BREAKING NEWS

ಬನ್ನೇರುಘಟ್ಟದಲ್ಲಿ ಗಂಧ ಚೋರರ ಮೇಲೆ ಶೂಟೌಟ್ : ಓರ್ವನ ಸಾವು

ಬನ್ನೇರುಘಟ್ಟ : ಬೆಂಗಳೂರು ದಕ್ಷಿಣ ಭಾಗದ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಶ್ರೀಂಗಧದ ಮರ ಕಳ್ಳತನ ಮಾಡುತ್ತಿದ್ದವರ ಮೇಲೆ ಫಾರೆಸ್ಟ್​ಗಾರ್ಡ್​​ ಫೈರಿಂಗ್​ ಮಾಡಿದ್ದು ಒಬ್ಬ ಸಾವನ್ನಪ್ಪಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ. ಮೃತನ ಗುರುತು ಪತ್ತೆಯಾಗಿದ್ದು. 40 ವರ್ಷದ ತಿಮ್ಮರಾಯಪ್ಪ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ. ಈತ ಮಾಲೂರು ತಾಲ್ಲೂಕಿನ ಮಾಸ್ತಿ ಸಮೀಪದ ನಟ್ಟೂರಹಳ್ಳಿ ನಿವಾಸಿ. ಇನ್ನು ಇದೇ ಗಂಧದ ಮರ ಕಳ್ಳತನದ ಪ್ರಕರಣದಲ್ಲಿ ಕಳ್ಳರ ಬಗ್ಗೆ ಮಹತ್ವದ ಸುಳಿವು ಕೊಟ್ಟಿರುವುದು ಮರದ ಬಳಿ ತಿಂದು ಉಗಿದಿದ್ದ ಗುಟ್ಕಾ ಪ್ಯಾಕೆಟ್ ಗಳು

ಗಂಧದ ಚೋರರು ಗುಟ್ಕಾ ತಿಂದು, ನೀರಿನ‌ ಬಾಟಲ್ ಅಲ್ಲೇ ಬಿಸಾಡಿದ್ದರು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ವಸ್ತುಗಳು ಇರುತ್ತಿರಲಿಲ್ಲ. ಆದರೆ ಗಂಧದ ಮರದ ಬುಡದಲ್ಲಿ‌ ಬಿದ್ದಿದ್ದ ಗುಟ್ಕಾ ಪ್ಲಾಸ್ಟಿಕ್ ಕವರ್​ ಪೊಲೀಸರ ಗಮನ ಸೆಳೆದಿತ್ತು. ಕಲ್ಕೆರೆ ಸ್ಟೇಟ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಗಂಧದ ಮರ ಕಳ್ಳತನ ನಡೆದಿತ್ತು. ಗಂಧದ ಮರ ಕಳ್ಳತನ ಪ್ರಕರಣಗಳು ಒಂದೂವರೆ ತಿಂಗಳಿಂದ ನಡೆದಿತ್ತು. ಗಂಧದ ಮರ ಕಳ್ಳರ ಬೆನ್ನುಹತ್ತಿತ್ತು. ಆದರೆ ನಿನ್ನೆ ರಾತ್ರಿ ಹತ್ತು ಘಂಟೆಯಿಂದ ವಾಚ್ ಮಾಡಲಾಗುತ್ತಿತ್ತು. ಬೀಟ್ ಫಾರೆಸ್ಟರ್ ಈ. ವಿನಯ್ ಕುಮಾರ್, ಪಿ.ಸಿ.ಬಿ ವಾಚರ್ ಗಳಾದ ಮೈಕಲ್, ಯಡಿಯೂರ ಕಾಡಿನಲ್ಲಿ ವಾಚ್ ಮಾಡುತ್ತಿದ್ದರು.

ಕಲ್ಕೆರೆ ಸ್ಟೇಟ್ ಫಾರೆಸ್ಟ್ ಜೇಡಿಮರ ವೃತ್ತದ ಬಳಿ ಬಂದಾಗ ಮರ ಕಡಿಯುತ್ತಿದ್ದುದು ಗಮನಕ್ಕೆ ಬಂದಿದೆ. ಕಳೆದ ರಾತ್ರಿ‌ ಸಿಬ್ಬಂದಿ ಬೀಟ್ ಹಾಕುವ ವೇಳೆ ಕ್ಲ್ಯೂ ಸಿಕ್ಕಿತ್ತು. ವಿಮಲ್ ಗುಟ್ಕಾ ಹಾಗೂ ನೀರಿನ ಬಾಟಲುಗಳು ಮರದ ಬಳಿ ಸಿಕ್ಕಿತ್ತು. ಸಿಬ್ಬಂದಿ ಇದೇ ಮಾಹಿತಿ ಕಲೆ ಹಾಕಿ, ಮರಗಳ್ಳರ ಸುಳಿವು ಹಿಡಿದಿದ್ದರು.

ಇತ್ತೀಚೆಗೆ ಗಂಧದ ಮರಗಳು ಕಳ್ಳತನ ಆಗಿದ್ದವು. ಕಳ್ಳರನ್ನು ಬಂಧಿಸಲು ಸಿಬ್ಬಂದಿ ಇಡಿ ರಾತ್ರಿ ಕಾಡಿನಲ್ಲಿ ಓಡಾಡಿದ್ದರು. ಆಗ ಮರ ಕೊಯ್ಯುತ್ತಿರುವ ಶಬ್ದ ಕೇಳಿಸಿದೆ. ಕೂಡಲೇ ಫಾರೆಸ್ಟ್ ಗಾರ್ಡ್ ವಿನಯ್ ಹಾಗೂ ತಂಡ ಸ್ಥಳಕ್ಕೆ ಹೋಗಿತ್ತು. ಅರಣ್ಯ ಸಿಬ್ಬಂದಿಯನ್ನು ನೋಡುತ್ತಿದ್ದಂತೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಆಗ ಸಿಬ್ಬಂದಿ ಪಂಪ್ ಆಕ್ಷನ್ ಸ್ಲೈಡ್ ಗನ್ ಮೂಲಕ ಫೈರಿಂಗ್ ಮಾಡಿದ್ದಾರೆ. ಗನ್ ಮೂಲಕ ಹಾರಿದ್ದ ಗುಂಡು ತಿಮ್ಮರಾಯಪ್ಪನಿಗೆ ತಗುಲಿದೆ. ಹೊಟ್ಟೆ ಭಾಗಕ್ಕೆ ಗುಂಡು ಬಿದ್ದು ಸ್ಥಳದಲ್ಲೇ ಆತ ಸಾವಿಗೀಡಾಗಿದ್ದಾನೆ. ಒಬ್ಬ ಕೆಳಗೆ ಬೀಳುತ್ತಿದ್ದಂತೆ, ಇನ್ನೊಬ್ಬ ಆರೋಪಿ ಎಸ್ಕೇಪ್ ಆಗಿದ್ದಾನೆ.

lokesh

Recent Posts

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

3 hours ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

3 hours ago

ಓದುಗರ ಪತ್ರ: ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಕಡ್ಡಾಯವಾಗಲಿ

ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…

3 hours ago

ಓದುಗರ ಪತ್ರ: ಯುಪಿಐ ವಹಿವಾಟು ಶುಲ್ಕ; ಹೊರೆಯಾಗದಿರಲಿ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ…

3 hours ago

ಮೋದಿ ಅಧಿಕಾರ ಪರ್ವ ರಜತ ಮಹೋತ್ಸವ: ಏನಿತ್ತು? ಏನಿಲ್ಲ?

ನರೇಂದ್ರ ಮೋದಿ ಅವರು ೨೦೦೧ರಲ್ಲಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಸತತ ೧೫ ವರ್ಷಗಳು ಅಲ್ಲಿ…

3 hours ago

ತನ್ನನ್ನು ತಾನೇ ಚಿವುಟಿ ಎಚ್ಚರಿಸಿದ್ದ ನೆಹರೂ

ಜವಾಹರಲಾಲ್ ಎಂಬ ಅಪಾಯಕಾರಿ ಮನುಷ್ಯ ೬ ಬಾರಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ೩ ಬಾರಿ ಸತತವಾಗಿ ದೇಶದ ಪ್ರಧಾನಿಯಾಗಿದ್ದ ಜವಾಹರಲಾಲ್…

4 hours ago