. ನಂತರ ಸಂಬಂಧಪಟ್ಟ ಪೊಲೀಸರಿಗೂ ವಿಷಯ ತಿಳಿಸಿದೆ. ಅವರು ಬಂದ ನಂತರ ನಾನು ಮನೆಗೆ ಹಿಂದಿರುಗಿದ್ದೆ.

ಮಾರನೇ ದಿನ ಬೆಳಿಗ್ಗೆ ಪೊಲೀಸರು, ನನಗೆ ಫೋನ್ ಮಾಡಿದರು. ನಿಮ್ಮ ವಾಹನ ತೆಗೆದುಕೊಂಡು ನ್ಯಾಯಾಲಯಕ್ಕೆ ಬರಬೇಕು. ನಿಮ್ಮ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಲಾಗಿದೆ ಎಂದರು.

ನಂತರ ಅದೇನೋ ಆಯಿತು ಬಿಡಿ. ಆದರೆ, ಹೊಸ ನಿಯಮದಿಂದ ಇಂತಹ ದುರುಪಯೋಗ ಹೆಚ್ಚಾಗುತ್ತವೆ ಎಂಬುದೇ ನನ್ನ ಆತಂಕ.

ವಾಹನಗಳ ಚಾಲಕರಿಗೂ ಕುಟುಂಬ ಇರುತ್ತದೆ. ಅದಕ್ಕಾಗಿ ಅವರು ಹಗಲಿರುಳು ಶ್ರಮಿಸುತ್ತಿರುತ್ತಾರೆ ಎಂಬುದನ್ನೂ ಗಮನಿಸಬೇಕು. ಹಾಗಾಗಿ ಯಾರೂ ಉದ್ದೇಶ ಪೂರ್ವಕವಾಗಿ ಅಪಘಾತ ಉಂಟು ಮಾಡು ವುದಿಲ್ಲ. ಕೆಲವೊಮ್ಮೆ ಅಪಘಾತ ನಡೆಸಿದ ಚಾಲಕರು, ಸ್ಥಳದಿಂದ ಸ್ವಲ್ಪ ದೂರ ಹೋಗಿ ವಾಹನ ನಿಲ್ಲಿಸುವ ಇರಾದೆ ಹೊಂದಿರುತ್ತಾರೆ. ಆದರೆ, ಅಲ್ಲಿ ಜಮಾಯಿಸುವ ಸಾರ್ವಜನಿಕರ ಅಬ್ಬರ, ಹಾರಾಟಗಳು ಅವರನ್ನು ಪಲಾಯನ ಮಾಡುವಂತೆ ಪ್ರೇರೇಪಿಸುವುದು ಸಹಜ. ಅಲ್ಲದೆ, ಇಂತಹ ಕಠಿಣ ನಿಯಮಗಳಿಂದ ಒಂದು ರಾಜ್ಯದ ವಾಹನ ಚಾಲಕರು, ಇನ್ನೊಂದು ರಾಜ್ಯಕ್ಕೆ ವಾಹನ ತೆಗೆದುಕೊಂಡು ಹೋಗುವುದಕ್ಕೆ ಹೆದರುವಂತಾಗುತ್ತದೆ. ಏಕೆಂದರೆ ಅಲ್ಲಿ ಅವರ ಪರ ಸಾಕ್ಷ್ಯಗ ಗಳು ಸಿಗುವುದೇ ಇಲ್ಲ.

ಇನ್ನು ಕುಟುಂಬ ಸಹಿತ ಪ್ರಯಾಣ ಮಾಡುವ ನಾಲ್ಕು ಚಕ್ರಗಳ ವಾಹನ ಚಾಲಕರ ಸ್ಥಿತಿ ಏನಾಗಬಹುದು ಎಂದು ಊಹಿಸುವುದೂ ಕಷ್ಟವಾಗುತ್ತದೆ. ಒಂದು ವೇಳೆ ಪ್ರಯಾಣದ ದಾರಿಯಲ್ಲಿ ಅಪಘಾತ ಸಂಭವಿಸಿ ಎದುರಿನವರಿಗೆ ಗಾಯವಾದರೆ, ವಾಹನ ಚಾಲಕ ಸ್ಥಳದಲ್ಲೇ ವಾಹನ ನಿಲ್ಲಿಸುವುದು ಸಾಧ್ಯವೇ? ಅಲ್ಲದೆ, ಆತ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿ ಬರೋಣ ಎಂದುಕೊಂಡು ಮುಂದೆ ಹೋಗಿಬಿಟ್ಟರೆ, ವಾಪಸ್ ಬರುವಷ್ಟರಲ್ಲಿ ಹಿಟ್ ಅಂಡ್ ರನ್ ಪ್ರಕರಣ ಆತನ ವಿರುದ್ಧ ದಾಖಲಾಗಿಬಿಟ್ಟಿರುತ್ತದೆ. ಹಾಗಂತ ಸ್ಥಳದಲ್ಲೇ ವಾಹನ ನಿಲ್ಲಿಸಿದರೆ ಆತನ ಕುಟುಂಬಕ್ಕೆ ರಕ್ಷಣೆ ಸಿಗುವ ಯಾವುದೇ ಗ್ಯಾರಂಟಿಯೂ ಇರುವುದಿಲ್ಲ.

ಈ ಹೊಸ ಕಾನೂನಿಂದ ವಾಹನಗಳ ಚಾಲಕರು, ಸಾರ್ವಜನಿಕರಲ್ಲಿ ನಂಬಿಕೆ ಕಳೆದುಕೊಳ್ಳುವಂತಾಗುತ್ತದೆ. ಸೌಜನ್ಯಯುತವಾಗಿ ವರ್ತಿಸುವುದೂ ಅವರಿಗೆ ಸಾಧ್ಯವಾಗದಿರಬಹುದು. ಕೇಂದ್ರ ಸರ್ಕಾರ ಹಿಟ್ ಅಂಡ್ ರನ್ ಅಪಘಾತ ಪ್ರಕರಣಗಳಲ್ಲಿ ಸಾರ್ವಜನಿಕರನ್ನು ನಿಯಂತ್ರಿಸುವುದಕ್ಕೂ ಯಾವುದಾದರೂ ನಿಯಮ ತರಲೇಬೇಕು. ಅದು ಸಾಧ್ಯವಾಗದಿದ್ದರೆ ಹೊಸ ನಿಯಮವನ್ನು ವಾಪಸ್ ಪಡೆಯುವುದು ಸೂಕ್ತ ಅನಿಸುತ್ತದೆ.

andolanait

Recent Posts

ಓದುಗರ ಪತ್ರ: ಚುಟುಕು ಸಾಹಿತ್ಯ ಪ್ರಶಸ್ತಿ ಸೇರ್ಪಡೆ ಸ್ವಾಗತಾರ್ಹ

೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…

22 hours ago

ವೈಚಾರಿಕ ಕ್ರಾಂತಿಯ ವಚನಕಾರ ಹಡಪದ ಅಪ್ಪಣ್ಣ

ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…

22 hours ago

ಹವಾಮಾನ ಬದಲಾವಣೆ; ಹುಲಿಗಳಿಗೆ ಹೊಸ ಅಪಾಯ?

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…

22 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಗೌರವ್ ಶುಕ್ಲಾ ಎಂಬ ‘ಸಮವಸ್ತ್ರವಿಲ್ಲದ ಸೈನಿಕ’

‘ಸಪೋರ‍್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ  ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…

22 hours ago

ಮಲ್ಲಳ್ಳಿ ಜಲಪಾತದ ರೋಪ್‌ವೇ ಯೋಜನೆಗೆ ವೇಗ

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್‌ವೇ ಯೋಜನೆಗೆ ವೇಗ ದೊರೆತಿದೆ.…

22 hours ago

ಮೀನುಗಾರಿಕೆ ಉತ್ತೇಜನಕ್ಕೆ ಸಂಚಾರ ಮತ್ಸ್ಯ ವಾಹಿನಿ

ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…

23 hours ago